ಆಸೆ, ಬಯಕೆ ಮನುಷ್ಯರಲ್ಲಿ ಸಹಜ. ಎಲ್ಲಾ ಬಯಕೆಗಳ ಈಡೇರಿಕೆಗೆ ಪ್ರಯತ್ನಿಸುವುದೂ ಅಸಾಧ್ಯ. ಆದರೆ ಬಯಕೆ ತೋಟದಲ್ಲಿರುವ ಕೆಲವೊಂದು ಆಸೆಗಳ ಈಡೇರಿಕೆಗೆ ಯತ್ನಿಸಬಹುದು. ನನ್ನ ಹಲವಾರು ಬಯಕೆಗಳಲ್ಲಿ ಬ್ಲಾಗ್ ರಚನೆಯು ಒಂದು. ಅದಕ್ಕಾಗಿಯೇ ಈ ಬ್ಲಾಗಿಗೆ ‘ಬಯಕೆ ತೋಟದಿಂದ...’ ನಾಮಕರಣ ಮಾಡಿದ್ದೇನೆ.
ಸೋಮವಾರ, ಜುಲೈ 2, 2012
ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ
ಕತ್ತಲಲ್ಲೇ ಅರಳಿ ಕತ್ತಲಲ್ಲೇ ಅಂತ್ಯಕಾಣುವ ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ. ಅರಳಿದ ಅಲ್ಪಕಾಲದಲ್ಲೇ ಸುವಾಸನೆ ಬೀರುತ್ತಾ, ತನ್ನ ಸೌಂದರ್ಯ ರಾಶಿಯಿಂದ ಕಣ್ಮನಸೂರೆಗೊಳ್ಳುವ ಈ ಹೂ ಅರಳುವದು ವರ್ಷಕ್ಕೊಮ್ಮೆ. ಅದರಂತೆ ಇದರ ಆಯಸ್ಸು ಕೂಡ ಕೆಲವೇ ಗಂಟೆಗಳು. ಕೇವಲ ಎಲೆಯಲ್ಲೇ ಹೂ ಬಿಟ್ಟು ಆಕರ್ಷಿಸುವ ಈ ಬ್ರಹ್ಮಕಮಲಕ್ಕೆ ಸರಿಸಾಟಿ ಹೂ ಮತ್ತೊಂದಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