ಭಾನುವಾರ, ಜೂನ್ 17, 2012

ಅಪರೂಪದ ಮುಳುಗು ತಜ್ಞ ಬಾಳೆಯಡ ಪ್ರಕಾಶ್


ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ ಎನ್ನುವುದು ಅಕ್ಷರಶಃ ಸತ್ಯ. ಕೆಲವರ ಪ್ರತಿಭೆಗಳು ಪ್ರಚಾರಕ್ಕಾಗಿ ಅಗತ್ಯಕ್ಕಿಂತಲೂ ವೈಭವೀಕರಣಗೊಂಡು ಸಮಾಜದಲ್ಲಿ ಸಾಕಾರಗೊಂಡರೆ, ಇನ್ನು ಪ್ರಚಾರವನ್ನೂ ಬಯಸದೆ, ಫಲಾಪೇಕ್ಷೆಗೂ ಆಸೆಪಡದೆ ತಮ್ಮ ಪ್ರತಿಭೆಗಳನ್ನು ತಮ್ಮ ಮನಸ್ಸಂತೋಷಕ್ಕಾಗಿ ಮಾತ್ರ ರೂಢಿಸಿಕೊಂಡು ಮೌನವಾಗಿ ಸಾಧನೆ ಮಾಡುತ್ತಾ ಎಲೆಮರೆಯ ಕಾಯಿಯಂತೆ ಉಳಿಯುವವರು ಇನ್ನೊಂದು ವರ್ಗ. ಅಂತಹ ಎಲೆಮರೆಯ ಕಾಯಿಯಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಡದೆ ತಮ್ಮದೇ ಆದ ಶೈಲಿಯಲ್ಲಿ ಮೌನವಾಗಿ ಸಮಾಜ ಸೇವೆಯಲ್ಲಿ ನಿರತರಾಗಿರುವವರೆಂದರೆ ಬಾಳೆಯಡ ಪ್ರಕಾಶ್.facebook
ಸಮೀಪದ ಅಜ್ಜಿಮುಟ್ಟ ಗ್ರಾಮದ ಬಾಳೆಯಡ ಕುಟುಂಬಕ್ಕೆ ಸೇರಿದ ಇವರ ನಿವಾಸ ಕಾವೇರಿ ನದಿ ತೀರದಲ್ಲಿ ಇರುವ ಕಾರಣದಿಂದಲೊ ಏನೋ ಈಜು ಬಾಲ್ಯದಿಂದಲೇ ಕರಗತ. ಈಜು ಎಂದರೆ ಇವರಿಗೆ ಬಲು ಅಚ್ಚುಮೆಚ್ಚು. ಮೀನಿನಷ್ಟೇ ಸಲೀಸು ಕೂಡ.
ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿ ಪ್ರವಾಹದಲ್ಲಿ ಆಚೆ-ಈಚೆ ನದಿ ದಾಟುವ ಸಾಹಸಿ. ಆಳದ ನೀರಿನಲ್ಲಿ ಹಲವು ನಿಮಿಷಗಳವರೆಗೆ ಮುಳುಗಿ ಮೇಲೇಳುವ ಎದೆಗಾರಿಕೆಯೂ ಇವರಿಗೆ ರೂಢಿಯಾಗಿದೆ. ಇವರು ಸ್ವಲ್ಪಮಟ್ಟಿಗೆ ಗುರುತಿಸಿಕೊಳ್ಳಲು ಕಾರಣವಾಗಿದ್ದು ಸಹ ಈ ಈಜುವಿಕೆ ಮತ್ತು ಮುಳುಗುವಿಕೆಯೆ. ಬೇಸಗೆಯಾಗಲಿ, ಮಳೆಗಾಲವಾಗಲಿ, ಚಳಿಯಾಗಲಿ ನಾಪೋಕ್ಲು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನದಿ, ಕೆರೆಗಳಲ್ಲಿ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಸಂಭವಿಸಿದರೆ, ಶವ ಮೇಲೆತ್ತುವ ಕಾಯಕಕ್ಕೆ ಬಾಳೆಯಡ ಪ್ರಕಾಶ್ ಹಾಜರು. ಯಾವುದೇ ಫಲಾಪೇಕ್ಷೆ ಪಡದೆ ನಿಷ್ಕಳಂಕ ಮನೋಭಾವದಿಂದ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಶ್ ಅವರಿಗೆ ಈಗ 43ರ ಹರೆಯ. ತಮ್ಮ 18ನೇ ವರ್ಷದಿಂದ 43 ವರ್ಷ ಪ್ರಾಯದವರೆಗಿನ ಅವಧಿಯಲ್ಲಿ ಅವರು ನದಿ, ಕೆರೆ ಹಾಗೂ ಬಾವಿಗಳಿಂದ ಮೇಲೆತ್ತಿರುವ ಒಟ್ಟು ಶವಗಳ ಸಂಖ್ಯೆ 42. ಇವರಿಗೆ ಶವ ಮೇಲೆತ್ತುವ ಕೆಲಸವೆಂದರೆ ನೀರು ಕುಡಿದಷ್ಟೇ ಸಲೀಸು. ಯಾವುದೇ ಅಂಜಿಕೆಯಿಲ್ಲದೆ ಈ ಕೆಲಸದಲ್ಲಿ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡಿರುವ ತೃಪ್ತಿ ಅವರದು.
