ಭಾನುವಾರ, ಸೆಪ್ಟೆಂಬರ್ 30, 2012

ಕನಸು ಕಾಣದವರು ಯಾರಿಲ್ಲ ?


ಹುಡುಗ - ಹುಡುಗಿ, ಯುವಕ - ಯುವತಿ, ಮುದುಕ - ಮುದುಕಿ ಎಂಬ ಬೇಧವಿಲ್ಲದೆ ಎಲ್ಲ ವಯೋಮಾನದವರು ಕನಸು ಕಾಣತ್ತಾರೆ. ಆಯಾ ವಯಸ್ಸಿನವರು ತಮ್ಮ ವಯಸ್ಸಿಗೆ ತಕ್ಕಂತೆ ಬೇರೆ ಬೇರೆ ಕನಸುಗಳನ್ನು ಕಾಣುತ್ತಾರೆ. ಅದು ಹೇಗೆಂದರೆ, ಮಕ್ಕಳಾಗಿರುವಾಗ ಆಟೋಟಗಳಲ್ಲಿ ಗೆದ್ದಂತೆ, ಸಿಹಿ ತಿಂಡಿ ತಿಂದಂತೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಂತೆ, ಜಾತ್ರೆಗಳಲ್ಲಿ ಭಾಗವಹಿಸಿದಂತೆ ಇkansu kanadavaru yarillaತ್ಯಾದಿ ಕನಸುಗಳನ್ನು ಕಾಣುತ್ತಾನೆ. ಯೌವನದಲ್ಲಿ ಪ್ರೀತಿ-ಪ್ರೇಮಕ್ಕೆ ಸಂಬಂಸಿದ ಬಣ್ಣ - ಬಣ್ಣದ ಕನಸುಗಳನ್ನು ಕಾಣುತ್ತಾನೆ. ಮಧ್ಯ ವಯಸ್ಕರು ಉದ್ಯೋಗದಲ್ಲಿ ಭಡ್ತಿ ಪಡೆದಂತೆ, ಕೈ ತುಂಬಾ ಹಣ, ಆಸ್ತಿ ಸಂಪಾದಿಸಿದಂತೆಲ್ಲಾ ಕನಸು ಕಾಣುತ್ತಾರೆ. ಮುದಿ ವಯಸ್ಸಿನವರು ಸಾಮಾನ್ಯವಾಗಿ ದೇವರ ದರ್ಶನ ಮಾಡಿದಂತೆ, ಪೂಜೆ ಮಾಡಿದಂತೆ ಕನಸು ಕಾಣುತ್ತಾರೆ.
ಕನಸು ಕೆಲವೊಮ್ಮೆ ನಮಗೆ ಸಂತೋಷ, ಇನ್ನು ಕೆಲವೊಮ್ಮೆ ದುಃಖವನ್ನು ಉಂಟು ಮಾಡಬಹುದು. ಕನಸು ಒಂದು ಕಲ್ಪನೆ ಅಷ್ಟೇ. ನಮಗೆ ನಿಜ ಜೀವನದಲ್ಲಿ ಸಾಸಲು ಆಗದ್ದನ್ನು ಕಲ್ಪಿಸಿಕೊಳ್ಳುವ ಮೂಲಕವಾದರೂ ತೃಪ್ತಿಪಟ್ಟುಕೊಳ್ಳುವುದು ಮಾನವ ಸಹಜಗುಣವಾಗಿದೆ. ಆಸೆ - ಆಕಾಂಕ್ಷೆ, ಬಯಕೆಗಳ ಬಗ್ಗೆಯೇ ಹೆಚ್ಚಾಗಿ ನಾವು ಕನಸು ಕಾಣುತ್ತೇವೆ. ಕನಸು ಕಾಣುವುದು ತಪ್ಪಲ್ಲ. ಆದರೆ ಅವುಗಳ ಈಡೇರಿಕೆಗೆ ಪ್ರಯತ್ನಿಸುವುದು ಅಷ್ಟು ಸಂಮಜಸವಲ್ಲ. ಪ್ರತಿಯೊಬ್ಬ ಮನುಷ್ಯನು ತನ್ನ ಭವಿಷ್ಯದ ಸುಂದರ ಕನಸುಗಳನ್ನು ಕಾಣತ್ತಾನೆ. ಕಂಡ ಕನಸುಗಳೆಲ್ಲಾ ನಿಜವಾಗುವುದಿಲ್ಲ. ಅಪರೂಪಕ್ಕೆ ಕೆಲವೊಂದು ಕನಸುಗಳು ನನಸಾಗುತ್ತದೆ ಅಷ್ಟೆಘಿ. ಕನಸು ವ್ಯಕ್ತಿಯ ಭಾವನೆ, ಚಿಂತನೆಗಳಿಗೆ ಸಂಬಂಧಿಸಿರುತ್ತದೆ.
ಮನುಷ್ಯರು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಕನಸು ಕಾಣತ್ತಾರೆ. ನಿದ್ರಿಸುತ್ತಿರುವ ಸಂದರ್ಭ ಕನಸು ಕಾಣುವುದು. ಇನ್ನೊಂದು ಎಚ್ಚರವಾಗಿದ್ದುಕೊಂಡು ಕನಸು ಕಾಣುವುದು. ವ್ಯಕ್ತಿಯೊಬ್ಬ ನಿದ್ದೆಯಲ್ಲಿ ಅನುಭವಿಸುವ ಕಥೆ ಗೆ ಕನಸು ಎನ್ನುತ್ತಾರೆ. ಅದು ಕಾಲ್ಪನಿಕವಾಗಿರುತ್ತವೆ, ಆದರೂ ನಿಜ ಜೀವನಕ್ಕೆ ಹತ್ತಿರವಾಗಿರುತ್ತವೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ, ಕೆಲವು ಕಹಿ ಅಥವಾ ನೋವಿನ ಅನುಭವಗಳನ್ನು ನೀಡುತ್ತವೆ. ಕೆಲವರಿಗೆ ಅದು ಎಚ್ಚರವಾದ ಅನಂತರವು ಜ್ಞಾಪಕವಿರುತ್ತವೆ, ಮತ್ತೆ ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತವೆ. ಕೆಲವೊಂದು ಜನ ಎಚ್ಚರವಾಗಿ ಇದ್ದಕೊಂಡು ತನ್ನ ಜೀವನದ ಬಗ್ಗೆ ನಾನಾ ರೀತಿಯ ಕಲ್ಪನೆಯಲ್ಲಿ ತೊಡಗುತ್ತಾರೆ. ಇದು ಕೂಡ ಒಂದು ರೀತಿಯಲ್ಲಿ ಕನಸು ಕಾಣವುದಾಗಿದೆ. ಇಂತಹ ಕನಸು ಕಾಣುವವರು ತಾನು ನಿಜ ಜೀವನದಲ್ಲಿ ಏನೇನು ಆಗಲು ಸಾಧ್ಯವಾಗಿಲ್ಲ ಮತ್ತೆ ಸಾಧ್ಯವಿಲ್ಲ ಅಂತಹವರಾದಂತೆ ಕಲ್ಪಿಸಿಕೊಳ್ಳುತ್ತಾ ತೃಪ್ತಿಪಟ್ಟುಕೊಳ್ಳುತ್ತಾರೆ. ಸೋಮಾರಿಗಳು ಹೆಚ್ಚಾಗಿ ಇಂತಹ ಕಲ್ಪನೆಗಳನ್ನು ಮಾಡುತ್ತಾರೆ.
ನಾವು ಯಾವ ವಿಷಯದ ಕುರಿತಾಗಿ ಹೆಚ್ಚಾಗಿ ಆಲೋಚಿಸುತ್ತೇವೆ ಅಥವಾ ಚಿಂತೆ ಮಾಡುತ್ತೇವೆ ಆ ವಿಷಯ ನಮಗೆ ತಿಳಿಯದಂತೆ ಮನಸ್ಸಿನ ತಳಹದಿಗೂ ತಲುಪಿರುತ್ತವೆ. ಅವುಗಳು ಕನಸಾಗಿಯೂ ಕಾಣಬಹುದು. ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವುದರ ಮುನ್ಸೂಚನೆ ಆಗಿರಲೂ ಬಹುದು. ನಮ್ಮಷ್ಟಕೇ ನಾವು ಕಲ್ಪಿಸಿಕೊಳ್ಳುವುದು ಕೂಡ ಒಂದು ರೀತಿಯಲ್ಲಿ ಕನಸು ಕಾಣುವುದಾಗಿದೆ.ಮನಸ್ಸು ಸ್ವಚ್ಛಂದವಾಗಿ ವಿಹರಿಸುವ ಸಂದರ್ಭ ಸುಂದರವಾದ ಕಲ್ಪನೆಗಳು ಮೂಡಬಹುದು. ವಾಸ್ತವಕ್ಕೆ ಹತ್ತಿರವಾದ ಕನಸುಗಳನ್ನು ಕೂಡ ಕೊಡಬಹುದು. ಆದರೆ ಮನಸ್ಸಿನಿಂದ ಮಾತಿನ ಮೂಲಕ ಶಬ್ದಗಳ ಆಸರೆ ಪಡೆದು ಹೊರಬರುವಾಗ ಅಲ್ಲಿನ ಪರಿಸ್ಥಿತಿ, ವಾತಾವರಣ, ನಿರೂಪಿಸುವವನ ಸಾಮರ್ಥ್ಯ ಇತ್ಯಾದಿಗಳು ಅದರ ಸ್ವಚ್ಛಂದ ಹರಿವಿಗೆ ತಡೆಯುಂಟು ಮಾಡಬಹುದು.
