ಕೃಷಿ ಮೂಲದಿಂದ ಬೆಳೆದು ಬಂದಿರುವುದರಿಂದ ನನಗೆ ಕೃಷಿ ಚಟುವಟಿಕೆಗಳೆ ಇಷ್ಟ. ಇಂದಿನ ಸಾಮಾಜಿಕ, ಅರ್ಥಿಕ ಸ್ಥಿತಿಗತಿಗಳಿಗಾಗಿ ಉದ್ಯೋಗ ಅನಿವಾರ್ಯ. ಅದಕ್ಕಾಗಿ ಪತ್ರಿಕಾರಂಗವನ್ನು ಅರಿಸಿಕೊಂಡಿರುವೆ. ಶಾಲಾ-ಕಾಲೇಜು ಜೀವನದಲ್ಲಿಯೇ ನನ್ನಲ್ಲಿದ್ದ ಬರವಣಿಗೆಯ ತುಡಿತ ಈ ವೃತ್ತಿಯನ್ನು ಆರಿಸುವುದಕ್ಕೆ ಪ್ರೇರಣೆ. ಮೊದಲಿಗೆ ಔದ್ಯೋಗಿಕ ಕ್ಷೇತ್ರದಲ್ಲಿನ ಕೆಲವೊಂದು ಕಟ್ಟುಪಾಡು ನನ್ನ ಕೈ-ಕಾಲು ಕಟ್ಟಿದಂತೆ ಮಾಡಿತು. ಆದರೆ ಈಗ ಅದಕ್ಕೆ ಹೊಂದಿಕೊಂಡೇ ಸ್ವಸಾಮರ್ಥ್ಯಕ್ಕೆ ಅನುಗುಣವಾಗಿ ಬಯಕೆಗಳ ಈಡೇರಿಕೆಗೆ ಪ್ರಯತ್ನಿಲಾರಂಭಿಸಿದೆ.
ಆಸೆ, ಬಯಕೆ ಮನುಷ್ಯರಲ್ಲಿ ಸಹಜ. ಎಲ್ಲಾ ಬಯಕೆಗಳ ಈಡೇರಿಕೆಗೆ ಪ್ರಯತ್ನಿಸುವುದೂ ಅಸಾಧ್ಯ. ಆದರೆ ಬಯಕೆ ತೋಟದಲ್ಲಿರುವ ಕೆಲವೊಂದು ಆಸೆಗಳ ಈಡೇರಿಕೆಗೆ ಯತ್ನಿಸಬಹುದು. ನನ್ನ ಹಲವಾರು ಬಯಕೆಗಳಲ್ಲಿ ಬ್ಲಾಗ್ ರಚನೆಯು ಒಂದು. ಅದಕ್ಕಾಗಿಯೇ ಈ ಬ್ಲಾಗಿಗೆ ‘ಬಯಕೆ ತೋಟದಿಂದ...’ ನಾಮಕರಣ ಮಾಡಿದ್ದೇನೆ.
ಭಾನುವಾರ, ಏಪ್ರಿಲ್ 29, 2012
ಭಾನುವಾರ, ಏಪ್ರಿಲ್ 22, 2012
ಬಯಕೆ ತೋಟದಿಂದ...
ನನ್ನ ಬರಹಗಳನ್ನೆಲ್ಲಾ ಒಂದೆಡೆ ಸಂಗ್ರಹಿಸಿ, ಅದನ್ನು ಆತ್ಮೀಯರೊಂದಿಗೆ, ಸಹೃದಯಿಗಳೊಂದಿಗೆ ಹಂಚಿಕೊಂಡು ಅವರ ಅಭಿಪ್ರಾಯ ಪಡೆಯುವ ಹೆಬ್ಬಯಕೆಯೆ ಈ ಬ್ಲಾಗ್ ರಚನೆಗೆ ನಾಂದಿ. ಮಲಯಾಳದ ಪ್ರಭಾವ ಹೆಚ್ಚಿರುವ ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿದರೂ ಕನ್ನಡ (ಮಾತೃಭಾಷೆ)ವನ್ನೇ ಬಹಳವಾಗಿ ಇಷ್ಟ ಪಡುತ್ತೇನೆ. ನನ್ನ ಹಿರಿಯರು ಕನ್ನಡ ಭಾಷೆ, ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ಹಾಗೂ ಮಹತ್ವ ನೀಡಿದ್ದಾರೆ. ಅಂತಹ ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ, ಬೆಳೆಸುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅದಕ್ಕಾಗಿ ಈ ಬ್ಲಾಗ್ ಮುಖೇನ ಒಂದಿಷ್ಟು ಸೇವೆ ಸಲ್ಲಿಸ ಬಯಸಿದ್ದೇನೆ. ನನ್ನ ಈ ಪ್ರಯತ್ನದಲ್ಲಿ ಎನಾದರೂ ತಪ್ಪುಗಳಾದರೆ ಕ್ಷಮೆ ಇರಲಿ.
- ಗಣು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)