ಈ ಕುರಿತು ಅವರ ಅಭಿಪ್ರಾಯ ಬಯಸಿದಾಗ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡ ಅವರು, ನದಿ, ಕೆರೆ ಹಾಗೂ ಬಾವಿಗೆ ಬಿದ್ದು ಸಂಭವಿಸುವ ಆಕಸ್ಮಿಕ ಅಥವಾ ಆತ್ಮಹತ್ಯೆಯಂತಹ ಸಾವು ಪ್ರಕರಣಗಳಲ್ಲಿ ಅವರ ಕುಟುಂಬಗಳು ನೋವು, ಆಘಾತ ಅನುಭವಿಸುತ್ತಿದ್ದರೆ, ಅವರ ಕುಟುಂಬ ವರ್ಗದವರಿಗೆ ಯಾವ ಸಾಂತ್ವನವೂ ಸಮಾಧಾನ ನೀಡದು. ಆಗ ನೀಡುವ ನೆರವಷ್ಟೆ ಕೊಂಚ ಸಮಾಧಾನ ತಂದೀತು. ನೀರಿನಿಂದೆತ್ತಿ ಶವವನ್ನು ದಡ ಸೇರಿಸಿ ನೆರವಾಗಲು ತಮಗೆ ಯಾವ ಹಿಂಜರಿಕೆ ಇಲ್ಲ; ಇದಕ್ಕಾಗಿ ಯಾವ ನಿರೀಕ್ಷೆಯನ್ನೂ ಇರಿಸಿಕೊಳ್ಳುತ್ತಿಲ್ಲ ಎನ್ನುತ್ತಾರವರು. ಅದನ್ನು ಯಾವ ಅಂಜಿಕೆ ಇಲ್ಲದೆ ನಿರ್ವಹಿಸುತ್ತಿರುವುದಾಗಿ ಪತ್ರಿಕೆಯೊಂದಿಗೆ ಹೇಳಿಕೊಂಡ ಅವರು, ನೊಂದವರಿಗೆ ನೆರವು ನೀಡಿದ ತೃಪ್ತಿ ಮಾತ್ರ ನನ್ನದು ಎನ್ನುತ್ತಾರೆ. ಹಲವು ಸಂದರ್ಭಗಳಲ್ಲಿ ಶವ ತೆಗೆಯಲು ಎರಡರಿಂದ ಮೂರು ಗಂಟೆಗಳವರೆಗೂ ನದಿ, ಕೆರೆಗಳಲ್ಲಿ ತಡಕಾಡಿದ ಪ್ರಸಂಗಗಳನ್ನು ಸ್ಮರಿಸಿಕೊಳ್ಳುವ ಅವರು, ಆದರೆ ಎಲ್ಲ ಪ್ರಕರಣಗಳಲ್ಲೂ ಯಶಸ್ವಿಯಾಗಿರುವ ಹೆಚ್ಚುಗಾರಿಕೆ ತಮ್ಮದು ಎನ್ನುತ್ತಾರೆ.
ಬಾಳೆಯಡ ದಿವಂಗತ ಲಕ್ಷ್ಮಣ ಹಾಗೂ ಚೋಂದವ್ವ ದಂಪತಿಯ ಪುತ್ರರಾಗಿರುವ ಪ್ರಕಾಶ್, ಸಣ್ಣ ಕಾಫಿ ಬೆಳೆಗಾರರೂ ಹೌದು. ಮಳೆಗಾಲದಲ್ಲಿ ಕೃಷಿಗೆ ಅನುಕೂಲವಾಗುವ ಕೊಡೆಯಾಗಿ ಬಳಕೆಯಾಗುವ ಗೊರಗು ಹೆಣೆಯುವಿಕೆಯನ್ನೂ ಬಲ್ಲರು. ಬಡಗಿ ಕಲೆಯಲ್ಲೂ ಪರಿಣತಿ ಇರುವ ಇವರು ಕೃಷಿ ಪರಿಕರಗಳನ್ನು ಸ್ವತಃ ತಯಾರಿಸಿಕೊಳ್ಳಬಲ್ಲರು. ತಮ್ಮ ಪತ್ನಿಯ ಪ್ರೋತ್ಸಾಹವೂ ತಮ್ಮಲ್ಲೆ ಕಾಯಕದ ಬೆನ್ನಿಗಿದೆ ಎನ್ನುವ ಇವರದು ಪತ್ನಿ, ಇಬ್ಬರು ಪುತ್ರರ ಪುಟ್ಟ ಕುಟುಂಬ. ಪ್ರಸ್ತುತ 17 ಮತ್ತು 16ರ ಹರೆಯದ ಮಕ್ಕಳಿಬ್ಬರಿಗೂ 4 ವರ್ಷ ವಾಗಿದ್ದಾಗಲೇ ಈಜು ಕಲಿಸಿದ್ದಾರೆ. ಪ್ರಶಸ್ತಿ- ಗೌರವ ಇವರ ಸಾಹಸ, ಸಾಧನೆ ಮತ್ತು ಧೈರ್ಯಕ್ಕೆ ಅವರಿಗೆ ಈಗಾಗಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಲಭಿಸಿದೆ. ವಿರಾಜಪೇಟೆ ಕೊಡವ ಸಮಾಜವೂ ಇವರ ಸಾಧನೆಯನ್ನು ಗುರುತಿಸಿ ಸಮ್ಮಾನಿಸಿದೆ.