ಕನಸು ಕಾಣುವುದು ಸುಲಭ ಆದರೆ ಕಂಡ ಕನಸಿನ ಬಗ್ಗೆ ವಿವರಿಸುವುದು, ಬರೆಯುವುದು ತುಂಬಾ ಕಷ್ಟಘಿ. ಮನಸ್ಸಿನ ಯೋಚನೆಯ ಒಂದು ಎಳೆ ಎಂತೆಂಥ ಕನಸುಗಳನ್ನು ತಂದಿಡುತ್ತದೆ ಎಂಬುದು ಬಹಳ ವಿಶೇಷ. ಎಳೆ ಎಂಬುದು ಮಗುವಿನಂತೆ. ಅದರ ಸಾಧ್ಯತೆಗಳು ಅಪಾರ. ಮೊಳಕೆಯೊಡೆದ ಪ್ರತಿಯೊಂದು ಬೀಜಕ್ಕೂ ಮರವಾಗುವ ಸಾಧ್ಯತೆ ಇರುತ್ತವೆ. ಆದರೆ ಎಲ್ಲ ಮೊಳಕೆಗಳು ಮರವಾಗುವುದಿಲ್ಲ. ಎಷ್ಟೋ ಮೊಳಕೆಗಳು ಮುರುಟಿ ಹೋಗುತ್ತವೆ. ನಮ್ಮ ಕನಸುಗಳಂತೆ.

ಆತ್ಮವಿಶ್ವಾಸ ಪ್ರತಿಯೊಬ್ಬರಿಗೂ ಅಗತ್ಯ


ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಮಗೆ ಆತ್ಮವಿಶ್ವಾಸ ಅತ್ಯಗತ್ಯ. ಅದು ಇಲ್ಲದಿದ್ದರೆ, ಯಾರಿಂದಲೂ ಏನನ್ನೂ ಸಾಸಲಾಗದು. ದೋಣಿ ನಡೆಸಲು ಹರಿಗೋಲು ಎಷ್ಟು ಮುಖ್ಯವೊ, ನಮ್ಮ ಜೀವನದಲ್ಲಿ ಆತ್ಮವಿಶ್ವಾಸವು ಅಷ್ಟೇ ಮುಖ್ಯ. ಆತ್ಮವಿಶ್ವಾಸವೊಂದಿದ್ದರೆ ನಮಗೆ ಎಂಥಹ ಕಷ್ಟದ ಪರಿಸ್ಥಿತಿ, ಸವಾಲುಗಳನ್ನು ಎದುರಿಸಲು ಸಾಧ್ಯವಿದೆ. ಆತ್ಮವಿಶ್ವಾಸವಿಲ್ಲದಿದ್ದರೆ ಸವಾಲುಗಳನ್ನು ಕಂಡಕೂಡಲೇ ಗಾಳಿ ತೆಗೆದ ಬಲೂನಿನಂತೆ ಕುಗ್ಗಿ, ಖಿನ್ನರಾಗುತ್ತೇವೆ.
ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಇರುವ ವಿಶ್ವಾಸವೇ ‘ಆತ್ಮವಿಶ್ವಾಸ’. ತನ್ನ ಗುಣ - ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು. ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದೇ ‘ಆತ್ಮವಿಶ್ವಾಸ’ವಾಗಿದೆ. ‘ಆತ್ಮವಿಶ್ವಾಸ’ ಮಾನವನಲ್ಲಿರುವ ಕಣ್ಣಿಗೆ ಕಾಣದ ಅತ್ಯಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು. ಈ ಆಸ್ತಿಯನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿದರೆ ಅದು ನಮ್ಮನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಆತ್ಮವಿಶ್ವಾಸ ಎಂಬುದು ಮಾನವನ ಉನ್ನತಿಯ ಮೆಟ್ಟಿಲುಗಳಿದ್ದಂತೆ.
ನನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಯೋಚಿಸುವುದು ಸರ್ವೇ ಸಾಮಾನ್ಯ. ಈ ಭಾವನೆಯನ್ನು ದಮನಮಾಡಿ, ನನ್ನಿಂದ ಆ ಕೆಲಸ ಮಾಡಲು ಖಂಡಿತಾ ಸಾಧ್ಯ. ಯಾಕೆ ಸಾಧ್ಯವಿಲ್ಲಘಿ? ಎಂದು ನಮಗೆ ನಾವೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವಿದ್ದರೆ ಸಾಕು ಎಂತಹ ಕೆಲಸಗಳೂ ಸುಗಮವಾಗಿ, ಸುಸೂತ್ರವಾಗಿ ನೆರವೇರುತ್ತದೆ. ಇದಕ್ಕೆ ಉದಾಹರಣೆ: ಲಾಲ್ ಬಹದ್ದೂರ್ ಶಾಸಿ ಅವರು ತಮ್ಮ ಶಾಲಾ ದಿನಗಳಲ್ಲಿ ಗಂಗಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿಕೊಂಡು ದಾಟುತ್ತಿದದ್ದುಘಿ ಆತ್ಮವಿಶ್ವಾಸದ ಪ್ರಭಾವದಿಂದಲೇ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ.
ಆತ್ಮವಿಶ್ವಾಸವಿದ್ದವರು ಕೆಟ್ಟಕೆಲಸ, ಅನ್ಯಾಯಗಳನ್ನು ಮಾಡುವುದನ್ನು ಖಂಡಿಸಬಹುದು, ಅಂತವರ ವಿರುದ್ಧ ಹೋರಾಡಬಹುದು. ಅದು ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವುದಾರೂ ಒಳ್ಳೆಯ ಲ ಕೊಡುತ್ತದೆ ಎಂಬ ನಂಬಿಕೆಯಿಂದ ನಿರ್ವಹಿಸಬೇಕು. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ. ಧೈರ್ಯದಿಂದ ಮುಂದುವರಿದಾಗ ಜಯ ಖಂಡಿತ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಧೈರ್ಯ, ನಂಬಿಕೆಗಳನ್ನು ಬಳಸಿಕೊಳ್ಳಬೇಕು. ಆತ್ಮವಿಶ್ವಾಸ ಇಲ್ಲದವರನ್ನು ಹೇಡಿಗಳು, ಸೋಮಾರಿಗಳು, ಧೈರ್ಯಗೇಡಿಗಳು, ತಮ್ಮ ಬಗ್ಗೆ ಅಪನಂಬಿಕೆ ಉಳ್ಳವರು ಎನ್ನಲಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡಬೇಕಾಗಿ ಬಂದಾಗಲೂ ‘ನನ್ನಿಂದ ಆಗೋದಿಲ್ಲ’. ‘ನನಗೆ ಸಾಧ್ಯವಿಲ್ಲ’ ಎನ್ನುವುದೇ ಅವಿಶ್ವಾಸದ ಕುರುಹು.
ಕೆಲವರಿಗೆ ಆತ್ಮವಿಶ್ವಾಸದ್ದೇ ಒಂದು ದೊಡ್ಡ ಕೊರೆತೆ. ಅಂತವರಿಗೆ ಆತ್ಮವಿಶ್ವಾಸವಿರುವ ಅವರ ಮನೆಯವರು, ಸ್ನೇಹಿತರು ಪ್ರೋತ್ಸಾಹ ನೀಡಿ ಆತ್ಮವಿಶ್ವಾಸ ಮೂಡಿಸಬೇಕು. ನಿನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯ, ಏಳು ಪ್ರಯತ್ನ ಮಾಡು, ನೀನೆ ಮಾಡಬೇಕಾದ ಕಾರ್ಯ ಅದು. ಈ ರೀತಿಯಾಗಿ ಹುರಿದುಂಬಿಸಿದಾಗ ಅವರಿಗೆ ತಮ್ಮ ಬಗ್ಗೆ ನಂಬಿಕೆ ಹುಟ್ಟಿ ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನೆರವೇರಿಸುವುದರಲ್ಲಿ ಸಲರಾಗುತ್ತಾರೆ. ಒಮ್ಮೆ ಆತ್ಮವಿಶ್ವಾಸ ಗರಿಗೆದರಿದರೆ ಪ್ರಗತಿ ತನ್ನಿಂದ ತಾನಾಗೆ ಬರುತ್ತದೆ. ಇದರಿಂದ ಎಂತಹ ಹೇಡಿಗಳು ಪ್ರಗತಿ ಶೀಲರಾಗಲು ಸಾಧ್ಯ.
