ಭಾನುವಾರ, ಅಕ್ಟೋಬರ್ 14, 2012

ತೆಂಗಿನ ಕಾಯಿ ಕೊಯ್ಯುವ ರೊಬೋಟ್!


ಮರವೇರಲು ಬಾರದವರು ಕೂಡ ಮರಹತ್ತಿ ತೆಂಗಿನ ಕಾಯಿ, ಅಡಿಕೆ ಕೀಳುತ್ತಾರೆ. ತೆಂಗು, ಅಡಿಕೆ ತೋಟಗಳಿಗೆ ಔಷ ಸಿಂಪಡಿಸುತ್ತಾರೆ. ಇದು ಸಾಧ್ಯವಾಗುವಂತಹ ಯಂತ್ರಗಳು ಈ ಹಿಂದೆಯೇ ಬಂದಿವೆ. ತೆಂಗಿನ ಕಾಯಿ ಕೀಳಲು ಕೆಲವು ಕಡೆ ಕೋತಿಗಳನ್ನೂ ಬಳಸುತ್ತಾರೆ. ಆದರೆ ಮರ ಹತ್ತುವ 'ರೊಬೋಟ್' ಕುರಿತು ಕೇಳಿದ್ದೀರಾ? ಕೇರಳದ ಕಲ್ಲಿಕೋಟೆಯ ಕೃಷಿಕ ಹಾಗೂ ವಿಜ್ಞಾನಿ ನಿವೃತ್ತ ಸೇಲ್ ಟ್ಯಾಕ್ಸ್ ಆಫೀಸರ್ ಪ್ರಕಾಶನ್ ತಟ್ಟಾರಿ ಸ್ವಂತ ಪರಿಶ್ರಮದಿಂದ ಇಂತಹ ಯಂತ್ರವನ್ನು ಸಿದ್ಧಪಡಿಸಿದ್ದಾರೆ. 'ತೆಂಗಿನ ಮರ ಏರುವ ರೊಬೋಟ್' ಎಂದು ಅವರೇ ಇದಕ್ಕೆ ನಾಮಕರಣ ಮಾಡಿದ್ದಾರೆ.
ನಬಾರ್ಡ್ನ ನೆರವಿನೊಂದಿಗೆ ಕಾಸರಗೋಡಿನ ಸಿಪಿಸಿಆರ್ಐಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಇದರ ಪ್ರಾತ್ಯಕ್ಷಿಕೆ ನಡೆಯಿತು. ಮಾನವ ತೆಂಗಿನ ಮರವೇರಿ ಮಾಡುವ ಎಲ್ಲ ಕೆಲಸಗಳನ್ನೂ ಈ 'ರೊಬೋಟ್' ನಿರ್ವಹಿಸುತ್ತದೆ. ದೂರದಿಂದ ನೋಡಿದರೆ ಬೃಹತ್ ಗಾತ್ರದ ಕಡ್ಡಿ ಹುಳದಂತೆ ಭಾಸವಾಗುತ್ತದೆ.
ರಿಮೋಟ್ ಬಳಕೆ 
ರಿಮೋಟ್ ಮೂಲಕ ರೊಬೋಟ್ ಅನ್ನು ನಿಯಂತ್ರಿಸಲಾಗುತ್ತದೆ. ರೀಚಾರ್ಜ್ ಮಾಡಬಹುದಾದ ಬ್ಯಾಟರಿಯಿಂದ ಚಲಿಸುವ ಸಣ್ಣ ಮೋಟಾರ್ನ ಸಹಾಯದಿಂದ ಇದು ಕಾರ್ಯ ನಿರ್ವಹಿಸುತ್ತದೆ. ಕಬ್ಬಿಣದ ಪೈಪುಗಳೆರಡನ್ನು ಒಂದರೊಳಗೊಂದಿರಿಸಿ, ಸ್ಪ್ರಿಂಗ್ ಆ್ಯಕ್ಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಪೈಪಿನ ಮೇಲ್ತುದಿಗೆ ಜೋಡಿಸಿರುವ ತಟ್ಟೆಯಾಕಾರದ ಬ್ಲೇಡ್ ತೆಂಗಿನ ಕಾಯಿ, ತೆಂಗಿನ ಗರಿಗಳನ್ನು ಕೊಯ್ಯುತ್ತದೆ. ಇದಕ್ಕೆ ಒಮ್ಮೆಗೇ ನಾಲ್ಕು ಬ್ಲೇಡ್ಗಳನ್ನು ಜೋಡಿಸಲು ಸಾಧ್ಯವಿದೆ. ರಿಮೋಟ್ ಕಂಟ್ರೋಲ್ನ ಒಂದು ಬಟನ್ ಅದುಮಿ ನಮಗೆ ಬೇಕಾದ ಕಾಯಿಯನ್ನೇ ಅಥವಾ ತೆಂಗಿನ ಗೊನೆಯೇ ಬೇಕಿದ್ದರೆ ಗೊನೆಯನ್ನೂ ಕೊಯ್ಯಬಹುದು. ಸುಮಾರು 80 ಕಿಲೋ ಭಾರವಿರುವ ಈ ರೊಬೋಟ್ಗೆ 25 ಅಡಿ ಎತ್ತರದ ತೆಂಗಿನ ಮರವನ್ನೇರಲು 40 ಸೆಕೆಂಡ್ ಸಾಕು. ಇದರ ತಯಾರಿಗೆ ರೂ. 15 ಸಾವಿರ ವೆಚ್ಚ ತಗುಲುತ್ತದೆ.
ತಟ್ಟಾರಿ ಸಾಧನೆ 
ತೆಂಗಿನ ಮರವನ್ನೇರುವ ವ್ಯಕ್ತಿಯಂತೆ ಮರವನ್ನು ಎರಡು ಕೈ ಮತ್ತು ಕಾಲುಗಳಿಂದ ಹಿಡಿದು ನೆಗೆಯುತ್ತಾ ಮರವೇರುವ ರೊಬೋಟ್ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತದೆ. ಯಂತ್ರದ ಕೈ, ಕಾಲುಗಳಿಗೆ ಹಿಗ್ಗುವ ಮತ್ತು ಕುಗ್ಗುವ ಗುಣವಿದೆೆ. ಇದರಿಂದ ಮರ ದಪ್ಪ ಅಥವಾ ತೆಳ್ಳಗಿದ್ದರೂ, ಎಷ್ಟೇ ಅಂಕು - ಡೊಂಕಾಗಿದ್ದರೂ ರೊಬೋಟ್ ಸಲೀಸಾಗಿ ಹತ್ತುತ್ತದೆ.
 ಇಂತಹ ರೊಬೋಟ್ ಒಂದನ್ನು ಕಂಡುಹಿಡಿದಿರುವುದು ಇದೇ ಮೊದಲು. ಇದು ಕೃಷಿ ಕ್ಷೇತ್ರದಲ್ಲಿ ಪ್ರಕಾಶನ್ ತಟ್ಟಾರಿ ಮಾಡಿದ ಮಹತ್ತರ ಸಾಧನೆ. ಆದರೆ ಇದಿನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದು ತಟ್ಟಾರಿ ಬಯಕೆ. ಸಾಮಾನ್ಯ ರೈತರಿಗೆ ರೊಬೋಟ್ ಬೆಲೆ ಸ್ವಲ್ಪ ದುಬಾರಿ ಎನಿಸಬಹುದು. ಆದರೆ ಕಾರ್ಖಾನೆಗಳ ಮೂಲಕ ಬೃಹತ್ ಮಟ್ಟದಲ್ಲಿ ಇವುಗಳ ಉತ್ಪಾದನೆ ಆರಂಭವಾದರೆ ಬೆಲೆ ಕಡಿಮೆಯಾಗುತ್ತದೆ. 'ಈಗ ಕೇವಲ ಒಂದು ಯಂತ್ರವನ್ನು ಮಾತ್ರ ತಯಾರಿಸಲಾಗಿದೆ. ಇದರ ಕಾರ್ಯ ವೈಖರಿಯ ಕುರಿತು ಕೃಷಿಕರಿಗೆ ತಿಳಿಸಿ, ಅವರಿಂದ ಯಂತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ವಿವಿಧೆಡೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ' ಎನ್ನುತ್ತಾರೆ ತಟ್ಟಾರಿ.
ರೈತರಿಗೆ ಸಂತಸ
ಇಲ್ಲಿ ಮನುಷ್ಯರು ಮರವೇರದೆ ಕೇವಲ ಯಂತ್ರವೊಂದು ಮರವೇರಿ ತೆಂಗಿನ ಕಾಯಿ ಕೊಯ್ಯುವುದು ವಿಶೇಷ. ತೆಂಗಿನ ಮರವೇರುವ ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿರುವ ರೈತರ ಪಾಲಿಗೆ ಇದು ಸಂತೋಷದ ಸಂಗತಿ. ಅಲ್ಲದೆ ಅಡಿಕೆ, ತೆಂಗಿನ ಕಾಯಿ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವುದರಿಂದ ಮಧ್ಯಮ ವರ್ಗದ ಕೃಷಿಕರು ಕೂಡ ಇಂತಹ ಯಂತ್ರಗಳನ್ನು ಕೊಳ್ಳಲು ಮನಸ್ಸು ಮಾಡಬಹುದೇನೋ.

ಮೊದಲು ವಂದಿಪೆ ನಿನಗೆ ಗಣನಾಥ...


ವಿಘ್ನನಿವಾರಕ, ಸಿದ್ಧಿವಿನಾಯಕ, ಮೂಷಿಕ ವಾಹನ, ಲಂಬೋದರ, ವ್ನಿೇಶ, ಏಕದಂತ, ವಕ್ರತುಂಡ, ಗಣರಾಜ, ಗಣೇಶ, ಮೊದಕಪ್ರಿಯ ಎಂದೆಲ್ಲಾ ಕರೆಸಿಕೊಳ್ಳುವ ಗಣಪತಿಯ ಹಬ್ಬ ಬಂದೇ ಬಿಡ್ತು. ಪ್ರತಿ ವರ್ಷ ಭಾದ್ರಪದ ಶುಕ್ಲದ ಚೌತಿಯಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
ಮೊದಲು ವಂದಿಪೆ ನಿನಗೆ ಗಣನಾಥ’ ಎಂಬಂತೆ ಯಾವುದೇ ಕೆಲಸ-ಕಾರ್ಯ, ಶುಭ ಕಾರ್ಯಗಾಳಾಗಿರಲಿ ಪ್ರಾರಂಭಿಸುವ ಮೊದಲು ಗಣಪತಿಯನ್ನು ಸ್ಮರಿಸುವುದು ನಮ್ಮ ಸಂಪ್ರದಾಯ. ಮೊದಲು ಗಜವದನನ ಪೂಜೆ ಮಾಡದಿದ್ದರೆ ಅನ್ಯ ದೇವತೆಗಳಿಗೆ ಮಾಡಿದ ಪೂಜೆಯೂ ಸಫಲಿಸುವುದಿಲ್ಲ ಎಂಬ ನಂಬಿಕೆಯಿದೆ. ಹೆಚ್ಚಿನ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿಯೂ ಮೊದಲಿಗೆ ಸ್ವಸ್ತಿಕವಿಟ್ಟು ಗಣಪನನ್ನು ಸ್ಮರಿಸುತ್ತಾರೆ.
ಗಣಪತಿಯ ಜನನದ ಬಗ್ಗೆ ಕತೆಯೊಂದರಲ್ಲಿ ಇಂತಿದೆ. ಪಾರ್ವತಿಯು ಒಂದು ದಿನ ಸ್ನಾನಕ್ಕೆಂದು ಹೊರಟಾಗ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ತನ್ನ ಮೈಯಲ್ಲಿನ ಮಣ್ಣನೇ ತೆಗೆದು ಅದರಿಂದ ಗಣಪತಿಯನ್ನು ಸೃಷ್ಟಿಸಿ ಮನೆ ಕಾವಲಿಗೆ ನಿಲ್ಲಿಸಿದಳು ಎಂಬ ಉಲ್ಲೇಖವಿದೆ. ಗಣಪತಿ ಮನೆ ಕಾಯುತ್ತಿರುವಾಗ ಅಲ್ಲಿಗೆ ಪರಶಿವ ಮತ್ತು ಆತನ ಗಣಗಳು ಬರುತ್ತಾರೆ. ಗಣಪತಿಯು ಮನೆ ಪ್ರವೇಶಿಸದಂತೆ ಅವರನ್ನು ತಡೆಯುತ್ತಾನೆ. ಇದರಿಂದ ಕೋಪಗೊಂಡ ಈಶ್ವರನು ಗಣಪತಿಯ ತಲೆಯನ್ನು ತನ್ನ ತ್ರಿಶೂಲದದಿಂದ ತಿವಿದು ಎಸೆಯುವನು. ಆ ಸಂದರ್ಭದಲ್ಲಿ ಸ್ನಾನಕ್ಕೆಂದು ಹೋದ ಪಾರ್ವತಿ ದೇವಿಯ ಆಗಮನವಾಗುವುದು. ರುಂಡ-ಮುಂಡ ಬೇರ್ಪಟ್ಟು ಬಿದ್ದಿರುವ ಮಗನನ್ನು ಕಂಡ ಪಾರ್ವತಿಯು ರೋಧಿಸುತ್ತಾ ‘‘ಆತ ತನ್ನ ಮಗ, ಅವನನ್ನು ಮೊದಲಿನಂತೆ ಮಾಡುವಂತೆ ಹಠ ಹಿಡಿಯುವಳು. ಪತ್ನಿಯ ಮಾತಿಗೆ ಒಲ್ಲೆ ಎನ್ನಲಾಗದೆ ಶಿವ ತನ್ನ ಗಣಗಳಲ್ಲಿ ಮುಸ್ಸಂಜೆ ಹೊತ್ತಿನಲ್ಲಿ (ಸೂರ್ಯಸ್ತಮಾನದ ಸಮಯ) ಬಡಗುದಿಕ್ಕಿಗೆ ತಲೆಯಿಟ್ಟು ಮಲಗಿರುವವರ ತಲೆಯನ್ನು ತುಂಡರಿಸಿ ತಂದು ಗಣಪತಿಯ ದೇಹಕ್ಕೆ ಜೋಡಿಸುವಂತೆ ತಿಳಿಸಿದನು. ಶಿವನ ಅಪ್ಪಣೆಯಂತೆ ಹುಡುಕಲು ಹೊರಟ ಗಣಗಳಿಗೆ ಎಲ್ಲೆಲ್ಲೂ ಹುಡುಕಿದರೂ ಯಾರೊಬ್ಬರೂ ಸಿಗದೆ ಕೊನೆಗೆ ಆನೆ ಮರಿಯೊಂದು ಮುಸ್ಸಂಜೆಯಲ್ಲಿ ಬಡಗು ದಿಕ್ಕಿಗೆ ತಲೆಯಿಟ್ಟು ಮಲಗಿ ನಿದ್ರಿಸುತ್ತಿರುವುದು ಕಾಣಸಿಕ್ಕಿತು. ಅದರ ತಲೆಯನ್ನು ತುಂಡರಿಸಿ ತಂದು ಗಣಪತಿಯ ದೇಹಕ್ಕೆ ಜೋಡಿಸಿದುದರಿಂದ ಆತ ಗಜಮುಖನಾದ.
ಗಣಪತಿಯ ಹುಟ್ಟಿನ ಬಗ್ಗೆ ವಿವಿಧ ಪುರಾಣಗಳಲ್ಲಿ ಬೇರೆಬೇರೆ ರೀತಿಯ ಕತೆಗಳಿವೆ. ಬ್ರಹ್ಮವೈರ್ವತ ಪುರಾಣ: ಇದ ಪ್ರಕಾರ ವಿಷ್ಣುವಿನ ಕೃಪೆಯಿಂದ ಪಾರ್ವತಿಗೆ ಜನಿಸಿದ ಮಗುವೆ ಗಣಪತಿ. ಶನಿದೇವನ ದೃಷ್ಟಿ ಬಿದ್ದುದರಿಂದ ಆತನ ತಲೆ ಇಲ್ಲವಾಯಿತು. ಆಗ ವಿಷ್ಣುವು ಆನೆಯ ತಲೆತಂದು ಮಗುವಿನ ಕುತ್ತಿಗೆಗೆ ಜೋಡಿಸುತ್ತಾನೆ. ಒಂದು ದಿನ ಮಹದೇವನನ್ನು ಕಾಣಲು ಬಂದ ಪರಶುರಾಮನನ್ನು ತಡೆದುದಕ್ಕಾಗಿ ಆತ ಗಣಪತಿಯ ಒಂದು ದಂತ ಮುರಿದ. ಮತ್ಸು ಪುರಾಣ: ಪಾರ್ವತಿಯು ತನ್ನ ಶರೀರದ ಕೊಳೆಯಿಂದ ಗಣಪತಿಯನ್ನು ನಿರ್ಮಿಸಿ, ಪ್ರಾಣ ಶಕ್ತಿಯನ್ನು ತುಂಬಿದಳು. ಆದ್ದರಿಂದ ಗಣಪತಿಯು ಈ ರೀತಿಯ ವಿಕಾರ ರೂಪ ಪಡೆದನು. ಶಿವ ಪುರಾಣ: ಶಿವನೇ ಗಣೇಶನ ತಲೆಯನ್ನು ಕಡಿದು, ಅನಂತರ ಆನೆಯ ತಲೆ ತಂದಿಟ್ಟನು. ವರಾಹ ಪುರಾಣ: ಶಿವನ ಮುಖದ ತೆಜಸ್ಸಿನಿಂದ ಹುಟ್ಟಿದ ಬಾಲಕ ಗಣೇಶ. ಅವನ ರೂಪ, ತೇಜಸ್ಸುಗಳನ್ನು ಕಂಡು ಆತ್ಮವಿಶ್ವಾಸ ಕಳಕೊಂಡ ಪಾರ್ವತಿಯು ಮಗನಿಗೆ ಕುರೂಪನಾಗೆಂದು ಶಾಪ ನೀಡುತ್ತಾಳೆ. ಹಾಗಾಗಿ ಗಣಪತಿಗೆ ಈ ವಿಕೃತ ರೂಪ ಲಭಿಸಿತು. ಸ್ಕಂದ ಪುರಾಣ: ವರೇಣ್ಯನೆಂಬ ರಾಜನ ಮಗನೇ ಗಣೇಶ. ಆತನಿಗೆ ಹುಟ್ಟುವಾಗಲೇ ಆನೆಯಂತಹ ತಲೆ, ದೊಡ್ಡ ಹೊಟ್ಟೆ, ನಾಲ್ಕು ಭಜಗಳು ಇರುವುದನ್ನು ನೋಡಿ ಹೆದರಿದ ರಾಜನು ಮಗುವನ್ನು ಕೊಲ್ಲುವುದಕ್ಕೆ ಸೇವಕರ ಕೈಯಲ್ಲಿ ಕಳುಹಿಸುತ್ತಾನೆ. ಅವರು ಗಣೇಶನನ್ನು ಕೊಲ್ಲದೆ ಕಾಡಿನಲ್ಲಿರುವ ಪಾರ್ಶ್ವ ಮುನಿಯ ಆಶ್ರಮದ ಬಳಿ ಬಟ್ಟು ಬರುತ್ತಾರೆ. ಮಕ್ಕಳಿಲ್ಲದ ಪಾರ್ಶ್ವ ಮುನಿ ದಂಪತಿಯು ಈ ಮಗುವನ್ನು ಸಾಕುತ್ತಾರೆ. ಶ್ರೀಗಣೇಶ ಪುರಾಣ: ಇದರ ಪ್ರಕಾರ ‘ಮಹೋತ್ಕಟ’ ಎಂಬುದು ಗಣೇಶನ ಮೂಲ ಹೆಸರು. ಉಪನಯನ ಸಂಸ್ಕಾರ ಅದ ಬಳಿಕ ಆತನಿಗೆ ಬೇರೆ ಹೆಸರುಗಳನ್ನಿಡಲಾಯಿತು. ಗಣಪತಿಯು ಬೇರೆ ಬೇರೆ ಯುಗಗಳಲ್ಲಿ ವಿವಿಧ ರೂಪಗಳನ್ನು ತಾಳುತ್ತಾನೆ ಎಂದು ಹೇಳಲಾಗಿದೆ.
ವಿಶ್ವರೂಪಿ
ಓಂಕಾರವನ್ನು ದೇವನಾಗರಿ ಭಾಷೆಯಲ್ಲಿ ಬರೆದಾಗ ಅದು ಗಣೇಶನ ಆಕೃತಿಯನ್ನ ಹೊಂದುತ್ತದೆ. ಆದ್ದರಿಂದಲೇ ಆತನಿಗೆ ಓಂಕಾರ ರೂಪಿ ಎಂಬ ಹೆಸರು ಬಂದಿದೆ. ಅಲ್ಲದೆ ಗಣಪತಿಯನ್ನು ಅನಂತ ರೂಪ, ಹೆಸರುಗಳಂದ ಪೂಜಿಸಲಾಗುತ್ತದೆ. ಆದ್ದರಿಂದಲೇ ಅವನನ್ನು ವಿಶ್ವರೂಪಿ ಎನ್ನುತ್ತಾರೆ. ಆತನ ಮುಖ್ಯವಾದ ರೂಪಗಳೆಂದರೆ: ಯಕ್ಷ ಗಣಪತಿ, ಪಂಚಮುಖಿ ಗಣಪತಿ, ಶಕ್ತಿ ಗಣಪತಿ, ನೃತ್ಯ ಗಣಪತಿ, ವಕ್ರತುಂಡ ಮಹಾಕಾಯ, ವಿದ್ಯಾ ಗಣಪತಿ, ಶ್ವೇತ ಗಣಪತಿ, ಕೃಷ್ಣ ಗಣಪತಿ, ರಕ್ತವರ್ಣ (ಸಿಂಧೂರವರ್ಣ), ಋದ್ಧಿ ಗಣಪತಿ, ಸಿದ್ಧಿ ಗಣಪತಿ, ಲಕ್ಷ್ಮೀ ಗಣಪತಿ, ದುರ್ಗಾ ಗಣಪತಿ, ಸಂಕಷ್ಟಕಹರ ಗಣಪತಿ, ಸೃಷ್ಟಿ ಗಣಪತಿ, ವೀರ ಗಣಪತಿ, ಪಿಂಗಳ ಗಣಪತಿ, ಬೀಜ ಗಣಪತಿ, ಧ್ವಜ ಗಣಪತಿ, ಯೋಗ ಗಣಪಿತಿ, ಹೇರಂಬ ಗಣಪತಿ, ಮೂಷಕ ಗಣಪತಿ, ಅಶ್ವಾರೂಢ ಗಣಪತಿ, ಢುಂಢಿರಾಜ, ಮಹಾ ಗಣಪತಿ, ಭಕ್ತ ಗಣಪತಿ, ದ್ವಿಜ ಗಣಪತಿ, ಉಚ್ಛಿಷ್ಟ ಗಣಪತಿ, ವಿಘ್ನ ಗಣಪತಿ, ಪದ್ಮಾಸನ ಗಣಪತಿ, ನಾಗ ಯಜ್ಞೋಪವೀತಧಾರೀ, ಮಯೂರೇಶ್ವರ, ಉಷ್ಣೀಷ ಗಣಪತಿ, ಬಾಲ ಗಣಪತಿ, ತರಣ ಗಣಪತಿ, ತ್ರಿಮುಖ ಗಣಪತಿ, ಊರ್ಧ್ವ ಗಣಪತಿ, ಏಕಾಕ್ಷರ ಗಣಪತಿ, ಏಕದಂತ ಗಣಪತಿ, ಹರಿದ್ರಾ ಗಣಪತಿ ಇತ್ಯಾದಿ.
 ವಿದ್ಯೆ, ಬುದ್ಧಿಯ ಅಧಿ ದೇವತೆ 
ಗಣಪತಿಯನ್ನು ವಿದ್ಯೆ ಬುದ್ಧಿ, ಸಂಪತ್ತು, ಜ್ಞಾನದ ಅಧಿದೇವತೆ ಎಂದು ಕರೆಯಲಾಗುತ್ತದೆ. ಗಣಪತಿಯು ಭಜಕ ಜನರಿಗೆ ಮುಖ್ಯವಾಗಿ ಮಕ್ಕಳಿಗೆ ಅತ್ಯಂತ ಪ್ರೀತಿಯ ದೇವನೂ ಹೌದು. ಎಲ್ಲರಿಂದ ಹೊಗಳಿಸಿಕೊಳ್ಳುವ ಮತ್ತು ಆರೋಗ್ಯಕರ ವ್ಯಂಗಕ್ಕೆ ಗುರಿಯಾಗುವವನು. ಮ್ಮೆ ಪರಮೇಶ್ವರನು ಷಣ್ಮಖು ಹಾಗೂ ಗಣಪತಿಯನ್ನು ಬಳಿಗೆ ಕರೆದು ಇಡೀ ಲೋಕಕ್ಕೆ ಪ್ರದಕ್ಷಿಣೆ ಹಾಕಿ ಮೊದಲು ಬಂದವರಿಗೆ ಒಂದು ಬಾಳೆ ಹಣ್ಣನ್ನು ಕೊಡುವುದಾಗಿ ಹೇಳಿದ. ತತ್ಕ್ಷಣವೇ ನವಿಲನ್ನೇರಿ ಷಣ್ಮಖ ಲೋಕ ಪ್ರದಕ್ಷಿಣೆಗೆ ಹೊರಟ. ಆದರೆ ಗಣಪತಿ ಸ್ವಲ್ಪ ಯೋಚಿಸಿ ತನ್ನ ತಂದೆ-ತಾಯಿಗೆ ಒಂದು ಪ್ರದಕ್ಷಿಣೆ ಹಾಕಿ ಬಾಳೆ ಹಣ್ಣಿಗಾಗಿ ಕೈಚಾಚಿದ. ಆಗ ಪಾರ್ವತಿ ‘ನೀನು ಲೋಕ ಪ್ರದಕ್ಷಿಣೆ ಮಾಡಿಲ್ಲವಲ್ಲ’ ಎಂದಳು. ಅದಕ್ಕೆ ಗಣಪತಿ ‘ನಾನು ನಿಮಗೆ ಪ್ರದಕ್ಷಿಣೆ ಹಾಕಿಲ್ಲವೆ ನಿಮ್ಮಲ್ಲಿ ಎಲ್ಲ ಲೋಕಗಳೂ ಅಡಗಿವೆಯಲ್ಲವೆ’ ಎಂದ. ಹೀಗೆ ಅವನು ಸಮಯಕ್ಕೆ ತಕ್ಕಂತೆ ಬುದ್ಧಿಚಾತುರ್ಯ ಉಪಯೋಗಿಸಿದಕ್ಕೆ ಶಿವ-ಪಾರ್ವತಿಯರು ಬಾಳೆ ಹಣ್ಣನ್ನು ನೀಡಿದರು. ಇದರಿಂದ ಕೋಪಗೊಂಡ ಷಣ್ಮಖನು ಗಣಪತಿಯ ಒಂದು ದಂತವನ್ನು ತುಂಡರಿಸುತ್ತಾನೆ. ಹೀಗೆ ಗಣಪತಿಯು ಏಕದಂತನಾದ ಎಂದು ಕತೆಯೊಂದರಿಂದ ತಿಳಿಯುತ್ತದೆ.
ವಿಶಿಷ್ಟ ನಾಯಕ 
ಗಣಪತಿಯ ವಿಗ್ರಹ ಬಹಳ ಸುಂದರ ಕಲ್ಪನೆಯದ್ದು. ಗಜಮುಖ, ನಾಲ್ಕು ಕೈ, ದೊಡ್ಡ ಹೊಟ್ಟೆ, ಹೊಟ್ಟೆಗೆ ಹಾವು ಸುತ್ತಿರುವುದು, ಸವಾರಿಗೆ ಇಲಿ. ಅತಂಹ ವಿಲಕ್ಷಣ ಮೂರ್ತಿ ಗಣಪತಿ. ಗಣಗಳಿಗೆ ಅಧಿಪತಿ (ಒಡೆಯ) ಆದ್ದರಿಂದ ಗಣಪತಿ, ಗಣಗಳಿಗೆ ಈಶ ಆದ್ದರಿಂದ ಗಣೇಶ ಎಂದೆನಿಸಿಕೊಂಡಿದ್ದಾನೆ. ಆತ ವಿಶಿಷ್ಟ ನಾಯಕ. ಅದಕ್ಕಾಗಿಯೇ ವಿನಾಯಕ ಎನ್ನುವರು ಅವನನ್ನು. ನಾಯಕನಾದವನು ಹೇಗಿರಬೇಕು ಎಂಬುದಕ್ಕೆ ಆತ ಒಂದು ಉದಾಹರಣೆ. ಒಂದು ಕೈಯಲ್ಲಿ ಪಾಶ, ಇನ್ನೊಂದು ಕೈಯಲ್ಲಿ ಅಂಕುಶ, ಮತ್ತೊಂದು ಕೈಯಲ್ಲಿ ಮೋದಕ, ಮಗದೊಂದು ವರದ ಹಸ್ತ. ನಾಯಕ ಗಜ ಬಲವನ್ನು ಹೊಂದಿರಬೇಕು. ಆದರೆ ಆಗ ಅಧಿಕಾರದ ಮದ ಏರುತ್ತದಲ್ಲವೆ? ಆದರ ನಿಯಂತ್ರಣಕ್ಕೆ ಪಾಶ (ಹಗ್ಗ) ಎನ್ನುವ ಅಂಕುಶಬೇಕು. ಅದು ಇನ್ನೊಬ್ಬರ ಕೈಯಲ್ಲಿ ಅಲ್ಲ ಬದಲಾಗಿ ನಾಯಕನ ಕೈಯಲ್ಲಿ. ನಾಯಕನು ಸ್ವನಿಯಂತ್ರಣಕೊಳ್ಳಪಡಬೇಕು. ತನ್ನ ರಕ್ಷಣೆಯಲ್ಲಿರುವ ಜನಕ್ಕೆ ಸದಾ ಸುಖ, ಸಂತೋಷ ಹಂಚಬೇಕು ಅನ್ನುವುದೇ ಆತನ ಕೈಯಲ್ಲಿರುವ ಮೋದಕದ ಆಶಯ. ತನ್ನ ಅಧೀನದಲ್ಲಿರುವವರು ಭಯದಿಂದ ಮುಕ್ತರಾಗಿರಬೇಕು ಎಂಬುದನ್ನು ಸಾರುವುದೇ ಆತನ ಅಭಯ ಹಸ್ತದ ಉದ್ದೇಶ. ಇನ್ನೊಬ್ಬರಿಗೆ ಕೇಡುಂಟು ಮಾಡಬೇಕು ಎನ್ನುವ ಮೂಷಕ ಸ್ವಭಾವದ ಜನರೂ ನಮ್ಮಲ್ಲಿದ್ದಾರೆ. ಅಂತಹವರನ್ನು ಅಂಕಿತದಲ್ಲಿ ಇಟ್ಟುಕೊಳ್ಳಬೇಕು. ಅವರ ಮೇಲೆ ನಾಯಕ ಸವಾರಿ ಮಾಡಬೇಕು ಎನ್ನುವುದನ್ನು ಆತ ಮೂಷಿಕ ವಾಹನನಾಗಿರುವುದು ಸೂಚಿಸುತ್ತದೆ.
ಗಣಪ ಉರಗ ಭೂಷಣನಾದುದರ ಬಗ್ಗೆ ಒಂದು ಕತೆಯಲ್ಲಿ ಇಂತಿದೆ. ಆತ ಭಕ್ತರಿಗೆ ಬಹುಬೇಗನೆ ಒಲಿಯುವ ಭಕ್ತ ಪ್ರಿಯ ಜಯಗಣಪ. ಆದ್ದರಿಂದ ಚೌತಿಯ ದಿನದಂದು ತನ್ನ ಭಕ್ತರೆಲ್ಲರ ಮನೆಗಳಿಗೆ ತೆರಳಿ ತನ್ನ ಇಷ್ಟದ ತಿನಸುಗಳಾದ ಅಪ್ಪ, ಕಜ್ಜಾಯ, ಕಬ್ಬು, ಚಿರೋಟಿ, ಎಳ್ಳು ಉಂಡೆ, ಮೋದಕ ಇತ್ಯಾದಿಗಳನ್ನು ಹೊಟ್ಟೆ ತುಂಬಾ ಮೆಲ್ಲುತ್ತಾ ಹಳ್ಳಿಯ ಗದ್ದೆ ಬಳಿ ತೆರಳುತ್ತಿದ್ದ. ಆಗ ಕಾಲುಜಾರಿ ಬಿದ್ದ ಪರಿಣಾಮ ಹೊಟ್ಟೆ ಹರಿದೇ ಬಿಡ್ತು. ಇದನ್ನು ಕಂಡ ಚಂದಿರ ಗಹಗಹಿಸಿ ನಗಲು ಕೋಪಗೊಂಡ ಗಣಪತಿಯು ಪಕ್ಕದಲ್ಲಿ ಹರಿದಾಡುತ್ತಿದ್ದ ಹಾವೊಂದನ್ನು ಹಿಡಿದು ತನ್ನ ಹೊಟ್ಟೆಗೆ ಕಟ್ಟಿಕೊಂಡು ಚಂದಿರನಿಗೆ ಗದ್ದೆಯ ಕೆಸರೆರಚಿದ. ಅಂದಿನಿಂದ ಗಣಪತಿ ಉರಗ ಭೂಷಣನಾದ. ಚಂದಿರನ ಮೇಲೆ ಕಾಣುವ ಕಪ್ಪು ಗುರುತು ಗಣಪತಿ ಎಸೆದ ಮಣ್ಣಿನ ಕಲೆ ಎಂಬ ಹೇಳಿಕೆಯಿದೆ. ಚೌತಿಯಂದು ಚಂದ್ರನನ್ನು ನೋಡಬಾರದು ಎನ್ನುವ ನಂಬಿಕೆಯೂ ಜನರಲ್ಲಿದೆ.
ಗಣಪತಿಯ ಬಗ್ಗೆ ಹೀಗೆ ಹಲವಾರು ಕತೆಗಳು ಕೇಳಿ ಬರುತ್ತವೆ. ಗಣೇಶನ ಬಗ್ಗೆ ದೇಶದಲ್ಲಿನ ಬಹುಜನ ಭಕ್ತಿ-ಭಾವನೆಯನ್ನು ಇರಿಸಿಕೊಂಡಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಗಣಪತಿಯ ಕೆಲವೊಂದು ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು. ಮುಖ್ಯವಾಗಿ ಶರವು, ಹಟ್ಟಿಂಗಡಿ, ಆನೆಗುಡ್ಡೆ, ಸೌತಡ್ಕ, ಕಾಸರಗೋಡಿನ ಮಧೂರು ಮೊದಲಾದವುಗಳು. ಜನರಿಗೆ ಗಣಪನೆಂದರೆ ಅಗಾಧ ಪ್ರೀತಿ ಮತ್ತು ಅಪಾರ ಭಕ್ತಿ. ಗಣಪನ ಚಿತ್ರಗಳನ್ನು ನೋಡಿದಷ್ಟು ಜನಕ್ಕೆ ಸಾಕೆನ್ನಿಸುವುದಿಲ್ಲ. ಆದ್ದರಿಂದಲೇ ಗಣಪನನ್ನು ವಿವಿಧ ವಸ್ತುಗಳಲ್ಲಿ ಚಿತ್ರಿಸಲಾಗುತ್ತದೆ. ಕಲ್ಲು, ಮಣ್ಣಿನಲ್ಲಿ ವಿಗ್ರಹಗಳನ್ನು ತಯಾರಿಸುವುದು ಮಾತ್ರವಲ್ಲದೆ ತರಕಾರಿ, ನಾಣ್ಯ, ಸಾಸಿವೆ ಕಾಳು, ಚಿನ್ನ, ಬೆಳ್ಳಿ, ಅಕ್ಕಿ, ಮರ ಹೀಗೆ ಬೇರೆ ಬೇರೆ ವಸ್ತುಗಳಲ್ಲಿ, ನಾನಾ ಭಂಗಿಗಳಲ್ಲಿ ರಚಿಸಲಾಗುತ್ತದೆ. ವಿನಾಯಕನ ಕಲಾಕೃತಿಗಳು ಚಿತ್ತಾಕರ್ಷಕವಾಗಿತ್ತವೆ. ಇದು ಗಣಪನ ಜನಮೆಚ್ಚುಗೆ ಕಾರಣವಾಗಿದೆ.
ಸಾರ್ವಜನಿಕ ಗಣೇಶೋತ್ಸವ 
ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಇಂದು ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಈ ಸಾರ್ವಜನಿಕ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭ ಲೋಕಮಾನ್ಯ ಬಾಲಗಂಗಾಧರ ತಿಲಕರು 1893ನೇ ಇಸವಿಯಲ್ಲಿ ಪ್ರಾರಂಭಿಸಿದರು. ಇದರ ಉದ್ದೇಶ ರಾಷ್ಟ್ರದ ಜನತೆಯನ್ನು ಒಗ್ಗೂಡಿಸಿ ಅವರಲ್ಲಿ ದೇಶಪ್ರೇಮ ಬೆಳೆಸಬೇಕು. ಆ ಮೂಲಕ ಬ್ರಿಟಿಷರ ದಬ್ಭಾಳಿಕೆ ವಿರುದ್ಧ ಹೋರಾಟ ನಡೆಸುವುದಾಗಿತ್ತು. ಮೊದಲಿಗೆ ಮುಂಬಯಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭಗೊಂಡಿತು. ಈ ಹಬ್ಬವನ್ನು ಭಾರತದಲ್ಲಿ ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ಎಲ್ಲ ಜನರು ಒಂದುಗೂಡಿ ಆಚರಿಸಲಾಗುತ್ತದೆ.
ಗಣೇಶಾನಿ 
ಸ್ತ್ರೀ ರೂಪದ ಗಣಿಪತಿಯು ಒಂದು ಅರ್ಪೂ ಕಲ್ಪನೆ. ಮಧ್ಯಪ್ರದೇಶದ ಭೇರಾಘಾಟನ ಯೋಗಿನೀ ದೇವಳದಲ್ಲಿ ಗಣಪತಿಯ ಸ್ತ್ರೀ ರೂಪದ ವಿಗ್ರಹವಿದೆ. ಅದನ್ನು ‘ಗಣೇಶಾನಿ’ ಎನ್ನುವರು. ಹಾಗೇ ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಚಿತ್ರಾಪುರ ಮಠದ ವಸ್ತುಸಂಗ್ರಹಾಲಯದಲ್ಲೂ ಒಂದು ಕಂಚಿನ ‘ಗಣೇಶಾನಿ’ ಪ್ರತಿಮೆಯಿದೆ. ಟಿಬೇಟಿನಲ್ಲಿಯೂ ವಿವಿಧೆಡೆಗಳಲ್ಲಿ ಗಣೇಶಾನಿ ಪ್ರತಿಮೆಗಳು ಕಾಣಸಿಗುತ್ತವೆ. ಶಿವನ ಶಕ್ತಿ ‘ಶಿವಾನಿ’ ಇದ್ದಂತೆ ಗಣೇಶನ ಶಕ್ತಿಯನ್ನು ‘ಗಣೇಶಾನಿ’ ಎಂದು ಜನರು ನಂಬಿರಬಹುದೆಂದು ಭಾವಿಸಲಾಗಿದೆ.