ಸ್ವಾತಂತ್ರ್ಯದ ತಪ್ಪು ಅರ್ಥೈಸುವಿಕೆ


ಸ್ವಾತಂತ್ರ್ಯವು ಸಂವಿಧಾನ ಮತ್ತು ಕಾನೂನಿನ ನಿರ್ಬಂಧಗಳನ್ನು ಹೊಂದಿದೆ ಹಾಗೂ ನ್ಯಾಯಾಂಗದ ರಕ್ಷಣೆಯನ್ನು ಹೊಂದಿದೆ. ಸ್ವಾತಂತ್ರ್ಯfacebook ಎಂದರೆ ಒಬ್ಬ ವ್ಯಕ್ತಿ ತನ್ನ ಹಕ್ಕುಗಳನ್ನು ಅನುಭವಿಸಿ, ಕರ್ತವ್ಯಗಳನ್ನು ನಿಭಾಯಿಸುವಾಗ ಇನ್ನೊಬ್ಬರ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ಗೌರವದಿಂದ ಕಾಣುವುದಾಗಿದೆ.
ಭಾರತದ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಸಂವಿಧಾನದ 3ನೇ ಅಧ್ಯಾಯದಲ್ಲಿ 19ನೇ ವಿಯಿಂದ 22ನೇ ವಿಯವರೆಗೆ ಈ ಹಕ್ಕಿನ ಬಗ್ಗೆ ವಿವರಿಸಲಾಗಿದೆ. ಇದೊಂದು ಮೂಲಭೂತ ಹಕ್ಕು ಕೂಡಾ ಹೌದು. ಆದ್ಧರಿಂದ ನಾಗರಿಕರೆಲ್ಲರೂ ಈ ಹಕ್ಕಿನ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾದುದು ಅನಿವಾರ್ಯ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 63 ವರ್ಷಗಳೇ ಸಂದರೂ ಇಂದಿಗೂ ಸ್ವಾತಂತ್ರ್ಯ ಎಂಬ ಪದವನ್ನು ಸಮರ್ಪಕವಾಗಿ ಅರ್ಥೈಸಿಕೊಂಡವರ ಸಂಖ್ಯೆ ಬಹುವಿರಳ.
ವ್ಯಕ್ತಿಯು ತನ್ನ ಮನಸ್ಸಿಗೆ ತೋಚಿದ್ದನ್ನು ನಿರ್ಭಯವಾಗಿ ಮಾಡುವುದನ್ನು ಸ್ವಾತಂತ್ರ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ. ಆದರೆ ನನ್ನ ತೋಟದಲ್ಲಿ ಹೋಗಲು ನನಗೆ ಸ್ವಾತಂತ್ರ್ಯವಿದೆ ಎಂದು ಕೈ ಬೀಸಿಕೊಂಡು ಹೋದರೆ ನೋವಾಗುವುದು ನಮಗೆ. ವಾಸ್ತವವಾಗಿ ಒಬ್ಬ ವ್ಯಕ್ತಿಯು ತನಗನಿಸಿದಂತೆ ವರ್ತಿಸಲು ಸ್ವಾತಂತ್ರ್ಯವು ಅವಕಾಶ ಕೊಡುವುದಿಲ್ಲ, ಎಲ್ಲಾ ವಿಧದ ನಿರ್ಭಂದಗಳಿಂದ ಮುಕ್ತವಾದುದೆ ಸ್ವಾತಂತ್ರ್ಯ ಎಂದು ಅರ್ಥೈಸಲು ಸಾಧ್ಯವಿಲ್ಲ. ಅದನ್ನು ಸ್ವೇಚ್ಛೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಕವಿ ದಾ.ರಾ. ಬೇಂದ್ರೆ ಅವರು ತಮ್ಮ ಸ್ವಾತಂತ್ರ್ಯ ವರ್ಧಂತಿ ಎಂಬ ಕವಿತೆಯಲ್ಲಿ ‘‘ಸ್ವೈರತೆಗೂ ಸ್ವಾತಂತ್ರ್ಯಕೂ ಇಹುದು ಅಜಗಜಾಂತರಾ’’ ಎಂದು ಹೇಳಿದ್ದಾರೆ. ಸ್ವೈರತ್ವ ಸಾಧನೆಗಾಗಿ ಈಗಿನ ಕೆಲವೊಂದು ರಾಜಕಾರಣಿಗಳು ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಜಕೀಯದಲ್ಲಿ , ಸರಕಾರದ ಹುದ್ದೆಗಳಲ್ಲಿ ತಮ್ಮ ಸಂಬಂಧಿಕರಿಗೆ ಅವಕಾಶ ಒದಗಿಸಬೇಕೆಂದು ಪ್ರಯತ್ನಿಸುವುದು ಶೋಚನೀಯ ವಿಚಾರ.
