ಕೃಷಿ ಮೂಲದಿಂದ ಬೆಳೆದು ಬಂದಿರುವುದರಿಂದ ನನಗೆ ಕೃಷಿ ಚಟುವಟಿಕೆಗಳೆ ಇಷ್ಟ. ಇಂದಿನ ಸಾಮಾಜಿಕ, ಅರ್ಥಿಕ ಸ್ಥಿತಿಗತಿಗಳಿಗಾಗಿ ಉದ್ಯೋಗ ಅನಿವಾರ್ಯ. ಅದಕ್ಕಾಗಿ ಪತ್ರಿಕಾರಂಗವನ್ನು ಅರಿಸಿಕೊಂಡಿರುವೆ. ಶಾಲಾ-ಕಾಲೇಜು ಜೀವನದಲ್ಲಿಯೇ ನನ್ನಲ್ಲಿದ್ದ ಬರವಣಿಗೆಯ ತುಡಿತ ಈ ವೃತ್ತಿಯನ್ನು ಆರಿಸುವುದಕ್ಕೆ ಪ್ರೇರಣೆ. ಮೊದಲಿಗೆ ಔದ್ಯೋಗಿಕ ಕ್ಷೇತ್ರದಲ್ಲಿನ ಕೆಲವೊಂದು ಕಟ್ಟುಪಾಡು ನನ್ನ ಕೈ-ಕಾಲು ಕಟ್ಟಿದಂತೆ ಮಾಡಿತು. ಆದರೆ ಈಗ ಅದಕ್ಕೆ ಹೊಂದಿಕೊಂಡೇ ಸ್ವಸಾಮರ್ಥ್ಯಕ್ಕೆ ಅನುಗುಣವಾಗಿ ಬಯಕೆಗಳ ಈಡೇರಿಕೆಗೆ ಪ್ರಯತ್ನಿಲಾರಂಭಿಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