ಭಾನುವಾರ, ಸೆಪ್ಟೆಂಬರ್ 30, 2012

ಆತ್ಮವಿಶ್ವಾಸ ಪ್ರತಿಯೊಬ್ಬರಿಗೂ ಅಗತ್ಯ


ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಮಗೆ ಆತ್ಮವಿಶ್ವಾಸ ಅತ್ಯಗತ್ಯ. ಅದು ಇಲ್ಲದಿದ್ದರೆ, ಯಾರಿಂದಲೂ ಏನನ್ನೂ ಸಾಸಲಾಗದು. ದೋಣಿ ನಡೆಸಲು ಹರಿಗೋಲು ಎಷ್ಟು ಮುಖ್ಯವೊ, ನಮ್ಮ ಜೀವನದಲ್ಲಿ ಆತ್ಮವಿಶ್ವಾಸವು ಅಷ್ಟೇ ಮುಖ್ಯ. ಆತ್ಮವಿಶ್ವಾಸವೊಂದಿದ್ದರೆ ನಮಗೆ ಎಂಥಹ ಕಷ್ಟದ ಪರಿಸ್ಥಿತಿ, ಸವಾಲುಗಳನ್ನು ಎದುರಿಸಲು ಸಾಧ್ಯವಿದೆ. ಆತ್ಮವಿಶ್ವಾಸವಿಲ್ಲದಿದ್ದರೆ ಸವಾಲುಗಳನ್ನು ಕಂಡಕೂಡಲೇ ಗಾಳಿ ತೆಗೆದ ಬಲೂನಿನಂತೆ ಕುಗ್ಗಿ, ಖಿನ್ನರಾಗುತ್ತೇವೆ.
ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಇರುವ ವಿಶ್ವಾಸವೇ ‘ಆತ್ಮವಿಶ್ವಾಸ’. ತನ್ನ ಗುಣ - ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು. ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದೇ ‘ಆತ್ಮವಿಶ್ವಾಸ’ವಾಗಿದೆ. ‘ಆತ್ಮವಿಶ್ವಾಸ’ ಮಾನವನಲ್ಲಿರುವ ಕಣ್ಣಿಗೆ ಕಾಣದ ಅತ್ಯಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು. ಈ ಆಸ್ತಿಯನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿದರೆ ಅದು ನಮ್ಮನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಆತ್ಮವಿಶ್ವಾಸ ಎಂಬುದು ಮಾನವನ ಉನ್ನತಿಯ ಮೆಟ್ಟಿಲುಗಳಿದ್ದಂತೆ.
ನನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಯೋಚಿಸುವುದು ಸರ್ವೇ ಸಾಮಾನ್ಯ. ಈ ಭಾವನೆಯನ್ನು ದಮನಮಾಡಿ, ನನ್ನಿಂದ ಆ ಕೆಲಸ ಮಾಡಲು ಖಂಡಿತಾ ಸಾಧ್ಯ. ಯಾಕೆ ಸಾಧ್ಯವಿಲ್ಲಘಿ? ಎಂದು ನಮಗೆ ನಾವೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವಿದ್ದರೆ ಸಾಕು ಎಂತಹ ಕೆಲಸಗಳೂ ಸುಗಮವಾಗಿ, ಸುಸೂತ್ರವಾಗಿ ನೆರವೇರುತ್ತದೆ. ಇದಕ್ಕೆ ಉದಾಹರಣೆ: ಲಾಲ್ ಬಹದ್ದೂರ್ ಶಾಸಿ ಅವರು ತಮ್ಮ ಶಾಲಾ ದಿನಗಳಲ್ಲಿ ಗಂಗಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿಕೊಂಡು ದಾಟುತ್ತಿದದ್ದುಘಿ ಆತ್ಮವಿಶ್ವಾಸದ ಪ್ರಭಾವದಿಂದಲೇ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ.
ಆತ್ಮವಿಶ್ವಾಸವಿದ್ದವರು ಕೆಟ್ಟಕೆಲಸ, ಅನ್ಯಾಯಗಳನ್ನು ಮಾಡುವುದನ್ನು ಖಂಡಿಸಬಹುದು, ಅಂತವರ ವಿರುದ್ಧ ಹೋರಾಡಬಹುದು. ಅದು ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವುದಾರೂ ಒಳ್ಳೆಯ ಲ ಕೊಡುತ್ತದೆ ಎಂಬ ನಂಬಿಕೆಯಿಂದ ನಿರ್ವಹಿಸಬೇಕು. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ. ಧೈರ್ಯದಿಂದ ಮುಂದುವರಿದಾಗ ಜಯ ಖಂಡಿತ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಧೈರ್ಯ, ನಂಬಿಕೆಗಳನ್ನು ಬಳಸಿಕೊಳ್ಳಬೇಕು. ಆತ್ಮವಿಶ್ವಾಸ ಇಲ್ಲದವರನ್ನು ಹೇಡಿಗಳು, ಸೋಮಾರಿಗಳು, ಧೈರ್ಯಗೇಡಿಗಳು, ತಮ್ಮ ಬಗ್ಗೆ ಅಪನಂಬಿಕೆ ಉಳ್ಳವರು ಎನ್ನಲಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡಬೇಕಾಗಿ ಬಂದಾಗಲೂ ‘ನನ್ನಿಂದ ಆಗೋದಿಲ್ಲ’. ‘ನನಗೆ ಸಾಧ್ಯವಿಲ್ಲ’ ಎನ್ನುವುದೇ ಅವಿಶ್ವಾಸದ ಕುರುಹು.