ಯಾವುದೇ ಕೆಲಸ - ಕಾರ್ಯಗಳನ್ನು ನಿರ್ವಹಿಸುವಾಗ ಒಮ್ಮೆ ಸೋಲಾಯಿತೆಂದು ಆತ್ಮವಿಶ್ವಾಸವನ್ನೇ ಕಳಕೊಳ್ಳುವುದಲ್ಲ. ‘ಮರಳಿ ಯತ್ನವ ಮಾಡು’ ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲಿನಿಂದ ನಾವು ಕಳಕೊಳ್ಳುವುದೇನೂ ಇಲ್ಲ. ಆದರೆ ಸೋಲಿನಿಂದ ಪಾಠ ಕಲಿಯುತ್ತೇವೆ. ಅನುಭವ ಗಳಿಸುತ್ತೇವೆ. ನಮ್ಮಲ್ಲಿರುವ ಅಹಂಕಾರ ದೂರವಾಗುತ್ತದೆ. ಆದ್ದರಿಂದ ಸೋಲು ಬಂತೆಂದು ಹತಾಶರಾಗುವುದಬೇಡ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಆತ್ಮವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗಬೇಕು.
‘ಅತಿಯಾದರೆ ಅಮೃತವು ವಿಷ’ ಎಂಬ ಮಾತಿದೆ. ಹಾಗೇ ಮಿತಿಮೀರಿದ ಆತ್ಮವಿಶ್ವಾಸವು ಒಳ್ಳೆಯದಲ್ಲ. ತನ್ನ ಯೋಗ್ಯತೆ, ಸಾಮರ್ಥ್ಯ ಮೀರಿ ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುವುದು, ಹಿಂದೆ ಮುಂದೆ ಯೋಚಿಸದೆ ಯಾವುದಾರದರೂ ಸರಿ, ಎಂತಹ ಸಮಯದಲ್ಲಾದರೂ ಸರಿ ಎಂದು ಮುನ್ನುಗ್ಗುವುದು ಪ್ರಮಾದಕರವಾದ ನಡತೆ. ಇದನ್ನೇ ದುಡುಕು ಸ್ವಭ್ವಾ ಎನ್ನುವುದು. ದುಡುಕಿದರೆ ಎಡವುದು ಖಂಡಿತ. ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕೆಲವೊಂದು ಬಾರಿ ಅತಿಯಾದ ಆತ್ಮವಿಶ್ವಾಸ (ಓವರ್ ಕಾನ್ಫಿಡೆನ್ಸ್)ದಿಂದ ಸೋಲು ಅನುಭವಿಸುವುದುಂಟು. ಅಂತಹ ಸಂದರ್ಭಗಳಲ್ಲಿಘಿ ಅವರ ಪೋಷಕರು, ಗುರುಗಳು ತಿಳಿಹೇಳಿ ಪ್ರೋತ್ಸಾಹಿಸಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆತ್ಮವಿಶ್ವಾಸ ಬೆಳೆದರೆ ದೇಶದಲ್ಲಿ ಹೇಡಿಗಳು, ಸೋಮಾರಿಗಳು ಇಲ್ಲದೆ ಎಲ್ಲರೂ ೀರರಾಗಿ - ೀಮಂತರಾಗಿ ಬಾಳ ಬಹುದು. ಆದರೆ ಆತ್ಮವಿಶ್ವಾಸದ ಸದುಪಯೋಗವಾಗಬೇಕು. ಇದರಿಂದ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ರಾಷ್ಟ್ರ ಪ್ರಗತಿ ಪಥದಲ್ಲಿ ಮುನ್ನಡೆಯಬಹುದು. ಬಾಳಿದರೆ ಆತ್ಮವಿಶ್ವಾಸದಿಂದ ಬಾಳಬೇಕು ಎಂಬ ತತ್ವ ಮಹತ್ತರವಾದುದು.

ಯುವಕರಿಗೆ ಬೇಡವಾಗುತ್ತಿರುವ ಪಂಚೆ


ಹೌದು! ಇಂದು ಯುವಕರಿಂದ ಹಿಡಿದು ಮುದುಕರವರೆಗೆ ಹೆಚ್ಚಿನ ಎಲ್ಲರೂ ಪಂಚೆyuvakrige bedavaguttiruva panche ಉಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ವಿದೇಶಿ ಉಡುಪುಗಳಾದ ಪ್ಯಾಂಟು, ಬರ್ಮುಡ ಚಡ್ಡಿ ಇತ್ಯಾದಿಗಳನ್ನೇ ಧರಿಸುತ್ತಾರೆ. ಭಾರತೀಯರಾದ ನಾವು ಇಂದು ನಮ್ಮ ನಾಡಿನ ಸಾಂಪ್ರದಾಯಿಕ ಉಡುಪುಗಳಾದ ಪಂಚೆ, ಲುಂಗಿ ಉಡುವುದು, ಕಚ್ಚೆ ಹಾಕುವುದನ್ನು ಮರೆತ್ತೇ ಬಿಟ್ಟಿದ್ದೇವೆ ಎಂದೆನ್ನಿಸುತ್ತದೆ. ಯುವಜನಾಂಗವಂತೂ ಪಂಚೆ ಉಡುವುದರಿಂದ ಮಾರುದೂರ ಸರಿದಂತಿದೆ.
ಹಿಂದಿನ ಕಾಲದಲ್ಲಿ ಹಳ್ಳಿಗರಿಂದ ಹಿಡಿದು ಪಟ್ಟಣಿಗರವರೆಗೆ ಎಲ್ಲರೂ ಪಂಚೆಯನ್ನೇ ಉಡುತ್ತಿದ್ದರು. ಕಾಲ ಸರಿದಂತೆ ಉಡುಪಿನ ಮೇಲೂ ಆಧುನಿಕತೆಯ ಪ್ರಭಾವ ಉಂಟಾಯಿತು. ಇದರಿಂದ ವಸ ಸಂಹಿತೆ ಬದಲಾಗಿ ಜನರು ವೈವಿಧ್ಯಮಯ ಉಡುಪುಗಳನ್ನು ಧರಿಸತೊಡಗಿದರು. ಜನರು ಶೈಕ್ಷಣಿಕವಾಗಿ ಮುಂದುವರಿದಾಗ ವಿವಿಧ ತರದ ವಸ ವಿನ್ಯಾಸಗಳನ್ನು ಕಲಿತುಕೊಂಡರು.
 ಹಲವಾರ ವರ್ಷಗಳ ಕಾಲ ನಮ್ಮ ದೇಶವನ್ನು ಆಳಿದ ಬ್ರಿಟಿಷರು ಬಳಸುತ್ತಿದ್ದ ವಸ ವೈವಿಧ್ಯಗಳು ಕೂಡ ನಮ್ಮನ್ನು ಬಹಳವಾಗಿ ಆಕರ್ಷಿಸಿದೆ. ಇಂದು ನಾವು ಹೆಚ್ಚಾಗಿ ಆಂಗ್ಲರು ಬಳಸುವ ರೀತಿಯ ವಸಗಳನ್ನೇ ಉಪಯೋಗಿಸುತ್ತೇವೆ. ಯಾಕೆಂದರೆ ಅವುಗಳನ್ನು ಧರಿಸುವುದು ಸುಲಭ ಎಂದು. ಆದರೆ ಅವುಗಳ ತಯಾರಿಗೆ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ. ಹಲವಾರು ವರ್ಷಗಳ ಹಿಂದೆ ಭಾರತೀಯರು ಮನೆಯಲ್ಲಿದ್ದರೂ ಅಥವಾ ಯಾವುದೇ ಕೆಲಸಗಳಿಗಾಗಿ ಹೊರಗಡೆ ತೆರಳುವುದಿದ್ದರೂ ಪಂಚೆ ಉಡುವುದು ಅಥವಾ ಕಚ್ಚೆ ಹಾಕುತ್ತಿದ್ದರು.