ಭಾನುವಾರ, ಸೆಪ್ಟೆಂಬರ್ 30, 2012

ಕನಸು ಕಾಣದವರು ಯಾರಿಲ್ಲ ?


ಹುಡುಗ - ಹುಡುಗಿ, ಯುವಕ - ಯುವತಿ, ಮುದುಕ - ಮುದುಕಿ ಎಂಬ ಬೇಧವಿಲ್ಲದೆ ಎಲ್ಲ ವಯೋಮಾನದವರು ಕನಸು ಕಾಣತ್ತಾರೆ. ಆಯಾ ವಯಸ್ಸಿನವರು ತಮ್ಮ ವಯಸ್ಸಿಗೆ ತಕ್ಕಂತೆ ಬೇರೆ ಬೇರೆ ಕನಸುಗಳನ್ನು ಕಾಣುತ್ತಾರೆ. ಅದು ಹೇಗೆಂದರೆ, ಮಕ್ಕಳಾಗಿರುವಾಗ ಆಟೋಟಗಳಲ್ಲಿ ಗೆದ್ದಂತೆ, ಸಿಹಿ ತಿಂಡಿ ತಿಂದಂತೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಂತೆ, ಜಾತ್ರೆಗಳಲ್ಲಿ ಭಾಗವಹಿಸಿದಂತೆ ಇkansu kanadavaru yarillaತ್ಯಾದಿ ಕನಸುಗಳನ್ನು ಕಾಣುತ್ತಾನೆ. ಯೌವನದಲ್ಲಿ ಪ್ರೀತಿ-ಪ್ರೇಮಕ್ಕೆ ಸಂಬಂಸಿದ ಬಣ್ಣ - ಬಣ್ಣದ ಕನಸುಗಳನ್ನು ಕಾಣುತ್ತಾನೆ. ಮಧ್ಯ ವಯಸ್ಕರು ಉದ್ಯೋಗದಲ್ಲಿ ಭಡ್ತಿ ಪಡೆದಂತೆ, ಕೈ ತುಂಬಾ ಹಣ, ಆಸ್ತಿ ಸಂಪಾದಿಸಿದಂತೆಲ್ಲಾ ಕನಸು ಕಾಣುತ್ತಾರೆ. ಮುದಿ ವಯಸ್ಸಿನವರು ಸಾಮಾನ್ಯವಾಗಿ ದೇವರ ದರ್ಶನ ಮಾಡಿದಂತೆ, ಪೂಜೆ ಮಾಡಿದಂತೆ ಕನಸು ಕಾಣುತ್ತಾರೆ.
ಕನಸು ಕೆಲವೊಮ್ಮೆ ನಮಗೆ ಸಂತೋಷ, ಇನ್ನು ಕೆಲವೊಮ್ಮೆ ದುಃಖವನ್ನು ಉಂಟು ಮಾಡಬಹುದು. ಕನಸು ಒಂದು ಕಲ್ಪನೆ ಅಷ್ಟೇ. ನಮಗೆ ನಿಜ ಜೀವನದಲ್ಲಿ ಸಾಸಲು ಆಗದ್ದನ್ನು ಕಲ್ಪಿಸಿಕೊಳ್ಳುವ ಮೂಲಕವಾದರೂ ತೃಪ್ತಿಪಟ್ಟುಕೊಳ್ಳುವುದು ಮಾನವ ಸಹಜಗುಣವಾಗಿದೆ. ಆಸೆ - ಆಕಾಂಕ್ಷೆ, ಬಯಕೆಗಳ ಬಗ್ಗೆಯೇ ಹೆಚ್ಚಾಗಿ ನಾವು ಕನಸು ಕಾಣುತ್ತೇವೆ. ಕನಸು ಕಾಣುವುದು ತಪ್ಪಲ್ಲ. ಆದರೆ ಅವುಗಳ ಈಡೇರಿಕೆಗೆ ಪ್ರಯತ್ನಿಸುವುದು ಅಷ್ಟು ಸಂಮಜಸವಲ್ಲ. ಪ್ರತಿಯೊಬ್ಬ ಮನುಷ್ಯನು ತನ್ನ ಭವಿಷ್ಯದ ಸುಂದರ ಕನಸುಗಳನ್ನು ಕಾಣತ್ತಾನೆ. ಕಂಡ ಕನಸುಗಳೆಲ್ಲಾ ನಿಜವಾಗುವುದಿಲ್ಲ. ಅಪರೂಪಕ್ಕೆ ಕೆಲವೊಂದು ಕನಸುಗಳು ನನಸಾಗುತ್ತದೆ ಅಷ್ಟೆಘಿ. ಕನಸು ವ್ಯಕ್ತಿಯ ಭಾವನೆ, ಚಿಂತನೆಗಳಿಗೆ ಸಂಬಂಧಿಸಿರುತ್ತದೆ.
ಮನುಷ್ಯರು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಕನಸು ಕಾಣತ್ತಾರೆ. ನಿದ್ರಿಸುತ್ತಿರುವ ಸಂದರ್ಭ ಕನಸು ಕಾಣುವುದು. ಇನ್ನೊಂದು ಎಚ್ಚರವಾಗಿದ್ದುಕೊಂಡು ಕನಸು ಕಾಣುವುದು. ವ್ಯಕ್ತಿಯೊಬ್ಬ ನಿದ್ದೆಯಲ್ಲಿ ಅನುಭವಿಸುವ ಕಥೆ ಗೆ ಕನಸು ಎನ್ನುತ್ತಾರೆ. ಅದು ಕಾಲ್ಪನಿಕವಾಗಿರುತ್ತವೆ, ಆದರೂ ನಿಜ ಜೀವನಕ್ಕೆ ಹತ್ತಿರವಾಗಿರುತ್ತವೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ, ಕೆಲವು ಕಹಿ ಅಥವಾ ನೋವಿನ ಅನುಭವಗಳನ್ನು ನೀಡುತ್ತವೆ. ಕೆಲವರಿಗೆ ಅದು ಎಚ್ಚರವಾದ ಅನಂತರವು ಜ್ಞಾಪಕವಿರುತ್ತವೆ, ಮತ್ತೆ ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತವೆ. ಕೆಲವೊಂದು ಜನ ಎಚ್ಚರವಾಗಿ ಇದ್ದಕೊಂಡು ತನ್ನ ಜೀವನದ ಬಗ್ಗೆ ನಾನಾ ರೀತಿಯ ಕಲ್ಪನೆಯಲ್ಲಿ ತೊಡಗುತ್ತಾರೆ. ಇದು ಕೂಡ ಒಂದು ರೀತಿಯಲ್ಲಿ ಕನಸು ಕಾಣವುದಾಗಿದೆ. ಇಂತಹ ಕನಸು ಕಾಣುವವರು ತಾನು ನಿಜ ಜೀವನದಲ್ಲಿ ಏನೇನು ಆಗಲು ಸಾಧ್ಯವಾಗಿಲ್ಲ ಮತ್ತೆ ಸಾಧ್ಯವಿಲ್ಲ ಅಂತಹವರಾದಂತೆ ಕಲ್ಪಿಸಿಕೊಳ್ಳುತ್ತಾ ತೃಪ್ತಿಪಟ್ಟುಕೊಳ್ಳುತ್ತಾರೆ. ಸೋಮಾರಿಗಳು ಹೆಚ್ಚಾಗಿ ಇಂತಹ ಕಲ್ಪನೆಗಳನ್ನು ಮಾಡುತ್ತಾರೆ.
ನಾವು ಯಾವ ವಿಷಯದ ಕುರಿತಾಗಿ ಹೆಚ್ಚಾಗಿ ಆಲೋಚಿಸುತ್ತೇವೆ ಅಥವಾ ಚಿಂತೆ ಮಾಡುತ್ತೇವೆ ಆ ವಿಷಯ ನಮಗೆ ತಿಳಿಯದಂತೆ ಮನಸ್ಸಿನ ತಳಹದಿಗೂ ತಲುಪಿರುತ್ತವೆ. ಅವುಗಳು ಕನಸಾಗಿಯೂ ಕಾಣಬಹುದು. ಕನಸು ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯುವುದರ ಮುನ್ಸೂಚನೆ ಆಗಿರಲೂ ಬಹುದು. ನಮ್ಮಷ್ಟಕೇ ನಾವು ಕಲ್ಪಿಸಿಕೊಳ್ಳುವುದು ಕೂಡ ಒಂದು ರೀತಿಯಲ್ಲಿ ಕನಸು ಕಾಣುವುದಾಗಿದೆ.ಮನಸ್ಸು ಸ್ವಚ್ಛಂದವಾಗಿ ವಿಹರಿಸುವ ಸಂದರ್ಭ ಸುಂದರವಾದ ಕಲ್ಪನೆಗಳು ಮೂಡಬಹುದು. ವಾಸ್ತವಕ್ಕೆ ಹತ್ತಿರವಾದ ಕನಸುಗಳನ್ನು ಕೂಡ ಕೊಡಬಹುದು. ಆದರೆ ಮನಸ್ಸಿನಿಂದ ಮಾತಿನ ಮೂಲಕ ಶಬ್ದಗಳ ಆಸರೆ ಪಡೆದು ಹೊರಬರುವಾಗ ಅಲ್ಲಿನ ಪರಿಸ್ಥಿತಿ, ವಾತಾವರಣ, ನಿರೂಪಿಸುವವನ ಸಾಮರ್ಥ್ಯ ಇತ್ಯಾದಿಗಳು ಅದರ ಸ್ವಚ್ಛಂದ ಹರಿವಿಗೆ ತಡೆಯುಂಟು ಮಾಡಬಹುದು.
ಕನಸು ಕಾಣುವುದು ಸುಲಭ ಆದರೆ ಕಂಡ ಕನಸಿನ ಬಗ್ಗೆ ವಿವರಿಸುವುದು, ಬರೆಯುವುದು ತುಂಬಾ ಕಷ್ಟಘಿ. ಮನಸ್ಸಿನ ಯೋಚನೆಯ ಒಂದು ಎಳೆ ಎಂತೆಂಥ ಕನಸುಗಳನ್ನು ತಂದಿಡುತ್ತದೆ ಎಂಬುದು ಬಹಳ ವಿಶೇಷ. ಎಳೆ ಎಂಬುದು ಮಗುವಿನಂತೆ. ಅದರ ಸಾಧ್ಯತೆಗಳು ಅಪಾರ. ಮೊಳಕೆಯೊಡೆದ ಪ್ರತಿಯೊಂದು ಬೀಜಕ್ಕೂ ಮರವಾಗುವ ಸಾಧ್ಯತೆ ಇರುತ್ತವೆ. ಆದರೆ ಎಲ್ಲ ಮೊಳಕೆಗಳು ಮರವಾಗುವುದಿಲ್ಲ. ಎಷ್ಟೋ ಮೊಳಕೆಗಳು ಮುರುಟಿ ಹೋಗುತ್ತವೆ. ನಮ್ಮ ಕನಸುಗಳಂತೆ.

ಆತ್ಮವಿಶ್ವಾಸ ಪ್ರತಿಯೊಬ್ಬರಿಗೂ ಅಗತ್ಯ


ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಮಗೆ ಆತ್ಮವಿಶ್ವಾಸ ಅತ್ಯಗತ್ಯ. ಅದು ಇಲ್ಲದಿದ್ದರೆ, ಯಾರಿಂದಲೂ ಏನನ್ನೂ ಸಾಸಲಾಗದು. ದೋಣಿ ನಡೆಸಲು ಹರಿಗೋಲು ಎಷ್ಟು ಮುಖ್ಯವೊ, ನಮ್ಮ ಜೀವನದಲ್ಲಿ ಆತ್ಮವಿಶ್ವಾಸವು ಅಷ್ಟೇ ಮುಖ್ಯ. ಆತ್ಮವಿಶ್ವಾಸವೊಂದಿದ್ದರೆ ನಮಗೆ ಎಂಥಹ ಕಷ್ಟದ ಪರಿಸ್ಥಿತಿ, ಸವಾಲುಗಳನ್ನು ಎದುರಿಸಲು ಸಾಧ್ಯವಿದೆ. ಆತ್ಮವಿಶ್ವಾಸವಿಲ್ಲದಿದ್ದರೆ ಸವಾಲುಗಳನ್ನು ಕಂಡಕೂಡಲೇ ಗಾಳಿ ತೆಗೆದ ಬಲೂನಿನಂತೆ ಕುಗ್ಗಿ, ಖಿನ್ನರಾಗುತ್ತೇವೆ.
ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಇರುವ ವಿಶ್ವಾಸವೇ ‘ಆತ್ಮವಿಶ್ವಾಸ’. ತನ್ನ ಗುಣ - ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು. ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದೇ ‘ಆತ್ಮವಿಶ್ವಾಸ’ವಾಗಿದೆ. ‘ಆತ್ಮವಿಶ್ವಾಸ’ ಮಾನವನಲ್ಲಿರುವ ಕಣ್ಣಿಗೆ ಕಾಣದ ಅತ್ಯಮೂಲ್ಯ ಆಸ್ತಿ ಎಂದರೆ ತಪ್ಪಾಗಲಾರದು. ಈ ಆಸ್ತಿಯನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿದರೆ ಅದು ನಮ್ಮನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಆತ್ಮವಿಶ್ವಾಸ ಎಂಬುದು ಮಾನವನ ಉನ್ನತಿಯ ಮೆಟ್ಟಿಲುಗಳಿದ್ದಂತೆ.
ನನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಯೋಚಿಸುವುದು ಸರ್ವೇ ಸಾಮಾನ್ಯ. ಈ ಭಾವನೆಯನ್ನು ದಮನಮಾಡಿ, ನನ್ನಿಂದ ಆ ಕೆಲಸ ಮಾಡಲು ಖಂಡಿತಾ ಸಾಧ್ಯ. ಯಾಕೆ ಸಾಧ್ಯವಿಲ್ಲಘಿ? ಎಂದು ನಮಗೆ ನಾವೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸವಿದ್ದರೆ ಸಾಕು ಎಂತಹ ಕೆಲಸಗಳೂ ಸುಗಮವಾಗಿ, ಸುಸೂತ್ರವಾಗಿ ನೆರವೇರುತ್ತದೆ. ಇದಕ್ಕೆ ಉದಾಹರಣೆ: ಲಾಲ್ ಬಹದ್ದೂರ್ ಶಾಸಿ ಅವರು ತಮ್ಮ ಶಾಲಾ ದಿನಗಳಲ್ಲಿ ಗಂಗಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿಕೊಂಡು ದಾಟುತ್ತಿದದ್ದುಘಿ ಆತ್ಮವಿಶ್ವಾಸದ ಪ್ರಭಾವದಿಂದಲೇ. ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯೆ ಇರುವ ಬಂಡೆಗೆ ಈಜಿಕೊಂಡು ಹೋಗಲು ಸಾಧ್ಯವಾದುದು ಈಜು ಬಲ್ಲೆ ಎಂಬ ಅವರ ಆತ್ಮವಿಶ್ವಾಸದಿಂದಲೇ.
ಆತ್ಮವಿಶ್ವಾಸವಿದ್ದವರು ಕೆಟ್ಟಕೆಲಸ, ಅನ್ಯಾಯಗಳನ್ನು ಮಾಡುವುದನ್ನು ಖಂಡಿಸಬಹುದು, ಅಂತವರ ವಿರುದ್ಧ ಹೋರಾಡಬಹುದು. ಅದು ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವುದಾರೂ ಒಳ್ಳೆಯ ಲ ಕೊಡುತ್ತದೆ ಎಂಬ ನಂಬಿಕೆಯಿಂದ ನಿರ್ವಹಿಸಬೇಕು. ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ. ಧೈರ್ಯದಿಂದ ಮುಂದುವರಿದಾಗ ಜಯ ಖಂಡಿತ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಧೈರ್ಯ, ನಂಬಿಕೆಗಳನ್ನು ಬಳಸಿಕೊಳ್ಳಬೇಕು. ಆತ್ಮವಿಶ್ವಾಸ ಇಲ್ಲದವರನ್ನು ಹೇಡಿಗಳು, ಸೋಮಾರಿಗಳು, ಧೈರ್ಯಗೇಡಿಗಳು, ತಮ್ಮ ಬಗ್ಗೆ ಅಪನಂಬಿಕೆ ಉಳ್ಳವರು ಎನ್ನಲಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡಬೇಕಾಗಿ ಬಂದಾಗಲೂ ‘ನನ್ನಿಂದ ಆಗೋದಿಲ್ಲ’. ‘ನನಗೆ ಸಾಧ್ಯವಿಲ್ಲ’ ಎನ್ನುವುದೇ ಅವಿಶ್ವಾಸದ ಕುರುಹು.
ಕೆಲವರಿಗೆ ಆತ್ಮವಿಶ್ವಾಸದ್ದೇ ಒಂದು ದೊಡ್ಡ ಕೊರೆತೆ. ಅಂತವರಿಗೆ ಆತ್ಮವಿಶ್ವಾಸವಿರುವ ಅವರ ಮನೆಯವರು, ಸ್ನೇಹಿತರು ಪ್ರೋತ್ಸಾಹ ನೀಡಿ ಆತ್ಮವಿಶ್ವಾಸ ಮೂಡಿಸಬೇಕು. ನಿನ್ನಿಂದ ಆ ಕೆಲಸ ನಿರ್ವಹಿಸಲು ಸಾಧ್ಯ, ಏಳು ಪ್ರಯತ್ನ ಮಾಡು, ನೀನೆ ಮಾಡಬೇಕಾದ ಕಾರ್ಯ ಅದು. ಈ ರೀತಿಯಾಗಿ ಹುರಿದುಂಬಿಸಿದಾಗ ಅವರಿಗೆ ತಮ್ಮ ಬಗ್ಗೆ ನಂಬಿಕೆ ಹುಟ್ಟಿ ಯಾವುದೇ ಕೆಲಸಗಳನ್ನು ಸಮರ್ಪಕವಾಗಿ ನೆರವೇರಿಸುವುದರಲ್ಲಿ ಸಲರಾಗುತ್ತಾರೆ. ಒಮ್ಮೆ ಆತ್ಮವಿಶ್ವಾಸ ಗರಿಗೆದರಿದರೆ ಪ್ರಗತಿ ತನ್ನಿಂದ ತಾನಾಗೆ ಬರುತ್ತದೆ. ಇದರಿಂದ ಎಂತಹ ಹೇಡಿಗಳು ಪ್ರಗತಿ ಶೀಲರಾಗಲು ಸಾಧ್ಯ.
ಯಾವುದೇ ಕೆಲಸ - ಕಾರ್ಯಗಳನ್ನು ನಿರ್ವಹಿಸುವಾಗ ಒಮ್ಮೆ ಸೋಲಾಯಿತೆಂದು ಆತ್ಮವಿಶ್ವಾಸವನ್ನೇ ಕಳಕೊಳ್ಳುವುದಲ್ಲ. ‘ಮರಳಿ ಯತ್ನವ ಮಾಡು’ ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲಿನಿಂದ ನಾವು ಕಳಕೊಳ್ಳುವುದೇನೂ ಇಲ್ಲ. ಆದರೆ ಸೋಲಿನಿಂದ ಪಾಠ ಕಲಿಯುತ್ತೇವೆ. ಅನುಭವ ಗಳಿಸುತ್ತೇವೆ. ನಮ್ಮಲ್ಲಿರುವ ಅಹಂಕಾರ ದೂರವಾಗುತ್ತದೆ. ಆದ್ದರಿಂದ ಸೋಲು ಬಂತೆಂದು ಹತಾಶರಾಗುವುದಬೇಡ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಆತ್ಮವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗಬೇಕು.
‘ಅತಿಯಾದರೆ ಅಮೃತವು ವಿಷ’ ಎಂಬ ಮಾತಿದೆ. ಹಾಗೇ ಮಿತಿಮೀರಿದ ಆತ್ಮವಿಶ್ವಾಸವು ಒಳ್ಳೆಯದಲ್ಲ. ತನ್ನ ಯೋಗ್ಯತೆ, ಸಾಮರ್ಥ್ಯ ಮೀರಿ ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುವುದು, ಹಿಂದೆ ಮುಂದೆ ಯೋಚಿಸದೆ ಯಾವುದಾರದರೂ ಸರಿ, ಎಂತಹ ಸಮಯದಲ್ಲಾದರೂ ಸರಿ ಎಂದು ಮುನ್ನುಗ್ಗುವುದು ಪ್ರಮಾದಕರವಾದ ನಡತೆ. ಇದನ್ನೇ ದುಡುಕು ಸ್ವಭ್ವಾ ಎನ್ನುವುದು. ದುಡುಕಿದರೆ ಎಡವುದು ಖಂಡಿತ. ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕೆಲವೊಂದು ಬಾರಿ ಅತಿಯಾದ ಆತ್ಮವಿಶ್ವಾಸ (ಓವರ್ ಕಾನ್ಫಿಡೆನ್ಸ್)ದಿಂದ ಸೋಲು ಅನುಭವಿಸುವುದುಂಟು. ಅಂತಹ ಸಂದರ್ಭಗಳಲ್ಲಿಘಿ ಅವರ ಪೋಷಕರು, ಗುರುಗಳು ತಿಳಿಹೇಳಿ ಪ್ರೋತ್ಸಾಹಿಸಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆತ್ಮವಿಶ್ವಾಸ ಬೆಳೆದರೆ ದೇಶದಲ್ಲಿ ಹೇಡಿಗಳು, ಸೋಮಾರಿಗಳು ಇಲ್ಲದೆ ಎಲ್ಲರೂ ೀರರಾಗಿ - ೀಮಂತರಾಗಿ ಬಾಳ ಬಹುದು. ಆದರೆ ಆತ್ಮವಿಶ್ವಾಸದ ಸದುಪಯೋಗವಾಗಬೇಕು. ಇದರಿಂದ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ರಾಷ್ಟ್ರ ಪ್ರಗತಿ ಪಥದಲ್ಲಿ ಮುನ್ನಡೆಯಬಹುದು. ಬಾಳಿದರೆ ಆತ್ಮವಿಶ್ವಾಸದಿಂದ ಬಾಳಬೇಕು ಎಂಬ ತತ್ವ ಮಹತ್ತರವಾದುದು.