ಕೆಲವರಿಗೆ ಆತ್ಮವಿಶ್ವಾಸದ್ದೇ ಒಂದು ದೊಡ್ಡ ಕೊರೆತೆ. ಅಂತವರಿಗೆ ಆತ್ಮವಿಶ್ವಾಸವಿರುವ ಅವರ ಮನೆಯವರು, ಸ್ನೇಹಿತರು ಪ್ರೋತ್ಸಾಹ ನೀಡಿ ಆತ್ಮವಿಶ್ವಾಸ ಮೂಡಿಸಬೇಕು. ನಿನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯ, ಏಳು ಪ್ರಯತ್ನ ಮಾಡು, ನೀನೆ ಮಾಡಬೇಕಾದ ಕಾರ್ಯ ಅದು. ಈ ರೀತಿಯಾಗಿ ಹುರಿದುಂಬಿಸಿದಾಗ ಅವರಿಗೆ ತಮ್ಮ ಬಗ್ಗೆ ನಂಬಿಕೆ ಹುಟ್ಟಿ ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನೆರವೇರಿಸುವುದರಲ್ಲಿ ಸಲರಾಗುತ್ತಾರೆ. ಒಮ್ಮೆ ಆತ್ಮವಿಶ್ವಾಸ ಗರಿಗೆದರಿದರೆ ಪ್ರಗತಿ ತನ್ನಿಂದ ತಾನಾಗೆ ಬರುತ್ತದೆ. ಇದರಿಂದ ಎಂತಹ ಹೇಡಿಗಳು ಪ್ರಗತಿ ಶೀಲರಾಗಲು ಸಾಧ್ಯ.
ಯಾವುದೇ ಕೆಲಸ - ಕಾರ್ಯಗಳನ್ನು ನಿರ್ವಹಿಸುವಾಗ ಒಮ್ಮೆ ಸೋಲಾಯಿತೆಂದು ಆತ್ಮವಿಶ್ವಾಸವನ್ನೇ ಕಳಕೊಳ್ಳುವುದಲ್ಲ. ‘ಮರಳಿ ಯತ್ನವ ಮಾಡು’ ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲಿನಿಂದ ನಾವು ಕಳಕೊಳ್ಳುವುದೇನೂ ಇಲ್ಲ. ಆದರೆ ಸೋಲಿನಿಂದ ಪಾಠ ಕಲಿಯುತ್ತೇವೆ. ಅನುಭವ ಗಳಿಸುತ್ತೇವೆ. ನಮ್ಮಲ್ಲಿರುವ ಅಹಂಕಾರ ದೂರವಾಗುತ್ತದೆ. ಆದ್ದರಿಂದ ಸೋಲು ಬಂತೆಂದು ಹತಾಶರಾಗುವುದಬೇಡ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಆತ್ಮವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗಬೇಕು.
‘ಅತಿಯಾದರೆ ಅಮೃತವು ವಿಷ’ ಎಂಬ ಮಾತಿದೆ. ಹಾಗೇ ಮಿತಿಮೀರಿದ ಆತ್ಮವಿಶ್ವಾಸವು ಒಳ್ಳೆಯದಲ್ಲ. ತನ್ನ ಯೋಗ್ಯತೆ, ಸಾಮರ್ಥ್ಯ ಮೀರಿ ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುವುದು, ಹಿಂದೆ ಮುಂದೆ ಯೋಚಿಸದೆ ಯಾವುದಾರದರೂ ಸರಿ, ಎಂತಹ ಸಮಯದಲ್ಲಾದರೂ ಸರಿ ಎಂದು ಮುನ್ನುಗ್ಗುವುದು ಪ್ರಮಾದಕರವಾದ ನಡತೆ. ಇದನ್ನೇ ದುಡುಕು ಸ್ವಭ್ವಾ ಎನ್ನುವುದು. ದುಡುಕಿದರೆ ಎಡವುದು ಖಂಡಿತ. ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕೆಲವೊಂದು ಬಾರಿ ಅತಿಯಾದ ಆತ್ಮವಿಶ್ವಾಸ (ಓವರ್ ಕಾನ್ಫಿಡೆನ್ಸ್)ದಿಂದ ಸೋಲು ಅನುಭವಿಸುವುದುಂಟು. ಅಂತಹ ಸಂದರ್ಭಗಳಲ್ಲಿಘಿ ಅವರ ಪೋಷಕರು, ಗುರುಗಳು ತಿಳಿಹೇಳಿ ಪ್ರೋತ್ಸಾಹಿಸಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆತ್ಮವಿಶ್ವಾಸ ಬೆಳೆದರೆ ದೇಶದಲ್ಲಿ ಹೇಡಿಗಳು, ಸೋಮಾರಿಗಳು ಇಲ್ಲದೆ ಎಲ್ಲರೂ ೀರರಾಗಿ - ೀಮಂತರಾಗಿ ಬಾಳ ಬಹುದು. ಆದರೆ ಆತ್ಮವಿಶ್ವಾಸದ ಸದುಪಯೋಗವಾಗಬೇಕು. ಇದರಿಂದ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ರಾಷ್ಟ್ರ ಪ್ರಗತಿ ಪಥದಲ್ಲಿ ಮುನ್ನಡೆಯಬಹುದು. ಬಾಳಿದರೆ ಆತ್ಮವಿಶ್ವಾಸದಿಂದ ಬಾಳಬೇಕು ಎಂಬ ತತ್ವ ಮಹತ್ತರವಾದುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