ಸ್ವಾತಂತ್ರ್ಯಾ ಅನಂತರ ಹೆಚ್ಚಿನ ಜನ ಕೋರ್ಟ್, ಕಚೇರಿ ಪಟ್ಟಣಗಳಿಗೆ ಹೋಗುವಾಗ ಪ್ಯಾಂಟ್, ಯಾವುದಾದರೂ ಶುಭಕಾರ್ಯಗಳಿಗೆ, ದೇವಸ್ಥಾನಕ್ಕೆ ಉತ್ಸವ ಇತ್ಯಾದಿಗಳಿಗೆ ತೆರಳುವಾಗ, ಮನೆಯಲ್ಲಿರುವಾ ಪಂಚೆ ಅಥವಾ ಲುಂಗಿ ಉಡುವುದು ಅಥವಾ ಕಚ್ಚೆ ಹಾಕುವುದು ಸಾಮಾನ್ಯವಾಗಿತ್ತು. ಕಾಲ ಬದಲಾದಂತೆ ಜಾಗತೀಕರಣದ ಪ್ರಭಾವ ಹೆಚ್ಚಾಯಿತು. ಅದು ಲುಂಗಿ, ಪಂಚೆ, ಕಚ್ಚೆಗಳ ಮೇಲೂ ತನ್ನ ಪ್ರಭಾವ ಬೀರಿತು. ಪಂಚೆ ಉಡುವುದು ಕಷ್ಟದ ಕೆಲಸ. ಅದನ್ನು ಉಟ್ಟು ನಡೆದಾಡುವುದು, ತಮ್ಮ ಕೆಲಸಗಳನ್ನು ನಿರ್ವಹಿಸುವುದು ಈಗಿನವರಿಗೆ ತುಂಬಾ ಕಷ್ಟ. ಯಾಕೆಂದರೆ ಇಂದಿನವರಿಗೆ ಪಂಚೆ ಉಡುವ ಕ್ರಮವೇ ಸರಿಯಾಗಿಗೋತ್ತಿಲ್ಲ. ಆದರೆ ಪಂಚೆ ಉಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದು ಹೇಗೆಂದರೆ, ನಮ್ಮ ದೇಹದ ಎಲ್ಲಾ ಭಾಗಗಳಲ್ಲಿಯೂ ಬೆವರು ಉತ್ಪತ್ತಿಯಾಗುತ್ತದೆ. ಗಾಳಿ ದೇಹದ ಎಲ್ಲಾ ಭಾಗಗಳನ್ನು ಸ್ಪರ್ಶಿಸುತ್ತಿದ್ದರೆ ಬೆವರು ಗಾಳಿಯಲ್ಲಿ ತನ್ನಷ್ಟಕ್ಕೆ ಆವಿಯಾಗುತ್ತದೆ. ದಪ್ಪಗಿನ ಬಟ್ಟೆ ಧರಿಸುವುದರಿಂದ ಇದು ಕಷ್ಟಕರ ಸಂಗತಿ. ಇದರಿಂದ ಬೆವರುವುದು ಹೆಚ್ಚಿ ತುರಿಕೆ, ಗಜ್ಜಿ ಇತ್ಯಾದಿ ತೊಂದರೆಗಳು ಉಂಟಾಗುತ್ತದೆ. ಇದು ಸಮತೋಲನವನ್ನು ಕೆಡಿಸುತ್ತದೆ. ಪಂಚೆ ಇತರ ಬಟ್ಟೆಗಳಿಗಿಂತ ತೆಳ್ಳಗಿರುತ್ತದೆ. ಅದನ್ನು ಉಡುವುದರಿಂದ ದೇಹದ ಎಲ್ಲಾ ಭಾಗಕ್ಕೂ ಗಾಳಿ ಸುಲಭವಾಗಿ ತಗುಲುವುದು. ಇದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ.
ಭಾರತದ ಕೆಲವೊಂದು ರಾಜ್ಯಗಳಲ್ಲಿ ಇಂದಿಗೂ ಪಂಚೆಗೆ ಬಹಳಷ್ಟು ಮಹತ್ವವಿದೆ. ಮುಖ್ಯವಾಗಿ ಕೇರಳ, ತಮಿಳುನಾಡು ಮೊದಲಾದೆಡೆ ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳವರೆಗೆ ಹೆಚ್ಚಿನ ಎಲ್ಲರೂ ಪಂಚೆಯನ್ನೇ ಉಡುತ್ತಾರೆ. ಅಲ್ಲಿನ ಚಲನಚಿತ್ರಗಳಲ್ಲಿಯೂ ಕಲಾವಿದರು ಹೆಚ್ಚಾಗಿ ಬಳಸುವ ಉಡುಪು ಪಂಚೆ ಉಟ್ಟು ನಟಿಸುತ್ತಾರೆ. ಮುಖ್ಯವಾಗಿ ನಮ್ಮ ರಾಜ್ಯದಲ್ಲಿಯೇ ಇಂದು ಪಂಚೆ ಉಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ಹಲವಾರು ಜನ ಪಂಚೆ, ಕಚ್ಚೆಗಳನ್ನೇ ಬಳಸುತ್ತಿರುವುದನ್ನು ಕಾಣಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವೊಂದು ಗಣ್ಯವ್ಯಕ್ತಿಗಳ ಪಂಚೆ ಎಳೆದ ಪ್ರಕರಣಗಳು ಕೂಡ ಹಲವರು ಪಂಚೆ ಉಸಾಬರಿ ಬೇಡ ಎನ್ನಲು ಕಾರಣವಾಗಿರಬಹುದು. ಭಾರತೀಯರ ಸಾಂಪ್ರದಾಯಿಕ ಉಡುಪು ಇದಾಗಿರುವುದರಿಂದ ಇಂದಿನ ಜನ ಪಂಚೆ ಉಡುವುದನ್ನು ಮರೆಯುತ್ತಿರುವುದು ಬೇಸರದ ಸಂಗತಿ.

ಎಲ್ಲೆಡೆ ಮೊಬೈಲ್ ಮೇನಿಯ


ಮೊಬೈಲ್ ೆನ್ ಬಳಕೆಗೆ ಬಂದು ಸುಮಾರು 38 ವರ್ಷಗಳೆ ಕಳೆದವು. 1973ರಲ್ಲಿ ಮೊದಲ ಬಾರಿ ಮಾರ್ಟಿನ್ ಕಪೂರ್ ಎಂಬಾತ ಡಾ| ಜೊ. ಎ. ಇಂಜೆಲ್ ಅವರಿಗೆ ಮೊಬೈಲ್ ೆನ್ ಮೂಲಕ ಕರೆ ಮಾಡಿದ. ಮೊಬೈಲ್ ಯುಗ ಆರಂಭವಾದಾಗ ಮೊಬೈಲ್ ೆನ್ ಭಾರ ಸುಮಾರು ಒಂದು ಕೆ.ಜಿ.ಗಿಂತ ಹೆಚ್ಚಿತ್ತು. ಪ್ರಸ್ತುತ ಮೊಬೈಲ್ ೆನ್ ಭಾರ ಕೆಲವೇ ಕೆಲವು ಗ್ರಾಂಗಳ ವರೆಗೆ ಇಳಿದಿದೆ ಮಾತ್ರವಲ್ಲ ಇಳಿಯುತ್ತಲೂ ಇದೆ.
ನಿಮ್ಮ ಸೆಟ್ ಯಾವುದು? ಟೆಚ್ ಸ್ಕ್ರೀನಾ? ಬ್ಯಾಟರಿ ಬ್ಯಾಕಪ್ ಹೇಗಿದೆ? ಮೆಮೊರಿ ಕಾರ್ಡ್ ಎಷ್ಟು ಜಿಬಿ? ಇಂಟರ್ನೆಟ್ ಇದೆಯಾ? ಹೀಗೆ ಮೊಬೈಲ್ ೆನ್ಗೆ ಸಂಬಂಸಿದಂತೆ ಒಂದರ ಮೇಲೊಂದು ಪ್ರಶ್ನೆಗಳ ಸುರಿಮಳೆ. ಅಲ್ಲದೆ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಮೊಬೈಲ್ ೆನ್ ಮತ್ತು ಅವುಗಳ ಕಂಪೆನಿಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಇಂದು ಹೆಚ್ಚಾಗಿ ಯುವಜನಾಂಗದವರ ಮಧ್ಯೆ ಕೇಳಿಬರುತ್ತದೆ. ಇದು ಮೊಬೈಲ್ellde mobile meniya ೆನ್ ಯುವಜನಾಂಗದವರ ಬದುಕಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂಬುದನ್ನು ತಿಳಿಸುತ್ತದೆ. ಮೊಬೈಲ್ ೆನ್ನನ್ನು ಯುವಜನರು ಎಷ್ಟು ಅವಲಂಬಿಸಿಕೊಂಡಿದ್ದಾರೆೆ ಅಂದರೆ, ಸ್ನೇಹಿತೆ (ಸ್ನೇಹಿತ), ಪ್ರಿಯಕರೆ (ಪ್ರಿಯಕರ), ಮನೆಯವರನ್ನು ಬೇಕಾದರೂ ಬಿಟ್ಟು ಬಿಟ್ಟಾರು. ಆದರೆ ಮೊಬೈಲ್ ೆನ್ನನ್ನು ಮಾತ್ರ ಬಿಡಲೊಲ್ಲರು. ಸ್ವಲ್ಪ ಸಮಯ ಅದು ನಮ್ಮ ಕೈಯಲ್ಲಿ ಇಲ್ಲವಾದರೆ ಏನೋ ಕಳಕೊಂಡವರಂತೆ ಚಡಪಡಿಸುತ್ತೇವೆ. ಯಾಕೆಂದರೆ ಅದು ನಮ್ಮ ಸಂಗಾತಿ, ್ರೆಂಡ್, ಮಾಹಿತಿದಾರ, ಮನೋರಂಜಕ ಇತ್ಯಾದಿ.
