ಸೋಮವಾರ, ಜುಲೈ 2, 2012

ಸ್ವತಂತ್ರ ಭಾರತದ ವೈಭವ


ಭ್ರಷ್ಟಾಚಾರದ ರಕ್ಕಸ ನರ್ತನ
ಶ್ರೀಸಾಮಾನ್ಯರ ಮರ್ದನ
ಸ್ವೇಚ್ಛ ರಾಜಕಾರಣಿಗಳಿಗೆ
ಸ್ವರ್ಗ ದರ್ಶನ

ಅಂದು ವಿದೇಶಿ
ಆಕ್ರಮಿಗಳ ಕಾಟ
ಇಂದು ನಮ್ಮಲೇ ಇರುವ
ತಿಗಣೆ, ಹೇನುಗಳ ಹೀರಾಟ

ಹಿಂದಿನವರು ಸ್ವಾತಂತ್ರ್ಯಕ್ಕಾಗಿ
ಹೋರಾಡಿದರು
ಈಗಿನವರು ಕುರ್ಚಿಗಾಗಿ
ಬಡಿದಾಡಿದರು

ಬಿಗಿಯುವರು ಭಾಷಣ
ನಾವೆಲ್ಲರೊಂದೆಯೆಂದು
ಸಭೆ ಮುಗಿದೊಡನೆ
ಎಲ್ಲರು ಒಂದು... ಒಂದು... ಇಂದು

ನಂಬಿಕೆಗೆ ಬೆಲೆಯಿಲ್ಲ
ಇದು ನಯವಂಚಕರ ಕಾಲ
ಸ್ವಾಭಿಮಾನಿಗಳಿಗೆ,
ಸತ್ಯನಿಷ್ಠರಿಗಿಲ್ಲಿ ಕೊನೆಗಾಲ

ಕಾಳಧನದ ಮದವೇರಿ
ರಾಮ ರಾಜ್ಯದ ಕನಸು ಮರೆಯಾಗಿ
ಸ್ವಾ(ರ್ಥ)ರಾಜ್ಯ ಮೆರೆಯುತಿದೆ
ಇದು ಸ್ವತಂತ್ರ ಭಾರತದ ವೈಭವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