ಭಾನುವಾರ, ಜುಲೈ 29, 2012

ಕಾವಿಯನುಟ್ಟು ದೀಕ್ಷೆಯ ತೊಟ್ಟು

ಕಾವಿಯನುಟ್ಟು
ದೀಕ್ಷೆಯ ತೊಟ್ಟು
ಕಾಮ, ಕ್ರೋದವ ಬದಿಯಲಿ ಬಿಟ್ಟು
ಭಗವಂತನತ್ತ ದೃಷ್ಟಿಯ ನೆಟ್ಟು

ಕಾಶಿಗೆ ಯಾತ್ರೆ ಹೋಗೊಣ
ಬದುಕನು ಸಾರ್ಥಕ ಗೊಳಿಸೋಣ
ವಿಶ್ವನಾಥನ ನೆನೆಯೋಣ
 ಕಷ್ಟ ಕಾರ್ಪಣ್ಯಗಳ ಮರೆಯೋಣ

ಪವಿತ್ರ ಕ್ಷೇತ್ರಗಳಿಗೆ ಪ್ರದಕ್ಷಿಣೆ ಹಾಕಿ
ಜಂಜಾಟದ ಜೀವನ ಕಳೆಯೋಣ
ಪುಣ್ಯ ಭೂಮಿಯ ಸ್ಪರ್ಶಿಸಿ ನಾವು
ಸುಂದರ ಮೂರ್ತಿಯ ಕಣ್ತುಂಬೋಣ

ವೃದ್ಧಾಪ್ಯದಲಿ ವೃತಾಚರಣೆ ಮಾಡಿ
ಆರೋಗ್ಯ ಭಾಗ್ಯವ ಪಡೆಯೋಣ
ಆಸೆ, ಆಕಾಂಕ್ಷೆಗಳಿಗೆಲ್ಲ ಲಗಾಮು ಹಾಕಿ
ತೀರ್ಥಾಟನೆ ಗೈದು ಬಾಳಲಿ ನೆಮ್ಮದಿ ಗಳಿಸೋಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