 ಮೊಬೈಲ್ ೆನ್ ಕ್ರಾಂತಿ ಜಗತ್ತಿನಾದ್ಯಂತ ಯುವಜನಾಂಗದವರಲ್ಲಿ ಹುಚ್ಚೆಬ್ಬಿಸಿದೆ. ಪ್ರಸ್ತುತ ಯುವಕ -ಯುವತಿಯರಿಗೆ ಹೊಸ ಹೊಸ ಸೆಲ್ ೆನ್ಗಳ ಬಗ್ಗೆ ಮಾತನಾಡುವುದೇ ಒಂದು ಕ್ರೇಜಿಯಾಗಿ ಬಿಟ್ಟಿದೆ. ಬಸ್ಟ್ಯಾಂಡ್, ಮಾರುಕಟ್ಟೆಘಿ, ಶಾಲಾ- ಕಾಲೇಜು ಪರಿಸರ, ಸಭೆ - ಸಮಾರಂಭ ಹೀಗೆ ಎಲ್ಲಿಯೇ ಆಗಿರಲಿ ಸ್ನೇಹಿತರು, ಪರಿಚಿತರು ಯಾರೇ ಆಗಿರಲಿ ಪರಸ್ಪರ ಭೇಟಿಯಾದಾಗ ಮೊಬೈಲ್ ೆನ್ಗಳ ಬಗ್ಗೆಯೇ ಮಾತು. ಯಾರಾದರೂ ಹೊಸ ಸೆಲ್ ೆನ್ ತೆಗೆದರೆ, ಜಾಹೀರಾತು ನೋಡಿದರೆ ಅದರಲ್ಲಿರುವ ಸೌಲಭ್ಯಗಳು, ಅದರ ವಿಶೇಷ, ಗಾತ್ರ, ಭಾರ, ಬಣ್ಣ, ಇತ್ಯಾದಿಗಳೆಲ್ಲವನ್ನು ಗಮನಿಸಿ, ತಮ್ಮ ಸ್ನೇಹಿತರಿಗೆ ತಿಳಿಸುವುದು ಅವರೊಂದಿಗೆ ಚರ್ಚಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಸೆಲ್ ೆನ್ಗಳ ಬಗ್ಗೆ ಆಕರ್ಷಿತರಾದುದು ಕೇವಲ ಯುವಜನಾಂಗದವರು ಮಾತ್ರ ಅಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ - ಮುದುಕರ ವರೆಗೆ, ಹೆಣ್ಣು -ಗಂಡು ಎಂಬ ಬೇಧವಿಲ್ಲದೆ ಎಲ್ಲರೂ ಸೆಲ್ ೆನ್ಗಳ ಗುಣಗಾನ ಮಾಡುತ್ತಾರೆ. ಹೆಚ್ಚಾಗಿ ಎಲ್ಲರಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ವಿವಿಧ ಶ್ರೇಣಿಗಳ ಮೊಬೈಲ್ ೆನ್ಗಳನ್ನು ಕಾಣಬಹುದು.
 ಮಾಯಕದ ಪೆಟ್ಟಿಗೆ
ನವಯುಗದ ಸಂಪರ್ಕ ಕ್ಷೇತ್ರದಲ್ಲಿ ಮೊಬೈಲ್ ೆನ್ ಕ್ರಾಂತಿಯನ್ನೇ ಉಂಟುಮಾಡಿದೆ. ಅದು ಒಂದು ಮಾಯಕದ ಪೆಟ್ಟಿಗೆ. ಅಕ್ಷರ ಬಲ್ಲವರನ್ನು, ಬರದವರನ್ನು ಕೂಡ ತನ್ನತ್ತ ಆಕರ್ಷಿಸಿದೆ. ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಕೈಯಲ್ಲೊಂದು ಮೊಬೈಲ್ ೆನ್ ಇರಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳ ಮೊದಲು ಒಬ್ಬರಿಗೆ ಒಂದು ಸೆಲ್ ೆನ್ ಇರುವುದು ದೊಡ್ಡ ಸಂಗತಿ. ಯುವಕರಲ್ಲಿ ಈಗ ಒಬ್ಬೊಬ್ಬರಿಗೆ ಎರಡು ಸೆಲ್ ೆನ್ಗಳಿರುವುದು ಸಾಮಾನ್ಯ ವಿಷಯವಾಗಿದೆ.
ಕೂಲಿ ಕೆಲಸ ಮಾಡುವವರಿಂದ ಹಿಡಿದು ಕಂಪೆನಿಗಳ ಸಿಒ, ಎಂಡಿಗಳ ವರೆಗೆ ಎಲ್ಲರಿಗೂ ಮೊಬೈಲ್ ೆನ್ ಬಳಕೆ ಇಂದು ಅನಿವಾರ್ಯವಾಗಿದೆ. ಇದರಿಂದ ಮೊಬೈಲ್ ೆನ್ ಬೇಡಿಕೆ ನಿರಂತರ ಹೆಚ್ಚುತ್ತಿದೆ. ದಿನಕ್ಕೂಂದು ಹೊಸ ಮೊಬೈಲ್ ೆನ್ ಕಂಪೆನಿ ತಲೆ ಎತ್ತುತ್ತಿವೆ. ಹ್ಯಾಂಡ್ ಸೆಟ್ಗಳ ಬೆಲೆ ಮತ್ತು ಕಾಲ್ ದರ ಇಳಿಕೆಯಾಗುತ್ತಿದೆ. ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆ್ ಇಂಡಿಯಾದ ವರದಿಗಳ ಪ್ರಕಾರ, ಮೊಬೈಲ್ ೆನ್ಗಳ ಗ್ರಾಹಕರ ಸಂಖ್ಯೆ ಮಾರ್ಚ್ ತಿಂಗಳಲ್ಲಿ ಶೇ. 2.62ರಷ್ಟು ಏರಿಕೆಯಾಗಿ 771.18 ಮಿಲಿಯನ್ಗಳಿಗೆ ತಲುಪಿದೆ.
ಮೊದಲಿಗೆ ಮೊಬೈಲ್ ೆನ್ ಕೇವಲ ಸಂವಹನ ಸಂಪರ್ಕ ಸಾಧನವಾಗಿ ಮಾತ್ರ ಕೆಲಸ ನಿರ್ವಹಿಸುತ್ತಿತ್ತು. ತದನಂತರದ ಸಂಶೋಧನೆ ಮತ್ತು ಅಭಿವೃದ್ಧಿಗಳಿಂದ ಮೊಬೈಲ್ ೆನ್ ಇಂದು ಇಡೀ ವಿಶ್ವವನ್ನೇ ತನ್ನೊಳಗಿರಿಸಿಕೊಂಡಿದೆ. ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳು ನಿರ್ವಹಿಸುವ ಕೆಲಸಗಳನ್ನು ಈಗ ಮೊಬೈಲ್ ೆನ್ ಒಂದೇ ನಿಭಾಯಿಸುತ್ತದೆ. ಸೆಲ್ ೆನ್ ಬಳಕೆ ಅತಿಯಾದಾಗಲಿಂದ ಮೂಲೆ ಸೇರಿರುವಗಳೆಂದರೆ ರೇಡಿಯೋ, ಮ್ಯೂಸಿಕ್ ಪ್ಲೇಯರ್, ವಾಚ್, ಕ್ಯಾಲ್ಕ್ಯುಲೇಟರ್, ಟೈಮಾರ್, ಕ್ಯಾಯಿನ್ ಬೂತ್, ಎಸ್ಟಿಡಿ ಬೂತ್, ದಿಕ್ಸೂಚಿ ಇತ್ಯಾದಿಗಳು.
ಬೇಡಿಕೆ ಹೆಚ್ಚಳಕ್ಕೆ ಕಾರಣ 
ಗ್ರಾಹಕರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಮೊಬೈಲ್ ೆನ್ ಕಂಪೆನಿಗಳು ತಮ್ಮನ್ನು ಹೊಸ ಹೊಸ ಸೇವೆಗಳಿಗೆ ತೆರೆದುಕೊಳ್ಳುತ್ತಿರುವುದು. ರೇಡಿಯೋ, ಮ್ಯೂಸಿಕ್ ಪ್ಲೇಯರ್, ಕ್ಯಾಮರಾ, ಮೆಮೊರಿ ಕಾರ್ಡ್, ಡ್ಯುಯಲ್ ಸಿಮ್, ದಿಕ್ಸೂಚಿ, ಟಿವಿ ರಿಮೋಟ್ ಕಂಟ್ರೋಲ್, ಇಂಟರ್ನೆಟ್, 3ಜಿ, ಉಷ್ಣಾಂಶ ಅಳೆಯುವ ಮಾಪಕ, ಪ್ರೋಜೆಕ್ಟ್ರ್ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಮೊಬೈಲ್ ೆನ್ ಕಂಪೆನಿಗಳು ಬಳಕೆದಾರರಿಗೆ ಒದಗಿಸುತ್ತಿವೆ. ಇತ್ತೀಚೆಗೆ ಬಂದ ಸೆಲ್ೆನ್ ನಂಬರ್ ಪೋರ್ಟಬಲಿಟಿ ಬಳಕೆ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತಿವೆೆ.