ಸ್ವಾತಂತ್ರ್ಯದ ಮೂಲಭೂತ ಗರಿಷ್ಠತೆ ಕಾನೂನು. ಆದರೂ ಇಂದು ಸಮಾಜದಲ್ಲಿ ಸ್ವಾರ್ಥ, ಭ್ರಷ್ಟಾಚಾರ, ಸ್ವಾತಂತ್ರ್ಯದ ದುರ್ಬಳಕೆ ಇತ್ಯಾದಿ ಕಂಡುಬರಲು ಜನರಲ್ಲಿ ಅಜ್ಞಾನ, ನೈತಿಕ ಶಿಕ್ಷಣದ ಕೊರತೆ, ಅಹಂಕಾರಗಳೇ ಕಾರಣ. ಬೇಂದ್ರೆ ಅವರು ತಮ್ಮ ಇನ್ನೊಂದು ಕವನದಲ್ಲಿ ‘‘ಹಡೆದರಾಯ್ತೆ? ಪಡೆಯಬೇಕು ಪಡೆದವರಿಗೆ ಶಿಕ್ಷಣ’’ ಎಂದು ಹೇಳಿದ್ದಾರೆ. ಸ್ವಾತಂತ್ರ್ಯವು ಕೇವಲ ಕ್ರಮಬದ್ಧವಾದ ರಾಜ್ಯದಲ್ಲಿ ಮಾತ್ರ ಸಾಧ್ಯ. ಪ್ರೊ| ಶೀಲೆ ಅವರು ‘‘ಸ್ವಾತಂತ್ರ್ಯ ಎಂದರೆ ಎಲ್ಲೆ ಮೀರಿದ, ಸರಕಾರಕ್ಕೆ ವಿರೋಧವಾದುದು’’ ಎಂದಿದ್ದಾರೆ. ಸರಕಾರವನ್ನು ಟೀಕಿಸುವ ಸ್ವಾತಂತ್ರ್ಯ ಇದೆ ಎಂದು ಪ್ರತಿ ಪಕ್ಷದವರು ಪ್ರತಿಯೊಂದು ವಿಷಯಕ್ಕೂ ಆಡಳಿತ ಪಕ್ಷದವರನ್ನು ಟೀಕಿಸುತ್ತಾ, ಮುಷ್ಕರಗಳನ್ನು ನಡೆಸುತ್ತಾ, ಜನರ ಎದುರಿಗೆ ನಾವು ಒಳ್ಳೆಯವರೆಂದು ತೋರಿಸುತ್ತಾ, ಸ್ವಾರ್ಥಸಾಧನೆ ಮಾಡುವುದು ಸ್ವಾತಂತ್ರ್ಯದ ಅಪಾರ್ಥವಾಗುವುದು. ಬರ್ನರ ಪ್ರಕಾರ ‘‘ವ್ಯಕ್ತಿಯೊಬ್ಬನಿಗೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಹೊಂದಲು ಇರುವ ಅವಕಾಶವೆ ಸ್ವಾತಂತ್ರ್ಯ’’. ನನಗೆ ಸ್ವಾತಂತ್ರ್ಯವಿದೆ, ಸಾಮರ್ಥ್ಯವಿದೆ ಎಂದು ಭೂಗತ ದೊರೆಗಳಾಗಿ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವುದು, ಕಾನೂನು ಬಾಹೀರವಾಗಿರುತ್ತದೆ. ಮಹಾತ್ಮಾ ಗಾಂೀಜಿ ಅವರ ಪ್ರಕಾರ ‘‘ಸ್ವಾತಂತ್ರ್ಯವು ನಿರ್ಬಂಧಗಳ ಮುಕ್ತ ವಾತಾವರಣವಾಗಿರುವುದಿಲ್ಲ. ಆದರೆ ಅದು ಸ್ವಾತಂತ್ರ್ಯದ ಬೆಳವಣಿಗೆಯಲ್ಲಿರುತ್ತದೆ’’.