ಯುವಕರಿಗೆ ಬೇಡವಾಗುತ್ತಿರುವ ಪಂಚೆ


ಹೌದು! ಇಂದು ಯುವಕರಿಂದ ಹಿಡಿದು ಮುದುಕರವರೆಗೆ ಹೆಚ್ಚಿನ ಎಲ್ಲರೂ ಪಂಚೆyuvakrige bedavaguttiruva panche ಉಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ವಿದೇಶಿ ಉಡುಪುಗಳಾದ ಪ್ಯಾಂಟು, ಬರ್ಮುಡ ಚಡ್ಡಿ ಇತ್ಯಾದಿಗಳನ್ನೇ ಧರಿಸುತ್ತಾರೆ. ಭಾರತೀಯರಾದ ನಾವು ಇಂದು ನಮ್ಮ ನಾಡಿನ ಸಾಂಪ್ರದಾಯಿಕ ಉಡುಪುಗಳಾದ ಪಂಚೆ, ಲುಂಗಿ ಉಡುವುದು, ಕಚ್ಚೆ ಹಾಕುವುದನ್ನು ಮರೆತ್ತೇ ಬಿಟ್ಟಿದ್ದೇವೆ ಎಂದೆನ್ನಿಸುತ್ತದೆ. ಯುವಜನಾಂಗವಂತೂ ಪಂಚೆ ಉಡುವುದರಿಂದ ಮಾರುದೂರ ಸರಿದಂತಿದೆ.
ಹಿಂದಿನ ಕಾಲದಲ್ಲಿ ಹಳ್ಳಿಗರಿಂದ ಹಿಡಿದು ಪಟ್ಟಣಿಗರವರೆಗೆ ಎಲ್ಲರೂ ಪಂಚೆಯನ್ನೇ ಉಡುತ್ತಿದ್ದರು. ಕಾಲ ಸರಿದಂತೆ ಉಡುಪಿನ ಮೇಲೂ ಆಧುನಿಕತೆಯ ಪ್ರಭಾವ ಉಂಟಾಯಿತು. ಇದರಿಂದ ವಸ ಸಂಹಿತೆ ಬದಲಾಗಿ ಜನರು ವೈವಿಧ್ಯಮಯ ಉಡುಪುಗಳನ್ನು ಧರಿಸತೊಡಗಿದರು. ಜನರು ಶೈಕ್ಷಣಿಕವಾಗಿ ಮುಂದುವರಿದಾಗ ವಿವಿಧ ತರದ ವಸ ವಿನ್ಯಾಸಗಳನ್ನು ಕಲಿತುಕೊಂಡರು.
 ಹಲವಾರ ವರ್ಷಗಳ ಕಾಲ ನಮ್ಮ ದೇಶವನ್ನು ಆಳಿದ ಬ್ರಿಟಿಷರು ಬಳಸುತ್ತಿದ್ದ ವಸ ವೈವಿಧ್ಯಗಳು ಕೂಡ ನಮ್ಮನ್ನು ಬಹಳವಾಗಿ ಆಕರ್ಷಿಸಿದೆ. ಇಂದು ನಾವು ಹೆಚ್ಚಾಗಿ ಆಂಗ್ಲರು ಬಳಸುವ ರೀತಿಯ ವಸಗಳನ್ನೇ ಉಪಯೋಗಿಸುತ್ತೇವೆ. ಯಾಕೆಂದರೆ ಅವುಗಳನ್ನು ಧರಿಸುವುದು ಸುಲಭ ಎಂದು. ಆದರೆ ಅವುಗಳ ತಯಾರಿಗೆ ಅಷ್ಟೇ ಪರಿಶ್ರಮ ಪಡಬೇಕಾಗುತ್ತದೆ. ಹಲವಾರು ವರ್ಷಗಳ ಹಿಂದೆ ಭಾರತೀಯರು ಮನೆಯಲ್ಲಿದ್ದರೂ ಅಥವಾ ಯಾವುದೇ ಕೆಲಸಗಳಿಗಾಗಿ ಹೊರಗಡೆ ತೆರಳುವುದಿದ್ದರೂ ಪಂಚೆ ಉಡುವುದು ಅಥವಾ ಕಚ್ಚೆ ಹಾಕುತ್ತಿದ್ದರು.
ಸ್ವಾತಂತ್ರ್ಯಾ ಅನಂತರ ಹೆಚ್ಚಿನ ಜನ ಕೋರ್ಟ್, ಕಚೇರಿ ಪಟ್ಟಣಗಳಿಗೆ ಹೋಗುವಾಗ ಪ್ಯಾಂಟ್, ಯಾವುದಾದರೂ ಶುಭಕಾರ್ಯಗಳಿಗೆ, ದೇವಸ್ಥಾನಕ್ಕೆ ಉತ್ಸವ ಇತ್ಯಾದಿಗಳಿಗೆ ತೆರಳುವಾಗ, ಮನೆಯಲ್ಲಿರುವಾ ಪಂಚೆ ಅಥವಾ ಲುಂಗಿ ಉಡುವುದು ಅಥವಾ ಕಚ್ಚೆ ಹಾಕುವುದು ಸಾಮಾನ್ಯವಾಗಿತ್ತು. ಕಾಲ ಬದಲಾದಂತೆ ಜಾಗತೀಕರಣದ ಪ್ರಭಾವ ಹೆಚ್ಚಾಯಿತು. ಅದು ಲುಂಗಿ, ಪಂಚೆ, ಕಚ್ಚೆಗಳ ಮೇಲೂ ತನ್ನ ಪ್ರಭಾವ ಬೀರಿತು. ಪಂಚೆ ಉಡುವುದು ಕಷ್ಟದ ಕೆಲಸ. ಅದನ್ನು ಉಟ್ಟು ನಡೆದಾಡುವುದು, ತಮ್ಮ ಕೆಲಸಗಳನ್ನು ನಿರ್ವಹಿಸುವುದು ಈಗಿನವರಿಗೆ ತುಂಬಾ ಕಷ್ಟ. ಯಾಕೆಂದರೆ ಇಂದಿನವರಿಗೆ ಪಂಚೆ ಉಡುವ ಕ್ರಮವೇ ಸರಿಯಾಗಿಗೋತ್ತಿಲ್ಲ. ಆದರೆ ಪಂಚೆ ಉಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದು ಹೇಗೆಂದರೆ, ನಮ್ಮ ದೇಹದ ಎಲ್ಲಾ ಭಾಗಗಳಲ್ಲಿಯೂ ಬೆವರು ಉತ್ಪತ್ತಿಯಾಗುತ್ತದೆ. ಗಾಳಿ ದೇಹದ ಎಲ್ಲಾ ಭಾಗಗಳನ್ನು ಸ್ಪರ್ಶಿಸುತ್ತಿದ್ದರೆ ಬೆವರು ಗಾಳಿಯಲ್ಲಿ ತನ್ನಷ್ಟಕ್ಕೆ ಆವಿಯಾಗುತ್ತದೆ. ದಪ್ಪಗಿನ ಬಟ್ಟೆ ಧರಿಸುವುದರಿಂದ ಇದು ಕಷ್ಟಕರ ಸಂಗತಿ. ಇದರಿಂದ ಬೆವರುವುದು ಹೆಚ್ಚಿ ತುರಿಕೆ, ಗಜ್ಜಿ ಇತ್ಯಾದಿ ತೊಂದರೆಗಳು ಉಂಟಾಗುತ್ತದೆ. ಇದು ಸಮತೋಲನವನ್ನು ಕೆಡಿಸುತ್ತದೆ. ಪಂಚೆ ಇತರ ಬಟ್ಟೆಗಳಿಗಿಂತ ತೆಳ್ಳಗಿರುತ್ತದೆ. ಅದನ್ನು ಉಡುವುದರಿಂದ ದೇಹದ ಎಲ್ಲಾ ಭಾಗಕ್ಕೂ ಗಾಳಿ ಸುಲಭವಾಗಿ ತಗುಲುವುದು. ಇದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದಾಗಿದೆ.
ಭಾರತದ ಕೆಲವೊಂದು ರಾಜ್ಯಗಳಲ್ಲಿ ಇಂದಿಗೂ ಪಂಚೆಗೆ ಬಹಳಷ್ಟು ಮಹತ್ವವಿದೆ. ಮುಖ್ಯವಾಗಿ ಕೇರಳ, ತಮಿಳುನಾಡು ಮೊದಲಾದೆಡೆ ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳವರೆಗೆ ಹೆಚ್ಚಿನ ಎಲ್ಲರೂ ಪಂಚೆಯನ್ನೇ ಉಡುತ್ತಾರೆ. ಅಲ್ಲಿನ ಚಲನಚಿತ್ರಗಳಲ್ಲಿಯೂ ಕಲಾವಿದರು ಹೆಚ್ಚಾಗಿ ಬಳಸುವ ಉಡುಪು ಪಂಚೆ ಉಟ್ಟು ನಟಿಸುತ್ತಾರೆ. ಮುಖ್ಯವಾಗಿ ನಮ್ಮ ರಾಜ್ಯದಲ್ಲಿಯೇ ಇಂದು ಪಂಚೆ ಉಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ಹಲವಾರು ಜನ ಪಂಚೆ, ಕಚ್ಚೆಗಳನ್ನೇ ಬಳಸುತ್ತಿರುವುದನ್ನು ಕಾಣಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಕೆಲವೊಂದು ಗಣ್ಯವ್ಯಕ್ತಿಗಳ ಪಂಚೆ ಎಳೆದ ಪ್ರಕರಣಗಳು ಕೂಡ ಹಲವರು ಪಂಚೆ ಉಸಾಬರಿ ಬೇಡ ಎನ್ನಲು ಕಾರಣವಾಗಿರಬಹುದು. ಭಾರತೀಯರ ಸಾಂಪ್ರದಾಯಿಕ ಉಡುಪು ಇದಾಗಿರುವುದರಿಂದ ಇಂದಿನ ಜನ ಪಂಚೆ ಉಡುವುದನ್ನು ಮರೆಯುತ್ತಿರುವುದು ಬೇಸರದ ಸಂಗತಿ.

ಎಲ್ಲೆಡೆ ಮೊಬೈಲ್ ಮೇನಿಯ


ಮೊಬೈಲ್ ೆನ್ ಬಳಕೆಗೆ ಬಂದು ಸುಮಾರು 38 ವರ್ಷಗಳೆ ಕಳೆದವು. 1973ರಲ್ಲಿ ಮೊದಲ ಬಾರಿ ಮಾರ್ಟಿನ್ ಕಪೂರ್ ಎಂಬಾತ ಡಾ| ಜೊ. ಎ. ಇಂಜೆಲ್ ಅವರಿಗೆ ಮೊಬೈಲ್ ೆನ್ ಮೂಲಕ ಕರೆ ಮಾಡಿದ. ಮೊಬೈಲ್ ಯುಗ ಆರಂಭವಾದಾಗ ಮೊಬೈಲ್ ೆನ್ ಭಾರ ಸುಮಾರು ಒಂದು ಕೆ.ಜಿ.ಗಿಂತ ಹೆಚ್ಚಿತ್ತು. ಪ್ರಸ್ತುತ ಮೊಬೈಲ್ ೆನ್ ಭಾರ ಕೆಲವೇ ಕೆಲವು ಗ್ರಾಂಗಳ ವರೆಗೆ ಇಳಿದಿದೆ ಮಾತ್ರವಲ್ಲ ಇಳಿಯುತ್ತಲೂ ಇದೆ.
ನಿಮ್ಮ ಸೆಟ್ ಯಾವುದು? ಟೆಚ್ ಸ್ಕ್ರೀನಾ? ಬ್ಯಾಟರಿ ಬ್ಯಾಕಪ್ ಹೇಗಿದೆ? ಮೆಮೊರಿ ಕಾರ್ಡ್ ಎಷ್ಟು ಜಿಬಿ? ಇಂಟರ್ನೆಟ್ ಇದೆಯಾ? ಹೀಗೆ ಮೊಬೈಲ್ ೆನ್ಗೆ ಸಂಬಂಸಿದಂತೆ ಒಂದರ ಮೇಲೊಂದು ಪ್ರಶ್ನೆಗಳ ಸುರಿಮಳೆ. ಅಲ್ಲದೆ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಮೊಬೈಲ್ ೆನ್ ಮತ್ತು ಅವುಗಳ ಕಂಪೆನಿಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಇಂದು ಹೆಚ್ಚಾಗಿ ಯುವಜನಾಂಗದವರ ಮಧ್ಯೆ ಕೇಳಿಬರುತ್ತದೆ. ಇದು ಮೊಬೈಲ್ellde mobile meniya ೆನ್ ಯುವಜನಾಂಗದವರ ಬದುಕಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂಬುದನ್ನು ತಿಳಿಸುತ್ತದೆ. ಮೊಬೈಲ್ ೆನ್ನನ್ನು ಯುವಜನರು ಎಷ್ಟು ಅವಲಂಬಿಸಿಕೊಂಡಿದ್ದಾರೆೆ ಅಂದರೆ, ಸ್ನೇಹಿತೆ (ಸ್ನೇಹಿತ), ಪ್ರಿಯಕರೆ (ಪ್ರಿಯಕರ), ಮನೆಯವರನ್ನು ಬೇಕಾದರೂ ಬಿಟ್ಟು ಬಿಟ್ಟಾರು. ಆದರೆ ಮೊಬೈಲ್ ೆನ್ನನ್ನು ಮಾತ್ರ ಬಿಡಲೊಲ್ಲರು. ಸ್ವಲ್ಪ ಸಮಯ ಅದು ನಮ್ಮ ಕೈಯಲ್ಲಿ ಇಲ್ಲವಾದರೆ ಏನೋ ಕಳಕೊಂಡವರಂತೆ ಚಡಪಡಿಸುತ್ತೇವೆ. ಯಾಕೆಂದರೆ ಅದು ನಮ್ಮ ಸಂಗಾತಿ, ್ರೆಂಡ್, ಮಾಹಿತಿದಾರ, ಮನೋರಂಜಕ ಇತ್ಯಾದಿ.
 ಮೊಬೈಲ್ ೆನ್ ಕ್ರಾಂತಿ ಜಗತ್ತಿನಾದ್ಯಂತ ಯುವಜನಾಂಗದವರಲ್ಲಿ ಹುಚ್ಚೆಬ್ಬಿಸಿದೆ. ಪ್ರಸ್ತುತ ಯುವಕ -ಯುವತಿಯರಿಗೆ ಹೊಸ ಹೊಸ ಸೆಲ್ ೆನ್ಗಳ ಬಗ್ಗೆ ಮಾತನಾಡುವುದೇ ಒಂದು ಕ್ರೇಜಿಯಾಗಿ ಬಿಟ್ಟಿದೆ. ಬಸ್ಟ್ಯಾಂಡ್, ಮಾರುಕಟ್ಟೆಘಿ, ಶಾಲಾ- ಕಾಲೇಜು ಪರಿಸರ, ಸಭೆ - ಸಮಾರಂಭ ಹೀಗೆ ಎಲ್ಲಿಯೇ ಆಗಿರಲಿ ಸ್ನೇಹಿತರು, ಪರಿಚಿತರು ಯಾರೇ ಆಗಿರಲಿ ಪರಸ್ಪರ ಭೇಟಿಯಾದಾಗ ಮೊಬೈಲ್ ೆನ್ಗಳ ಬಗ್ಗೆಯೇ ಮಾತು. ಯಾರಾದರೂ ಹೊಸ ಸೆಲ್ ೆನ್ ತೆಗೆದರೆ, ಜಾಹೀರಾತು ನೋಡಿದರೆ ಅದರಲ್ಲಿರುವ ಸೌಲಭ್ಯಗಳು, ಅದರ ವಿಶೇಷ, ಗಾತ್ರ, ಭಾರ, ಬಣ್ಣ, ಇತ್ಯಾದಿಗಳೆಲ್ಲವನ್ನು ಗಮನಿಸಿ, ತಮ್ಮ ಸ್ನೇಹಿತರಿಗೆ ತಿಳಿಸುವುದು ಅವರೊಂದಿಗೆ ಚರ್ಚಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಸೆಲ್ ೆನ್ಗಳ ಬಗ್ಗೆ ಆಕರ್ಷಿತರಾದುದು ಕೇವಲ ಯುವಜನಾಂಗದವರು ಮಾತ್ರ ಅಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ - ಮುದುಕರ ವರೆಗೆ, ಹೆಣ್ಣು -ಗಂಡು ಎಂಬ ಬೇಧವಿಲ್ಲದೆ ಎಲ್ಲರೂ ಸೆಲ್ ೆನ್ಗಳ ಗುಣಗಾನ ಮಾಡುತ್ತಾರೆ. ಹೆಚ್ಚಾಗಿ ಎಲ್ಲರಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ವಿವಿಧ ಶ್ರೇಣಿಗಳ ಮೊಬೈಲ್ ೆನ್ಗಳನ್ನು ಕಾಣಬಹುದು.
 ಮಾಯಕದ ಪೆಟ್ಟಿಗೆ
ನವಯುಗದ ಸಂಪರ್ಕ ಕ್ಷೇತ್ರದಲ್ಲಿ ಮೊಬೈಲ್ ೆನ್ ಕ್ರಾಂತಿಯನ್ನೇ ಉಂಟುಮಾಡಿದೆ. ಅದು ಒಂದು ಮಾಯಕದ ಪೆಟ್ಟಿಗೆ. ಅಕ್ಷರ ಬಲ್ಲವರನ್ನು, ಬರದವರನ್ನು ಕೂಡ ತನ್ನತ್ತ ಆಕರ್ಷಿಸಿದೆ. ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಕೈಯಲ್ಲೊಂದು ಮೊಬೈಲ್ ೆನ್ ಇರಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳ ಮೊದಲು ಒಬ್ಬರಿಗೆ ಒಂದು ಸೆಲ್ ೆನ್ ಇರುವುದು ದೊಡ್ಡ ಸಂಗತಿ. ಯುವಕರಲ್ಲಿ ಈಗ ಒಬ್ಬೊಬ್ಬರಿಗೆ ಎರಡು ಸೆಲ್ ೆನ್ಗಳಿರುವುದು ಸಾಮಾನ್ಯ ವಿಷಯವಾಗಿದೆ.
ಕೂಲಿ ಕೆಲಸ ಮಾಡುವವರಿಂದ ಹಿಡಿದು ಕಂಪೆನಿಗಳ ಸಿಒ, ಎಂಡಿಗಳ ವರೆಗೆ ಎಲ್ಲರಿಗೂ ಮೊಬೈಲ್ ೆನ್ ಬಳಕೆ ಇಂದು ಅನಿವಾರ್ಯವಾಗಿದೆ. ಇದರಿಂದ ಮೊಬೈಲ್ ೆನ್ ಬೇಡಿಕೆ ನಿರಂತರ ಹೆಚ್ಚುತ್ತಿದೆ. ದಿನಕ್ಕೂಂದು ಹೊಸ ಮೊಬೈಲ್ ೆನ್ ಕಂಪೆನಿ ತಲೆ ಎತ್ತುತ್ತಿವೆ. ಹ್ಯಾಂಡ್ ಸೆಟ್ಗಳ ಬೆಲೆ ಮತ್ತು ಕಾಲ್ ದರ ಇಳಿಕೆಯಾಗುತ್ತಿದೆ. ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆ್ ಇಂಡಿಯಾದ ವರದಿಗಳ ಪ್ರಕಾರ, ಮೊಬೈಲ್ ೆನ್ಗಳ ಗ್ರಾಹಕರ ಸಂಖ್ಯೆ ಮಾರ್ಚ್ ತಿಂಗಳಲ್ಲಿ ಶೇ. 2.62ರಷ್ಟು ಏರಿಕೆಯಾಗಿ 771.18 ಮಿಲಿಯನ್ಗಳಿಗೆ ತಲುಪಿದೆ.
ಮೊದಲಿಗೆ ಮೊಬೈಲ್ ೆನ್ ಕೇವಲ ಸಂವಹನ ಸಂಪರ್ಕ ಸಾಧನವಾಗಿ ಮಾತ್ರ ಕೆಲಸ ನಿರ್ವಹಿಸುತ್ತಿತ್ತು. ತದನಂತರದ ಸಂಶೋಧನೆ ಮತ್ತು ಅಭಿವೃದ್ಧಿಗಳಿಂದ ಮೊಬೈಲ್ ೆನ್ ಇಂದು ಇಡೀ ವಿಶ್ವವನ್ನೇ ತನ್ನೊಳಗಿರಿಸಿಕೊಂಡಿದೆ. ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳು ನಿರ್ವಹಿಸುವ ಕೆಲಸಗಳನ್ನು ಈಗ ಮೊಬೈಲ್ ೆನ್ ಒಂದೇ ನಿಭಾಯಿಸುತ್ತದೆ. ಸೆಲ್ ೆನ್ ಬಳಕೆ ಅತಿಯಾದಾಗಲಿಂದ ಮೂಲೆ ಸೇರಿರುವಗಳೆಂದರೆ ರೇಡಿಯೋ, ಮ್ಯೂಸಿಕ್ ಪ್ಲೇಯರ್, ವಾಚ್, ಕ್ಯಾಲ್ಕ್ಯುಲೇಟರ್, ಟೈಮಾರ್, ಕ್ಯಾಯಿನ್ ಬೂತ್, ಎಸ್ಟಿಡಿ ಬೂತ್, ದಿಕ್ಸೂಚಿ ಇತ್ಯಾದಿಗಳು.
ಬೇಡಿಕೆ ಹೆಚ್ಚಳಕ್ಕೆ ಕಾರಣ 
ಗ್ರಾಹಕರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಮೊಬೈಲ್ ೆನ್ ಕಂಪೆನಿಗಳು ತಮ್ಮನ್ನು ಹೊಸ ಹೊಸ ಸೇವೆಗಳಿಗೆ ತೆರೆದುಕೊಳ್ಳುತ್ತಿರುವುದು. ರೇಡಿಯೋ, ಮ್ಯೂಸಿಕ್ ಪ್ಲೇಯರ್, ಕ್ಯಾಮರಾ, ಮೆಮೊರಿ ಕಾರ್ಡ್, ಡ್ಯುಯಲ್ ಸಿಮ್, ದಿಕ್ಸೂಚಿ, ಟಿವಿ ರಿಮೋಟ್ ಕಂಟ್ರೋಲ್, ಇಂಟರ್ನೆಟ್, 3ಜಿ, ಉಷ್ಣಾಂಶ ಅಳೆಯುವ ಮಾಪಕ, ಪ್ರೋಜೆಕ್ಟ್ರ್ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಮೊಬೈಲ್ ೆನ್ ಕಂಪೆನಿಗಳು ಬಳಕೆದಾರರಿಗೆ ಒದಗಿಸುತ್ತಿವೆ. ಇತ್ತೀಚೆಗೆ ಬಂದ ಸೆಲ್ೆನ್ ನಂಬರ್ ಪೋರ್ಟಬಲಿಟಿ ಬಳಕೆ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತಿವೆೆ.
ಅವುಗಳಲ್ಲದೆ ಮೊಬೈಲ್ ೆನ್ಗಳ ಆಕಾರಗಳಲ್ಲಿನ ಬದಲಾವಣೆ ಕೂಡ ಜನರ ಗಮನ ಸೆಳೆಯುತ್ತಿದೆ. ಮೊದಲಿಗೆ ಚಿಕ್ಕ ಸ್ಕ್ರೀನ್ನ ಬ್ಲಾಕ್ ಆ್ಯಂಡ್ ವೈಟ್ ಹ್ಯಾಂಡ್ ಸೆಟ್ಗಳು ಬಂದರೆ ಅನಂತರ ದೊಡ್ಡ ಸ್ಕ್ರೀನ್, ಕ್ವಾರ್ಟಿ ಕೀಪ್ಯಾಡ್, ಟೆಚ್ ಸ್ಕ್ರೀನ್, ಹೋಲ್ಡ್ ಮಾಡಬಹುದಾಂತಹ ಕಲರ್-ಕಲರ್ ಸೆಟ್ಗಳು ಬಂದವು.
 'ಅತಿಯಾದರೆ ಅಮೃತವೂ ವಿಷ'ಎಂಬ ಮಾತಿನಂತೆ ಸೆಲ್ ೆನ್ಗಳ ಅತಿಯಾದ ಬಳಕೆ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಲ್ಲ. ತಜ್ಞರು ಈ ಬಗ್ಗೆ ಎಷ್ಟು ಹೇಳಿದರು ಜನ ತಲೆಕೆಡಿಸಿದಂತಿಲ್ಲ. ಜನ ಜೀವನದಲ್ಲಿ ಮೊಬೈಲ್ ೆನ್ ಬೇರೂರಿರುವುದನ್ನು ನೋಡಿದರೆ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಟ್ಟಿರಲು ಇಂದಿನವರಿಗೆ ಸಾಧ್ಯವೇ ಇಲ್ಲ. ಆದರೆ ಬಳಕೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿದರೆ ದೇಹದ ಮೇಲಾಗುವ ಕೆಟ್ಟಪರಿಣಾಮಗಳಿಂದಾದರೂ ದೂರವಿರಬಹುದು.

ಮೂಲೆ ಸೇರುತ್ತಿರುವ ಅರೆಯುವಕಲ್ಲು


ಮನುಷ್ಯ ತನ್ನ ಜೀವನದಲ್ಲಿ ಸದಾ ವೈವಿಧ್ಯವನ್ನು ಬಯಸುತ್ತಾನೆ. ಆಹಾರದ ವಿಷಯಕ್ಕೆ ಬಂದಾಗ ಅದು ಬಹಳ ಪ್ರಮುಖವಾಗುತ್ತದೆ. ವಿವಿಧ ತರಹದ ರುಚಿ - ರುಚಿಯಾದ ಅಡುಗೆ ತಯಾರಿಸಿ ತಿನ್ನುವುದು ಅವನ ಹವ್ಯಾಸವು ಕೂಡ. ಹೀಗೆ ನಾನಾ ವಿಧದ ಅಡುಗೆ ತಯಾರಿಗೆ ಅರೆಯುವಕಲ್ಲು ಬೇಕೆಬೇಕು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪದಾರ್ಥ, ತಿಂಡಿ - ತಿನಸುಗಳನ್ನು ಅರೆದೇ ತಯಾರಿಸಲಾಗುತ್ತದೆ. ಆದ್ದರಿಂದ ಅರೆಯುವಕಲ್ಲು ಹೆಂಗೆಳೆಯರ ಅಡುಗೆ ಮನೆಯ ದೈನಂದಿನ ಸಂಗಾತಿ.
ತೆಂಗಿನ ಕಾಯಿ, ಅಕ್ಕಿ, ಗೋಧಿ ಇತ್ಯಾದಿಗಳನ್ನು ಅರೆಯಲು, ಸಾಂಬಾರು ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಲು ಹಿಂದಿನ ಕಾಲದಲ್ಲಿ ಅರೆಯುವಕಲ್ಲನೇ ಬಳಸಲಾಗುತ್ತಿತ್ತು. ಆದ್ದರಿಂದ ಸಾಮಾನ್ಯವಾಗಿ 'ಅರೆಯುವಕಲ್ಲು ಇಲ್ಲದ ಮನೆಗಳೇ ಇಲ್ಲ'ಎಂಬ ಮಾತಿದೆ. ಅರೆಯುವಕಲ್ಲು, ಬೀಸುವಕಲ್ಲು, ಕಟ್ಟುವಕಲ್ಲು ಹೀಗೆ ಬೇರೆಬೇರೆ ವಿಧದ ಕಲ್ಲುಗಳನ್ನು ಹಳ್ಳಿಗಳಲ್ಲಿ ಜನರು ಬಳಸುತ್ತಾರೆ. ಈ ರೀತಿಯ mule seruttiruva areuvakalluಕಲ್ಲುಗಳಲ್ಲಿ ಅರೆದು ತಯಾರಿಸಿದ ಅಡುಗೆ, ತಿಂಡಿ - ತಿನಸುಗಳು ವಿಶೇಷವಾಗಿರುತ್ತವೆ ಮತ್ತು ತುಂಬಾ ರುಚಿಯಾಗಿರುತ್ತವೆ. ಆದರೆ ಇಂದು ಅರೆಯುವಕಲ್ಲು ಮೂಲೆಗುಂಪಾಗುತ್ತಿದೆ.
ಮಿಕ್ಸಿ, ಗ್ರ್ಯಾಂಡರ್ ಬಳಕೆ
ಇಂದು ಕಾಲ ಬದಲಾಗಿದೆ. ಆಧುನಿಕತೆ ಬೆಳೆದಂತೆ ಮನುಷ್ಯ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಯಂತ್ರಗಳ ಸಹಭಾಗಿತ್ವ ಪಡೆದುಕೊಂಡಿದ್ದಾನೆ. ದೈಹಿಕ ಶ್ರಮ ಕಡಿಮೆಯಾಗಿ, ಯಂತ್ರಗಳ ಬಳಕೆ ಹೆಚ್ಚಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ವಿದ್ಯುತ್ ಚಾಲಿತ ಉಪಕರಣಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ಹಾಗೇ ಇಲ್ಲಿ ಅರೆಯುವಕಲ್ಲಿ ಜಾಗವನ್ನು ಮಿಕ್ಸಿ, ಗ್ರ್ಯಾಂಡರ್ಗಳು ಆಕ್ರಮಿಸಿಕೊಂಡಿವೆ. ಬಹಳ ಕಡಿಮೆ ಸಮಯದಲ್ಲಿ, ದೈಹಿಕ ಶ್ರಮವಿಲ್ಲದೆ ಸುಲಭವಾಗಿ ಬಹಳ ನುಣುಪಾಗಿ ಆಹಾರ ಪದಾರ್ಥಗಳನ್ನು ಅರೆದು ಅಡುಗೆ ತಯಾರಿಸಲು ಈ ವಿದ್ಯುತ್ ಚಾಲಿತ ಉಪಕರಣಗಳು ಸಹಕಾರಿ. ಇಂದಿನ ಒತ್ತಡದ ಬದುಕಿನಲ್ಲಿ ಜನರಿಗೆ ಯಾವುದೇ ಕೆಲಸ ಮಾಡಲು ಸಮಯವಿಲ್ಲ. ಇದರಿಂದ ತುಂಬಾ ಸಮಯ ಅರೆಯುವಕಲ್ಲಿನಲ್ಲಿ ಅರೆಯುತ್ತಾ ಇರಲು ಸಾಧ್ಯವಿಲ್ಲ ಎಂದು ಅವರು ಮಿಕ್ಸಿ, ಗ್ರ್ಯಾಂಡರ್ಗಳನ್ನು ಬಳಸತೊಡಗಿದರು.
ಮರೆಗೆ ಕಾರಣ
ಇಂದು ಎಲ್ಲಿ ನೋಡಿದರು ಚಿಕ್ಕ -ಚಿಕ್ಕ ಮನೆಗಳೇ ಕಾಣಬಹುದು. ಅವುಗಳಲ್ಲಿ ಅಷ್ಟು ದೊಡ್ಡದಾಗಿ, ಭಾರವಾಗಿರುವ ಅರೆಯುವಕಲ್ಲುಗಳನ್ನು ಇಡಲು ಸ್ಥಳಾವಕಾಶದ ಕೊರೆತೆ ಕೂಡ ಇದೆ. ಮತ್ತೆ ಅವುಗಳನ್ನು ಸ್ಥಳಾಂತರಿಸುವುದು ಕೂಡ ಕಷ್ಟದ ಕೆಲಸ. ಈ ಕಾರಣಗಳಿಂದ ಇಂದು ಅರೆಯುವಕಲ್ಲು ಮರೆಯಾಗುತ್ತಿದೆ. ಮುಂದಿನ ಜನಾಂಗದವರಿಗೆ ಅದರ ಪರಿಚಯವೇ ಇಲ್ಲದಗಬಹುದು. ಅವರು ಅದನ್ನು ವಸ್ತು ಸಂಗ್ರಹಾಲಯಗಳಲ್ಲಿ ನೋಡಬೇಕಾಗಿ ಬಂದರು ಆಶ್ಚರ್ಯವಿಲ್ಲ.
ತಯಾರಿ 
ಅರೆಯುವಕಲ್ಲುಗಳನ್ನು ಸಾಮಾನ್ಯವಾಗಿ ಯಾವುದೇ ಕಾರ್ಖಾನೆಗಳಲ್ಲಿ ತಯಾರಿಸುವುದಿಲ್ಲ. ಅರೆಯುವಕಲ್ಲು ತಯಾರಕರು ಕಪ್ಪುಕಲ್ಲಿನ ಕೋರೆ (ಗಣಿ)ಗಳಿಂದ, ಅವುಗಳ ಮಾಲಕರಿಗೆ ಹಣಕೊಟ್ಟು ದೊಡ್ಡ ಗಾತ್ರದ ಕಲ್ಲುಗಳನ್ನು ಪಡೆಯುತ್ತಾರೆ. ಯಾರಾದರೂ ಅರೆಯುವಕಲ್ಲು ಬೇಕೆಂದು ಆರ್ಡರ್ ನೀಡಿದಾಗ ಕಲ್ಲಿನ ತಯಾರಿಸುವ ಕಾರ್ಯ ಆರಂಭಿಸುತ್ತಾರೆ. ಅವರು ಬೇರೆಬೇರೆ ಗಾತ್ರದ ವಿವಿಧ ಉಳಿ, ಸುತ್ತಿಗೆಗಳನ್ನು ಬಳಸಿ ಬೃಹತ್ ಕಲ್ಲುಗಳನ್ನು ಕೆತ್ತಿ ಸುಂದರ ಆಕೃತಿ ನೀಡುತ್ತಾರೆ. ಒಂದು ಕಲ್ಲು ಸಿದ್ಧಗೊಳಿಸಲು ಮೂರು - ನಾಲ್ಕು ದಿನಗಳಾದರೂಬೇಕು. ಬೇಡಿಕೆಗೆ ತಕ್ಕುದಾಗಿ ಸಣ್ಣ ಹಾಗೂ ದೊಡ್ಡ ಗಾತ್ರದ ಅರೆಯುವ ಕಲ್ಲುಗಳನ್ನು ತಯಾರಿಸುತ್ತಾರೆ. ಸಿದ್ಧಗೊಂಡ ಕಲ್ಲಿನ ಬೆಲೆ ಸಾಮಾನ್ಯವಾಗಿ 100ರಿಂದ 2,500 ರೂ.ಗಳ ವರೆಗಿರುತ್ತವೆ.
ಬಳಕೆಯ ಪ್ರಯೋಜನ
ಅರೆಯುವಕಲ್ಲು ಬಳಕೆಯಿಂದ ಅದೆಷ್ಟೊ ಅರೆಯುವಕಲ್ಲು ಸಿದ್ದಪಡಿಸುವ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ. ಮಿಕ್ಸಿ, ಗ್ರ್ಯಾಂಡರ್ಗಳ ಬಳಕೆಗೆ ಬಹಳಷ್ಟು ವಿದ್ಯುತ್ ಬೇಕಾಗುವುದರಿಂದ ವಿದ್ಯುತ್ ಕೊರತೆಗೆ ಅದು ಕಾರಣವಾಗುತ್ತದೆ. ಇದನ್ನು ತಡೆಯಲು ಸಮಯಾವಕಾಶ ಇರುವಾಗಲಾದರೂ ಅರೆಯುವಕಲ್ಲು ಬಳಕೆ ಮಾಡಿದರೆ ಉತ್ತಮ.
ಮಿಕ್ಸಿ, ಗ್ರ್ಯಾಂಡರ್ಗಳಲ್ಲಿ ರುಬ್ಬಿ ಅಥವಾ ಪುಡಿ ಮಾಡಿ ತಯಾರಿಸಿದ ಆಹಾರ ಪದಾರ್ಥಗಳು ಆಧುನಿಕ ಕಾಲದ ಜನರ ಬಾಯಿ ಚಪಲಕ್ಕೆ ಒಗ್ಗುತ್ತವೆ. ಆದರೆ ಆರೋಗ್ಯ ಯಾವಾಗಲೂ ಉತ್ತಮವಾಗಿರಬೇಕು ಎಂದು ಭಾವಿಸುವ ಮಂದಿಗೆ ಇಂದಿಗೂ ಸಾಂಪ್ರದಾಯಿಕ ಅರೆಯುವಕಲ್ಲಿನಲ್ಲಿನ ಸಹಾಯದಿಂದಲೇ ತಯಾರಿಸಿದ ಪದಾರ್ಥಗಳೇ ಇಷ್ಟ. ಇಂತಹ ಪದ್ಧತಿ ಇಂದು ಹಳ್ಳಿಗಳಲ್ಲಿ ಕೆಲವೊಂದೆಡೆ ಮಾತ್ರ ಉಳಿದುಕೊಂಡಿದೆ.
 ಉತ್ತಮ ವ್ಯಾಯಾಮ
ಅರೆಯುವಕಲ್ಲುಘಿಗಳ ಬಳಕೆ ನಮ್ಮ ದೈಹಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಇವುಗಳ ಬಳಕೆಯಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಇದರಿಂದ ದೈಹಿಕವಾಗಿ ಸದೃಢರಾಗಿರುತ್ತೇವೆ. ಕಾಲಕಾಲಕ್ಕೆ ಹಸಿವು, ನಿದ್ದೆ ಸರಿಯಾಗಿ ಬರಲು ಕೂಡ ಇದು ಸಹಕಾರಿಯಾಗಿದೆ. ಅಲ್ಲದೆ ತೋಳು ಬಲವೃದ್ಧಿಸುತ್ತದೆ.