ಅವುಗಳಲ್ಲದೆ ಮೊಬೈಲ್ ೆನ್ಗಳ ಆಕಾರಗಳಲ್ಲಿನ ಬದಲಾವಣೆ ಕೂಡ ಜನರ ಗಮನ ಸೆಳೆಯುತ್ತಿದೆ. ಮೊದಲಿಗೆ ಚಿಕ್ಕ ಸ್ಕ್ರೀನ್ನ ಬ್ಲಾಕ್ ಆ್ಯಂಡ್ ವೈಟ್ ಹ್ಯಾಂಡ್ ಸೆಟ್ಗಳು ಬಂದರೆ ಅನಂತರ ದೊಡ್ಡ ಸ್ಕ್ರೀನ್, ಕ್ವಾರ್ಟಿ ಕೀಪ್ಯಾಡ್, ಟೆಚ್ ಸ್ಕ್ರೀನ್, ಹೋಲ್ಡ್ ಮಾಡಬಹುದಾಂತಹ ಕಲರ್-ಕಲರ್ ಸೆಟ್ಗಳು ಬಂದವು.
 'ಅತಿಯಾದರೆ ಅಮೃತವೂ ವಿಷ'ಎಂಬ ಮಾತಿನಂತೆ ಸೆಲ್ ೆನ್ಗಳ ಅತಿಯಾದ ಬಳಕೆ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಲ್ಲ. ತಜ್ಞರು ಈ ಬಗ್ಗೆ ಎಷ್ಟು ಹೇಳಿದರು ಜನ ತಲೆಕೆಡಿಸಿದಂತಿಲ್ಲ. ಜನ ಜೀವನದಲ್ಲಿ ಮೊಬೈಲ್ ೆನ್ ಬೇರೂರಿರುವುದನ್ನು ನೋಡಿದರೆ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಟ್ಟಿರಲು ಇಂದಿನವರಿಗೆ ಸಾಧ್ಯವೇ ಇಲ್ಲ. ಆದರೆ ಬಳಕೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿದರೆ ದೇಹದ ಮೇಲಾಗುವ ಕೆಟ್ಟಪರಿಣಾಮಗಳಿಂದಾದರೂ ದೂರವಿರಬಹುದು.

ಮೂಲೆ ಸೇರುತ್ತಿರುವ ಅರೆಯುವಕಲ್ಲು


ಮನುಷ್ಯ ತನ್ನ ಜೀವನದಲ್ಲಿ ಸದಾ ವೈವಿಧ್ಯವನ್ನು ಬಯಸುತ್ತಾನೆ. ಆಹಾರದ ವಿಷಯಕ್ಕೆ ಬಂದಾಗ ಅದು ಬಹಳ ಪ್ರಮುಖವಾಗುತ್ತದೆ. ವಿವಿಧ ತರಹದ ರುಚಿ - ರುಚಿಯಾದ ಅಡುಗೆ ತಯಾರಿಸಿ ತಿನ್ನುವುದು ಅವನ ಹವ್ಯಾಸವು ಕೂಡ. ಹೀಗೆ ನಾನಾ ವಿಧದ ಅಡುಗೆ ತಯಾರಿಗೆ ಅರೆಯುವಕಲ್ಲು ಬೇಕೆಬೇಕು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪದಾರ್ಥ, ತಿಂಡಿ - ತಿನಸುಗಳನ್ನು ಅರೆದೇ ತಯಾರಿಸಲಾಗುತ್ತದೆ. ಆದ್ದರಿಂದ ಅರೆಯುವಕಲ್ಲು ಹೆಂಗೆಳೆಯರ ಅಡುಗೆ ಮನೆಯ ದೈನಂದಿನ ಸಂಗಾತಿ.
ತೆಂಗಿನ ಕಾಯಿ, ಅಕ್ಕಿ, ಗೋಧಿ ಇತ್ಯಾದಿಗಳನ್ನು ಅರೆಯಲು, ಸಾಂಬಾರು ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಲು ಹಿಂದಿನ ಕಾಲದಲ್ಲಿ ಅರೆಯುವಕಲ್ಲನೇ ಬಳಸಲಾಗುತ್ತಿತ್ತು. ಆದ್ದರಿಂದ ಸಾಮಾನ್ಯವಾಗಿ 'ಅರೆಯುವಕಲ್ಲು ಇಲ್ಲದ ಮನೆಗಳೇ ಇಲ್ಲ'ಎಂಬ ಮಾತಿದೆ. ಅರೆಯುವಕಲ್ಲು, ಬೀಸುವಕಲ್ಲು, ಕಟ್ಟುವಕಲ್ಲು ಹೀಗೆ ಬೇರೆಬೇರೆ ವಿಧದ ಕಲ್ಲುಗಳನ್ನು ಹಳ್ಳಿಗಳಲ್ಲಿ ಜನರು ಬಳಸುತ್ತಾರೆ. ಈ ರೀತಿಯ mule seruttiruva areuvakalluಕಲ್ಲುಗಳಲ್ಲಿ ಅರೆದು ತಯಾರಿಸಿದ ಅಡುಗೆ, ತಿಂಡಿ - ತಿನಸುಗಳು ವಿಶೇಷವಾಗಿರುತ್ತವೆ ಮತ್ತು ತುಂಬಾ ರುಚಿಯಾಗಿರುತ್ತವೆ. ಆದರೆ ಇಂದು ಅರೆಯುವಕಲ್ಲು ಮೂಲೆಗುಂಪಾಗುತ್ತಿದೆ.
ಮಿಕ್ಸಿ, ಗ್ರ್ಯಾಂಡರ್ ಬಳಕೆ
ಇಂದು ಕಾಲ ಬದಲಾಗಿದೆ. ಆಧುನಿಕತೆ ಬೆಳೆದಂತೆ ಮನುಷ್ಯ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಯಂತ್ರಗಳ ಸಹಭಾಗಿತ್ವ ಪಡೆದುಕೊಂಡಿದ್ದಾನೆ. ದೈಹಿಕ ಶ್ರಮ ಕಡಿಮೆಯಾಗಿ, ಯಂತ್ರಗಳ ಬಳಕೆ ಹೆಚ್ಚಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ವಿದ್ಯುತ್ ಚಾಲಿತ ಉಪಕರಣಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ಹಾಗೇ ಇಲ್ಲಿ ಅರೆಯುವಕಲ್ಲಿ ಜಾಗವನ್ನು ಮಿಕ್ಸಿ, ಗ್ರ್ಯಾಂಡರ್ಗಳು ಆಕ್ರಮಿಸಿಕೊಂಡಿವೆ. ಬಹಳ ಕಡಿಮೆ ಸಮಯದಲ್ಲಿ, ದೈಹಿಕ ಶ್ರಮವಿಲ್ಲದೆ ಸುಲಭವಾಗಿ ಬಹಳ ನುಣುಪಾಗಿ ಆಹಾರ ಪದಾರ್ಥಗಳನ್ನು ಅರೆದು ಅಡುಗೆ ತಯಾರಿಸಲು ಈ ವಿದ್ಯುತ್ ಚಾಲಿತ ಉಪಕರಣಗಳು ಸಹಕಾರಿ. ಇಂದಿನ ಒತ್ತಡದ ಬದುಕಿನಲ್ಲಿ ಜನರಿಗೆ ಯಾವುದೇ ಕೆಲಸ ಮಾಡಲು ಸಮಯವಿಲ್ಲ. ಇದರಿಂದ ತುಂಬಾ ಸಮಯ ಅರೆಯುವಕಲ್ಲಿನಲ್ಲಿ ಅರೆಯುತ್ತಾ ಇರಲು ಸಾಧ್ಯವಿಲ್ಲ ಎಂದು ಅವರು ಮಿಕ್ಸಿ, ಗ್ರ್ಯಾಂಡರ್ಗಳನ್ನು ಬಳಸತೊಡಗಿದರು.