ಸಮಾಜದಲ್ಲಿ ಕೆಲವೊಂದು ಗಣ್ಯ ವ್ಯಕ್ತಿಗಳು ತಮ್ಮ ಮನೆಯಲ್ಲಿರುವ ಕೆಲಸದವರನ್ನು ಅಮಾನುಷವಾಗಿ ನೋಡಿಕೊಳ್ಳುವುದು, ಅವರ ಸ್ವಾತಂತ್ರ್ಯವನ್ನು ನಿಯಂತ್ರಿಸುವುದು ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೆ. ವಾಕ್ ಸ್ವಾತಂತ್ರ್ಯ ಇದೆ ಎಂದು ಮನ ಬಂದಂತೆ ಮಾತನಾಡುವ ಹಾಗಿಲ್ಲ. ಜನರು ಬೌದ್ಧಿಕ ಮತ್ತು ಪ್ರಯೋಗಾತ್ಮಕ ಸ್ವಾತಂತ್ರ್ಯವಿದೆ ಎಂದು ತಾನು ಹೊಂದಿರುವ ವಿಚಾರಧಾರೆಗಳನ್ನು ಇನ್ನೊಬ್ಬರ ಮೇಲೆ ಮಲತ್ಕಾರವಾಗಿ ಹೇರಲು ಸಾಧ್ಯವಿಲ್ಲ. ನಮಗೆ ಆಸ್ತಿಯ ಹಕ್ಕು ಇದೆ ಎಂದು ಅಕ್ರಮವಾಗಿ, ಕಾನೂನು ಬಾಹೀರವಾಗಿ ಆಸ್ತಿಯನ್ನು ಸಂಪಾದಿಸುವ ಹಾಗಿಲ್ಲ. ಮಕ್ಕಳಿಗೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಸ್ವಾತಂತ್ರ್ಯವಿದೆ. ಆದರೆ ಅಲ್ಲಿನ ಕಾನೂನು ನಿಯಮಗಳಿಗೆ ಬದ್ಧರಾಗಿರಬೇಕು. ನಮಗೆ ಸ್ವಾತಂತ್ರ್ಯವಿದೆ ಎಂದು ಎಷ್ಟೋ ಹೊತ್ತಿಗೆ ತರಗತಿಗೆ ಬರುವುದು ಹೋಗುವುದು, ಮಾಡಲು ಸಾಧ್ಯವಿಲ್ಲ. ನಮಗೆ ಸ್ವಾತಂತ್ರ್ಯವಿದೆ ಎಂದು ನಮ್ಮ ಮನೆಯ ಟಿ.ವಿ., ರೇಡಿಯೋ ಅಥವಾ ಡಿವಿಡಿ ಇತ್ಯಾದಿಗಳನ್ನು ಗಟ್ಟಿಯಾಗಿ ಕೇಳುವಂತೆ ಇಟ್ಟರೆ ಅದರಿಂದ ಪಕ್ಕದ ಮನೆಯವರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗತ್ತದೆ. ಅದ್ದರಿಂದ ನಾವು ಸ್ವಾತಂತ್ರ್ಯ ಅನುಭವಿಸುವಾಗ ಎಚ್ಚರವಹಿಸಬೇಕಾದುದು ಅತ್ಯಗತ್ಯ. ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಇವು ಪರಸ್ಪರ ಪೂರಕವಾಗಿದ್ದರೆ ಅದು ಸರಿಯಾದ ಅರ್ಥ. ಒಂದಕೊಂದು ಮಾರಕವಾಗಿದ್ದರೆ ಅದು ಅಪಾರ್ಥ.

ಶುಕ್ರವಾರ, ಜೂನ್ 15, 2012

‘ಅಜ್ಜನ ಕೋಲಿದು ನನ್ನಯ ಕುದುರೆ..........’

facebook
ಅಜ್ಜನ ಕೋಲಿದು
ನನ್ನಯ ಕುದುರೆ ॥
ಹೆಜ್ಜೆಗೆ ಹೆಜ್ಜೆಗೆ
ಕುಣಿಯುವ ಕುದುರೆ ॥
ಹೌದು ಹಳ್ಳಿಗಳಲ್ಲಿ facebookಹಿಂದೆ ಅಜ್ಜನ ಊರುಗೋಲನ್ನು ಚಿಕ್ಕ ಮಕ್ಕಳು ಹಿಡಿದು ಹೀಗೆ ಹಾಡುತ್ತಾ ಕುಣಿಯುತ್ತಿದ್ದರು. ಇದು ಇಂದು ವಿರಳವಾಗಿದೆ. ದೇಹವನ್ನು ಸಂಬಾಳಿಸಿಕೊಂಡು ನಡೆದಾಡಲು ಕಷ್ಟ ಪಡುವ ವೃದ್ಧರು ಬಳಸುವ ಊರುಗೋಲು ಮಕ್ಕಳ ಆಟದ ಪರಿಕರವೂ ಆಗಿತ್ತು. ಆಧುನಿಕತೆಯ ಪ್ರಭಾವದಿಂದ ಇಂತಹ ಸರಳ ಆಟಿಕೆಗಳ ಬಾಳಕೆ ಇಲ್ಲವಾಗಿದೆ.
   ಹಿಂದಿನ ಕಾಲದಲ್ಲಿ ಅಜ್ಜ ಅಥವಾ ಅಜ್ಜಿ ಊರುಗೋಲನ್ನು ಕೈಯಿಂದ ಎಲ್ಲಿ ಇಡುತ್ತಾರೆ ಎಂದೇ ಮೊಮ್ಮಕ್ಕಳು ಹೊಂಚು ಹಾಕುತ್ತಿದ್ದರು. ಅವರು ಕೈಯಿಂದ ಬಿಟ್ಟ ತತ್ಕ್ಷಣವೆ ಮಕ್ಕಳ ಮಧ್ಯೆ ಊರುಗೋಲಿಗಾಗಿ ದೊಡ್ಡ ಸಂಗ್ರಾಮವೇ ಸಡೆಯುತ್ತಿತ್ತು. ಆಗ ಮಧ್ಯಸ್ತಿಕೆ ವಹಿಸಲು ಅಜ್ಜ ಅಥವಾ ಅಜ್ಜಿಯೇ ಬರಬೇಕಾಗುತ್ತಿತ್ತು.