ಗುರುವಾರ, ಸೆಪ್ಟೆಂಬರ್ 20, 2012

ವೈವಿಧ್ಯ ಶೇವಿಂಗ್ಸೆಟ್ಗಳ ಬಳಕೆ


ಇದು ಆಧುನಿಕ ಯುಗ. ಇಲ್ಲಿ ಪ್ರತಿಯೊಂದು ಕೆಲಸ, ವಸ್ತುಗಳಲ್ಲಿಯೂ ವಿವಿಧತೆ ಇದೆ. ನಮ್ಮ ದೈನಂದಿನ ಬಳಕೆಗೆ ಬೇಕಾಗುವ ಎಲ್ಲ ವಸ್ತುಗಳಲ್ಲಿಯೂ ಆಯ್ಕೆಗೆ ಬಹಳಷ್ಟು ಅವಕಾಶಗಳಿವೆ. ಯಾಕೆಂದರೆ ಒಂದು ನಿರ್ದಿಷ್ಟ ಕೆಲಸಕ್ಕೆ ಉಪಯೋಗಿಸಲ್ಪಡುವ ವಸ್ತುವನ್ನು ಹಲವಾರು ಕಂಪೆನಿಗಳು ಬೇರೆಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಲ್ಲಿ ಉತ್ಪಾದಿಸಿ ಜನರಿಗೆ ಒದಿಗಿಸುತ್ತಿವೆ. ಹಾಗೆ ಇಂದು ಶೇವಿಂಗ್ಸೆಟ್ಗಳಲ್ಲಿಯೂ ಭಿನ್ನತೆ, ವಿವಿಧತೆಗಳನ್ನು ಕಾಣಬಹುದು.
ಗಂಡಸರು ಆಗಾಗ ದಿನಕ್ಕೆ ಹಲವು ಬಾರಿ ತಮ್ಮ ಗಡ್ಡ ನೇವರಿಸುತ್ತಾ, ಕನ್ನಡಿಯಲ್ಲಿ ಆದರ ಸೌಂದರ್ಯವನ್ನು ವೀಕ್ಷಿಸುವುದು ಸಾಮಾನ್ಯ. ಕೆಲವರು ಪ್ರತಿದಿನ ಶೇವ್ ಮಾಡುತ್ತಾರೆ. ಇನ್ನು ಕೆಲವರು ಎರಡು, ಮೂರು, ನಾಲ್ಕು ದಿನಗಳಿಗೊಮ್ಮೆ, ಮತ್ತೆ ಕೆಲವರು ವಾರಕ್ಕೆ ಒಮ್ಮೆ ಶೇವ್ ಮಾಡುತ್ತಾರೆ. ಗಡ್ಡ ಬರುವ ಮೊದಲು ಎಲ್ಲ ಹುಡುಗರಿಗೂ ತಮ್ಮ ಹಿರಿಯರು ಶೇವ್ ಮಾಡುವುದನ್ನು ನೋಡಿ ತಾವು ಶೇವ್ ಮಾಡಬೇಕೆಂಬ ಆಸೆ. ಆದರೆ ಹೆಚ್ಚಿನವರಿಗೆ ಗಡ್ಡ ಬಂದು ಶೇವ್ ಮಾಡಲು ಪ್ರಾರಂಭಿಸಿ ಕೆಲವೇ ಸಮಯದಲ್ಲಿ ಅದೊಂದು ಸಮಸ್ಯೆಯಾಗಿ ಬಿಡುತ್ತದೆ. ಕಾಲಬದಲಾದಂತೆ ಅಂತಹ ಸಮಸ್ಯೆಯನ್ನು ಬಗೆಹರಿಸಲು ನಾನ ರೀತಿಯ ಶೇವಿಂಗ್ಸೆಟ್ಗಳು ಬಳಕೆಗೆ ಬಂದುವು. ಸುಲಭ ಶೇವಿಂಗ್ಗೆ ಸಹಕರಿಸುವುದರ ಜೊತೆಗೆ ಮಾರುಕಟ್ಟೆ ಪೈಪೊಟಿ ನೀಡುವುದೆ ಅವುಗಳ ಉದ್ದೇಶ. ಅದೊಂದು ಕಾಲವಿತ್ತು ಶೇವ್ ಮಾಡಲು ಹರಿತವಾದ ಚೂರಿಯನ್ನು ಬಳಸುತ್ತಿದ್ದರು. ಶೇವ್ ಮಾಡುವುದಕ್ಕಾಗಿಯೇ ವಿಶೇಷವಾಗಿ ಉಳೆ ಅಥವಾ ಜಿಂಕೆಯ ಕೋಡನ್ನು ಬಳಸಿ ಚೂರಿಗೆ ಹಿಡಿಯನ್ನು ತಯಾರಿಸುತ್ತಿದ್ದರು. ಅದು ಬಹಳ ಹರಿತವಾಗಿರುತ್ತಿತ್ತು. ಇದು ಕತೆಯಲ್ಲ ನಾನು ಚಿಕ್ಕವನಿದ್ದಾಗ ನನ್ನ ಅಜ್ಜ ಕೂಡ ಚೂರಿಯಿಂದಲೇ ಶೇವ್ ಮಾಡುತ್ತಿದ್ದರು. ಒಂದು ಸ್ಲೇಟಿನ ತುಂಡಿಗೆ ತೆಂಗಿನ ಎಣ್ಣೆ ಸವರಿ ಅಜ್ಜ ಚೂರಿಯನ್ನು ಮಸೆದು ಹರಿತಗೊಳಿಸುತ್ತಿದ್ದರು. ಆ ಚೂರಿಯನ್ನು ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸುತ್ತಿರಲಿಲ್ಲ.
ಸಾಮಾನ್ಯವಾಗಿ ಹೇರ್ಕಟ್ಟಿಂಗ್ ಶೋಪ್ಗಳಲ್ಲಿ ಒಂದೇ ರೀತಿಯ ಬಾಳನ್ನು ಶೇವ್ ಮಾಡಲು ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಹೇರ್ಕಟ್ಟಿಂಗ್ ಶೋಪ್ಗಳು ಇರಲಿಲ್ಲಘಿ. ಕಟ್ಟಿಂಗ್ ಮಾಡುವ ವ್ಯಕ್ತಿಗಳು ಮನೆ ಮನೆಗೆ ಬಂದು ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದರು. ಆದರೆ ಅವರು ಕೂಡ ಶೇವ್ ಮಾಡಲು ಚೂರಿಯನ್ನೇ ಬಳಸುತ್ತಿದ್ದರು. ಕಾಲ ಬದಲಾದಂತೆ ಅವರು ಕೂಡ ಬಾರ್ಬರ್ ಶೋಪ್ಗಳಲ್ಲಿ ಬಳಸುವ ಬಾಳನ್ನೇ ಉಪಯೋಗಿಸ ತೊಡಗಿದರು. ಈಗ ಮನೆಗಳಿಗೆ ಬಂದು ಶೇವ್ ಮಾಡುವ ಕ್ರಮವೇ ಇಲ್ಲವಾಗಿದೆ.ಮೊದಲು ಸಿಂಗಲ್ ಬ್ಲೇಡ್ ಬಳಸಿ ಶೇವ್ ಮಾಡಬಹುದಾದಂತಹ ಸೆಟ್ಗಳು ಬಂದುವು. ಅನಂತರ ಕ್ಲೀನ್ ಶೇವ್ ಮಾಡುವವರಿಗೆ ಹೆಚ್ಚು ಸಹಕಾರಿಯಾಗುವ ಎರಡು ಬ್ಲೇಡಿನ ಸೆಟ್ಗಳು ಬಳಕೆಗೆ ಬಂದುವು. ಎರಡು ಬ್ಲೇಡಿನ ಸೆಟ್ಗಳಲ್ಲಿ ಮೊದಲಿಗೆ ಬ್ಲೇಡ್ ಬದಲಾಯಿಸಲು ಅವಕಾಶವಿರಲಿಲ್ಲ. ತದನಂತರ ಅವುಗಳಲ್ಲಿಯೂ ಬ್ಲೇಡ್ ಬದಲಾಯಿಸಲು ಸಾಧ್ಯವಿರುವ ಸೆಟ್ಗಳು ಮಾರುಕಟ್ಟೆ ಪ್ರವೇಶಿಸಿದವು. ಆರಂಭದಲ್ಲಿ ಎರಡು ಬ್ಲೇಡಿನ ಸೆಟ್ಗಳ ಬೆಲೆ ವಿಪರೀತವಾಗಿತ್ತು.
ಆಧುನಿಕತೆ ಬೇಳೆದಂತೆ ಹಲವುರು ಶೇವಿಂಗ್ಸೆಟ್ ಉತ್ಪಾದನಾ ಕಂಪೆನಿಗಳು ಹುಟ್ಟಿಕೊಂಡುವು. ಇದರಿಂದ ಶೇವಿಂಗ್ಸೆಟ್ಗಳ ಮಾರಾಟದಲ್ಲಿ ಪೈಪೊಟಿ ಏರ್ಪಟ್ಟು ಬೆಲೆ ನಿಧಾನವಾಗಿ ಇಳಿಯ ತೊಡಗಿತು. ಇತ್ತೀಚೆಗೆ ಬಹಳ ಆರಾಮದಾಯಕವಾಗಿ ಶೇವ್ ಮಾಡುವ ಉದ್ದೇಶದಿಂದ ಮೂರು, ನಾಲ್ಕು ಬ್ಲೇಡನ್ನು ಒಮ್ಮೆಲೆ ಬಳಸಬಹುದಾದಂತಹ ಸೆಟ್ಗಳು ದೊರೆಯುತ್ತಿವೆ. ಇನ್ನೊಂದೆಡೆ ಶೇವಿಂಗ್ನಲ್ಲಿ ಮಾನವ ಶ್ರಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಬಳಕೆಗೆ ಬಂದ ವಿದ್ಯುತ್ ಉಪಯೋಗಿಸಿ ಕಾರ್ಯ ನಿರ್ವಹಿಸುವ ಶೇವಿಂಗ್ಸೆಟ್ಗಳು ಜನರನ್ನು ಆಕರ್ಷಿಸುತ್ತಿವೆ. ಆದರೆ ಅವುಗಳನ್ನು ಬಳಸುವಾಗ ಎಚ್ಚರಿಕೆ ಅತೀ ಅಗತ್ಯ. ಇಂದು ದೊರೆಯುವ ವೈವಿಧ್ಯಮಯ ಶೇವಿಂಗ್ಸೆಟ್ಗಳನ್ನು ಬಳಸಿ ಗಂಡಸರು ಕ್ಲೀನ್ ಶೇವ್ ಮಾಡುವ ಬದಲು ಗಡ್ಡವನ್ನು ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸುತ್ತಾರೆ. ಅಂತಹ ವಿವಿಧ ವಿನ್ಯಾಸಗಳಿಗೆ ಹೊಸ ಹೆಸರುಗಳನ್ನು ಕೂಡ ಇಡಲಾಗಿದೆ.  ್ಯಾಶನ್ ಪ್ರೀಯರಿಗೆ ಹೀಗೆ ವಿವಿಧ ರೀತಿಯ ಹೊಸ ಹೊಸ ಶೇವಿಂಗ್ ಸೆಟ್ಗಳು ಲಭಿಸ ತೊಡಗಿದ್ದು ಬಹಳಷ್ಟು ಸಂತಸ ತಂದಿದೆ.

ಭಾನುವಾರ, ಜುಲೈ 29, 2012

ಚಿಂದಿಯಲ್ಲಿ ಅರಳುವ ಕಲೆ ‘ಸಾಂಝಿ’


ಉಪಯೋಗಿಸಿದ ಯಾವುದೇ ಹಾಳೆ ಅಥವಾ ಖಾಲಿ ಕಾಗದವೇ ಇರಬಹುದು ಅದನ್ನು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಹಾಕಬೇಕೆಂದಿಲ್ಲ. ಬದಲಾಗಿ ವಿವಿಧ ರೀತಿಯಲ್ಲಿ ಕತ್ತರಿಸಿ ಅವುಗಲ್ಲಿ ಬೇರೆ ಬೇರೆ ಕಲಾಕೃತಿಗಳನ್ನು ರಚಿಸಬಹುದು. ಇದು ಭಾರತದ ಪುರಾತನ ಕಲಾಪ್ರಕಾರಗಳಲ್ಲಿ ಒಂದು. ಕಾಗದವನ್ನು ಚಿತ್ತಾಕರ್ಷಕವಾಗಿ ಕತ್ತರಿಸುವ ಈ ಕಲೆಗೆ ‘ಸಾಂಝಿ’ ಎನ್ನುತ್ತಾರೆ.
ಸಾಂಝಿ ಕಲೆಯಲ್ಲಿ ಬಣ್ಣ, ಕುಂಚಗಳ ಹಂಗಿಲ್ಲದೆ ಕತ್ತರಿ, ಚಾಕುಗಳನ್ನು ಬಳಸಿ ಸುಂದರವಾದ ಆಕೃತಿಗಳನ್ನು ರಚಿಸಸಲಾಗುತ್ತದೆ. ಇದು ಕಲಾವಿದನ ಕೈಚಳಕ, ನೈಪುಣ್ಯಕ್ಕೆ ಸಾಕ್ಷಿ. ಇದರಲ್ಲಿ ಹೆಚ್ಚಿನ ದೈಹಿಕ ಶ್ರಮದ ಬಳಕೆಯಿಲ್ಲ. ಬದಲಾಗಿ ಕಲಾಗರನ ಸೃಜನಶೀಲ ಗುಣ, ಚಾಣಾಕ್ಷತನ ಹಾಗೂ ಚಾಕಚಕ್ಯತೆ ವ್ಯಕ್ತವಾಗುತ್ತದೆ.
ಭಕ್ತಿ ಮಾರ್ಗದ ಕೊಡುಗೆ 
ಈ ಕಲೆಯು ನಮ್ಮ ದೇಶದಲ್ಲಿ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ. ಉತ್ತರ ಭಾರತದಲ್ಲಿ ಸಾಂಝಿ ಕಲೆ ತುಂಬಾ ಪ್ರಾಮುಖ್ಯ ಪಡೆದಿದೆ. ಭಕ್ತಿ ಮಾರ್ಗದ ಕೊಡುಗೆಯಾಗಿ ಇದು ಬೆಳೆದು ಬಂದಿದೆ. ಈ ಕಲಾಕೃತಿಗಳನ್ನು ಮೊದಲಿಗೆ ದೇವಾಲಯಗಳಲ್ಲಿ ಮಾತ್ರ ಬಳಸುತ್ತಿದ್ದರಂತೆ. ಅನಂತರ ಸಾರ್ವಜನಿಕರ ಉಪಯೋಗಕ್ಕೂ ಬಂದಿತು. ಇಂದು ರಂಗೋಲಿ ಹಾಕಲು ಬಳಸುವ ವಿವಿಧ ವಿನ್ಯಾಸದ ತಟ್ಟೆಗಳ ಕಲ್ಪನೆ ಭಕ್ತಿ ಪಂಥದ ಕಾಲದಲ್ಲೇ ಇತ್ತು. ಆಗ ಕಾಗದಗಳನ್ನು ಕೆಲವೊಂದು ದೇವರಗಳ ಆ ಕಲಾಕಾರದಲ್ಲಿ ಕತ್ತರಿಸಿ ಅವುಗಳ ಮೇಲೆ ಬಣ್ಣದ ಹುಡಿಗಳನ್ನು ಹರಡಿ ಅನಂತರ ಕಾಗದವನ್ನು ಮೆಲ್ಲನೆ ಮೇಲಕ್ಕೆತ್ತಿ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರು.
ಹಬ್ಬ ಹರಿದಿನಗಳ ಸಂದರ್ಭ ದೇವಾಲಯಗಳಲ್ಲಿ, ಕೆಲವು ಮನೆಗಳ ಮುಂದೆಯೂ ಇವುಗಳೇ ವಿಶೇಷ ಆಕರ್ಷಣೆ. ‘ಸಾಂಝಿ’ಯಲ್ಲಿ ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸುವ ಕಲಾಕೃತಿಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದರು. ಈ ಕಲೆ ಕೇವಲ ಉತ್ತರ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ದಕ್ಷಿಣದ ಕೇರಳ, ಕರ್ನಾಟಕಗಳಲ್ಲಿಯೂ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.
ವಿದ್ಯಾವಂತರಾಗಿರಬೇಕಿಲ್ಲ 
ಸಾಂಝಿ ಕಲಾವಿದರಾಗಲು ಯಾವುದೇ ಶಾಲೆ, ಕಾಲೇಜುಗಳಲ್ಲಿ ಓದಿರಬೇಕಿಲ್ಲ. ಇದು ವ್ಯಕ್ತಿಯ ಆಸಕ್ತಿ, ಚಿಂತನೆ ಮತ್ತು ಕೈಚಳಕವನ್ನು ಅವಲಂಭಿಸಿದೆ. ಎಂಥವರಿಗೂ ಇದನ್ನು ಸುಲಭವಾಗಿ ಅಭ್ಯಸಿಸಬಹುದು. ಈ ಕಲೆಯನ್ನು ಯಾವುದೇ ಒಂದು ವರ್ಗ ಅಥವಾ ಜನಾಂಗಕ್ಕೆ ಸೇರಿದವರೇ ಅಭಿವೃದ್ಧಿಪಡಿಸಿರುವುದಲ್ಲ. ಇದು ಜನಪದ ಕಲೆಯಾಗಿದ್ದು, ಒಬ್ಬರಿಂದೊಬ್ಬರಿಗೆ ಕಲಿಸಲ್ಪಟ್ಟು, ಮುಂದುವರಿದುಕೊಂಡು ಬಂದಿದೆ.
 ಮದುವೆ, ಮುಂಜಿಗಳ ಸಂದರ್ಭ ಮನೆ ಮಂಟಪಗಳ ಅಲಂಕಾರಕ್ಕಾಗಿಯೂ ಈ ಕಲೆಯನ್ನು ಬಳಸುತ್ತಾರೆ. ಉತ್ತರ ಕನ್ನಡದ ಕುಮುಟಾ, ಕಾರವಾರ, ಶಿರಸಿ, ಸಿದ್ದಾಪುರ ಮುಂತಾದೆಡಡೆಗಳಲ್ಲಿ ಇದನ್ನು ‘ಪರ್ಪರೆ’ ಎಂದು ಕರೆಯುತ್ತಾರೆ. ಇಂತಹ ಅನೇ ಕಲೆಗಳು ಭಾರತದ ವಿವಿಧೆಡೆಗಳಲ್ಲಿವೆ. ಆದರೆ ಆಧುನೀಕರಣದಿಂದಾಗಿ ಅವು ಇಂದು ಮೂಲೆ ಸೇರಿ ನಶಿಸಿ ಹೋಗುತ್ತಿವೆ. ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತುಗಳಾದ ಅಂತಹ ಕಲೆಗಳನ್ನು ಗುರುತಿಸಿ, ಉಳಿಸಿ, ಬೆಳೆಸುವತ್ತ ಸರಕಾರಗಳು ಗಮನ ಹರಿಸಬೇಕಿದೆ.
ವಿವಿಧ ರಾಷ್ಟ್ರಗಳಲ್ಲಿ ‘ಸಾಂಝಿ’
ಕಲೆಯು ಆಯಾ ದೇಶಗಳ ಸಂಸ್ಕೃತಿಯ ಪ್ರತೀಕ. ಭಾರತದ ಜನಪದ ಕಲೆಯೆಂದೇ ಗುರುತಿಸಲ್ಪಟ್ಟಿರುವ ‘ಸಾಂಝಿ’ಯನ್ನು ಹೋಲುವ ಅನೇಕ ಕಲಾಪ್ರಕಾರಗಳು ಹಲವಾರು ದೇಶಗಳಲ್ಲಿ ಕಾಣಬಹುದು. ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿವೆ. ಚೀನಾ ಹಾಗೂ ಜಪಾನ್ಗಳಲ್ಲಿ ‘ಕಿರಿ-ಗಾಮಿ’, ‘ಕಿಪಿ-ಇ’, ‘ಮನ್-ಕಿರಿ’, ‘ಸೆನ್-ಶಿ’, ‘ಜಿಯಾನ್-ಝಿ’ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿವೆ. ಪೋಲ್ಯಾಂಡ್ನಲ್ಲಿ ‘ವಿಚಿನಾನಿಕಿ’, ಸ್ಪೇನ್ನಲ್ಲಿ ‘ಆಪೆಲ್ ಪಿಕಡೊ’ ಫ್ರಾನ್ಸ್ನಲ್ಲಿ ‘ಡೆಕೋಪರ್’, ಅಮೇರಿಕಾದಲ್ಲಿ ‘ಪೆಪಿಟೋಮನಿ’ ಎಂಬ ಹೆಸರಿನಲ್ಲಿ ಈ ಕಲೆ ಪ್ರಚಲಿತದಲ್ಲಿದೆ.

ಕಾವಿಯನುಟ್ಟು ದೀಕ್ಷೆಯ ತೊಟ್ಟು

ಕಾವಿಯನುಟ್ಟು
ದೀಕ್ಷೆಯ ತೊಟ್ಟು
ಕಾಮ, ಕ್ರೋದವ ಬದಿಯಲಿ ಬಿಟ್ಟು
ಭಗವಂತನತ್ತ ದೃಷ್ಟಿಯ ನೆಟ್ಟು

ಕಾಶಿಗೆ ಯಾತ್ರೆ ಹೋಗೊಣ
ಬದುಕನು ಸಾರ್ಥಕ ಗೊಳಿಸೋಣ
ವಿಶ್ವನಾಥನ ನೆನೆಯೋಣ
 ಕಷ್ಟ ಕಾರ್ಪಣ್ಯಗಳ ಮರೆಯೋಣ

ಪವಿತ್ರ ಕ್ಷೇತ್ರಗಳಿಗೆ ಪ್ರದಕ್ಷಿಣೆ ಹಾಕಿ
ಜಂಜಾಟದ ಜೀವನ ಕಳೆಯೋಣ
ಪುಣ್ಯ ಭೂಮಿಯ ಸ್ಪರ್ಶಿಸಿ ನಾವು
ಸುಂದರ ಮೂರ್ತಿಯ ಕಣ್ತುಂಬೋಣ

ವೃದ್ಧಾಪ್ಯದಲಿ ವೃತಾಚರಣೆ ಮಾಡಿ
ಆರೋಗ್ಯ ಭಾಗ್ಯವ ಪಡೆಯೋಣ
ಆಸೆ, ಆಕಾಂಕ್ಷೆಗಳಿಗೆಲ್ಲ ಲಗಾಮು ಹಾಕಿ
ತೀರ್ಥಾಟನೆ ಗೈದು ಬಾಳಲಿ ನೆಮ್ಮದಿ ಗಳಿಸೋಣ

ಹೀರೆಯ ಹಿರಿತನ


ಹೇರಳ ಪೌಷ್ಟಿಕಾಂಶ ಭರಿತ ಹಸುರು ತರಕಾರಿ ಹೀರೆ. ಭಾರತವೇ ಹೀರೆ ಕಾಯಿಯ ಮೂಲ ಎಂದು ಹಲವ ಸಸ್ಯಶಾಸ್ತ್ರಜ್ಞರು ಅಭಿಪ್ರಾಯಿಸಿದರೆ, ಕೆಲವರು ಮಾತ್ರ ಭಾರತ, ಇಂಡೋನೇಶ್ಯಾ, ಸುಡಾನ್, ಜಾವಾದ್ವೀಪಗಳು ಕೂಡ ಇದರ ತವರು ಎಂದಿದ್ದಾರೆ. ಸಸ್ಯಶಾಸ್ತ್ರದ ಪ್ರಕಾರ ಸೋರೆ, ಹಾಗಲದಂತೆ ಹೀರೆಯು ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಹೀರೆಯ ಬಳ್ಳಿಗೂ ಸೋರೆಯ ಬಳ್ಳಿಗೂ ಯಾವುದೇ ಸಾಮ್ಯತೆ ಇಲ್ಲ. ದರೆ ಹಾಗಲದ ಬಳ್ಳಿ, ಎಲೆ, ಬೀಜಕ್ಕೂ ಸ್ವಲ್ಪ ಹೋಲಿಕೆ ಇದೆ. ಕಾಯಿಯ ಆಕಾರ, ರುಚಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇದರ ಬಳ್ಳಿ, ಎಲೆ, ಕಾಯಿ ಎಲ್ಲವೂ ಕಡು ಹಸುರು ಬಣ್ಣದಿಂದ ಕೂಡಿರುತ್ತವೆ. ಕಾಯಿ ಉದ್ದವಾಗಿದ್ದು, ತುದಿ ಸ್ವಲ್ಪ ಉಬ್ಬಿರುತ್ತವೆ. ಕಾಯಿಗಳಲ್ಲಿ ಉದ್ದಕ್ಕೆ ಉಬ್ಬಿದ ಏಣು, ಅಗಲವಾದ ಗೀರುಗಳಿರುತ್ತವೆ. ಕಾಯಿಗಲ ಮೇಲ್ಮೈ ಒರಟಾಗಿರುತ್ತವೆ. ಬಲಿತ ಬೀಜಗಳು ಕಪ್ಪು ಬಯ ಹೊಂದಿದ್ದು, ಸಿಪ್ಪೆ ಗಟ್ಟಿಯಾಗಿರುತ್ತವೆ.
ಪೌಷ್ಟಿಕಾಂಶ: ಮಾನವನ ಶರೀಕ್ಕೆ ಅತ್ಯಗತ್ಯವಾದ ಪ್ರೊಟೀನ್, ಶರ್ಕರಪಿಷ್ಟ, ರಂಜಕ, ಕೊಬ್ಬು, ಕಬ್ಬಿಣ, ಥಯಮಿನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ರೈಬೋಫ್ಲೆವಿನ್, ‘ಸಿ’ ಜೀವಸತ್ವ ಮುಂತಾದವುಗಳು ಹೀರೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿದೆ.
ಔಷಧೀಯ ಗುಣ: ಮೂಲವ್ಯಾದಿ, ಸಕ್ಕರೆ ಕಾಯಿಲೆ ಇರುವವರು ಹೀರೆಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಹೀರೆಯ ಎಲೆಗಳ ರಸವನ್ನು ಹಚ್ಚುವುದರಿಂದ ಗಾಯ ವಾಸಿಯಾಗುವುದು. ಹೀರೆ ಕಾಯಿಯ ಬೀಜ ಮತ್ತು ಮಜ್ಜಿಗೆ ಸೇವನೆಯಿಂದ ಆಮಶಂಕೆ ಶಮನಕ್ಕೆ ಸಹಕಾರಿ.
ತಳಿ: ಹೀರೆಕಾಯಿಯಲ್ಲಿ ಸ್ಥಳೀಯ ತಳಿಗಳಲ್ಲದೆ ಸಂಶೋಧನೆಗಲ ಮೂಲಕ ಕೆಲವೊಂದು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೂಸಾನಸ್ದಾರ್: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಇದರಲ್ಲಿ ರುಚಿ, ಫಸಲೂ ಅಧಿಕ. ಸಿ.ಓ.-1: ಇದನ್ನು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ ಸಂಶೋಧಿಸಿದೆ.
ಅಡುಗೆ: ಹೀರೆಕಾಯಿಯನ್ನು ಬಳಸಿ ಬೇರೆ ಬೇರೆ ತರದ ಹಲವಾರು ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಪಲ್ಯ, ಮೇಲೋಗರ, ಸಾಂಬಾರು, ಪೋಡಿ, ಹೀರೆಕಾಯಿ ಚಿಪ್ಪೆಯ ಚಟ್ನಿ, ತಂಬ್ಳಿ ಇತ್ಯಾದಿ.
 ಕೃಷಿ: ಹೀರೆ ವರ್ಷದ ಎಲ್ಲ ಕಾಲದಲ್ಲೂ ನಾಟಿ ಮಾಡಬಹುದಾದ ಬೆಳೆ. ಆದರೆ ಉಷ್ಣ ಹವಾಗುಣ ಬೆಳೆಗೆ ಉತ್ತಮ. ಸಾಮಾನ್ಯವಾಗಿ ಜೂನ್-ಜುಲೈಯಲ್ಲಿ ಇದರ ನಾಟಿಮಾಡುತ್ತಾರೆ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಕಪ್ಪು ಅಥವಾ ಕೆಂಪು ಗೊಡ್ಡು ಮಣ್ಣು ಹೀರೆ ಕೃಷಿಗೆ ಸೂಕ್ತ. ಸುಮಾರು 2-21/2 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ: ಹೀರೆ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಪ್ರಮೇಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುವುಣಿಸುವುದು ಅಗತ್ಯ.