ಮರೆಗೆ ಕಾರಣ
ಇಂದು ಎಲ್ಲಿ ನೋಡಿದರು ಚಿಕ್ಕ -ಚಿಕ್ಕ ಮನೆಗಳೇ ಕಾಣಬಹುದು. ಅವುಗಳಲ್ಲಿ ಅಷ್ಟು ದೊಡ್ಡದಾಗಿ, ಭಾರವಾಗಿರುವ ಅರೆಯುವಕಲ್ಲುಗಳನ್ನು ಇಡಲು ಸ್ಥಳಾವಕಾಶದ ಕೊರೆತೆ ಕೂಡ ಇದೆ. ಮತ್ತೆ ಅವುಗಳನ್ನು ಸ್ಥಳಾಂತರಿಸುವುದು ಕೂಡ ಕಷ್ಟದ ಕೆಲಸ. ಈ ಕಾರಣಗಳಿಂದ ಇಂದು ಅರೆಯುವಕಲ್ಲು ಮರೆಯಾಗುತ್ತಿದೆ. ಮುಂದಿನ ಜನಾಂಗದವರಿಗೆ ಅದರ ಪರಿಚಯವೇ ಇಲ್ಲದಗಬಹುದು. ಅವರು ಅದನ್ನು ವಸ್ತು ಸಂಗ್ರಹಾಲಯಗಳಲ್ಲಿ ನೋಡಬೇಕಾಗಿ ಬಂದರು ಆಶ್ಚರ್ಯವಿಲ್ಲ.
ತಯಾರಿ 
ಅರೆಯುವಕಲ್ಲುಗಳನ್ನು ಸಾಮಾನ್ಯವಾಗಿ ಯಾವುದೇ ಕಾರ್ಖಾನೆಗಳಲ್ಲಿ ತಯಾರಿಸುವುದಿಲ್ಲ. ಅರೆಯುವಕಲ್ಲು ತಯಾರಕರು ಕಪ್ಪುಕಲ್ಲಿನ ಕೋರೆ (ಗಣಿ)ಗಳಿಂದ, ಅವುಗಳ ಮಾಲಕರಿಗೆ ಹಣಕೊಟ್ಟು ದೊಡ್ಡ ಗಾತ್ರದ ಕಲ್ಲುಗಳನ್ನು ಪಡೆಯುತ್ತಾರೆ. ಯಾರಾದರೂ ಅರೆಯುವಕಲ್ಲು ಬೇಕೆಂದು ಆರ್ಡರ್ ನೀಡಿದಾಗ ಕಲ್ಲಿನ ತಯಾರಿಸುವ ಕಾರ್ಯ ಆರಂಭಿಸುತ್ತಾರೆ. ಅವರು ಬೇರೆಬೇರೆ ಗಾತ್ರದ ವಿವಿಧ ಉಳಿ, ಸುತ್ತಿಗೆಗಳನ್ನು ಬಳಸಿ ಬೃಹತ್ ಕಲ್ಲುಗಳನ್ನು ಕೆತ್ತಿ ಸುಂದರ ಆಕೃತಿ ನೀಡುತ್ತಾರೆ. ಒಂದು ಕಲ್ಲು ಸಿದ್ಧಗೊಳಿಸಲು ಮೂರು - ನಾಲ್ಕು ದಿನಗಳಾದರೂಬೇಕು. ಬೇಡಿಕೆಗೆ ತಕ್ಕುದಾಗಿ ಸಣ್ಣ ಹಾಗೂ ದೊಡ್ಡ ಗಾತ್ರದ ಅರೆಯುವ ಕಲ್ಲುಗಳನ್ನು ತಯಾರಿಸುತ್ತಾರೆ. ಸಿದ್ಧಗೊಂಡ ಕಲ್ಲಿನ ಬೆಲೆ ಸಾಮಾನ್ಯವಾಗಿ 100ರಿಂದ 2,500 ರೂ.ಗಳ ವರೆಗಿರುತ್ತವೆ.
ಬಳಕೆಯ ಪ್ರಯೋಜನ
ಅರೆಯುವಕಲ್ಲು ಬಳಕೆಯಿಂದ ಅದೆಷ್ಟೊ ಅರೆಯುವಕಲ್ಲು ಸಿದ್ದಪಡಿಸುವ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ. ಮಿಕ್ಸಿ, ಗ್ರ್ಯಾಂಡರ್ಗಳ ಬಳಕೆಗೆ ಬಹಳಷ್ಟು ವಿದ್ಯುತ್ ಬೇಕಾಗುವುದರಿಂದ ವಿದ್ಯುತ್ ಕೊರತೆಗೆ ಅದು ಕಾರಣವಾಗುತ್ತದೆ. ಇದನ್ನು ತಡೆಯಲು ಸಮಯಾವಕಾಶ ಇರುವಾಗಲಾದರೂ ಅರೆಯುವಕಲ್ಲು ಬಳಕೆ ಮಾಡಿದರೆ ಉತ್ತಮ.
ಮಿಕ್ಸಿ, ಗ್ರ್ಯಾಂಡರ್ಗಳಲ್ಲಿ ರುಬ್ಬಿ ಅಥವಾ ಪುಡಿ ಮಾಡಿ ತಯಾರಿಸಿದ ಆಹಾರ ಪದಾರ್ಥಗಳು ಆಧುನಿಕ ಕಾಲದ ಜನರ ಬಾಯಿ ಚಪಲಕ್ಕೆ ಒಗ್ಗುತ್ತವೆ. ಆದರೆ ಆರೋಗ್ಯ ಯಾವಾಗಲೂ ಉತ್ತಮವಾಗಿರಬೇಕು ಎಂದು ಭಾವಿಸುವ ಮಂದಿಗೆ ಇಂದಿಗೂ ಸಾಂಪ್ರದಾಯಿಕ ಅರೆಯುವಕಲ್ಲಿನಲ್ಲಿನ ಸಹಾಯದಿಂದಲೇ ತಯಾರಿಸಿದ ಪದಾರ್ಥಗಳೇ ಇಷ್ಟ. ಇಂತಹ ಪದ್ಧತಿ ಇಂದು ಹಳ್ಳಿಗಳಲ್ಲಿ ಕೆಲವೊಂದೆಡೆ ಮಾತ್ರ ಉಳಿದುಕೊಂಡಿದೆ.
 ಉತ್ತಮ ವ್ಯಾಯಾಮ
ಅರೆಯುವಕಲ್ಲುಘಿಗಳ ಬಳಕೆ ನಮ್ಮ ದೈಹಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಇವುಗಳ ಬಳಕೆಯಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಇದರಿಂದ ದೈಹಿಕವಾಗಿ ಸದೃಢರಾಗಿರುತ್ತೇವೆ. ಕಾಲಕಾಲಕ್ಕೆ ಹಸಿವು, ನಿದ್ದೆ ಸರಿಯಾಗಿ ಬರಲು ಕೂಡ ಇದು ಸಹಕಾರಿಯಾಗಿದೆ. ಅಲ್ಲದೆ ತೋಳು ಬಲವೃದ್ಧಿಸುತ್ತದೆ.

ಗುರುವಾರ, ಸೆಪ್ಟೆಂಬರ್ 20, 2012

ವೈವಿಧ್ಯ ಶೇವಿಂಗ್ಸೆಟ್ಗಳ ಬಳಕೆ


ಇದು ಆಧುನಿಕ ಯುಗ. ಇಲ್ಲಿ ಪ್ರತಿಯೊಂದು ಕೆಲಸ, ವಸ್ತುಗಳಲ್ಲಿಯೂ ವಿವಿಧತೆ ಇದೆ. ನಮ್ಮ ದೈನಂದಿನ ಬಳಕೆಗೆ ಬೇಕಾಗುವ ಎಲ್ಲ ವಸ್ತುಗಳಲ್ಲಿಯೂ ಆಯ್ಕೆಗೆ ಬಹಳಷ್ಟು ಅವಕಾಶಗಳಿವೆ. ಯಾಕೆಂದರೆ ಒಂದು ನಿರ್ದಿಷ್ಟ ಕೆಲಸಕ್ಕೆ ಉಪಯೋಗಿಸಲ್ಪಡುವ ವಸ್ತುವನ್ನು ಹಲವಾರು ಕಂಪೆನಿಗಳು ಬೇರೆಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಲ್ಲಿ ಉತ್ಪಾದಿಸಿ ಜನರಿಗೆ ಒದಿಗಿಸುತ್ತಿವೆ. ಹಾಗೆ ಇಂದು ಶೇವಿಂಗ್ಸೆಟ್ಗಳಲ್ಲಿಯೂ ಭಿನ್ನತೆ, ವಿವಿಧತೆಗಳನ್ನು ಕಾಣಬಹುದು.