ಊರುಗೋಲು ಬಳಕೆ
ಊರುಗೋಲನ್ನು ಹಲವಾರು ಕಾರಣಗಳಿಂದ ಬಳಸುತ್ತಿದ್ದರು. ಮುಖ್ಯವಾಗಿ ವೃದ್ಧರು, ಅಂಗವಿಕಲರು ನಡೆದಾಡಲು ಊರುಗೋಲಿನ ಸಹಾಯ ಪಡೆಯುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಊರಿನ ಪ್ರಮುಖರು ಊರುಗೋಲನ್ನ ಬಳಸುತ್ತಿದ್ದರು. ಉದಾಹರಣೆಗೆ: ಪಟೇಲರು, ಗುತ್ತಿನ ಮನೆಯ ಯಜಮಾನರು, ಧನವಂತರು, ಗುರಿಕಾರರು, ಜೋಯಿಸರು. ಊರುಗೋಲು ಬಳಸುವುದು ಒಂದು ಶ್ರೀಮಂತಿಕೆಯ ಸಂಕೇತವು ಆಗಿತ್ತು. ಕಲವರು ಶೋಕಿಗಾಗಿ (ಚಂದಕ್ಕಾಗಿ) ಬಲಸುತ್ತಿದ್ದರು. ಕಾವಲುಗಾರರು ರಕ್ಷಣೆಗಾಗಿ ಊರುಗೋಲನ್ನು ಉಪಯೋಗಿಸುತ್ತಿದ್ದರು.
ವೈವಿಧ್ಯ ಊರುಗೋಲುಗಳು
ಬಡವರು ಸಾಮನ್ಯ ಮರದ ಕೊಂಬೆ ಅಥವಾ ಬಿದಿರಿನ ಕೋಲುಗಳನ್ನು ಊರುಗೋಲಾಗಿ ಬಳಸುತ್ತಾರೆ. ಮಧ್ಯಮ ವರ್ಗದ ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಮರದ ಕೋಲು ಅಥವಾ ಬೆತ್ತಗಳನ್ನು ಊರುಗೋಲಾಗಿ ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಹೆಚ್ಚು ವಿಶೇಷವೇನೂ ಇರುವುದಿಲ್ಲ. ಹಿಂದೆ ಅಂಗವಿಕಲರು ಸಹ ಸಾಮಾನ್ಯ ಮರದ ಊರುಗೋಲುಗಳನ್ನೇ ಬಳಸುತ್ತಿದ್ದರು. ಶ್ರೀಮಂತರು, ಶೋಕಿಗಾಗಿ ಊರುಗೋಲು ಹಿಡಿಯುವವರು ಮಾತ್ರ ಬೆಲೆ ಬಾಳುವ ಬೆತ್ತಗಳನ್ನು ತಂದು, ಬಹಳ ನಾಜೂಕಾಗಿ ಕೆಲವೊಂದು ಕೆತ್ತನೆಗಳನ್ನು ಮಾಡಿ, ಬೇರೆ ಬೇರೆ ಲೋಹಗಳಿಂದ ಬೆತ್ತದ ಎರಡೂ ತುದಿಗಳಿಗೆ ಕಟ್ಟಗಳನ್ನು ಹಾಕಿ ಬಳಸುತ್ತಿದ್ದರು. ಬೆತ್ತವನ್ನು ನೆಲಕ್ಕೆ ಉರುವ ಭಾಗಕ್ಕೆ ಸಾಮಾನ್ಯವಾಗಿ ತಾಮ್ರ, ಕಂಚು, ಕಬ್ಬಿಣ ಇತ್ಯಾದಿ ಲೋಹಗಳಿಂದ ಕಟ್ಟ ಹಾಕುತ್ತಿದ್ದರು. ಕೈಯಲ್ಲಿ ಹಿಡಿಯುವ ಭಾಗಕ್ಕೆ ಚಿನ್ನ, ಬೆಳ್ಳಿ, ತಾಮ್ರ, ಕಂಚು ಇತ್ಯಾದಿ ಲೋಹಗಳಿಂದ ಕೆಲವೊಂದು ಪ್ರಾಣಿಗಳ ಮುಖವನ್ನು ಹೋಲುವ ಆಕರ್ಷಕವಾದ ಕಟ್ಟವನ್ನು ಹಾಕಲಾಗುತ್ತಿತ್ತು. ನಾಯಿ, ಮೀನು, ಸಿಂಹ, ಹುಲಿ, ಬಸವ, ಕುದುರೆ ಇತ್ಯಾದಿಗಳ ಮುಖಗಳನ್ನು ಹೋಲುವ ಕಟ್ಟಗಳನ್ನು ಲೋಹಗಳಲ್ಲಿ ಬಹಳ ನಾಜೂಕಾಗಿ ಕೆತ್ತಿ ಬಳಸುತ್ತಿದ್ದರು. ಹಾವು, ಮನುಷ್ಯನ ತಲೆ ಬುರುಡೆಯ ಆಕಾರದ ಕಟ್ಟಗಳು ಭಯ ಹುಟ್ಟಿಸುವಂತಿವೆ. ಅಲ್ಲದೆ ಮರದಲ್ಲಿಯೂ ಪ್ರಾಣಿಗಳ ಮುಖಗಳನ್ನು ಕೆತ್ತಿ ಉಪಯೋಗಿಸುತ್ತಿದ್ದರು. ಹೀಗೆ ಬೆಲೆ ಬಾಳುವ ಊರುಗೋಲು ಬಳಸುವರು ಇದರಿಂದ ಸಮಾಜದಲ್ಲಿ ತಮ್ಮ ಘನತೆ, ಗೌರವ, ಸ್ಥಾನ -ಮಾನ ವೃದ್ಧಿಯಾಗುತ್ತದೆ ಎಂದು ನಂಬಿದ್ದರು. ಅಂಥವರು ನಾಗರ ಬೆತ್ತವನ್ನು ಹೆಚ್ಚಾಗಿ ಬಳಸುತ್ತಿದ್ದರು. ನಾಗರ ಬೆತ್ತದ ಬಗ್ಗೆ ಕತೆಗಾರ ಸೇಡಿಯಾಪು ಕೃಷ್ಣ ಭಟ್ಟರು ಮನೋಜ್ಞವಾದ ಕಥೆಯೊಂದನ್ನು ಬರೆದಿದ್ದಾರೆ.