ಹೊರೆಯಲ್ಲ ಸೋರೆ


ಸಸ್ಯಶಾಸ್ತ್ರದ ಪ್ರಕಾರ ಸೋರೆ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು, ಬಳ್ಳಿಯಂತೆ ಬೆಳೆಯುವ ಗಿಡವಾಗಿದೆ. ಸೋರೆ ಬಳ್ಳಿಯು ಬಿಳಿ ಹಸುರ ಬಣ್ಣದಿಂದ ಕೂಡಿದ್ದು, ಮೇಲ್ಮೈ ನಯವಾದ ಹೊಳಪಿನ ಹೊದಿಕೆ ಹೊಂದಿರುತ್ತ. ಇದು ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇತರ ಬೆಳೆಗಳಿಗೆ ಹೋಲಿಸಿದರೆ ಸೋರೆ ಕೃಷಿ ಹೊರೆಯಲ್ಲ. ಇದೊಂದು ಸುಲಭ ಮತ್ತು ಕಡಿಮೆ ಖರ್ಚಿನ ಬೆಳೆಯಾಗಿದೆ.
ಸೋರೆಯ ಮೂಲದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ದಕ್ಷಿಣ ಭಾರತ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಬಳಸುತ್ತಾರೆ.
ಔಷಧೀಯ ಗುಣ: ಕೆಲವೊಂದು ಔಷಧದ ತಯಾರಿಯಲ್ಲಿ ಸೋರೆಕಾಯಿಯನ್ನು ಬಳಸಲಾಗುತ್ತದೆ. ವೈದರು ಕೆಲ ಕಾಯಿಲೆಗಳಿಗೂ ಸೋರೆಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಲು ಸೂಚಿಸುತ್ತಾರೆ.
ಪೌಷ್ಟಿಕಾಂಶ:  ಕೊಬ್ಬು, ಪೊಟ್ಯಾಶಿಯಂ, ಕಬ್ಬಿಣ, ಶರ್ಕರಪಿಷ್ಟ, ಪ್ರೊಟೀನ್, ಖನಿಜಾಂಶ, ಕ್ಯಾಲ್ಸಿಯಂ, ರೈಬೋಫ್ಲೆವಿನ್, ರಂಜಕ, ‘ಸಿ’ ಜೀವಸತ್ವ ಇತ್ಯಾದಿ ಪೌಷ್ಟಿಕಾಂಶಗಳು ಹೇರಳವಾಗಿದೆ.
ಅಡುಗೆ: ಸೋರೆಕಾಯಿಯನ್ನು ಬಳಸಿ ಹಲವಾರು ರುಚಿಗಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಎಳೆಯ ಸೋರೆಕಾಯಿ ಪದಾರ್ಥಕ್ಕೆ ಉತ್ತಮ. ಮುಖ್ಯವಾಗಿ ಪಲ್ಯ, ಮೇಲೋಗರ, ಹುಳಿ ಸಾರು, ಸಾಂಬಾರು, ದೋಸೆ, ಪಾಯಸ, ಕೊಟ್ಟಿಗೆ (ಬಾಲೆ ಎಲೆ ಕಡುಬು) ಇತ್ಯಾದಿಗಳನ್ನು ತಯಾರಿಸುತ್ತಾರೆ.
ಕೃಷಿ:  ಸೋರೆ ಕೃಷಿಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಉತ್ತಮ. ಇದು ಸಾಮಾನ್ಯವಾಗಿ ಉಷ್ಣ, ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೈತ್ಯ ಹವಾಗುಣ ಈ ಬೆಳೆಗೆ ಅಷ್ಟು ಸಹಕಾರಿಯಲ್ಲ. ದೀರ್ಘ ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆಯಲ್ಲಿ ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ. ಸೋರೆ ಕೃಷಿಗೆ ಜೂನ್-ಜುಲೈ, ಅಕ್ಟೋಬರ್-ನವೆಂಬರ್ ಅಥವಾ ಫೆಬ್ರವರಿ-ಮಾರ್ಚ್ ತಿಂಗಳುಗಳು ಸೂಕ್ತ ಸಮಯ. ಸುಮಾರು 2 ಫೀಟ್ ಅಗಲದ ಮಡಿಗಳನ್ನು ತಯಾರಿಸಿ. ಮಡಿ ತಯಾರಿ ವೇಳೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1 1/2 ರಿಂದ 2 ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಬೀಜ ಬಿತ್ತನೆಯ ಒಂದು ವಾರದಲ್ಲಿ ಗಿಡ ಮೊಳಕೆ ಬರುತ್ತವೆ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬಹುದು. ಬಳ್ಳಿ ಹಬ್ಬಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶ ಬೇಕಾದಷ್ಟಿದ್ದರೆ ನೆಲದಲ್ಲಿಯೇ ಬಳ್ಳಿ ಹಬ್ಬಲು ಬಿಡಬಹುದು. ಸುಮಾರು ಎರಡು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಹವಾಮಾನವನ್ನು ಅನುಸರಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
ಗೊಬ್ಬರ:  ಸೋರೆ ಕೃಷಿಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸುತ್ತಾರೆ. ಅಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.

ಕೊಯ್ಲು: ಕಾಯಿಳತಾಗಿರುವಾಗಲೇ ಕೊಯ್ಲು ಮಾಡಬೇಕು. ಕಾಯಿಗಳ ಮೇಲೆ ಉಗುರಿನ ತುದಿಯಿಂದ ಚುಚ್ಚಿದರೆ ಬಹಳ ಬೇಗನೆ ಗಾಯಗಳಾದರೆ ಅದು ಎಳತಾಗಿದೆ ಎಂದರ್ಥ. ಎಳತು ಕಾಯಿಗೆ ಹೆಚ್ಚಿನ ಬೇಡಿಕೆ ಇರೋದು.
ತಳಿ:  ಸಾಮಾನ್ಯವಾಗಿ ಸೋರೆಕಾಯಿಯಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು ದುಂಡಗಿನದ್ದು, ಇನ್ನೊಂದು ಉದ್ದ ದುಂಡಗಾಗಿರುವುದು. ಕೃಷಿ ವಿಜ್ಞಾನಿಗಳು ಸೋರೆಕಾಯಿಯಲ್ಲೂ ಹಲವಾರು ತಳಿಗಳನ್ನು ಸಂಶೋಧಿಸಿದ್ದಾರೆ. ಮುಖ್ಯವಾಗಿ ಪೂಸಾಸಮ್ಮರ್ ಪ್ರಾಲಿಫಿಕ್ ಲಾಂಗ್, ಪೂಸಾಪ್ರಾಲಿಫಿಕ್ ರೌಂಡ್, ಅರ್ಕಾಬಹಾರ್, ಪೊಸಾಮೇಘದೂತ್, ಪೂಸಮಂಜರಿ ಇತ್ಯಾದಿ.
ಆಟಿಕೆ ತಯಾರಿ: ಸೋರೆಕಾಯಿ ಬಿಳಿ ಹಸುರು ಬಣ್ಣದಿಂದ ಕೂಡಿದ್ದು, ಕಾಯಿ ಬಲಿತಂತೆ ಭಾರ ಕಡಿಮೆಯಾಗುವುದು. ಒಣಗಿದಾಗ ಒಳಭಾಗ ಟೊಳ್ಳಗಾಗುವುದು. ಇದರ ಬೀಜ ಹಲ್ಲಿನ ಆಕಾರ ಹೊಂದಿದೆ. ಹಳ್ಳಿಗಳಲ್ಲಿ ಮಕ್ಕಳು ಈಜು ಕಲಿಯಲು ಟೊಳ್ಳಗಾದ ಸೋರೆಬುರುಡೆಯನ್ನು ನಡುವಿಗೆ ಕಟ್ಟಿಕೊಳ್ಳುವುದುಂಟು. ಸೋರೆಬುರುಡೆಯಿಂದ ತಂಬೂರಿಯಂತಹ ಆಟಿಕೆಗಳನ್ನು ತಯಾರಿಸಲಾಗುತ್ತದೆ.

ಹರಿವೆ ಹಿರಿಮೆ

ಹರಿವೆ ಉಷ್ಣವಲಯದಲ್ಲಿ ಬೆಳೆಯುವು ಸೊಪ್ಪು ತರಕಾರಿ. ಇದರಲ್ಲಿ ಅಧಿಕವಾಗಿರುವ ಪೌಷ್ಟಿಕಾಂಶ, ಔಷಧೀಯ ಗುಣ ದೇಹಾರೋಗ್ಯ ಕಾಪಾಡಲು ಸಹರಕಾರಿ. ಇದು ಹರಿವೆಯ ಹಿರಿಮೆ ಕೂಡ. ಹರಿವೆ ಕಾಂಡವು ಅಷ್ಟು ಗಟ್ಟಿಯಾಗಿರುವುದಿಲ್ಲ. ಗಿಡದಲ್ಲಿ ಹಲವಾರು ಕವಲೊಡೆದು ರೆಂಬೆಗಳು ಹುಟ್ಟಿಕೊಳ್ಳುವುದು. ಇದರಿಂದ ಪೊದೆಯಂತೆ ಹರಡಿ ಬೆಳೆಯುವುದು.
ಮೂಲ: ಹರಿವೆ ಕೃಷಿಯನ್ನು ವರ್ಷದ ಎಲ್ಲ ಕಾಲದಲ್ಲೂ ಮಾಡಬಹುದು. ಮಳೆಗಾಲ ಇದಕ್ಕೆ ಹೆಚ್ಚು ಉತ್ತಮ. ಇದು ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣದ ರಾಜ್ಯಗಳಲ್ಲಿ ಕಂಡುಬರುವುದರಿಂದ ಸ್ವದೇಶಿ ಮೂಲದ್ದು ಎಂದು ಹೆಚ್ಚಿನ ಮಂದಿ ಅಂದುಕೊಂಡಿದ್ದಾರೆ. ಆದರೆ ಇದು ದೂರದ ದಕ್ಷಿಣ ಅಮೆರಿಕಾದ ಮೆಕ್ಷಿಕೊ ಮೂಲದ್ದಾಗಿದೆ. ಅಲ್ಲಿ ಇದನ್ನು ವಾರ್ಷಿಕ ಕೃಷಿಯಾಗಿ ಬೆಳೆಯುತ್ತಾರೆ.
ವೈವಿಧ್ಯ ಹೆಸರು:   ಹರಿವೆ ‘ಅಮರಾಂಥೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು ಹಲವಾರು ಹೆಸರುಗಳನ್ನು ಹೊಂದಿದೆ. ಮುಖ್ಯವಾಗಿ ಹರಿವೆ, ಹರವಿ, ಹರ್ಗಿ, ದಂಟಿನ ಸೊಪ್ಪು, ಕೀರೇ ಸೊಪ್ಪು, ರಾಜಗೀರ್, ಕಿರ್ಕಸಾಲಿ ಇತ್ಯಾದಿ. ಭಾರತದಲ್ಲಿ ಮಾತ್ರವಲ್ಲದೆ ಮಲೇಶಿಯಾ, ತೈವಾನ್, ಸೌತ್ ಫೆಸಿಪಿಕ್ಗಳಲ್ಲಿ ಇದು ಕಾಣ ಸಿಗುತ್ತದೆ.
ವಿಧ:   ಹರಿವೆಯಲ್ಲಿ ಮುಖ್ಯವಾಗಿ ಬಣ್ಣಗಳ ಆಧಾರದಲ್ಲಿ ಎರಡು ವಿಧ. ಇಂದು ಕೆಂಪು ಹರಿವೆ, ಇನ್ನೊಂದು ಬಿಳಿ ಹರಿವೆ. ಇವುಗಳಲ್ಲದೆ ಅದರ ಎಲ್ಲೆಗಳಲ್ಲಿನ ವ್ಯತ್ಯಾಸದ ಹಿನ್ನಲೆಯಲ್ಲಿ ಆರು ವಿಧಗಳನ್ನು ಗುರುತಿಸಲಾಗಿದೆ. ಹಳ್ಳಿಗಳಲ್ಲಿ ಚಿಲಕರಿವೆ, ಗೊದ್ದರಿವೆ, ಮುಳ್ಳರಿವೆ ಮುಂತಾದ ಬಗೆಗಳನ್ನು ನೋಡಬಹುದು. ಪೌಷ್ಟಿಕಾಂಶ: ಹರಿವೆಯಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ, ಜೀವಸತ್ವಗಳು, ವಿಟಮಿನ್, ಕ್ಯಾಲ್ಸಿಯಂ ಇತ್ಯಾದಿಗಳಿವೆ. ಇದರಿಂದ ಹರಿವೆ ನಮ್ಮ ದೇಹಕ್ಕೆ ಆಹಾರ ರೂಪದ ವೈದ್ಯ ಕೂಡ ಹೌದು.
ಅಡುಗೆ: ಹರಿವೆ ಸೊಪ್ಪು, ದಂಡನ್ನು ಬಳಸಿ ವಿವಿಧ ರೀತಿಯ ಪದಾರ್ಥಗಳನ್ನು ತಯಾರಿಸುತ್ತಾರೆ. ಮುಖ್ಯವಾಗಿ ಪಲ್ಯ, ಸಾರು, ಸಾಸಿವೆ ಇತ್ಯಾದಿ. ಹರಿವೆಯ ಬೀಜವನ್ನು ಧಾನ್ಯದ ತೆನೆಯಾಗಿ ಬಳಸುತ್ತಾರೆ. ಅದನ್ನು ಒಣಗಿಸಿ, ಹಿಟ್ಟು ತಯಾರಿಸಿ ಅದರಿಂದ ಹಪ್ಪಳ, ರೊಟ್ಟಿ ಮೊದಲಾದವುಗಳನ್ನು ತಯಾರಿಸುತ್ತಾರೆ.
ಕೃಷಿ:  ಹರಿವೆ ಕೃಷಿಗೆ ಕಪ್ಪು, ಕೆಂಪು ಗೊಡ್ಡು ಮಣ್ಣು, ಮರಳು ಮಿಶ್ರಿತ ಗೊಡ್ಡು ಮಣ್ಣು ಸೂಕ್ತ. ಸ್ಥಳಾವಕಾಶದ ಕೊರತೆ ಇದ್ದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ ಕೃಷಿ ಮಾಡಬಹುದು. ಒಂದರಿಂದ ಒಂದೂವರೆ ಅಂಗುಲ ಎತ್ತರದ ಮಡಿಗಳನ್ನು ತಯಾರಿಸಿ ಅದರಲ್ಲಿ ಬೀಜ ಬತ್ತನೆ ಮಾಡಬೇಕು. ಮಡಿ ತಯಾರಿಸು ವೇಳೆ ಮಣ್ಣಿಗೆ ಒಣಗೊಬ್ಬರ ಮಿಶ್ರ ಮಾಡಿದರೆ ಉತ್ತಮ. ಉದ್ದದ ಸಾಲುಗಳಾಗಿ ಅಥವಾ ಅಗಲವಾಗಿ ಮಣ್ಣು ಹರಡಿ ಕೂಡ ಮಡಿ ತಯಾರಿಸಿಬಹುದು. ಸಸಿ ಮೊಳಕೆ ಬಂದೊಡನೆ ಅಗಲವಾಗಿ ಮಣ್ಣು ಹರಡಿ ನಿರ್ಮಿಸಿದ ಮಡಿಗಳಿಂದ ಕಿತ್ತು ಉದ್ದದ ಸಾಲುಗಳಲ್ಲಿ ನಾಟಿ ಮಾಡಿದರೆ ಹರಿವೆ ಹುಲುಸಾಗಿ ಬೆಳೆಯುತ್ತದೆ. ಅಲ್ಲದೆ ಗೊಬ್ಬರ, ನೀರು ಹಾಕಲು, ಕಳೆಕೀಳಲು ಸಹಕಾರಿ.
ಪುಡಿ ಗೊಬ್ಬರಕ್ಕೆ ಬೀಜವನ್ನು ಮಿಶ್ರ ಮಾಡಿ ಬಿತ್ತನೆ ಮಾಡಿದರೆ ಚಿಕ್ಕದಾಗಿರುವ ಹರಿವೆ ಬೀಜ ಸಮಾನವಾಗಿ ಹರಡಿ ಬೀಳುವುದು. ಬೀಜ ಬಿತ್ತಿದ ಕೂಡಲೇ ಮಡಿಯ ಮೇಲೆ ಹುಡಿ ಮಣ್ಣನ್ನು ತೆಳುವಾಗಿ ಹರಡಬೇಕು. ದಿನಕ್ಕೆ ಎರಡು ಬಾರಿ ನೀರು ಹಾಕಬೇಕು.
ಗೊಬ್ಬರ: ಹಟ್ಟಿಗೊಬ್ಬರ, ತರಗೆಲೆ, ಸೊಪ್ಪು, ಬೂದಿ, ಆಕಳ ಗಂಜಲ, ಯೂರಿಯಾ ಇತ್ಯಾದಿಗಳನ್ನು ಬಳಸಲಾಗುತ್ತದೆ. ಕೊಯ್ಲು: ಬತ್ತನೆ ಮಾಡಿದ 20-25 ದಿನಗಳಲ್ಲಿ ಸೊಪ್ಪು ಕೀಳಬಹುದು. ಹಿಡಿಹಿಡಿಯಾಗಿ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಸುಮಾರು ಏಳು - ಎಂಟು ತಿಂಗಳುಗಳ ಕಾಲ ಹರಿವೆ ಕೊಯ್ಲಿಗೆ ದೊರೆಯುತ್ತದೆ. ದಂಟನ್ನು ಕೊಯ್ಲು ಮಾಡುವಾಗ ಬುಡದಿಂದ ಒಂದು ಅಂಗುಲದಷ್ಟು ಮೇಲಿನಿಂದ ತುಂಡರಿಸಬೇಕು. ಕೊಯ್ಲು ಮಾಡಿದ ಅನಂತರ ಗಿಡಕ್ಕೆ ಹುಡಿಗೊಬ್ಬರ, ಬೂದಿ, ಸುಡುಮಣ್ಣು ನೀಡಬೇಕು.
ಔಷಧೀಯ ಗುಣ: ಖನಿಜ, ಕಬ್ಬಿಣದ ಅಂಶ ಹರಿವೆಯಲ್ಲಿ ಅಧಿಕವಾಗಿರುವುದರಿಂದ ರಕ್ತದ ಉತ್ಪಾದನೆಗೆ ಸಹಕಾರಿಯಾಗಿದೆ. ಹರಿವೆಯಲ್ಲಿನ ನಾರಿನ ಅಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಗರ್ಭಿಣಿಯರಿಗೆ ಹರಿವೆ ಸೊಪ್ಪಿನ ರಸಕ್ಕೆ ಚಿಟಿಕೆ ಏಲಕ್ಕಿ ಪುಡಿ ಮತ್ತು ಜೇನು ಮಿಶ್ರ ಮಾಡಿ ನೀಡುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ. ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆ ಹಾಲು ವೃದ್ಧಿಸುವುದು. ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಹರಿವೆ ರಸ, ನಿಂಬೆ ರಸ ಮಿಶ್ರ ಮಾಡಿ ನೀಡುತ್ತಾರೆ. ಬಾವು, ಗಾಯಗಳಾಗಿದ್ದರೆ ಹರಿವೆ ಸೊಪ್ಪಿನ ಲೇಪ ಹಾಕಿದರೆ ಬೇಗನೆ ಗುಣವಾಗುವುದು. ಹರಿವೆ ಸೊಪ್ಪಿನ ಬಳಕೆ ಅಜೀರ್ಣಕಾರಕ ಭೇದಿ, ಡಯೇರಿಯ ತಡೆಗಟ್ಟ ಬಹುದು. ಕೀರೇ ಸೊಪ್ಪಿನ ರಸ ಮತ್ತು ನಿಂಬೆ ರಸ ಮಿಶ್ರ ಮಾಡಿ ತಲೆಗೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುವುದು. ಬೇಸಗೆಯಲ್ಲಿ ಹರಿವೆ ಸೊಪ್ಪು ಸೇವನೆಯಿಂದ ದೇಹ ತಂಪಾಗಿರುತ್ತದೆ. ಮುಳ್ಳರಿವೆಯಲ್ಲಿ ಬೆನ್ನು, ಕಾಲು ಸೆಳೆತ ತಡೆಗಟ್ಟುವ ಗುಣವಿದೆ. ಹರಿವೆ ಸೊಪ್ಪನ್ನು ಬೇಯಿಸಿದ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು, ಗಂಟಲು ಕಿರಿಕಿರಿ ನಿವಾರಣೆ. ಅನಿಮಿಯ, ರಕ್ತದ ದೋಷ ಇರುವವರು ಹರಿವೆ ಬೀಜದಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಿದರೆ ಉತ್ತಮ. ಅಲ್ಲದೆ ಹರಿವೆ ಸೊಪ್ಪಿನಲ್ಲಿ ರಕ್ತ ಸ್ರಾವ ತಡೆಗಟ್ಟುವ ಗುಣವಿದೆ.

ಬುಧವಾರ, ಜುಲೈ 11, 2012

ಅಲಸಂಡೆ ಬೆಳೆ


‘ಫ್ಯಾಬೇಸಿ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಅಲಸಂಡೆ ಭಾರತೀಯ ಮೂಲದ ಒಂದು ಪೌಷ್ಠಿಕಾಂಶಯುಕ್ತ ಹಸುರು ತರಕಾರಿ. ಅಲಸಂಡೆ ಎಳತಾಗಿರುವಾಗ ತಿನ್ನಲು ಬಲು ರುಚಿ. ಕಾಣಲು ಇದು ಬಳ್ಳಿಯಂತಿರುವುದಲ್ಲದೆ ಇದೊಂದು ಬಳ್ಳಿಯಲ್ಲಿ ಬೆಳೆಯುವ ತರಕಾರಿ ಕೂಡ ಹೌದು.
 ಅಲಸಂಡೆಯ ಇತಿಹಾಸದ ಪ್ರಕಾರ ‘‘ಅದು ಭಾರತದಲ್ಲಿ ಹುಟ್ಟಿ ಚೀನ ಮತ್ತು ಪೂರ್ವದ ಇತರ ರಾಷ್ಟ್ರಗಳಿಗೆ ಪಸರಿಸಿತು’’. ಆಫ್ರಿಕಾದ ಕಾಡುಗಳಲ್ಲಿ ಇದನ್ನೇ ಹೋಲುವ ಹಲವು ಸಸ್ಯ ಪ್ರಭೇದಗಳು ಕಾಣಸಿಗುತ್ತವೆಯಂತೆ. ಆದ್ದರಿಂದ ಸಸ್ಯಶಾಸ್ತ್ರಜ್ಞರು ಇದರ ಮೂಲ ‘ಆಫ್ರಿಕಾ’ ಇರಬಹುದು ಎಂದು ಅನುಮಾನಿಸಿದ್ದಾರೆ. ವೈವಿಧ್ಯ ಹೆಸರು: ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಲಸಂಡೆ ಎಂದು ಕರೆಯುವ ಈ ತರಕಾರಿಯನ್ನು ಬೇರೆ ಬೇರೆ ಕಡೆಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುವರು. ಆಂಗ್ಲ ಭಾಷೆಯಲ್ಲಿ ಈಗ ‘cowpea’ ಎನ್ನಲಾಗುತ್ತದೆ. ಮೊದಲು ‘callivance’ ಎನ್ನುತ್ತಿದ್ದರು. ಮೈಸೂರಿನ ಕೆಲವೆಡೆ ‘ಕಾರಮಣಿ’, ‘ತರಗುಣಿ’, ಕುರ್ಸಂದಿ ಮತ್ತೆ ಕೆಲವೆಡೆ ಅಲಸಂದೆ ಎಂದೆಲ್ಲ ಕರೆಯುತ್ತಾರೆ.
 ಪೌಷ್ಟಿಕಾಂಶ: ಅಲಸಂಡೆಯಲ್ಲಿ ಉತ್ತಮ ಪೌಷ್ಟಿಕಾಂಶಗಳಿವೆ. ಮುಖ್ಯವಾಗಿ ಕಬ್ಬಿಣ, ‘ಎ’, ‘ಬಿ1’, ‘ಬಿ2’ ಜೀವಸತ್ವ, ಪಿಷ್ಟ, ಕೊಬ್ಬು, ಸಸಾರಜನಕ, ಸುಣ್ಣ, ಸೋಡಿಯಂ, ರಂಜಕ, ನಯಾಸಿನ್ ಇತ್ಯಾದಿ. ಪೌಷ್ಟಿಕಾಂಶಗಳಲ್ಲದೆ ಮಾನವ ದೇಹಕ್ಕೆ ಅಗತ್ಯವಾದ ಕೆಲವು ‘ಅಮೈನೋ ಆಮ್ಲ’ಗಳನ್ನು ಹೊಂದಿದೆ.
ಔಷಧವಾಗಿ: ಅಲಸಂಡೆ ಬಳಸಿ ತಯಾರಿಸಿದ ಪದಾರ್ಥಗಳ ಸೇವಸೆಯಿಂದ ಮಲಬದ್ಧತೆ ನಿವಾರಣೆಯಾಗಬಲ್ಲದು. ಅಲಸಂಡೆಯ ಒಣಗಿದ ಕಾಳುಗಳನ್ನು ಬೇಯಿಸಿದ ನೀರನ್ನು ಪ್ರತಿದಿನ ಒಂದು ಲೋಟ ಕುಡಿಯುವುದರಿಂದ ಆಮಪಿತ್ತ ಶಮನವಾಗುವುದು. ಅಲಸಂಡೆಯ ಎಳೆಯ ಹಸುರು ಕಾಳನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಬಾಯಿ ಹುಣ್ಣು, ಅಲಸಂಡೆಯಿಂದ ತಯಾರಿಸಿದ ಹುರಿಗಾಳನ್ನು ಪ್ರತಿ ನಿತ್ಯ ಒಂದು ಹಿಡಿಯಂತೆ ಸೇವಿಸಿದರೆ ನರದೌರ್ಬಲ್ಯ ಇಲ್ಲದಾಗುವುದು. ಅಲಸಂಡೆ ಕಾಳುಗಳ ಹೆಚ್ಚಿನ ಸೇವನೆ ಹೊಟ್ಟೆ ಉಬ್ಬರಿಸುವುಕೆಗೆ ಕಾರಣವಾದೀತು. ಎಸಿಡಿಟಿ ತೊಂದರೆ ಇರುವವರು ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಅಡುಗೆ: ಅಲಸಂಡೆಯನ್ನು ಬಳಸಿ ನಾನಾ ವಿಧದ ರುಚಿಕಟ್ಟಾದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಪಲ್ಯ, ಹುಳಿ, ಎಳೆಯಕಾಳಿ, ಕಾಳಿನಿಂದ ಸಾರು, ಸಾಂಬಾರು ಇತ್ಯಾದಿ. ಅಲ್ಲದೆ ಪಲಾವು ತಯಾರಿ ವೇಳೆಯೂ ಇದನ್ನು ಬೀನ್ಸ್ ಬದಲಾಗಿ ಬಳಕೆ ಮಾಡುತ್ತಾರೆ. ಇದರ ಕಾಳಿನಿಂದ ತಯಾರಿಸುವ ಹುರಿಗಾಳು ಬಳ ತಿನ್ನಲು ಸ್ವಾದಿಷ್ಟಕರವಾಗಿತ್ತದೆ.
 ಕೃಷಿ: ಇದೊಂದು ಅಲ್ಪಾವಧಿ ಬೆಳೆಯಾಗಿದ್ದು, ಎಲ್ಲ ತರದ ಮಣ್ಣುಗಳಲ್ಲೂ ಬೆಳೆಯ ಬಹುದು. ಆದರೆ ನೀರು ಬಹು ಬೇಗನೆ ಇಂಗಿ ಹೋಗುವ ಮರಳು ಮಿಶ್ರಿತ ಗೊಡ್ಡು ಉತ್ತಮ. ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣುಗಳಲ್ಲೂ ಅಲಸಂಡೆ ಉತ್ತಮ ಇಲುವರಿ ನೀಡುತ್ತದೆ. ಸಮತಟ್ಟಾದ ಪ್ರದೇಶಗಳಲ್ಲಿ ಈ ದನ್ನು ಬೇಸಗೆ, ಮಳೆಗಾಲಗಳೆರಡರಲ್ಲೂ ಬೆಳೆಯ ಬಹುದು. ಇದರಲ್ಲಿ ಮಳೆಗಾಲದ, ಬೇಸಗೆ ಕಾಲಗಳಲ್ಲಿ ಬೆಳೆಯಲು ಬೇರೆ ಬೇರೆ ತಳಿಗಳಿವೆ. ಬಿತ್ತನೆ: ಸಾಮಾನ್ಯವಾಗಿ ಮೇ- ಜುಲೈ ಹಾಗೂ ಡಿಸೆಂಬರ್ - ಜನವರಿ ತಿಂಗಳುಗಳಲ್ಲಿ ಅಲಸಂಡೆ ಕೃಷಿ ಮಾಡುತ್ತಾರೆ. ವಿಪರೀತ ಚಳಿ ಅಥವಾ ಸೆಕೆ ಇಲ್ಲದ ಪ್ರದೇಶಗಳಲ್ಲಿ ವರ್ಷವಿಡೀ ಬೆಳೆಯ ಬಹುದು. ಸುಮಾರು 3 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2  ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸುಮಾರು ಎರಡು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಹವಾಮಾನವನ್ನು ಅನುಸರಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಕಾಯಿ ಬೆಳೆಯುವ ಸಮಯದಲ್ಲಿ ಗಿಡಗಳಲ್ಲಿ ತೇವಾಂವದ ಕೊರತೆ ಉಂಟಾಗಬಾರದು. ಕೊಯ್ಲು: ನಾರಿಲ್ಲದ ಎಳತು ಕಾಯಿಗಳನ್ನು ಕೊಯ್ಯಬೇಕು. ಗಿಡದಲ್ಲಿ ಕಾಯಿಗಳು ಮೂಡಿ 10ರಿಂದ 15 ದಿನಗಳಲ್ಲಿ ಕೊಯ್ಲು ಮಾಡಿದರೆ ಕಾಯಿ ಎಳತಾಗಿದ್ದು, ನಾರಿನಿಂದ ಮುಕ್ತವಾಗಿರುತ್ತವೆ.
ಗೊಬ್ಬರ: ಅಲಸಂಡೆ ಕೃಷಿಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸುತ್ತಾರೆ. ಅಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.
ತಳಿ: ಅಲಸಂಡೆಯಲ್ಲಿ ಸ್ಥಳೀಯ ತಳಿಗಳಲ್ಲದೆ ಬೇರೆ ಬೇರೆ ಋತುಮಾನಗಳಿಗೆ ಅನುಗುಣವಾಗಿ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೂಸಾ ಫಲ್ಗುಣಿ: ಇದು ಬೇಸಗೆ ಕಾಲಕ್ಕೆ ಸೂಕ್ತವೆನಿಸಿದ ತಳಿ. ಪೊದೆಯಾಕಾರದಲ್ಲಿ ಗಿಡ್ಡವಾಗಿ ಬೆಳೆಯುವ ಅಲಸಂಡೆಯಾಗಿದೆ. ಕಡು ಹಸುರು ಬಣದಿಂದ ಕೂಡಿದ ಸುಮಾರು 12.5 ಸೆಂ.ಮೀ. ಉದ್ದ ಕಾಯಿಗಳನ್ನು ಬಿಡುತ್ತದೆ. ಪೂಸಾ ದೋಫಸಲಿ: ಬೇಸಗೆ ಹಾಗೂ ಮಳೆಗಾಲ ಎರಡಕ್ಕೂ ಸೂಕ್ತವಾದ ತಳಿ ಇದಾಗಿದೆ. ಸುಮಾರು 18 ಸೆಂ.ಮೀ. ಉದ್ದ ಕಾಯಿಗಳನ್ನು ಬಿಡುತ್ತದೆ. ಪೂಸಾ ಬರ್ಸಾತಿ: ಇದು ಮಳೆಗಾಲಕ್ಕೆ ಮಾತ್ರ ಸರಿ ಎನಿಸುವ ತಳಿಯಾಗಿದೆ. ಸುಮಾರು 25ರಿoದ 27 ಸೆಂ.ಮೀ. ನಷ್ಟು ಉದ್ದ ಕಾಯಿಗಳನ್ನು ಬಿಡುತ್ತದೆ. ಎಸ್ 288: ಇದೊಂದು ವರ್ಷಾದ್ಯಂತ ಕೃಷಿ ಮಾಡಲು ಸೂಕ್ತವಾಗಿರುವ ತಳಿಯಾಗಿದೆ.