ಗಂಡಸರು ಆಗಾಗ ದಿನಕ್ಕೆ ಹಲವು ಬಾರಿ ತಮ್ಮ ಗಡ್ಡ ನೇವರಿಸುತ್ತಾ, ಕನ್ನಡಿಯಲ್ಲಿ ಆದರ ಸೌಂದರ್ಯವನ್ನು ವೀಕ್ಷಿಸುವುದು ಸಾಮಾನ್ಯ. ಕೆಲವರು ಪ್ರತಿದಿನ ಶೇವ್ ಮಾಡುತ್ತಾರೆ. ಇನ್ನು ಕೆಲವರು ಎರಡು, ಮೂರು, ನಾಲ್ಕು ದಿನಗಳಿಗೊಮ್ಮೆ, ಮತ್ತೆ ಕೆಲವರು ವಾರಕ್ಕೆ ಒಮ್ಮೆ ಶೇವ್ ಮಾಡುತ್ತಾರೆ. ಗಡ್ಡ ಬರುವ ಮೊದಲು ಎಲ್ಲ ಹುಡುಗರಿಗೂ ತಮ್ಮ ಹಿರಿಯರು ಶೇವ್ ಮಾಡುವುದನ್ನು ನೋಡಿ ತಾವು ಶೇವ್ ಮಾಡಬೇಕೆಂಬ ಆಸೆ. ಆದರೆ ಹೆಚ್ಚಿನವರಿಗೆ ಗಡ್ಡ ಬಂದು ಶೇವ್ ಮಾಡಲು ಪ್ರಾರಂಭಿಸಿ ಕೆಲವೇ ಸಮಯದಲ್ಲಿ ಅದೊಂದು ಸಮಸ್ಯೆಯಾಗಿ ಬಿಡುತ್ತದೆ. ಕಾಲಬದಲಾದಂತೆ ಅಂತಹ ಸಮಸ್ಯೆಯನ್ನು ಬಗೆಹರಿಸಲು ನಾನ ರೀತಿಯ ಶೇವಿಂಗ್ಸೆಟ್ಗಳು ಬಳಕೆಗೆ ಬಂದುವು. ಸುಲಭ ಶೇವಿಂಗ್ಗೆ ಸಹಕರಿಸುವುದರ ಜೊತೆಗೆ ಮಾರುಕಟ್ಟೆ ಪೈಪೊಟಿ ನೀಡುವುದೆ ಅವುಗಳ ಉದ್ದೇಶ. ಅದೊಂದು ಕಾಲವಿತ್ತು ಶೇವ್ ಮಾಡಲು ಹರಿತವಾದ ಚೂರಿಯನ್ನು ಬಳಸುತ್ತಿದ್ದರು. ಶೇವ್ ಮಾಡುವುದಕ್ಕಾಗಿಯೇ ವಿಶೇಷವಾಗಿ ಉಳೆ ಅಥವಾ ಜಿಂಕೆಯ ಕೋಡನ್ನು ಬಳಸಿ ಚೂರಿಗೆ ಹಿಡಿಯನ್ನು ತಯಾರಿಸುತ್ತಿದ್ದರು. ಅದು ಬಹಳ ಹರಿತವಾಗಿರುತ್ತಿತ್ತು. ಇದು ಕತೆಯಲ್ಲ ನಾನು ಚಿಕ್ಕವನಿದ್ದಾಗ ನನ್ನ ಅಜ್ಜ ಕೂಡ ಚೂರಿಯಿಂದಲೇ ಶೇವ್ ಮಾಡುತ್ತಿದ್ದರು. ಒಂದು ಸ್ಲೇಟಿನ ತುಂಡಿಗೆ ತೆಂಗಿನ ಎಣ್ಣೆ ಸವರಿ ಅಜ್ಜ ಚೂರಿಯನ್ನು ಮಸೆದು ಹರಿತಗೊಳಿಸುತ್ತಿದ್ದರು. ಆ ಚೂರಿಯನ್ನು ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸುತ್ತಿರಲಿಲ್ಲ.
ಸಾಮಾನ್ಯವಾಗಿ ಹೇರ್ಕಟ್ಟಿಂಗ್ ಶೋಪ್ಗಳಲ್ಲಿ ಒಂದೇ ರೀತಿಯ ಬಾಳನ್ನು ಶೇವ್ ಮಾಡಲು ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಹೇರ್ಕಟ್ಟಿಂಗ್ ಶೋಪ್ಗಳು ಇರಲಿಲ್ಲಘಿ. ಕಟ್ಟಿಂಗ್ ಮಾಡುವ ವ್ಯಕ್ತಿಗಳು ಮನೆ ಮನೆಗೆ ಬಂದು ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದರು. ಆದರೆ ಅವರು ಕೂಡ ಶೇವ್ ಮಾಡಲು ಚೂರಿಯನ್ನೇ ಬಳಸುತ್ತಿದ್ದರು. ಕಾಲ ಬದಲಾದಂತೆ ಅವರು ಕೂಡ ಬಾರ್ಬರ್ ಶೋಪ್ಗಳಲ್ಲಿ ಬಳಸುವ ಬಾಳನ್ನೇ ಉಪಯೋಗಿಸ ತೊಡಗಿದರು. ಈಗ ಮನೆಗಳಿಗೆ ಬಂದು ಶೇವ್ ಮಾಡುವ ಕ್ರಮವೇ ಇಲ್ಲವಾಗಿದೆ.ಮೊದಲು ಸಿಂಗಲ್ ಬ್ಲೇಡ್ ಬಳಸಿ ಶೇವ್ ಮಾಡಬಹುದಾದಂತಹ ಸೆಟ್ಗಳು ಬಂದುವು. ಅನಂತರ ಕ್ಲೀನ್ ಶೇವ್ ಮಾಡುವವರಿಗೆ ಹೆಚ್ಚು ಸಹಕಾರಿಯಾಗುವ ಎರಡು ಬ್ಲೇಡಿನ ಸೆಟ್ಗಳು ಬಳಕೆಗೆ ಬಂದುವು. ಎರಡು ಬ್ಲೇಡಿನ ಸೆಟ್ಗಳಲ್ಲಿ ಮೊದಲಿಗೆ ಬ್ಲೇಡ್ ಬದಲಾಯಿಸಲು ಅವಕಾಶವಿರಲಿಲ್ಲ. ತದನಂತರ ಅವುಗಳಲ್ಲಿಯೂ ಬ್ಲೇಡ್ ಬದಲಾಯಿಸಲು ಸಾಧ್ಯವಿರುವ ಸೆಟ್ಗಳು ಮಾರುಕಟ್ಟೆ ಪ್ರವೇಶಿಸಿದವು. ಆರಂಭದಲ್ಲಿ ಎರಡು ಬ್ಲೇಡಿನ ಸೆಟ್ಗಳ ಬೆಲೆ ವಿಪರೀತವಾಗಿತ್ತು.
ಆಧುನಿಕತೆ ಬೇಳೆದಂತೆ ಹಲವುರು ಶೇವಿಂಗ್ಸೆಟ್ ಉತ್ಪಾದನಾ ಕಂಪೆನಿಗಳು ಹುಟ್ಟಿಕೊಂಡುವು. ಇದರಿಂದ ಶೇವಿಂಗ್ಸೆಟ್ಗಳ ಮಾರಾಟದಲ್ಲಿ ಪೈಪೊಟಿ ಏರ್ಪಟ್ಟು ಬೆಲೆ ನಿಧಾನವಾಗಿ ಇಳಿಯ ತೊಡಗಿತು. ಇತ್ತೀಚೆಗೆ ಬಹಳ ಆರಾಮದಾಯಕವಾಗಿ ಶೇವ್ ಮಾಡುವ ಉದ್ದೇಶದಿಂದ ಮೂರು, ನಾಲ್ಕು ಬ್ಲೇಡನ್ನು ಒಮ್ಮೆಲೆ ಬಳಸಬಹುದಾದಂತಹ ಸೆಟ್ಗಳು ದೊರೆಯುತ್ತಿವೆ. ಇನ್ನೊಂದೆಡೆ ಶೇವಿಂಗ್ನಲ್ಲಿ ಮಾನವ ಶ್ರಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಬಳಕೆಗೆ ಬಂದ ವಿದ್ಯುತ್ ಉಪಯೋಗಿಸಿ ಕಾರ್ಯ ನಿರ್ವಹಿಸುವ ಶೇವಿಂಗ್ಸೆಟ್ಗಳು ಜನರನ್ನು ಆಕರ್ಷಿಸುತ್ತಿವೆ. ಆದರೆ ಅವುಗಳನ್ನು ಬಳಸುವಾಗ ಎಚ್ಚರಿಕೆ ಅತೀ ಅಗತ್ಯ. ಇಂದು ದೊರೆಯುವ ವೈವಿಧ್ಯಮಯ ಶೇವಿಂಗ್ಸೆಟ್ಗಳನ್ನು ಬಳಸಿ ಗಂಡಸರು ಕ್ಲೀನ್ ಶೇವ್ ಮಾಡುವ ಬದಲು ಗಡ್ಡವನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸುತ್ತಾರೆ. ಅಂತಹ ವಿವಿಧ ವಿನ್ಯಾಸಗಳಿಗೆ ಹೊಸ ಹೆಸರುಗಳನ್ನು ಕೂಡ ಇಡಲಾಗಿದೆ.  ್ಯಾಶನ್ ಪ್ರೀಯರಿಗೆ ಹೀಗೆ ವಿವಿಧ ರೀತಿಯ ಹೊಸ ಹೊಸ ಶೇವಿಂಗ್ ಸೆಟ್ಗಳು ಲಭಿಸ ತೊಡಗಿದ್ದು ಬಹಳಷ್ಟು ಸಂತಸ ತಂದಿದೆ.