ಆಧುನಿಕ ಊರುಗೋಲು
ಇಂದು ಕಾಲ ಬದಲಾಗಿದೆ. ಊರುಗೋಲು ಶ್ರೀಮಂತಿಕೆಯ ಸಂಕೇತ ಎಂಬ ಭಾವನೆ ಇಲ್ಲವಾಗಿದೆ. ವೃದ್ಧರು, ಅಂಗವಿಕಲರು ಇಂದು ಮರದ ಊರುಗೋಲುಗಳನ್ನು ಬಳಕೆ ಮಾಡುವುದು ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಮಾತ್ರ ಅದನ್ನು ನೋಡಬುಹುದು. ಪಟ್ಟಣಗಳಲ್ಲಿ ಮರದ ಊರುಗೋಲುಗಳ ಸ್ಥಾನವನ್ನು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳಿಂದ ತಯಾರಿಸಿದ ಊರುಗೋಲುಗಳು ಆಕ್ರಮಿಸಿಗೊಂಡಿವೆ. ಹಗುರವಾದ, ಕೈಯಲ್ಲಿ ಹಿಡಿಯಲು ಆರಾಮದಾಯಕವಾದ, ವಾಹನಗಳಲ್ಲಿ ಸಂಚರಿಸುವ ವೇಳೆ ಮಡಚಿ ಚೀಲದಲ್ಲಿ ಕೊಂಡ್ಯೊವಂತಹ ಊರುಗೋಲುಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಹೀಗೆ ಊರುಗೋಲು ಬಳಕೆ, ತಯಾರಿಗೆ ಬಳಸುವ ವಸ್ತು ಮತ್ತು ಜನರಲ್ಲಿನ ವ್ಯತ್ಯಾಸ, ವಿವಿಧತೆಗಳನ್ನು ಗುರುತಿಸ ಬಹುದಾಗಿದೆ.
ಊರುಗೋಲು ತಯಾರಿಗೆ ಬೇರೆ ಬೇರೆ ವಿಧದ, ಗಟ್ಟಿಯಾದ, ತುಂಬಾ ಸಮಯ ಬಾಳಿಕೆ ಬರುವ ಮರಗಳನ್ನು ಬಳಸುತ್ತಾರೆ. ಮುಖ್ಯವಾಗಿ ಮಂದಾರ, ನಾಗರ ಬೆತ್ತ, ಕೆಲವೊಂದು ಜಾತಿಯ ಬಿದಿರುಗಳು, ಪೇರಳೆ, ತೇಗ, ಸಾಗುವಾನಿ, ಕುಂಟಾಲ ಇತ್ಯಾದಿ.

ಕುಂದುತಿದೆ ಜನ್ಮ ಭೂಮಿ ಬಗೆಗಿನ ಗೌರವ

‘‘ಅಪಿ ಸ್ವರ್ಣ ಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ
  ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’’ 
ಈ ಮಾತನ್ನು ರಾಮಾಯಣದಲ್ಲಿ ಹೇಳಲಾಗಿದೆ. ರಾವಣನನ್ನು ಶ್ರೀರಾಮನು ಸೋಲಿಸಿದ ಅನಂತರ ಲಕ್ಷ್ಮಣನು ಅಣ್ಣನಾದ ಶ್ರೀರಾಮನಲ್ಲಿ ನಾವು ಈ ಲಂಕೆಯಲ್ಲಿಯೇ ಉಳಿಯೋಣ. ಅಯೋಧ್ಯೆಯನ್ನು ನೋಡಿಕೋಳ್ಳಲು ಭರತನಿದ್ದಾನೆ. ನಾವು ಗೆದ್ದ ಈ ರಾಜ್ಚ ಈಗ ಅರಾಜಕವಾಗಿದೆ. ಆದ್ದರಿಂದ ನೀನು ಇಲ್ಲಿಯ ಅರಸನಾಗು ಎಂದು ಕೇಳಿಕೊಂಡಾಗ ಶ್ರೀರಾಮನು ಲಕ್ಷ್ಮಣನಿಗೆ ‘‘ಈ ಲಂಕೆಯು ಸಂಪತದ್ಭರಿತವಾಗಿದ್ದರೂ ಸ್ವರ್ಣಮಯೀಯಾದರೂ ನನ್ನ ಪಾಲಿಗೆ ಶ್ರೇಷ್ಠವೆನಿಸದು. ಯಾಕೆಂದರೆ ಅಯೋಧ್ಯೆಯಲ್ಲಿ ನನ್ನ ಜನನಿ ಇದ್ದಾಳೆ. ಮಾತ್ರವಲ್ಲ ಅದು ನನ್ನ ಜನ್ಮ ಭೂಮಿ ಇವೆರಡು ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಇಲ್ಲಿ ತಾಯಿ ಮತ್ತು ತಾಯಿ ನೆಲದ ಬಗೆಗಿನ ಶ್ರೀರಾಮನ ಅಭಿಮಾನ, ಗೌರವನ್ನು ಕಾಣಬಹುದು.