ಬಸಳೆ ಲಾಭದಾಯಕ ಉಪ ಕೃಷಿ


ಬಸಳೆ ಆರೋಗ್ಯಕ್ಕೆ ಹಿತಕರವಾದ ಒಂದು ಸೊಪ್ಪು ತರಕಾರಿ. ಇದಕ್ಕೆ ಬೇಡಿಕೆ ಹೆಚ್ಚು. ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿ ಸಿಗುತ್ತದೆ. ಆದರೆ ಪಟ್ಟಣಗಳಲ್ಲಿ ದೊರೆಯುವುದು ವಿರಳ. ಇದರ ಸೇವನೆಯಿಂದ ನಮ್ಮ ದೇಹ ಬಲವು ಹೆಚ್ಚುವುದು. ಬಸಳೆಯನ್ನು ಉಪ ಅಥವಾ ಮಿಶ್ರ ಬೆಳೆಯಾಗಿಯೂ ಮಾಡಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ಬಸಳೆಯ ಕಟ್ಟೊಂದಕ್ಕೆ ಸುಮಾರು ಹತ್ತರಿಂದ ಇಪ್ಪತು ರೂಪಾಯಿ ಬೆಲೆ ಇರುತ್ತದೆ.
 ಇದೊಂದು ಭಾರತೀಯ ಮೂಲದ ಸೊಪ್ಪು ತರಕಾರಿ. ಬಳ್ಳಿಯಂತೆ ಹಬ್ಬಿ ಬೆಳೆಯುವು ಗಿಡವಾಗಿದ್ದು, ಇದರ ಎಲೆ, ಬಳ್ಳಿ ಎಲ್ಲವನ್ನು ಪದಾರ್ಥ ಮಾಡಲು ಬಳಸುತ್ತಾರೆ. ಬಸಳೆ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದೆ.
ಔಷಧೀಯ ಗುಣ: ಬಸಳೆಯಲ್ಲಿ ಹೇರಳವಾಗಿ ಔಷಧೀಯ ಗುಣವಿದೆ. ಬಸಳೆ ಸೇವನೆಯಿಂದ ರೋಗ ನಿರೋಧಕ ಗುಣ ವೃದ್ಧಿ. ಇದರ ದಡಿಯನ್ನು ಜಗಿಯುವುದರಿಂದ ಬಾಯಿ ಹಣ್ಣು, ಮಲಬದ್ಧತೆ ಕಡಿಮೆಯಾಗುವುದು. ಬಸಳೆಯ ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪತ್ರಹರಿತು ಅಂಶ ಲಭಿಸುವುದು. ಅಡುಗೆ:
ಬಸಳೆ ಬಳಸಿ ಬಹು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ. ಬಸಳೆಯೊಂದಿಗೆ ಪಚ್ಚೆ ಹೆಸರು, ಹಲಸಿನ ಬೇಳೆ, ಹುರುಳಿ, ಅಲಸಂಡೆ ಕಾಳು ಇತ್ಯಾದಿಗಳನ್ನು ಬಳಸಿ ಸಾಂಬಾರು ಹಾಗೂ ಬೇರೆ ಬೇರೆ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತದೆ.
ಬಸಳೆ ನಾಟಿ:  ಬಸಳೆ ಬೆಳೆ ಒಂದು ಲಾಭದಾಯಕ ಉಪ ಕೃಷಿ. ಇದನ್ನು ಬೆಳೆಯಲು ಎಕರೆ ಗಟ್ಟಲೆ ಜಾಗದ ಅವಶ್ಯವಿಲ್ಲ. ಮನೆ ಅಂಗಳ, ಗದ್ದೆ, ತೋಟ ಹಿತ್ತಿಲು ಹೀಗೆ ಎಲ್ಲಿ ಬೇಕಾದರು ಬಸಳೆ ಬೆಳೆಯ ಬಹುದು. ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲಿನ ನೀರು ಹೋಗುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಆದರೆ ಬಿಸಿಲು ಅಗತ್ಯ. ಮರದ ನೆರಳಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುವುದಿಲ್ಲ. ಬಸಳೆ ಕೃಷಿಗೆ ಕೂಲಿಯಾಳುಗಳ ಅಗತ್ಯವೂ ಇಲ್ಲ. ಮನಸ್ಸು ಮಾಡಿದರೆ ಗೃಹಿಣಿಯರೇ ಬಿಡುವಿನ ವೇಳೆಯಲ್ಲಿ ಬಸಳೆ ಬೆಳೆಯಬಹುದು. ಮುಂಗಾರು ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾದಾಗ ಬಸಳೆ ನಾಟಿ ಮಾಡಲು ಸೂಕ್ತ ಸಮಯ. ಬಸಳೆಯನ್ನು ಬಳ್ಳಿ ನೆಡುವ ಮೂಲಕವೇ ಬೆಳೆಸಲಾಗುತ್ತದೆ. ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಬಸಳೆ ಕೃಷಿಗೆ ನೆಲವನ್ನು ಅಗೆದು ಸೂಲುಗಳನ್ನು ಮಾಡಿದರೆ ಉತ್ತಮ. ಯಾಕೆಂದರೆ ಅದರ ಬುಡದಲ್ಲಿ ನೀರು ನಿಂತು ಇಂಗುವುಂತಿರಬೇಕು. ಒಂದರಿಂದ ಒಂದೂವರೆ ಅಡಿ ಆಳದ ಸಾಲುಗಳನ್ನು ತಯಾರಿಸಿ ಅದರಲ್ಲಿ ಸುಮಾರು ಎರಡರಿಂದ ಮೂರು ಅಡಿ ಅಂತರದಲ್ಲಿ ಗೂಟ ಹಾಕಿ ಬಳ್ಳಿಯನ್ನು ನಡಬೇಕು. ಒಂದೆರಡು ವಾರಗಳ ಅನಂತರ ನಾಲ್ಕರಿಂದ ಐದು ಅಡಿ ಎತ್ತರದ ಚಪ್ಪರ ನಿರ್ಮಿಸಿದರೆ ಬಳ್ಳಿ ಹಬ್ಬಲು ಸಹಕಾರಿಯಾಗುವುದು.
ಗೊಬ್ಬರ: ಬಳ್ಳಿ ನಾಟಿ ಮಾಡಿದಾಗಲೇ ನೀರಿನಾಂಶ ಉಳಿದುಕೊಳ್ಳಲು ದನ ಸಗಣಿ, ಸೊಪ್ಪು, ತರಗೆಲೆ, ಅಡಿಕೆ ಸಿಪ್ಪೆ ಇತ್ಯಾದಿಗಳನ್ನು ಹಾಕಬಹುದು. ಬಳ್ಳಿ ಚೆನ್ನಾಗಿ ಚಿಗುರಲಾರಂಭಿಸಿದಾಗ ಬೂದಿ, ಹಟ್ಟಿಗೊಬ್ಬರ, ಸುಡುಮಣ್ಣು ನೀಡಬೇಕು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನೀರು ಸುರಿಯಬೇಕು. ಮುಂಜಾನೆ ಗಿಡದ ಮೇಲೆ ನೀರು ಚಿಮುಕಿಸಿ ಇಬ್ಬನಿ ಬಿದ್ದಿರುವುದನ್ನು ತೆಗೆಯುವುದರಿಂದ ಬಸಳೆ ರೋಗ ಮುಕ್ತ, ಸ್ವಚ್ಛವಾಗಿರುತ್ತವೆ. ಕೊಯ್ಲು: ಬಸಳೆ ನಾಟಿ ಮಾಡಿ ಸುಮಾರು ಐದರಿಂದ ಆರು ವಾರಗಳಲ್ಲಿ ಕಟಾವು ಮಾಡಬಹುದು. ಬಸಳೆ ದಡಿ, ಸೊಪ್ಪು ಎಳತಾಗಿರುವಾಗಲೇ ಕಟಾವು ಮಾಡಿದರೆ ಅಡುಗೆಗೆ ಉತ್ತಮವಾಗಿರುತ್ತವೆ. ಕಟವು ಪ್ರಾರಂಭವಾದ ಮೇಲೆ ನಿರಂತರ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ಮಾಡಬಹುದು.

ಸೋಮವಾರ, ಜುಲೈ 2, 2012

ಕನಸು


ಕನಸು ಕನಸು
ಯಾಕಿಂಗಾಡ್ತಿ?
ಮನಸಲಿ ನಿಲ್ಲದೆ
ಹಿಂಗ್ಯಾಕೋಡ್ತಿ?
ನಿದ್ರೆಲಿ ಇರಲು
ಅರೆ ಕ್ಷಣ ಬಂದು
ಎಚ್ಚರವಾಗಲು ನೀನೋಡ್ತಿ
ಕೆಲವೊಮ್ಮೆ ಬಂದು
ಹೆದರಿಸಿ ಹೋಗ್ತಿ
ಇನ್ನು ಕೆಲವೊಮ್ಮೆ ಬಂದು
ಖುಷಿ ಪಡಿಸಿ ಹೋಗ್ತಿ
ಕನಸು ಕನಸು
ಯಾಕಿಂಗಾಡ್ತಿ?
ಮನಸಲಿ ನಿಲ್ಲದೆ
ಹಿಂಗ್ಯಾಕೋಡ್ತಿ?

ಸ್ವತಂತ್ರ ಭಾರತದ ವೈಭವ


ಭ್ರಷ್ಟಾಚಾರದ ರಕ್ಕಸ ನರ್ತನ
ಶ್ರೀಸಾಮಾನ್ಯರ ಮರ್ದನ
ಸ್ವೇಚ್ಛ ರಾಜಕಾರಣಿಗಳಿಗೆ
ಸ್ವರ್ಗ ದರ್ಶನ

ಅಂದು ವಿದೇಶಿ
ಆಕ್ರಮಿಗಳ ಕಾಟ
ಇಂದು ನಮ್ಮಲೇ ಇರುವ
ತಿಗಣೆ, ಹೇನುಗಳ ಹೀರಾಟ

ಹಿಂದಿನವರು ಸ್ವಾತಂತ್ರ್ಯಕ್ಕಾಗಿ
ಹೋರಾಡಿದರು
ಈಗಿನವರು ಕುರ್ಚಿಗಾಗಿ
ಬಡಿದಾಡಿದರು

ಬಿಗಿಯುವರು ಭಾಷಣ
ನಾವೆಲ್ಲರೊಂದೆಯೆಂದು
ಸಭೆ ಮುಗಿದೊಡನೆ
ಎಲ್ಲರು ಒಂದು... ಒಂದು... ಇಂದು

ನಂಬಿಕೆಗೆ ಬೆಲೆಯಿಲ್ಲ
ಇದು ನಯವಂಚಕರ ಕಾಲ
ಸ್ವಾಭಿಮಾನಿಗಳಿಗೆ,
ಸತ್ಯನಿಷ್ಠರಿಗಿಲ್ಲಿ ಕೊನೆಗಾಲ

ಕಾಳಧನದ ಮದವೇರಿ
ರಾಮ ರಾಜ್ಯದ ಕನಸು ಮರೆಯಾಗಿ
ಸ್ವಾ(ರ್ಥ)ರಾಜ್ಯ ಮೆರೆಯುತಿದೆ
ಇದು ಸ್ವತಂತ್ರ ಭಾರತದ ವೈಭವ

ಟಿವಿ, ಕಂಪ್ಯೂಟರ್ ಬಳಕೆ ವೇಳೆ ಸುರಕ್ಷತೆ ಬಗ್ಗೆ ಗಮನಿಸಿ


ಇಂದು ಟಿವಿ. ಕಂಪ್ಯೂಟರ್ಗಳನ್ನು ಬಳಕೆ ಮಾಡದವರು ಬಹಳ ವಿರಳ. ಪಕ್ಕದ ಮನೆಯಯವರು 32 ಇಂಚಿನ ಟಿವಿ, ಎಲ್ಸಿಡಿ ಕಂಪ್ಯೂಟರ್ ತಂದಿದ್ದಾರೆಂದು ಸಾವಿರೂರು ರೂಪಾಯಿ ವೆಚ್ಚ ಮಾಡಿ ಟಿವಿ, ಕಂಪ್ಯೂಟರ್ ಖರೀದಿಸುವ ಮೊದಲು ಅದರ ನಿರ್ವಹಣೆ ನಮ್ಮಿಂದ ಸಾಧ್ಯವೇ ಎಂದು ಯೋಚಿಸಿ. ಅದರ ಜತೆಗೆ ಸುರಕ್ಷತಾ ಕ್ರಮಗಳ ಬಗೆಗೂ ಗಮನ ಹರಿಸುವುದು ಅತ್ಯಗತ್ಯ. ಟೀವಿಯನ್ನು ಹತ್ತಿರದಿಂದ ವೀಕ್ಷಿಸಿದರೆ ಕಣ್ಣು ಹಾಳಾಗುತ್ತದೆ. ಆದ್ದರಿಂದ ದೂರ ಕುಳಿತು ನೋಡಿ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಆದರೆ ಟಿವಿ ನೋಡಿದರೆ ಒಮ್ಮೆಲೆ ಕಣ್ಣು ಕಳೆದುಕ್ಳೊುವುದಿಲ್ಲ. ಬದಲಿಗೆ ಕಣ್ಣಿಗೆ ಆಯಾಸವಾಗುತ್ತದೆ. ಶ್ರೀಘ್ರವಾಗಿ ನಿದ್ದೆ ಬರುತ್ತದೆ. ಸುಸ್ತಾದ ಕಣ್ಣುಗಳಿಗೆ ಆಕ್ಷಣ ಕೊಂಚ ದೃಷ್ಟಿದೋಷ ಉಂಟಾಗುತ್ತದೆ. ನಿರಂತರ ಟಿವಿ ನೋಡುವುದರಿಂದ ಅಂತಹ ಅನುಭವವಾಗಬಹುದು. ಸ್ವಲ್ಪ ಕಣ್ಣು ಮುಚ್ಚಿ ಕುಳಿತರೆ ಸರಿಹೋಗುವುದು.
ಅದೇ ರೀತಿ ಟೀವಿಯನ್ನು ಕತ್ತಲ ಕೋಣೆಯಲ್ಲೂ ನೋಡಬಾರದು ಹಾಗೂ ಅತೀ ಹೆಚ್ಚು ಬೆಳಕಿನಲ್ಲೂ ನೋಡಬಾರದು. ಆದರೆ, ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಟೆಲಿವಿಷನ್ ಮೇಲೆ ನೇರವಾಗಿ ಬೆಳಕು ಬೀಳುವಂತಿರಬಾರದು. ನಿಮ್ಮ ಕಣ್ಣಿನ ದೃಷ್ಟಿಗೂ ನೇರವಾಗಿ ಬೆಳಕು ಇರಬಾರದು ಹಾಗೂ ಸನ್ಗ್ಲಾಸ್ ಹಾಕಿಕೊಂಡು ಟೀವಿ ನೋಡಬಾರದು. ಟೀವಿ ನೋಡುವುದರಿಂದ ಕಣ್ಣಿಗೆ ಯಾವುದೇ ತೊಂದರೆ ಆಗದಂತೆ ರಕ್ಷಿಸಿಕೊಳ್ಳಬೇಕಾದರೆ ನಿಮ್ಮ ಟೀವಿ ಸ್ಕ್ರೀನ್ ಅಗಲದ ಮೂರರಿಂದ ನಾಲ್ಕು ಪಟ್ಟು ದೂರದಲ್ಲಿ ಕುಳಿತು ನೋಡಬೇಕು. ಟೀವಿಯನ್ನು ಕನಿಷ್ಠ 30 ಡಿಗ್ರಿ ಕೋನದಲ್ಲಿ ನೋಡಿದರೆ ಉತ್ತಮ ಎಂದು ಖ್ಯಾತ ವಿದ್ಯುನ್ಮಾನ ತಂತ್ರಜ್ಞ ಬೆರ್ನಾಡ್ ಲೆಚ್ನೆರ್ ತನ್ನ ‘ಲೆಚ್ನೆರ್ ಡಿಸ್ಟೆನ್ಸ್ ಸೂತ್ರ’ದಲ್ಲಿ ಹೇಳಿದ್ದಾರೆ. ಕೆನಡಿಯನ್ ಅಸೋಸಿಯೇಷನ್ ಆ್ ಆಪ್ತೊಮೆಟ್ರಿಸ್ಟ್ ಸಲಹೆ ಪ್ರಕಾರ ಟ್ವೆಂಟಿ-20 ಸೂತ್ರದಲ್ಲಿ ಇಪ್ಪತ್ತು ನಿಮಿಷ ಟೀವಿ ನೋಡಿದರೆ, 20 ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು ಎಂದಿದೆ.
ಕಂಪ್ಯೂಟರ್ ಬಳಕೆ ರೀತಿ
ಇಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಇಲ್ಲದ ಕ್ಷೇತ್ತವೆ ಇಲ್ಲ ಎನ್ನಬಹುದು. ಆದರೆ ಬಹಳ ಮಂದಿಗೆ ಕಂಪ್ಯೂಟರ್ ಬಳಕೆ ಹೇಗೆ ಮಾಡಬೇಕು, ಮಾನಿಟರ್ಗೂ ಕಣ್ಣಿನ ದೃಷ್ಟಿಗೂ ಎಷ್ಟು ಅಂತರವಿರಬೇಕು, ಹೇಗೆ ಮಾನಿಟರ್ ಇಡಬೇಕು, ಬೆಳಕು ಎಷ್ಟಿರಬೇಕು ಹಾಗೂ ಯಾವ ಕಡೆಯಿಂದ ಬರಬೇಕು ಎಂಬ ಬಗ್ಗೆ ತಿಳಿದಿಲ್ಲ.
ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಕನಿಷ್ಠ 25 ಇಂಚ್ಗಳ ದೂರದಲ್ಲಿರಬೇಕು. ನೀವು ಕುಳಿತಿರುವ ಸ್ಥಳದಿಂದ ನಿಮ್ಮ ದೃಷ್ಟಿಗೆ ಸಮಾನಾಂತರ ಅಥವಾ 15ರಿಂದ 20 ಡಿಗ್ರಿ ಕೆಳಗಿರಬೇಕು ಇಲ್ಲವೆ ನಿಮ್ಮ ಅಡ್ಡವಾದ ದೃಷ್ಟಿಯ 15 ಡಿಗ್ರಿ ಮತ್ತು 50 ಡಿಗ್ರಿ ಕೆಳಗೂ ಮಾನಿಟರ್ ಇಡಬಹುದು.
ಸ್ವಚ್ಛವಾಗಿಡಿ  
ಎಲ್ಸಿಡಿ, ಎಲ್ಇಡಿ ಹಾಗೂ ಪ್ಲಾಸ್ಮಾ ಟೀವಿಗಳ ಸ್ಕ್ರೀನ್ಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ಮಾಡಿರುವುದರಿಂದ ಅವುಗಳು ಬೇಗನೆ ಧೂಳನ್ನು ಆಕರ್ಷಿಸುತ್ತವೆ. ಆದ್ದರಿಂದ ಅವುಗಳ ಸ್ಕ್ರೀನ್ಗಳನ್ನು ಸ್ವಚ್ಛಗೊಳಿಸಲು ಮೈಕ್ರೋ ೈಬರ್ಯುಕ್ತ ಬಟ್ಟೆಗಳನ್ನು ಹಾಗೂ ಪ್ರತ್ಯೇಕ ಸ್ಪ್ರೇ ಅನ್ನು ಟೀವಿ ಕೊಳ್ಳುವಾಗ ಜತೆಯಲ್ಲಿ ನೀಡಿರುತ್ತಾರೆ. ಅದನ್ನು ಮಾತ್ರವೇ ಬಳಸಿ ಸ್ವಚ್ಛ ಮಾಡುವುದು ಒಳ್ಳೆಯದು. ಒದ್ದೆ ಬಟ್ಟೆ, ಸೋಪ್ ನೀರು ಇತ್ಯಾದಿ ಬಳಕೆ ಸಮಂಜಸವಲ್ಲ.

ಹಾಗಲ: ಬಾಯಿಗೆ ಕಹಿ; ದೇಹಕ್ಕೆ ಸಿಹಿ


ಹಾಗಲ ಕಾಯಿ ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿ. ಇದು ಔಷಧೀಯ ಗುಣ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದಿರುವ ತರಕಾರಿ. ಹಾಗಲಕಾಯಿಯ ಹೊರಮೈ ಮುಳ್ಳಿನಂತಹ ರಚನೆಯಿಂದ ಕೂಡಿದ್ದು, ಕಡುಹಸುರು ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೂಲ: ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ. ಪ್ರಪಂಚದ ಹೆಚ್ಚಿನ ಎಲ್ಲೆಡೆ ಇದರ ಬೇಸಾಯ, ಬಳಕೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ಆದ್ಯತೆ ಹೆಚ್ಚು. ಹಾಗಲ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಬಳ್ಳಿಯಾಗಿ ಹಬ್ಬುವ ವರ್ಗಕ್ಕೆ ಸೇರಿದ್ದು, ಈ ಗಿಡ ಬೆಳೆಯಲು ಆಸರೆಯ ಅಗತ್ಯವಿದೆ. ಇದರ ಎಲೆ ಮತ್ತ ಕಾಯಿಯ ಬಣ್ಣ ಹಸುರು. ಎಲೆಗಳು ಕೈಯ ಆಕಾರ ಹೊಂದಿದ್ದು ಸೀಳುಗಳನ್ನು ಒಳಗೊಂಡಿರುತ್ತವೆ. ಕಾಡುಗಳಲ್ಲಿ ಹಾಗಲವನ್ನೇ ಹೋಲುವ ಇತರ ಕಾಯಿಗಳು ಕಾಣಸಿಗುತ್ತವೆ.
ಪೌಷ್ಟಿಕಾಂಶ  
ಹಾಗಲ ಕಾಯಿ ರುಚಿ ಕಹಿಯಾದರೂ ಒಂದು ಪೌಷ್ಟಿಕಾಂಶಯುಕ್ತ ತರಕಾರಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ‘ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಥಯಮಿನ್, ಕ್ಯಾಲಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.
  ಔಷಧೀಯ ಗುಣ
ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಚರ್ಮದ ಕಾಯಿಲೆಗಳಿರುವವರು ಇದನ್ನ ಸೇವಿಸಿದರೆ ಉತ್ತಮ. ಹಾಗಲ ಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಇದರ ಬಳಕೆಯಿಂದ ರೋಗ ನಿರೊಧಕ ಶಕ್ತಿ ವೃದ್ಧಿಸುವುದು. ಜಂತುನಾಶಕ, ಜೀರ್ಣಕಾರಕ, ಜ್ವರ ಪೀಡಿತರಿಗೆ ಬಾಯಿ ರುಚಿ ಹೆಚ್ಚಲು, ಮಲಬದ್ಧತೆಗೂ ಒಳ್ಳೆಯದು. ಹಾಗಲ ಕಾಯಿ ರಸ ಮೊಡವೆ ನಿವಾರಕ ಕೂಡ ಹೌದು. ಅಡುಗೆ: ಹಾಗಲ ಕಾಯಿಯಿಂದ ರುಚಿ ರುಚಿಯಾದ ನಾನಾ ತರದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಹಾಗಲ ಕಾಯಿ ಗೊಜ್ಜು, ಮೆಣಸುಕಾಯಿ, ಸಾಂಬಾರು, ಸೆಂಡಿಗೆ ಇತ್ಯಾದಿ. ಹಾಗಲ ತಳಿ: ಹಾಗಲದಲ್ಲಿ ಸ್ಥಳೀಯ ತಳಿಗಳಲ್ಲದೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಕೆಲವೊಂದು ಉತ್ತಮ ತಳಿಗಳನ್ನು ಸಂಶೋಧಿಸಿವೆ. ಮುಖ್ಯವಾಗಿ ಅರ್ಕಾಹರಿತ್, ಪೂಸಾದೋಮೌಸವಿ, ಕೊಯಮತ್ತೂರು ಲಾಂಗ್ ಮೊದಲಾದವುಗಳು.
ಕೃಷಿ
ಇದಕ್ಕೆ ಬೆಚ್ಚಗಿನ ಹವಾಗುಣ ಉತ್ತಮವಾಗಿರುತ್ತದೆ. ಆದರೆ ಸುಡು ಬಿಸಿಲು ಹಾಗೂ ತೀರಾ ಚಳಿಯ ವಾತಾವರಣ ಈ ಬೆಳೆಗೆ ಸರಿಹೊಂದುವುದಿಲ್ಲ. ಮುಂಗಾರಿನ ಬೆಳೆ ಜೂನ್-ಜುಲೈ ಹಾಗೂ ಬೇಸಗೆ ಬೆಳೆ ಜನವರಿ-ಫೆಬ್ರವರಿ ತಿಂಗಳಲ್ಲಿ ಮಾಡಿದರೆ ಇಳುವರಿ ಅಧಿಕ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಗೊಡ್ಡು ಮಣ್ಣು ಹಾಗೂ ರೇವೆಗೋಡು ಮಣ್ಣು ಹಾಗಲ ಕೃಷಿಗೆ ಉತ್ತಮ. ಕೆಂಪು ಮಣ್ಣಿನಲ್ಲೂ ಕೃಷಿ ಮಾಡಬಹುದು. ಹುಳಿ, ಕ್ಷಾರಯುತ ಮಣ್ಣು, ಜೌಗುಪೀಡಿತ ಮಣ್ಣು, ತಗ್ಗು ಪ್ರದೇಶ ಇದರ ಕೃಷಿಗೆ ಯೋಗ್ಯವಲ್ಲ. ಸುಮಾರು 3 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆ ಬರಲಾರದು. ಅದಕ್ಕಾಗಿ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ.
ಬೀಜ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಳದಿಯಾದಂತೆ ಅದು ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ
 ಹಾಗಲ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಅಗತ್ಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುಣಿಸಬೇಕು.

ಬೆಂಡೆ ಪುರಾಣ


ಇದೇನು ಬೆಂಡೆ ಪುರಾಣ ! ಎಂದು ಆಶ್ಚರ್ಯ ಪಡಬೇಡಿ. ನಾವು - ನೀವು ಹೆಚ್ಚಾಗಿ ಅಡುಗೆಗೆ ಬಳಸುವ ಬೆಂಡೆಕಾಯಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬೆಂಡೆಕಾಯಿಯನ್ನು ನೋಡಿದ ತತ್ಕ್ಷಣ ಮಹಿಳೆಯರ ಕೈ ಬೆರಳು ನೆನಪಿಗೆ ಬರುವವುದರಿಂದ ಬ್ರಿಟಿಷರು ಇದಕ್ಕೆ ‘ಲೇಡಿಸ್ ಫಿಂಗರ್’ ಎಂದು ಹೆಸರಿಟ್ಟಿದ್ದಾರೆ. ಸಸ್ಯ ಶಾಸ್ತ್ರದ ಪ್ರಕಾರ ಇದು ‘ಮಲ್ವೇಸಿ’ ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದೆ. ಇದು ದಕ್ಷಿಣ ಆಫ್ರಿಕಾ ಅಥವಾ ಏಷ್ಯಾ ಮೂಲದಿಂದ ಬಂದಿದೆ ಎನ್ನಲಾಗುತ್ತಿದೆ. ಸುಮಾರು 10 - 12ನೇ ಶತಮಾನಗಳಲ್ಲಿ ಅರಬ್ಬಿ ಜನಾಂಗದವರ ಸಂಚಾರದ ಮೂಲಕ ಮೆಡಿಟರೇನಿಯನ್ ರಾಷ್ಟ್ರಗಳಿಗೆ ಪಸರಿಸಿರಬೇಕು ಎಂದು ಪ್ರತೀತಿ. ಸುಮಾರು 16ನೇ ಶತಮಾನದ ಮೊದಲೇ ಇದು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿರಬೇಕು. ಆಫ್ರಿಕಾ, ಯುಎಸ್ಎ ಹಾಗೂ ಮೆಡಿಟರೇನಿಯನ್ ರಾಷ್ಟ್ರಗಳಲ್ಲಿ ಬೆಂಡೆ ‘ಓಕ್ರ’ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇದು ಉತ್ತರ ಆಫ್ರಿಕಾ ಖಂಡದ ಭಾಷ ವರ್ಗಕ್ಕೆ ಸೇರಿದ ಪದ. ಆ ಪ್ರದೇಶದ ಆದಿವಾಸಿಗಗಳು ತರಕಾರಿಯಾಗಿ ಇದನ್ನು ಬಳಸುತ್ತಿದ್ದರು.
ಪೌಷ್ಟಿಕಾಂಶ 
ಬೆಂಡೆಕಾಯಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ. ಆದರೆ ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮುಖ್ಯವಾಗಿ ಅದರಲ್ಲಿ ಪಿಷ್ಟ, ಸಾರಜನಕ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಮ್ಯಾಗ್ನೀಷಿಯಂ, ‘ಎ’ ಜೀವಸತ್ವ, ‘ಬಿ1’ ಜೀವಸತ್ವ, ‘ಬಿ2’ ಜೀವಸತ್ವ, ನಯಾಸಿನ್, ‘ಸಿ’ ಜೀವಸತ್ವ, ಪೊಟ್ಯಾಷಿಯಂ, ಆಕ್ಯಾಲಿಕ್ ಆಮ್ಲ,ಗಳಂತಹ ಪೌಷ್ಟಿಕಾಂಶಗಳಿವೆ.
ಔಷಧಿಯಾಗಿ ಬೆಂಡೆ
ಬೆಂಡೆ ಒಂದು ತಂಪು, ಪಿತ್ತ ಶಮನ ಹಾಗೂ ಉರಿಯನ್ನು ಕಡಿಮೆ ಮಾಡಬಲ್ಲ ಆಹಾರ. ಶೀತ, ಕೆಮ್ಮು ಇರುವವರು ಬೆಂಡೆಕಾಯಿಯೊಂದಿಗೆ ಶುಂಠಿ ಮತ್ತು ಮೆಣಸು ಸೇರಿಸಿ ಸೇವಿಸುವುದು ಉತ್ತಮ. ಬಲಿತ ಬೆಂಡೆಯನ್ನು ಎಸೆಯದೆ ತೊಳೆದು ಒಣಗಿಸಿಟ್ಟು, ದೊಸೆ ಹಿಟ್ಟಿನೊಂದಿಗೆ ಸೇರಿತಿರುವಿದರೆ ದೋಸೆ ಮೃದುವಾಗುವುದು. ಸ್ಥೂಲ ಕಾಯದವರಿಗೆ, ಮಧುಮೇಹಿಗಳಿಗೆ ಇದು ಉತ್ತಮ ತರಕಾರಿ. ಇದನ್ನು ತಿನ್ನುವುದರಿಂದ ಮಲವಿಸರ್ಜನೆ ಸುಲಭ. ಬೆಂಡೆಕಾಯಿಯಿಂದ ತಯಾರಿಸಿದ ಜ್ಯೂಸ್, ದಾಹವನ್ನು ಬಲುಬೇಗ ನಿವಾರಿಸುವುದು.
ಬೆಂಡೆ ಪದಾರ್ಥ
ಬೆಂಡೆಕಾಯಿಂದ ಹಲವಾರು ವಿಧವಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಪಲ್ಯ, ಸಂಬಾರು, ಬೆಂಡೆಗೊಜ್ಜು, ಬೆಂಡೆಕಾಯಿ ರಸಂ, ಬೆಂಡೆಕಾಯಿ ಸಾಸಿವೆ, ಬೆಂಡೆಕಾಯಿ ಫ್ರೈ, ಬೆಂಡೆ ಬಜೆ, ಬೆಂಡೆಕಾಯಿ ಬಾಳಕ, ಬೆಂಡೆ ಹುಳಿ ಇತ್ಯಾದಿ.
ಬೆಂಡೆ ಕೃಷಿ
ಬೆಂಡೆ ಕೃಷಿಗೆ ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಉತ್ತಮ. ಈ ಬೆಳೆಗೆ ಸರಿಯಾದ ಬಿಸಿಲು ಬೇಕು. ಇದು ಉಷ್ಣ ವಲಯದ ತರಕಾರಿ ಆದ್ದರಿಂದ ಕನಿಷ್ಟ 17 ಡಿಗ್ರಿ ಸೆ.ನಿಂದ 33 ಡಿಗ್ರಿ ಸೆ. ವರೆಗೆ ಉಷ್ಣತೆ ಇರುವ ಪ್ರದೇಶಗಳಲ್ಲಿ ಎಲ್ಲೆಡೆ ಬೆಳೆಯ ಬಹುದಾಗಿದೆ. ಬೆಂಡೆಯನ್ನು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದು. ಹೆಚ್ಚಾಗಿ ಜನವರಿ-ಫೆಬ್ರವರಿ ಹಾಗೂ ಜೂನ್-ಜುಲೈ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡಲಾಗುತ್ತದೆ.
ಕೊಯ್ಲು
ಬೆಂಡೆ ಗಿಡವಾಗಿ 40-45 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸಸಿ ಹೂ ಬಿಟ್ಟ ಅನಂತರ 3ರಿಂದ 7 ದಿನಗಳಲ್ಲಿ ಕಾಯಿಗಳು ಮೂಡುತ್ತವೆ. ನಾರಿಲ್ಲದ ಎಳೆಯ ಕಾಯಿಗಳನ್ನು 3-4 ದಿಗನಗಳಿಗೊಮ್ಮೆ ಕೊಯ್ಯಬಹುದು. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆಯ ಸಮಯ ಕೊಯ್ಲಿಗೆ ಸೂಕ್ತ. ಆಗಿಂದಾಗೆಗ್ಗೆ ಅನೇಕ ಬಾರಿ ಕೊಯ್ಲು ಮಾಡುವುದರಿ,ದ ಕಾಯಿಯ ಇಳುವರಿ ಹಾಗೂ ಗುಣಮಟ್ಟ ಹೆಚ್ಚುತ್ತದೆ. ಹಟ್ಟಿ ಗೊಬ್ಬರ ಅಥವಾ ಸಾವಯವ ಗೊಬ್ಬರಗಳನ್ನು ಬಲಸುವುದೇ ಉತ್ತಮ. ಇದರಿಂದ ಬಹುಕಾಲ ಕೊಯ್ಲುಲು ಸಾಧ್ಯ. ಇದಲ್ಲದೆ ಸುಡುಮಣ್ಣು ಅಥವಾ ಬೂದಿ, ಸೊಪ್ಪುನ್ನು ಗೊಬ್ಬರವಾಗಿ ಬಳಸಬಹುದು. ನೆಲಗಡಲೆ, ಕಹಿಬೇವಿನ ಹಿಂಡಿಯನ್ನು ನೀರಿನಲ್ಲಿ ನೆನೆಸಿ ಬೂದಿಯೊಂದಿಗೆ ಮಿಶ್ರಮಾಡಿ ಹಾಕಬಹುದು.
ರಕ್ಷಣೆ
ಕ್ರಿಮಿಕೀಟಗಳ, ರೋಗ ಬಾಧೆಗಳಿಂದ ಬೆಂಡೆ ಕೃಷಿಯನ್ನು ರಕ್ಷಿಸಲು ರಾಸಾಯನಿಕ ವಸ್ತುಗಳ ಸಿಂಪಡಣೆಗಿಂತ ಗೋಮೂತ್ರದ ಔಷಧವನ್ನು ತಯಾರಿಸಿ ಬಳಸಿದರೆ ಉತ್ತಮ.
 ಗೋಮೂತ್ರದ ಔಷಧ ತಯಾರಿ: ಒಂದು ಕೊಡ ನೀರಿಗೆ ಒಂದು ಕೇಜಿ ಹುಳಿ ಬೆಲ್ಲ, ಎರಡು ಲೀಟರ್ ಗೋಮೂತ್ರ ಮಿಶ್ರಮಾಡಿ ಒಂದು ದಿವಸ ಹಾಗೇ ಬಿಟ್ಟು ಮಾರನೇ ದಿನ ಗಿಡಗಳ ಮೇಲೆ, ಬುಡ ಹಾಗೂ ಸುತ್ತಲೂ ಸಿಂಪಡಿಸಬೇಕು. ತಿಂಗಳಲ್ಲಿ ಮೂರು ಬಾರಿ ಈ ರೀತಿ ಸಿಂಪಡಿಸುವುದರಿಂದ ಕೀಟ, ವಿವಿಧ ರೋಗಗಳಿಂದ ದೂರವಿರಬಹುದು.

ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ



ಕತ್ತಲಲ್ಲೇ ಅರಳಿ ಕತ್ತಲಲ್ಲೇ ಅಂತ್ಯಕಾಣುವ ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ. ಅರಳಿದ ಅಲ್ಪಕಾಲದಲ್ಲೇ ಸುವಾಸನೆ ಬೀರುತ್ತಾ, ತನ್ನ ಸೌಂದರ್ಯ ರಾಶಿಯಿಂದ ಕಣ್ಮನಸೂರೆಗೊಳ್ಳುವ ಈ ಹೂ ಅರಳುವದು ವರ್ಷಕ್ಕೊಮ್ಮೆ. ಅದರಂತೆ ಇದರ ಆಯಸ್ಸು ಕೂಡ ಕೆಲವೇ ಗಂಟೆಗಳು. ಕೇವಲ ಎಲೆಯಲ್ಲೇ ಹೂ ಬಿಟ್ಟು ಆಕರ್ಷಿಸುವ ಈ ಬ್ರಹ್ಮಕಮಲಕ್ಕೆ ಸರಿಸಾಟಿ ಹೂ ಮತ್ತೊಂದಿಲ್ಲ.

ಭಾನುವಾರ, ಜೂನ್ 17, 2012

ಅಪರೂಪದ ಮುಳುಗು ತಜ್ಞ ಬಾಳೆಯಡ ಪ್ರಕಾಶ್


ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ ಎನ್ನುವುದು ಅಕ್ಷರಶಃ ಸತ್ಯ. ಕೆಲವರ ಪ್ರತಿಭೆಗಳು ಪ್ರಚಾರಕ್ಕಾಗಿ ಅಗತ್ಯಕ್ಕಿಂತಲೂ ವೈಭವೀಕರಣಗೊಂಡು ಸಮಾಜದಲ್ಲಿ ಸಾಕಾರಗೊಂಡರೆ, ಇನ್ನು ಪ್ರಚಾರವನ್ನೂ ಬಯಸದೆ, ಫಲಾಪೇಕ್ಷೆಗೂ ಆಸೆಪಡದೆ ತಮ್ಮ ಪ್ರತಿಭೆಗಳನ್ನು ತಮ್ಮ ಮನಸ್ಸಂತೋಷಕ್ಕಾಗಿ ಮಾತ್ರ ರೂಢಿಸಿಕೊಂಡು ಮೌನವಾಗಿ ಸಾಧನೆ ಮಾಡುತ್ತಾ ಎಲೆಮರೆಯ ಕಾಯಿಯಂತೆ ಉಳಿಯುವವರು ಇನ್ನೊಂದು ವರ್ಗ. ಅಂತಹ ಎಲೆಮರೆಯ ಕಾಯಿಯಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಡದೆ ತಮ್ಮದೇ ಆದ ಶೈಲಿಯಲ್ಲಿ ಮೌನವಾಗಿ ಸಮಾಜ ಸೇವೆಯಲ್ಲಿ ನಿರತರಾಗಿರುವವರೆಂದರೆ ಬಾಳೆಯಡ ಪ್ರಕಾಶ್.facebook
ಸಮೀಪದ ಅಜ್ಜಿಮುಟ್ಟ ಗ್ರಾಮದ ಬಾಳೆಯಡ ಕುಟುಂಬಕ್ಕೆ ಸೇರಿದ ಇವರ ನಿವಾಸ ಕಾವೇರಿ ನದಿ ತೀರದಲ್ಲಿ ಇರುವ ಕಾರಣದಿಂದಲೊ ಏನೋ ಈಜು ಬಾಲ್ಯದಿಂದಲೇ ಕರಗತ. ಈಜು ಎಂದರೆ ಇವರಿಗೆ ಬಲು ಅಚ್ಚುಮೆಚ್ಚು. ಮೀನಿನಷ್ಟೇ ಸಲೀಸು ಕೂಡ.
ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿ ಪ್ರವಾಹದಲ್ಲಿ ಆಚೆ-ಈಚೆ ನದಿ ದಾಟುವ ಸಾಹಸಿ. ಆಳದ ನೀರಿನಲ್ಲಿ ಹಲವು ನಿಮಿಷಗಳವರೆಗೆ ಮುಳುಗಿ ಮೇಲೇಳುವ ಎದೆಗಾರಿಕೆಯೂ ಇವರಿಗೆ ರೂಢಿಯಾಗಿದೆ. ಇವರು ಸ್ವಲ್ಪಮಟ್ಟಿಗೆ ಗುರುತಿಸಿಕೊಳ್ಳಲು ಕಾರಣವಾಗಿದ್ದು ಸಹ ಈ ಈಜುವಿಕೆ ಮತ್ತು ಮುಳುಗುವಿಕೆಯೆ. ಬೇಸಗೆಯಾಗಲಿ, ಮಳೆಗಾಲವಾಗಲಿ, ಚಳಿಯಾಗಲಿ ನಾಪೋಕ್ಲು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನದಿ, ಕೆರೆಗಳಲ್ಲಿ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಸಂಭವಿಸಿದರೆ, ಶವ ಮೇಲೆತ್ತುವ ಕಾಯಕಕ್ಕೆ ಬಾಳೆಯಡ ಪ್ರಕಾಶ್ ಹಾಜರು. ಯಾವುದೇ ಫಲಾಪೇಕ್ಷೆ ಪಡದೆ ನಿಷ್ಕಳಂಕ ಮನೋಭಾವದಿಂದ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಶ್ ಅವರಿಗೆ ಈಗ 43ರ ಹರೆಯ. ತಮ್ಮ 18ನೇ ವರ್ಷದಿಂದ 43 ವರ್ಷ ಪ್ರಾಯದವರೆಗಿನ ಅವಧಿಯಲ್ಲಿ ಅವರು ನದಿ, ಕೆರೆ ಹಾಗೂ ಬಾವಿಗಳಿಂದ ಮೇಲೆತ್ತಿರುವ ಒಟ್ಟು ಶವಗಳ ಸಂಖ್ಯೆ 42. ಇವರಿಗೆ ಶವ ಮೇಲೆತ್ತುವ ಕೆಲಸವೆಂದರೆ ನೀರು ಕುಡಿದಷ್ಟೇ ಸಲೀಸು. ಯಾವುದೇ ಅಂಜಿಕೆಯಿಲ್ಲದೆ ಈ ಕೆಲಸದಲ್ಲಿ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡಿರುವ ತೃಪ್ತಿ ಅವರದು.
ಈ ಕುರಿತು ಅವರ ಅಭಿಪ್ರಾಯ ಬಯಸಿದಾಗ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡ ಅವರು, ನದಿ, ಕೆರೆ ಹಾಗೂ ಬಾವಿಗೆ ಬಿದ್ದು ಸಂಭವಿಸುವ ಆಕಸ್ಮಿಕ ಅಥವಾ ಆತ್ಮಹತ್ಯೆಯಂತಹ ಸಾವು ಪ್ರಕರಣಗಳಲ್ಲಿ ಅವರ ಕುಟುಂಬಗಳು ನೋವು, ಆಘಾತ ಅನುಭವಿಸುತ್ತಿದ್ದರೆ, ಅವರ ಕುಟುಂಬ ವರ್ಗದವರಿಗೆ ಯಾವ ಸಾಂತ್ವನವೂ ಸಮಾಧಾನ ನೀಡದು. ಆಗ ನೀಡುವ ನೆರವಷ್ಟೆ ಕೊಂಚ ಸಮಾಧಾನ ತಂದೀತು. ನೀರಿನಿಂದೆತ್ತಿ ಶವವನ್ನು ದಡ ಸೇರಿಸಿ ನೆರವಾಗಲು ತಮಗೆ ಯಾವ ಹಿಂಜರಿಕೆ ಇಲ್ಲ; ಇದಕ್ಕಾಗಿ ಯಾವ ನಿರೀಕ್ಷೆಯನ್ನೂ ಇರಿಸಿಕೊಳ್ಳುತ್ತಿಲ್ಲ ಎನ್ನುತ್ತಾರವರು. ಅದನ್ನು ಯಾವ ಅಂಜಿಕೆ ಇಲ್ಲದೆ ನಿರ್ವಹಿಸುತ್ತಿರುವುದಾಗಿ ಪತ್ರಿಕೆಯೊಂದಿಗೆ ಹೇಳಿಕೊಂಡ ಅವರು, ನೊಂದವರಿಗೆ ನೆರವು ನೀಡಿದ ತೃಪ್ತಿ ಮಾತ್ರ ನನ್ನದು ಎನ್ನುತ್ತಾರೆ. ಹಲವು ಸಂದರ್ಭಗಳಲ್ಲಿ ಶವ ತೆಗೆಯಲು ಎರಡರಿಂದ ಮೂರು ಗಂಟೆಗಳವರೆಗೂ ನದಿ, ಕೆರೆಗಳಲ್ಲಿ ತಡಕಾಡಿದ ಪ್ರಸಂಗಗಳನ್ನು ಸ್ಮರಿಸಿಕೊಳ್ಳುವ ಅವರು, ಆದರೆ ಎಲ್ಲ ಪ್ರಕರಣಗಳಲ್ಲೂ ಯಶಸ್ವಿಯಾಗಿರುವ ಹೆಚ್ಚುಗಾರಿಕೆ ತಮ್ಮದು ಎನ್ನುತ್ತಾರೆ.
ಬಾಳೆಯಡ ದಿವಂಗತ ಲಕ್ಷ್ಮಣ ಹಾಗೂ ಚೋಂದವ್ವ ದಂಪತಿಯ ಪುತ್ರರಾಗಿರುವ ಪ್ರಕಾಶ್, ಸಣ್ಣ ಕಾಫಿ ಬೆಳೆಗಾರರೂ ಹೌದು. ಮಳೆಗಾಲದಲ್ಲಿ ಕೃಷಿಗೆ ಅನುಕೂಲವಾಗುವ ಕೊಡೆಯಾಗಿ ಬಳಕೆಯಾಗುವ ಗೊರಗು ಹೆಣೆಯುವಿಕೆಯನ್ನೂ ಬಲ್ಲರು. ಬಡಗಿ ಕಲೆಯಲ್ಲೂ ಪರಿಣತಿ ಇರುವ ಇವರು ಕೃಷಿ ಪರಿಕರಗಳನ್ನು ಸ್ವತಃ ತಯಾರಿಸಿಕೊಳ್ಳಬಲ್ಲರು. ತಮ್ಮ ಪತ್ನಿಯ ಪ್ರೋತ್ಸಾಹವೂ ತಮ್ಮಲ್ಲೆ ಕಾಯಕದ ಬೆನ್ನಿಗಿದೆ ಎನ್ನುವ ಇವರದು ಪತ್ನಿ, ಇಬ್ಬರು ಪುತ್ರರ ಪುಟ್ಟ ಕುಟುಂಬ. ಪ್ರಸ್ತುತ 17 ಮತ್ತು 16ರ ಹರೆಯದ ಮಕ್ಕಳಿಬ್ಬರಿಗೂ 4 ವರ್ಷ ವಾಗಿದ್ದಾಗಲೇ ಈಜು ಕಲಿಸಿದ್ದಾರೆ. ಪ್ರಶಸ್ತಿ- ಗೌರವ ಇವರ ಸಾಹಸ, ಸಾಧನೆ ಮತ್ತು ಧೈರ್ಯಕ್ಕೆ ಅವರಿಗೆ ಈಗಾಗಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಲಭಿಸಿದೆ. ವಿರಾಜಪೇಟೆ ಕೊಡವ ಸಮಾಜವೂ ಇವರ ಸಾಧನೆಯನ್ನು ಗುರುತಿಸಿ ಸಮ್ಮಾನಿಸಿದೆ.

ಸ್ವಾತಂತ್ರ್ಯದ ತಪ್ಪು ಅರ್ಥೈಸುವಿಕೆ


ಸ್ವಾತಂತ್ರ್ಯವು ಸಂವಿಧಾನ ಮತ್ತು ಕಾನೂನಿನ ನಿರ್ಬಂಧಗಳನ್ನು ಹೊಂದಿದೆ ಹಾಗೂ ನ್ಯಾಯಾಂಗದ ರಕ್ಷಣೆಯನ್ನು ಹೊಂದಿದೆ. ಸ್ವಾತಂತ್ರ್ಯfacebook ಎಂದರೆ ಒಬ್ಬ ವ್ಯಕ್ತಿ ತನ್ನ ಹಕ್ಕುಗಳನ್ನು ಅನುಭವಿಸಿ, ಕರ್ತವ್ಯಗಳನ್ನು ನಿಭಾಯಿಸುವಾಗ ಇನ್ನೊಬ್ಬರ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ಗೌರವದಿಂದ ಕಾಣುವುದಾಗಿದೆ.
ಭಾರತದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಸಂವಿಧಾನದ 3ನೇ ಅಧ್ಯಾಯದಲ್ಲಿ 19ನೇ ವಿಯಿಂದ 22ನೇ ವಿಯವರೆಗೆ ಈ ಹಕ್ಕಿನ ಬಗ್ಗೆ ವಿವರಿಸಲಾಗಿದೆ. ಇದೊಂದು ಮೂಲಭೂತ ಹಕ್ಕು ಕೂಡಾ ಹೌದು. ಆದ್ಧರಿಂದ ನಾಗರಿಕರೆಲ್ಲರೂ ಈ ಹಕ್ಕಿನ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾದುದು ಅನಿವಾರ್ಯ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 63 ವರ್ಷಗಳೇ ಸಂದರೂ ಇಂದಿಗೂ ಸ್ವಾತಂತ್ರ್ಯ ಎಂಬ ಪದವನ್ನು ಸಮರ್ಪಕವಾಗಿ ಅರ್ಥೈಸಿಕೊಂಡವರ ಸಂಖ್ಯೆ ಬಹುವಿರಳ.
ವ್ಯಕ್ತಿಯು ತನ್ನ ಮನಸ್ಸಿಗೆ ತೋಚಿದ್ದನ್ನು ನಿರ್ಭಯವಾಗಿ ಮಾಡುವುದನ್ನು ಸ್ವಾತಂತ್ರ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ. ಆದರೆ ನನ್ನ ತೋಟದಲ್ಲಿ ಹೋಗಲು ನನಗೆ ಸ್ವಾತಂತ್ರ್ಯವಿದೆ ಎಂದು ಕೈ ಬೀಸಿಕೊಂಡು ಹೋದರೆ ನೋವಾಗುವುದು ನಮಗೆ. ವಾಸ್ತವವಾಗಿ ಒಬ್ಬ ವ್ಯಕ್ತಿಯು ತನಗನಿಸಿದಂತೆ ವರ್ತಿಸಲು ಸ್ವಾತಂತ್ರ್ಯವು ಅವಕಾಶ ಕೊಡುವುದಿಲ್ಲ, ಎಲ್ಲಾ ವಿಧದ ನಿರ್ಭಂದಗಳಿಂದ ಮುಕ್ತವಾದುದೆ ಸ್ವಾತಂತ್ರ್ಯ ಎಂದು ಅರ್ಥೈಸಲು ಸಾಧ್ಯವಿಲ್ಲ. ಅದನ್ನು ಸ್ವೇಚ್ಛೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಕವಿ ದಾ.ರಾ. ಬೇಂದ್ರೆ ಅವರು ತಮ್ಮ ಸ್ವಾತಂತ್ರ್ಯ ವರ್ಧಂತಿ ಎಂಬ ಕವಿತೆಯಲ್ಲಿ ‘‘ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರಾ’’ ಎಂದು ಹೇಳಿದ್ದಾರೆ. ಸ್ವೈರತ್ವ ಸಾಧನೆಗಾಗಿ ಈಗಿನ ಕೆಲವೊಂದು ರಾಜಕಾರಣಿಗಳು ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜಕೀಯದಲ್ಲಿ , ಸರಕಾರದ ಹುದ್ದೆಗಳಲ್ಲಿ ತಮ್ಮ ಸಂಬಂಧಿಕರಿಗೆ ಅವಕಾಶ ಒದಗಿಸಬೇಕೆಂದು ಪ್ರಯತ್ನಿಸುವುದು ಶೋಚನೀಯ ವಿಚಾರ.
ಸ್ವಾತಂತ್ರ್ಯದ ಮೂಲಭೂತ ಗರಿಷ್ಠತೆ ಕಾನೂನು. ಆದರೂ ಇಂದು ಸಮಾಜದಲ್ಲಿ ಸ್ವಾರ್ಥ, ಭ್ರಷ್ಟಾಚಾರ, ಸ್ವಾತಂತ್ರ್ಯದ ದುರ್ಬಳಕೆ ಇತ್ಯಾದಿ ಕಂಡುಬರಲು ಜನರಲ್ಲಿ ಅಜ್ಞಾನ, ನೈತಿಕ ಶಿಕ್ಷಣದ ಕೊರತೆ, ಅಹಂಕಾರಗಳೇ ಕಾರಣ. ಬೇಂದ್ರೆ ಅವರು ತಮ್ಮ ಇನ್ನೊಂದು ಕವನದಲ್ಲಿ ‘‘ಹಡೆದರಾಯ್ತೆ? ಪಡೆಯಬೇಕು ಪಡೆದವರಿಗೆ ಶಿಕ್ಷಣ’’ ಎಂದು ಹೇಳಿದ್ದಾರೆ. ಸ್ವಾತಂತ್ರ್ಯವು ಕೇವಲ ಕ್ರಮಬದ್ಧವಾದ ರಾಜ್ಯದಲ್ಲಿ ಮಾತ್ರ ಸಾಧ್ಯ. ಪ್ರೊ| ಶೀಲೆ ಅವರು ‘‘ಸ್ವಾತಂತ್ರ್ಯ ಎಂದರೆ ಎಲ್ಲೆ ಮೀರಿದ, ಸರಕಾರಕ್ಕೆ ವಿರೋಧವಾದುದು’’ ಎಂದಿದ್ದಾರೆ. ಸರಕಾರವನ್ನು ಟೀಕಿಸುವ ಸ್ವಾತಂತ್ರ್ಯ ಇದೆ ಎಂದು ಪ್ರತಿ ಪಕ್ಷದವರು ಪ್ರತಿಯೊಂದು ವಿಷಯಕ್ಕೂ ಆಡಳಿತ ಪಕ್ಷದವರನ್ನು ಟೀಕಿಸುತ್ತಾ, ಮುಷ್ಕರಗಳನ್ನು ನಡೆಸುತ್ತಾ, ಜನರ ಎದುರಿಗೆ ನಾವು ಒಳ್ಳೆಯವರೆಂದು ತೋರಿಸುತ್ತಾ, ಸ್ವಾರ್ಥಸಾಧನೆ ಮಾಡುವುದು ಸ್ವಾತಂತ್ರ್ಯದ ಅಪಾರ್ಥವಾಗುವುದು. ಬರ್ನರ ಪ್ರಕಾರ ‘‘ವ್ಯಕ್ತಿಯೊಬ್ಬನಿಗೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಹೊಂದಲು ಇರುವ ಅವಕಾಶವೆ ಸ್ವಾತಂತ್ರ್ಯ’’. ನನಗೆ ಸ್ವಾತಂತ್ರ್ಯವಿದೆ, ಸಾಮರ್ಥ್ಯವಿದೆ ಎಂದು ಭೂಗತ ದೊರೆಗಳಾಗಿ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವುದು, ಕಾನೂನು ಬಾಹೀರವಾಗಿರುತ್ತದೆ. ಮಹಾತ್ಮಾ ಗಾಂೀಜಿ ಅವರ ಪ್ರಕಾರ ‘‘ಸ್ವಾತಂತ್ರ್ಯವು ನಿರ್ಬಂಧಗಳ ಮುಕ್ತ ವಾತಾವರಣವಾಗಿರುವುದಿಲ್ಲ. ಆದರೆ ಅದು ಸ್ವಾತಂತ್ರ್ಯದ ಬೆಳವಣಿಗೆಯಲ್ಲಿರುತ್ತದೆ’’.
ಸಮಾಜದಲ್ಲಿ ಕೆಲವೊಂದು ಗಣ್ಯ ವ್ಯಕ್ತಿಗಳು ತಮ್ಮ ಮನೆಯಲ್ಲಿರುವ ಕೆಲಸದವರನ್ನು ಅಮಾನುಷವಾಗಿ ನೋಡಿಕೊಳ್ಳುವುದು, ಅವರ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೆ. ವಾಕ್ ಸ್ವಾತಂತ್ರ್ಯ ಇದೆ ಎಂದು ಮನ ಬಂದಂತೆ ಮಾತನಾಡುವ ಹಾಗಿಲ್ಲ. ಜನರು ಬೌದ್ಧಿಕ ಮತ್ತು ಪ್ರಯೋಗಾತ್ಮಕ ಸ್ವಾತಂತ್ರ್ಯವಿದೆ ಎಂದು ತಾನು ಹೊಂದಿರುವ ವಿಚಾರಧಾರೆಗಳನ್ನು ಇನ್ನೊಬ್ಬರ ಮೇಲೆ ಮಲತ್ಕಾರವಾಗಿ ಹೇರಲು ಸಾಧ್ಯವಿಲ್ಲ. ನಮಗೆ ಆಸ್ತಿಯ ಹಕ್ಕು ಇದೆ ಎಂದು ಅಕ್ರಮವಾಗಿ, ಕಾನೂನು ಬಾಹೀರವಾಗಿ ಆಸ್ತಿಯನ್ನು ಸಂಪಾದಿಸುವ ಹಾಗಿಲ್ಲ. ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಸ್ವಾತಂತ್ರ್ಯವಿದೆ. ಆದರೆ ಅಲ್ಲಿನ ಕಾನೂನು ನಿಯಮಗಳಿಗೆ ಬದ್ಧರಾಗಿರಬೇಕು. ನಮಗೆ ಸ್ವಾತಂತ್ರ್ಯವಿದೆ ಎಂದು ಎಷ್ಟೋ ಹೊತ್ತಿಗೆ ತರಗತಿಗೆ ಬರುವುದು ಹೋಗುವುದು, ಮಾಡಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ್ಯವಿದೆ ಎಂದು ನಮ್ಮ ಮನೆಯ ಟಿ.ವಿ., ರೇಡಿಯೋ ಅಥವಾ ಡಿವಿಡಿ ಇತ್ಯಾದಿಗಳನ್ನು ಗಟ್ಟಿಯಾಗಿ ಕೇಳುವಂತೆ ಇಟ್ಟರೆ ಅದರಿಂದ ಪಕ್ಕದ ಮನೆಯವರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗತ್ತದೆ. ಅದ್ದರಿಂದ ನಾವು ಸ್ವಾತಂತ್ರ್ಯ ಅನುಭವಿಸುವಾಗ ಎಚ್ಚರವಹಿಸಬೇಕಾದುದು ಅತ್ಯಗತ್ಯ. ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಇವು ಪರಸ್ಪರ ಪೂರಕವಾಗಿದ್ದರೆ ಅದು ಸರಿಯಾದ ಅರ್ಥ. ಒಂದಕೊಂದು ಮಾರಕವಾಗಿದ್ದರೆ ಅದು ಅಪಾರ್ಥ.

ಶುಕ್ರವಾರ, ಜೂನ್ 15, 2012

‘ಅಜ್ಜನ ಕೋಲಿದು ನನ್ನಯ ಕುದುರೆ..........’

facebook
ಅಜ್ಜನ ಕೋಲಿದು
ನನ್ನಯ ಕುದುರೆ ॥
ಹೆಜ್ಜೆಗೆ ಹೆಜ್ಜೆಗೆ
ಕುಣಿಯುವ ಕುದುರೆ ॥
ಹೌದು ಹಳ್ಳಿಗಳಲ್ಲಿ facebookಹಿಂದೆ ಅಜ್ಜನ ಊರುಗೋಲನ್ನು ಚಿಕ್ಕ ಮಕ್ಕಳು ಹಿಡಿದು ಹೀಗೆ ಹಾಡುತ್ತಾ ಕುಣಿಯುತ್ತಿದ್ದರು. ಇದು ಇಂದು ವಿರಳವಾಗಿದೆ. ದೇಹವನ್ನು ಸಂಬಾಳಿಸಿಕೊಂಡು ನಡೆದಾಡಲು ಕಷ್ಟ ಪಡುವ ವೃದ್ಧರು ಬಳಸುವ ಊರುಗೋಲು ಮಕ್ಕಳ ಆಟದ ಪರಿಕರವೂ ಆಗಿತ್ತು. ಆಧುನಿಕತೆಯ ಪ್ರಭಾವದಿಂದ ಇಂತಹ ಸರಳ ಆಟಿಕೆಗಳ ಬಾಳಕೆ ಇಲ್ಲವಾಗಿದೆ.
   ಹಿಂದಿನ ಕಾಲದಲ್ಲಿ ಅಜ್ಜ ಅಥವಾ ಅಜ್ಜಿ ಊರುಗೋಲನ್ನು ಕೈಯಿಂದ ಎಲ್ಲಿ ಇಡುತ್ತಾರೆ ಎಂದೇ ಮೊಮ್ಮಕ್ಕಳು ಹೊಂಚು ಹಾಕುತ್ತಿದ್ದರು. ಅವರು ಕೈಯಿಂದ ಬಿಟ್ಟ ತತ್ಕ್ಷಣವೆ ಮಕ್ಕಳ ಮಧ್ಯೆ ಊರುಗೋಲಿಗಾಗಿ ದೊಡ್ಡ ಸಂಗ್ರಾಮವೇ ಸಡೆಯುತ್ತಿತ್ತು. ಆಗ ಮಧ್ಯಸ್ತಿಕೆ ವಹಿಸಲು ಅಜ್ಜ ಅಥವಾ ಅಜ್ಜಿಯೇ ಬರಬೇಕಾಗುತ್ತಿತ್ತು.
ಊರುಗೋಲು ಬಳಕೆ
ಊರುಗೋಲನ್ನು ಹಲವಾರು ಕಾರಣಗಳಿಂದ ಬಳಸುತ್ತಿದ್ದರು. ಮುಖ್ಯವಾಗಿ ವೃದ್ಧರು, ಅಂಗವಿಕಲರು ನಡೆದಾಡಲು ಊರುಗೋಲಿನ ಸಹಾಯ ಪಡೆಯುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಊರಿನ ಪ್ರಮುಖರು ಊರುಗೋಲನ್ನ ಬಳಸುತ್ತಿದ್ದರು. ಉದಾಹರಣೆಗೆ: ಪಟೇಲರು, ಗುತ್ತಿನ ಮನೆಯ ಯಜಮಾನರು, ಧನವಂತರು, ಗುರಿಕಾರರು, ಜೋಯಿಸರು. ಊರುಗೋಲು ಬಳಸುವುದು ಒಂದು ಶ್ರೀಮಂತಿಕೆಯ ಸಂಕೇತವು ಆಗಿತ್ತು. ಕಲವರು ಶೋಕಿಗಾಗಿ (ಚಂದಕ್ಕಾಗಿ) ಬಲಸುತ್ತಿದ್ದರು. ಕಾವಲುಗಾರರು ರಕ್ಷಣೆಗಾಗಿ ಊರುಗೋಲನ್ನು ಉಪಯೋಗಿಸುತ್ತಿದ್ದರು.
ವೈವಿಧ್ಯ ಊರುಗೋಲುಗಳು
ಬಡವರು ಸಾಮನ್ಯ ಮರದ ಕೊಂಬೆ ಅಥವಾ ಬಿದಿರಿನ ಕೋಲುಗಳನ್ನು ಊರುಗೋಲಾಗಿ ಬಳಸುತ್ತಾರೆ. ಮಧ್ಯಮ ವರ್ಗದ ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಮರದ ಕೋಲು ಅಥವಾ ಬೆತ್ತಗಳನ್ನು ಊರುಗೋಲಾಗಿ ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಹೆಚ್ಚು ವಿಶೇಷವೇನೂ ಇರುವುದಿಲ್ಲ. ಹಿಂದೆ ಅಂಗವಿಕಲರು ಸಹ ಸಾಮಾನ್ಯ ಮರದ ಊರುಗೋಲುಗಳನ್ನೇ ಬಳಸುತ್ತಿದ್ದರು. ಶ್ರೀಮಂತರು, ಶೋಕಿಗಾಗಿ ಊರುಗೋಲು ಹಿಡಿಯುವವರು ಮಾತ್ರ ಬೆಲೆ ಬಾಳುವ ಬೆತ್ತಗಳನ್ನು ತಂದು, ಬಹಳ ನಾಜೂಕಾಗಿ ಕೆಲವೊಂದು ಕೆತ್ತನೆಗಳನ್ನು ಮಾಡಿ, ಬೇರೆ ಬೇರೆ ಲೋಹಗಳಿಂದ ಬೆತ್ತದ ಎರಡೂ ತುದಿಗಳಿಗೆ ಕಟ್ಟಗಳನ್ನು ಹಾಕಿ ಬಳಸುತ್ತಿದ್ದರು. ಬೆತ್ತವನ್ನು ನೆಲಕ್ಕೆ ಉರುವ ಭಾಗಕ್ಕೆ ಸಾಮಾನ್ಯವಾಗಿ ತಾಮ್ರ, ಕಂಚು, ಕಬ್ಬಿಣ ಇತ್ಯಾದಿ ಲೋಹಗಳಿಂದ ಕಟ್ಟ ಹಾಕುತ್ತಿದ್ದರು. ಕೈಯಲ್ಲಿ ಹಿಡಿಯುವ ಭಾಗಕ್ಕೆ ಚಿನ್ನ, ಬೆಳ್ಳಿ, ತಾಮ್ರ, ಕಂಚು ಇತ್ಯಾದಿ ಲೋಹಗಳಿಂದ ಕೆಲವೊಂದು ಪ್ರಾಣಿಗಳ ಮುಖವನ್ನು ಹೋಲುವ ಆಕರ್ಷಕವಾದ ಕಟ್ಟವನ್ನು ಹಾಕಲಾಗುತ್ತಿತ್ತು. ನಾಯಿ, ಮೀನು, ಸಿಂಹ, ಹುಲಿ, ಬಸವ, ಕುದುರೆ ಇತ್ಯಾದಿಗಳ ಮುಖಗಳನ್ನು ಹೋಲುವ ಕಟ್ಟಗಳನ್ನು ಲೋಹಗಳಲ್ಲಿ ಬಹಳ ನಾಜೂಕಾಗಿ ಕೆತ್ತಿ ಬಳಸುತ್ತಿದ್ದರು. ಹಾವು, ಮನುಷ್ಯನ ತಲೆ ಬುರುಡೆಯ ಆಕಾರದ ಕಟ್ಟಗಳು ಭಯ ಹುಟ್ಟಿಸುವಂತಿವೆ. ಅಲ್ಲದೆ ಮರದಲ್ಲಿಯೂ ಪ್ರಾಣಿಗಳ ಮುಖಗಳನ್ನು ಕೆತ್ತಿ ಉಪಯೋಗಿಸುತ್ತಿದ್ದರು. ಹೀಗೆ ಬೆಲೆ ಬಾಳುವ ಊರುಗೋಲು ಬಳಸುವರು ಇದರಿಂದ ಸಮಾಜದಲ್ಲಿ ತಮ್ಮ ಘನತೆ, ಗೌರವ, ಸ್ಥಾನ -ಮಾನ ವೃದ್ಧಿಯಾಗುತ್ತದೆ ಎಂದು ನಂಬಿದ್ದರು. ಅಂಥವರು ನಾಗರ ಬೆತ್ತವನ್ನು ಹೆಚ್ಚಾಗಿ ಬಳಸುತ್ತಿದ್ದರು. ನಾಗರ ಬೆತ್ತದ ಬಗ್ಗೆ ಕತೆಗಾರ ಸೇಡಿಯಾಪು ಕೃಷ್ಣ ಭಟ್ಟರು ಮನೋಜ್ಞವಾದ ಕಥೆಯೊಂದನ್ನು ಬರೆದಿದ್ದಾರೆ.





ಆಧುನಿಕ ಊರುಗೋಲು
ಇಂದು ಕಾಲ ಬದಲಾಗಿದೆ. ಊರುಗೋಲು ಶ್ರೀಮಂತಿಕೆಯ ಸಂಕೇತ ಎಂಬ ಭಾವನೆ ಇಲ್ಲವಾಗಿದೆ. ವೃದ್ಧರು, ಅಂಗವಿಕಲರು ಇಂದು ಮರದ ಊರುಗೋಲುಗಳನ್ನು ಬಳಕೆ ಮಾಡುವುದು ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಮಾತ್ರ ಅದನ್ನು ನೋಡಬುಹುದು. ಪಟ್ಟಣಗಳಲ್ಲಿ ಮರದ ಊರುಗೋಲುಗಳ ಸ್ಥಾನವನ್ನು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳಿಂದ ತಯಾರಿಸಿದ ಊರುಗೋಲುಗಳು ಆಕ್ರಮಿಸಿಗೊಂಡಿವೆ. ಹಗುರವಾದ, ಕೈಯಲ್ಲಿ ಹಿಡಿಯಲು ಆರಾಮದಾಯಕವಾದ, ವಾಹನಗಳಲ್ಲಿ ಸಂಚರಿಸುವ ವೇಳೆ ಮಡಚಿ ಚೀಲದಲ್ಲಿ ಕೊಂಡ್ಯೊವಂತಹ ಊರುಗೋಲುಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಹೀಗೆ ಊರುಗೋಲು ಬಳಕೆ, ತಯಾರಿಗೆ ಬಳಸುವ ವಸ್ತು ಮತ್ತು ಜನರಲ್ಲಿನ ವ್ಯತ್ಯಾಸ, ವಿವಿಧತೆಗಳನ್ನು ಗುರುತಿಸ ಬಹುದಾಗಿದೆ.
ಊರುಗೋಲು ತಯಾರಿಗೆ ಬೇರೆ ಬೇರೆ ವಿಧದ, ಗಟ್ಟಿಯಾದ, ತುಂಬಾ ಸಮಯ ಬಾಳಿಕೆ ಬರುವ ಮರಗಳನ್ನು ಬಳಸುತ್ತಾರೆ. ಮುಖ್ಯವಾಗಿ ಮಂದಾರ, ನಾಗರ ಬೆತ್ತ, ಕೆಲವೊಂದು ಜಾತಿಯ ಬಿದಿರುಗಳು, ಪೇರಳೆ, ತೇಗ, ಸಾಗುವಾನಿ, ಕುಂಟಾಲ ಇತ್ಯಾದಿ.

ಕುಂದುತಿದೆ ಜನ್ಮ ಭೂಮಿ ಬಗೆಗಿನ ಗೌರವ

‘‘ಅಪಿ ಸ್ವರ್ಣ ಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ
  ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’’ 
ಈ ಮಾತನ್ನು ರಾಮಾಯಣದಲ್ಲಿ ಹೇಳಲಾಗಿದೆ. ರಾವಣನನ್ನು ಶ್ರೀರಾಮನು ಸೋಲಿಸಿದ ಅನಂತರ ಲಕ್ಷ್ಮಣನು ಅಣ್ಣನಾದ ಶ್ರೀರಾಮನಲ್ಲಿ ನಾವು ಈ ಲಂಕೆಯಲ್ಲಿಯೇ ಉಳಿಯೋಣ. ಅಯೋಧ್ಯೆಯನ್ನು ನೋಡಿಕೋಳ್ಳಲು ಭರತನಿದ್ದಾನೆ. ನಾವು ಗೆದ್ದ ಈ ರಾಜ್ಚ ಈಗ ಅರಾಜಕವಾಗಿದೆ. ಆದ್ದರಿಂದ ನೀನು ಇಲ್ಲಿಯ ಅರಸನಾಗು ಎಂದು ಕೇಳಿಕೊಂಡಾಗ ಶ್ರೀರಾಮನು ಲಕ್ಷ್ಮಣನಿಗೆ ‘‘ಈ ಲಂಕೆಯು ಸಂಪತದ್ಭರಿತವಾಗಿದ್ದರೂ ಸ್ವರ್ಣಮಯೀಯಾದರೂ ನನ್ನ ಪಾಲಿಗೆ ಶ್ರೇಷ್ಠವೆನಿಸದು. ಯಾಕೆಂದರೆ ಅಯೋಧ್ಯೆಯಲ್ಲಿ ನನ್ನ ಜನನಿ ಇದ್ದಾಳೆ. ಮಾತ್ರವಲ್ಲ ಅದು ನನ್ನ ಜನ್ಮ ಭೂಮಿ ಇವೆರಡು ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಇಲ್ಲಿ ತಾಯಿ ಮತ್ತು ತಾಯಿ ನೆಲದ ಬಗೆಗಿನ ಶ್ರೀರಾಮನ ಅಭಿಮಾನ, ಗೌರವನ್ನು ಕಾಣಬಹುದು.
   ನಮ್ಮ ದೇಶದ ಸಂಸ್ಕೃತಿಯಲ್ಲಿ ತಾಯಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಎಂಬ ಮಾತಿದೆ. ತಾಯ್ತನಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಮಾನ್ಯತೆ ಇದೆ. ಹೊತ್ತು-ಹೆತ್ತು, ಸಾಕಿ-ಸಲಹಿದ ತಾಯಿ ವಾತ್ಸಲ್ಯಮಯಿ. ತಾಯಿಯ ತ್ಯಾಗ, ಔದಾರ್ಯ, ಪ್ರೀತಿ ಅಮೋಘ. ಅಂತೆಯೇ ನಮಗೆ ಆಸರೆ ನೀಡುವ ನಾಡು ಕೂಡಾ ತಾಯಿಗೆ ಸಮಾನ. ಆಶ್ರಯ ನೆಲೆಯಾದ ನಾಡು ಜೀವನ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ಕೇಂದ್ರ ಬಿಂದು. ಹೆತ್ತ ತಾಯಿ ಮಡಿಲಿನಲ್ಲಿ ಬೆಳೆಯುವ ಜೀವನ ಸ್ವರ್ಗಕ್ಕೆ ಮಿಗಿಲು. ತಾಯಿ ಸ್ಥಾನ ವಿಶ್ವದಲೇ ಹಿರಿದು. ಆದುದರಿಂದಲೇ ಒಬ್ಬಳು ಆದರ್ಶ ತಾಯಿಯು ನೂರು ಜನ ಗುರುಗಳಿಂತ ಶ್ರೇಷ್ಠಳು ಎಂದು ಬೈಬಲ್ನಲ್ಲಿ ಹೇಳಲಾಗಿದೆ.
ಯಾವ ನೆಲದ ಗಂಧಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷ ಧಾರೆ ಲಿಸಿ ಚಿಗುರು ತಂದಿತೋ 
ಅದೇ ಎನ್ನ ಜನ್ಮ ಭೂಮಿ, ಅದೇ ಎನ್ನ ಪುಣ್ಯ ಭೂಮಿ ॥
    ಇದು ಕವಿಯ ಜನ್ಮ ಭೂಮಿಯ ಬಗೆಗಿನ ಅಭಿಮಾನ, ಪ್ರೀತಿ, ಗೌರವದ ಸಂಕೇತವಾಗಿದೆ. ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ಭಾವನೆಯೇ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಿಗೆ ಸೂರ್ತಿ ದಾಯಕವಾದುದಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಮರಣ ದಂಡನೆಗೆ ಗುರಿಯಾದ ಭಾರತದ ಕ್ರಾಂತಿಕಾರಿ ತರುಣ ಭಗತ್ ಸಿಂಗ್ ತನ್ನ ಜೀವನದ ಕೊನೆಯ ಕ್ಷಣದಲ್ಲಿ ‘‘ಆಶ್ರಯ ನೀಡಿದ ಈ ಭೂಮಿಗಾಗಿ ಜೀವ ತೊರೆಯಲು ಸಂತೋಷವಾಗುತ್ತಿದೆ. ಇದನ್ನು ನೋಡಲು ನೀವು ಪುಣ್ಯವಂತರು’’ ಎಂದು ಬ್ರಿಟಿಷ್ ಅಕಾರಿಗಳಿಗೆ ಹೇಳಿದ ಮಾತು ಜನ್ಮ ಭೂಮಿ ಪರಕೀಯರ ಬಂಧನದಲ್ಲಿರುವಾಗ ನಾವು ಅದರ ವಿರುದ್ಧ ಹೋರಾಡಿ ಸಾಯುವುದೇ ಮೇಲು ಎಂಬುದನ್ನು ಸೂಚಿಸುತ್ತದೆ. 
ಅಭಿಮಾನ ಶೂನ್ಯ 
ಇಂದು ಜನರಲ್ಲಿ ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಶೂನ್ಯವಾಗಿ ತಾಯಿಯನ್ನು ಕಡೆಗಣಿಸುವ, ಗೌರವಿಸದಿರುವ ಮನೋಭಾವನೆ ಬೆಳೆಯುತ್ತಿದೆ. ಜನ್ಮ ಭೂಮಿ ಬಗ್ಗೆ ತ್ಸಾರ ಭಾವನೆ ಹೆಚ್ಚುತ್ತಿದೆ. ಇದರಿಂದ ಜನ ಇಂದು ವಿದೇಶಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವೂ ಇದೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಬೌದ್ಧಿಕ, ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೆ ಹೊರತು, ನೈತಿಕ ವಿಕಾಸದ ಕಡೆ ಗಮನ ಹರಿಸಿಲ್ಲ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ, ದೃಢವಾಗಿದ್ದು, ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿತು. ಸಮಾಧಾನಕರವಾಗಿ, ಶಾಂತಿಯುತವಾಗಿ ಪರಿಹರಿಸಬೇಕು. ಇದು ಮಾನವ ಧರ್ಮದ ಗುಣವಾಗಿದೆ. ಮಾನವ ಧರ್ಮ ಅಥವಾ ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅಗತ್ಯವಿದೆ. ನೈತಿಕ ಶಿಕ್ಷಣದ ಕೊರತೆಯಿಂದಾಗಿ ಇಂದು ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಜನರಲ್ಲಿ ಕುಂದುತ್ತಿದೆ. 
  ಈ ಆಧುನಿಕ ಯುಗದಲ್ಲಿ ‘‘ಉದರ ನಿಮಿತ್ತಂ ಬಹುಕೃತ ವೇಷಂ’’ ಎಂಬಂತೆ ಉದ್ಯೋಗದ ನಿಮಿತ್ತವಾಗಿ ಎಲ್ಲೇ ಇದ್ದರೂ ತಾಯಿ ಮತ್ತು ತಾಯಿ ನೆಲದ ಬಗೆಗಿನ ಅಭಿಮಾನ, ಪ್ರೀತಿ, ಗೌರವವನ್ನು ಬಿಟ್ಟು ಬಿಡಬಾರದು. ಯಾಕೆಂದರೆ ನಮ್ಮ ಜನ್ಮಕ್ಕೆ ಕಾರಣರಾದ ತಾಯಿ ಮತ್ತು ಜನ್ಮ ಭೂಮಿಯು ಇಲ್ಲದಿದ್ದರೆ ನಾವು ಹುಟ್ಟುತ್ತಲೇ ಇರಲಿಲ್ಲ. ತಾಯಿಯ ಎದೆಯ ಹಾಲನ್ನು ಕುಡಿದು, ತಾಯ್ನೆಡಿನ ನೀರು, ಗಾಳಿ, ಬೆಳಕು, ಮಣ್ಣಿನ ಸತ್ವ ಹೀರಿ ಬೆಳೆದ ವ್ಯಕ್ತಿಗೆ ನೆಲದ ಋಣ ತೀರಿಸುವ ಗುರುತರವಾದ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ. ಆ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಸಭ್ಯರ ಲಕ್ಷಣವಲ್ಲ. ಇದರ ಬದಲು ಜನ್ಮ ಭೂಮಿಯಲ್ಲೇ ನೆಲೆಸಿ ಜನ ಸೇವಾ ಕಾರ್ಯದಲ್ಲಿ ನಿರತರಾದರೆ ಈ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದಂತಾಗುತ್ತದೆ.

ಮೀಸೆ ಪುರಾಣ!


ಗಡ್ಡ, ಮೀಸೆಗಳು ಪುರುಷತ್ವದ ಲಕ್ಷಣ. ಗಂಡಸರ ಮೂಗು ಮತ್ತು ಬಾಯಿಯ ಮಧ್ಯದಲ್ಲಿ ಬೆಳೆಯುವ ಕೂದಲುಗಳ ಸಮೂಹಕ್ಕೆ ‘ಮೀಸೆ’facebook ಎಂದು ಕರೆಯುಲಾಗುತ್ತದೆ. ಗಂಡು ಮಕ್ಕಳು ಯವ್ವನಕ್ಕೆ ಕಾಲಿಡುತ್ತಿದ್ದಂತೆ ಅವರ ಮುಖದಲ್ಲಿ ಗಡ್ಡ, ಮೀಸೆ ಬೆಳೆಯಲಾರಂಭಿಸುತ್ತದೆ. ಗಂಡು ಮಕ್ಕಳು ಯುವಕರಾಗುತ್ತಿರುವುದರ ಸಂಕೇತ ಮೀಸೆ ಚಿಗುರುವುದು. ಬೆಳೆಯುತ್ತಿರುವ ಮಕ್ಕಳಿಗೆ ತಮ್ಮ ಅಪ್ಪನೇ ‘ರೋಲ್ ಮೊಡೆಲ್’ ಆದ್ದರಿಂದ ತಂದೆಯಂತೆ ಮೀಸೆ ಬಿಡಲು ಅಥವಾ ತೆಗೆಯಲು ಪ್ರಾರಂಭಿಸುತ್ತಾರೆ.
ಹಿಂದಿನ ಕಾಲದಲ್ಲಿ ಮೀಸೆ ಎಂಬುದು ಯಜಮಾನಿಕೆ, ಶ್ರೀಮಂತಿಕೆ, ಅಧಿಕಾರದ ಸಂಕೇತವಾಗಿತ್ತು. ರಾಜರು, ಮಂತ್ರಿಗಳು, ಸೇನಾ ಅಧಿಕಾರಿಗಳು, ಸೈನಿಕರು, ಪಾಳೇಗಾರರು, ಜಮೀದ್ದಾರರು, ಸಾಮಾಜದಲ್ಲಿರುವ ಗಣ್ಯವ್ಯಕ್ತಿಗಳು ತಮ್ಮಲ್ಲಿರುವ ಹಣ-ಅಂತಸ್ತು, ಅಧಿಕಾರಕ್ಕೆ ತಕ್ಕಂತೆ ಮೀಸೆ ಬೆಳೆಸಿಕೊಳ್ಳುತ್ತಿದ್ದರು. ಅಂಥವರ ಮೀಸೆ ನೋಡಿಯೇ ಸಮಾಜದಲ್ಲಿ ಅವರ ಸ್ಥಾನ-ಮಾನ ಹೇಗಿತ್ತು ಎಂಬುದನ್ನು ತಿಳಿಯಬಹುದಾಗಿತ್ತು. ಜಗಜಟ್ಟಿಗಳು, ಕುಸ್ತಿಪಟುಗಳು ಕೂಡ ಮೀಸೆ ಬೆಳೆಸುತ್ತಿದ್ದರು. ಜನಸಾಮಾನ್ಯರು ಹಿಂದಿನ ಕಾಲದಲ್ಲಿ ಮೀಸೆ ಇಟ್ಟುಕೊಳ್ಳತ್ತಿರಲಿಲ್ಲ.
ಹಿಂದೆ ಮೀಸೆಗೆ ಬಹಳಷ್ಟು ಗೌರವವಿತ್ತು. ಕೆಲವೊಂದು ಸಂದರ್ಭಗಳಲ್ಲಿ ಮೀಸೆಯನ್ನು ಉದ್ದೇಶಿಸಿ ಸವಾಲೆಸೆಯುತ್ತಿದ್ದರು. (ಉದಾಹರಣೆಗೆ ಮೀಸೆ ಇದ್ದಗಂಡಸಾದರೆ ಬಾರೋ) ಮೀಸೆ ತಮ್ಮ ಗೌರವದ ಸಂಕೇತ ಆದ್ದರಿಂದ ಬೆಟ್ ಕಟ್ಟಲು ಕೈಯಲ್ಲಿ ಹಣವಿಲ್ಲದಿದ್ದರೆ ‘ಸೋತ್ರೆ ಮೀಸೆ ಬೋಳಿಸುತ್ತೇನೆ’ ಅನ್ನುವವರೂ ಇದ್ದರು. ಕೆಲವೊಂದು ಸಂದರ್ಭಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಕ್ಕಾಗಿ, ಅವಮಾನ ಮಾಡುವುದಕ್ಕಾಗಿ ಮೀಸೆಯನ್ನು ಬಲಿಕೊಡುತ್ತಿದ್ದರು. ಅದು ಹೇಗೆಂದರೆ ಅರ್ಧ ಮೀಸೆ ಬೋಳಿಸಿ ಊರಿನಲ್ಲಿ ಮೆರವಣಿಗೆ ಮಾಡೋದು ಇತ್ಯಾದಿ.
 ಇಂದು ಕಾಲ ಬದಲಾಗಿದೆ. ಜನಸಾಮಾನ್ಯರು ಕೂಡ ಮೀಸೆ ಬೆಳೆಸುತ್ತಾರೆ. ಮೀಸೆಯಿಂದ ಆತ ಸ್ಥಿತಿವಂತ, ಗಣ್ಯವ್ಯಕ್ತಿ ಎಂದು ಗುರುತಿಸಲು ಸಾಧ್ಯವಿಲ್ಲ. ಹಿಂದಿನವರಂತೆ ದೊಡ್ಡಗಾತ್ರದ ಮೀಸೆಗಳು ಇಂದು ಇಲ್ಲವಾಗಿದೆ. ಬದಲಾಗಿ ಟ್ರಿಮ್ ಆದ ಸಣ್ಣ ಗಾತ್ರದ ಮೀಸೆಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬರುವ ಹಲವಾರು ಪಾತ್ರಗಳು ನಾನಾ ರೀತಿಯ ಮೀಸೆಗಳನ್ನು ಬೆಳೆಸಿಕೊಂಡಿರುತ್ತವೆ. ಅವುಗಳನ್ನು ನೋಡಿದ ಜನ ಮುಖ್ಯವಾಗಿ ಯುವಕರು ತಮ್ಮ ನೆಚ್ಚಿನ ಹೀರೋಗಳು ಬೆಳೆಸಿದಂತೆ ಮೀಸೆ ಬೆಳೆಸಿಕೊಳ್ಳುವವರೂ ಇದ್ದಾರೆ.
ಶ್ರೀಮಂತರು, ಅವರ ಮಕ್ಕಳು, ಸಮಾಜದಲ್ಲಿನ ಗಣ್ಯವ್ಯಕ್ತಿಗಳು, ಚಿತ್ರನಟರು, ಕ್ರಿಡಾಪಟುಗಳು ಹೆಚ್ಚಾಗಿ ಕ್ಲೀನ್ ಶೇವ್ ಮಾಡುವವರೆ ಅಧಿಕ. ಯಾಕೆಂದರೆ ಮೀಸೆ ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಮೀಸೆ ದಿನೇ ದಿನೇ ಬೆಳೆಯುತ್ತಿರುತ್ತದೆ. ವಾರಕ್ಕೆ 2 ಭಾರಿಯಾದರೂ ಅದನ್ನು ಟ್ರಿಮ್ ಮಾಡ್ಕೊಂಡರೆ ಮಾತ್ರ ಚೆನ್ನಾಗಿ ಕಾಣಿಸುತ್ತದೆ. ಟ್ರಿಮ್ ಮಾಡುವಾಗ ಅತಿಯಾ ಜಾಗೃತೆ ಅಗತ್ಯ. ಇತ್ತ ದಪ್ಪ-ಅತ್ತ ತೆಳು, ಅತ್ತ ಉದ್ದ- ಇತ್ತ ಗಿಡ್ಡ ಆದರೆ ಮತ್ತೆ ಸರಿಪಡಿಸುವುದು ತುಂಬಾ ಕಷ್ಟ. ಇಂತಹ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಬದಲು ಕ್ಲೀನ್ ಶೇವ್ ಮಾಡುವುದೇ ಉತ್ತಮ ಎನ್ನುವವರೇ ಇಂದು ಹೆಚ್ಚು. ಅಲ್ಲದೆ ವಯಸ್ಸಾದಂತೆ ಮೀಸೆ ಅರ್ಧ ಕಪ್ಪು- ಅರ್ಧ ಬಿಳಿ ಆಗುವುದಕ್ಕೆ ಮೊದಲೇ ಕ್ಲೀನ್ ಶೇವ್ ಮಾಡುವುದು ಒಳ್ಳೆಯದು ಎನ್ನೋರು ಇದ್ದಾರೆ.
ಮೀಸೆ ಇರುವವರಿಗೆ ಕೊಲವೊಂದು ವಿಶೇಷ ಹವ್ಯಾಸಗಳಿರುತ್ತವೆ. ಅವುಗಳೆಂದರೆ ಆಗ್ಗಾಗೆ ಕನ್ನಡಿಯಲ್ಲಿ ತಮ್ಮ ಮೀಸೆಯ ಚಂದ ನೋಡುತ್ತಾ, ಬಾಚುವುದು, ಮೀಸೆ ಮೇಲೆ ಕೈಯಾಡಿಸುತ್ತಿರುವುದು, ಮೀಸೆಯ ಒಂದು ತುದಿಯನ್ನು ಹಿಡಿದು ತಿರುವುದು, ಮೀಸೆಯನ್ನು ಎಳೆದು ಕಚ್ಚುತ್ತಿರುವುದು ಇತ್ಯಾದಿ. ಮೀಸೆ ಕೇವಲ ಮನುಷ್ಯರಿಗೆ ಮಾತ್ರ ಬರುವಂತದಲ್ಲ ಇತರ ಪ್ರಾಣಿಗಳಿಗೂ ಬರುತ್ತವೆ. ಮನುಷ್ಯರಲ್ಲಿ ಪುರುಷರಿಗೆ ಮಾತ್ರ ಮೀಸೆ ಬರುತ್ತದೆ. ಅಲ್ಲದೆ ಕೆಲವೊಂದು ನಪುಂಸಕರಿಗೂ ಮೀಸೆ ಇರುತ್ತದೆ. ಪ್ರಾಣಿಗಳಲ್ಲಿ ಗುಂಡು-ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲದಕ್ಕೂ ಮೀಸೆ ಬರುತ್ತವೆ.
ಮೀಸೆಗೆ ಸಂಬಂಧಿಸಿದಂತೆ ಹಲವಾರು ಗಾದೆ, ಹಾಡು, ಅಡುಮಾತು, ನುಡಿಮುತ್ತು ಇತ್ಯಾದಿಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ‘ಜಟ್ಟಿ ಬದ್ರೂ ಮೀಸೆಗೆ ಮಣ್ಣಾಗಿಲ್ಲ’, ‘ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ’, ‘ದೋಸೆ ತಿನ್ನುವಾಗ ಮೀಸೆ ಮುರಿದ ಹಾಗೆ’, ‘ರಾಜನಿಗೆ ಮೀಸೆ ಕೈಹೋದರೆ ಸಭೆ ಕಾಣುವುದಿಲ್ಲ’, ‘ಮೀಸೆ ಬಂದವನಿಗೆ ದೇಶ ಕಾಣಲ್ಲ’, ‘ಭಾಷೇನೂ ಇಲ್ಲ ಮೀಸೇನೂ ಇಲ್ಲ’, ‘ಮೀಸೆ ಚಿಗುರಿದಾಗ ನೆಲ ಕಾಣಲ್ಲ’, ‘ಮೀಸೆ ತುದಿಯಲ್ಲಿ ನಗು ನೋಡು’, ‘ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು....’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ....’, ‘ಮೀಸೆ ತಿರುವಿ ಕುಣಿದವರೆಲ್ಲ ಮಣ್ಣಾದರು ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು....’ ಮುಂತಾದವುಗಳು. ಮಲಯಾಳದಲ್ಲಿ ‘ಮೀಸೆ ಮಾಧವನ್’ ಎನ್ನುವ ಸಿನೆಮಾ ಕೂಡ ಬಂದಿದೆ. ಡಾ ವಿಷ್ಣುವರ್ಧನ್ ಅವರ ಯಜಮಾನ, ಸಿಂಹಾದ್ರಿಯ ಸಿಂಹ, ಸೂರ್ಯವಂಶ, ಆಪ್ತರಕ್ಷಕ ಮುಂತಾದ ಸಿನೆಮಾಗಳಲ್ಲಿ ನಾಯಕನ ಮೀಸೆ ಆಕರ್ಷಣೆಯ ಕೇಂದ್ರವಾಗಿತ್ತು. ಇತ್ತೀಚೆಗೆ ಬಂದ ವೀರಪರಂಪರೆ ಸಿನೆಮಾದಲ್ಲಿ ಅಂಬರೀಶ್ ಮೀಸೆ ಜನರ ಗಮನ ಸೆಳೆದಿತ್ತು.
ಮೀಸೆಯಿಂದಲೇ ಹೆಸರು ಪಡೆದವರು
ತಮ್ಮ ಮೀಸೆಯಿಂದಲೇ ಪ್ರಸಿದ್ಧರಾದವರು, ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದವರು ಹಲವಾರು ಮಂದಿ ಇದ್ದಾರೆ. ಮುಖ್ಯವಾಗಿ ಕಾಡುಗಳ್ಳ ವೀರಪ್ಪನ್, ನಕ್ಕೀರ ಗೋಪಾಲನ್, ಹಿಟ್ಲರ್, ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್, ಮಾಜಿ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ವೆಂಗ್ಸರ್ಕಾರ್, ಡೇವಿಡ್ ಬೂನ್, ಕ್ಲೈವ್ ಲಾಯ್ಡಿ ಹಾಗೂ ಮೀಸೆ-ಗಡ್ಡ ಮೂಲಕ ಬ್ರಿಜೇಶ್ ಪಟೇಲ್ ಮೊದಲಾದವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಹೋಮ್ಗಾರ್ಡ್ ಅಶೋಕ ಎನ್ನುವವರು ಕೂಡ ತಮ್ಮ ದೊಡ್ಡದಾದ ಮೀಸೆಯಿದಂಲೇ ಗುರುತಿಸಲ್ಪಟ್ಟವರು. ಹಲವಾರು ಜನ ಸಾಧು-ಸಂತರು ಕೂಡ ಉದ್ದವಾದ, ದೊಡ್ಡದಾದ ಮೀಸೆ ಬೆಳೆಸಿ ಜನರ ಗಮನ ಸೆಳೆದಿದ್ದಾರೆ. ಅತೀ ಉದ್ದನೆಯ ಮೀಸೆಯ ಸರದಾರ ಭಾರತದ ಬಜನ್ಸಿನ್ಹ ಜುಲಾಸಿನ್ಹ ಗುರ್ಜಾರ್. ಆತನ ಮೀಸೆ 12 ಅಡಿ ಉದ್ದ, 6 ಇಂಚು ದಪ್ಪ ಇತ್ತು. ಆತನಿಗೆ ಈ ರೀತಿಯಾಗಿ ಮೀಸೆ ಬೆಳೆಸಲು 22 ವರ್ಷ ಬೇಕಾಗಿದೆಯಂತೆ. ಇದು 2004ರಲ್ಲಿ ವಿಶ್ವದಾಖಲೆ ಎನಿಸಿತ್ತು. ಹಲವಾರು ಜನ ಸಾಹಸಿಗಳು ತಮ್ಮ ಉದ್ದನೆಯ ಮೀಸೆಯಿಂದ ಭಾರ ಎತ್ತುವುದು, ವಾಹನ ಎಳೆಯುವುದು ಇತ್ಯಾದಿ ಸಾಹಸ ಪ್ರದರ್ಶಿಸುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ.
ಮೀಸೆಯ ವಿವಿಧ ನಾಮ
ಜನರು ಮೀಸೆಯನ್ನು ಅದರ ಆಕಾರ, ಗಾತ್ರಕ್ಕೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಪ್ರಮುಖವಾಗಿ ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಕಡ್ಡಿ ಮೀಸೆ, ಹುರಿ ಮೀಸೆ, ಬೆಕ್ಕಿನ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆ ಮೀಸೆ, ಫಿಲ್ಟರ್ ಮೀಸೆ, ಇತ್ಯಾದಿ. ಊರುಗಳು ಬದಲಾದಂತೆ ಮೀಸೆಯ ಹೆಸರುಗಳಲ್ಲಿ ಹಲವಾರು ಬದಲಾವಣೆಗಳನ್ನು ನೋಡಬಹುದು. ಈಗ ಮೀಸೆ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಯಾರೂ ಏನೂ ಅನ್ನೋಲ್ಲ. ಮೀಸೆ ಇವತ್ತು ಬೋಳಿಸಿದ್ರೆ ಇನ್ನು ಮೂರು ದಿನಗಳಲ್ಲಿ ಬೆಳೆಯುತ್ತೆ ಆದ್ದರಿಂದ ಅದರ ಬಗ್ಗೆ ಯಾರೂ ಚಿಂತೆ ಮಾಡೋಲ್ಲ.