   ನಮ್ಮ ದೇಶದ ಸಂಸ್ಕೃತಿಯಲ್ಲಿ ತಾಯಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಎಂಬ ಮಾತಿದೆ. ತಾಯ್ತನಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಮಾನ್ಯತೆ ಇದೆ. ಹೊತ್ತು-ಹೆತ್ತು, ಸಾಕಿ-ಸಲಹಿದ ತಾಯಿ ವಾತ್ಸಲ್ಯಮಯಿ. ತಾಯಿಯ ತ್ಯಾಗ, ಔದಾರ್ಯ, ಪ್ರೀತಿ ಅಮೋಘ. ಅಂತೆಯೇ ನಮಗೆ ಆಸರೆ ನೀಡುವ ನಾಡು ಕೂಡಾ ತಾಯಿಗೆ ಸಮಾನ. ಆಶ್ರಯ ನೆಲೆಯಾದ ನಾಡು ಜೀವನ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ಕೇಂದ್ರ ಬಿಂದು. ಹೆತ್ತ ತಾಯಿ ಮಡಿಲಿನಲ್ಲಿ ಬೆಳೆಯುವ ಜೀವನ ಸ್ವರ್ಗಕ್ಕೆ ಮಿಗಿಲು. ತಾಯಿ ಸ್ಥಾನ ವಿಶ್ವದಲೇ ಹಿರಿದು. ಆದುದರಿಂದಲೇ ಒಬ್ಬಳು ಆದರ್ಶ ತಾಯಿಯು ನೂರು ಜನ ಗುರುಗಳಿಂತ ಶ್ರೇಷ್ಠಳು ಎಂದು ಬೈಬಲ್ನಲ್ಲಿ ಹೇಳಲಾಗಿದೆ.
ಯಾವ ನೆಲದ ಗಂಧಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷ ಧಾರೆ ಲಿಸಿ ಚಿಗುರು ತಂದಿತೋ 
ಅದೇ ಎನ್ನ ಜನ್ಮ ಭೂಮಿ, ಅದೇ ಎನ್ನ ಪುಣ್ಯ ಭೂಮಿ ॥
    ಇದು ಕವಿಯ ಜನ್ಮ ಭೂಮಿಯ ಬಗೆಗಿನ ಅಭಿಮಾನ, ಪ್ರೀತಿ, ಗೌರವದ ಸಂಕೇತವಾಗಿದೆ. ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ಭಾವನೆಯೇ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಿಗೆ ಸೂರ್ತಿ ದಾಯಕವಾದುದಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಮರಣ ದಂಡನೆಗೆ ಗುರಿಯಾದ ಭಾರತದ ಕ್ರಾಂತಿಕಾರಿ ತರುಣ ಭಗತ್ ಸಿಂಗ್ ತನ್ನ ಜೀವನದ ಕೊನೆಯ ಕ್ಷಣದಲ್ಲಿ ‘‘ಆಶ್ರಯ ನೀಡಿದ ಈ ಭೂಮಿಗಾಗಿ ಜೀವ ತೊರೆಯಲು ಸಂತೋಷವಾಗುತ್ತಿದೆ. ಇದನ್ನು ನೋಡಲು ನೀವು ಪುಣ್ಯವಂತರು’’ ಎಂದು ಬ್ರಿಟಿಷ್ ಅಕಾರಿಗಳಿಗೆ ಹೇಳಿದ ಮಾತು ಜನ್ಮ ಭೂಮಿ ಪರಕೀಯರ ಬಂಧನದಲ್ಲಿರುವಾಗ ನಾವು ಅದರ ವಿರುದ್ಧ ಹೋರಾಡಿ ಸಾಯುವುದೇ ಮೇಲು ಎಂಬುದನ್ನು ಸೂಚಿಸುತ್ತದೆ. 
ಅಭಿಮಾನ ಶೂನ್ಯ 
ಇಂದು ಜನರಲ್ಲಿ ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಶೂನ್ಯವಾಗಿ ತಾಯಿಯನ್ನು ಕಡೆಗಣಿಸುವ, ಗೌರವಿಸದಿರುವ ಮನೋಭಾವನೆ ಬೆಳೆಯುತ್ತಿದೆ. ಜನ್ಮ ಭೂಮಿ ಬಗ್ಗೆ ತ್ಸಾರ ಭಾವನೆ ಹೆಚ್ಚುತ್ತಿದೆ. ಇದರಿಂದ ಜನ ಇಂದು ವಿದೇಶಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವೂ ಇದೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಬೌದ್ಧಿಕ, ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೆ ಹೊರತು, ನೈತಿಕ ವಿಕಾಸದ ಕಡೆ ಗಮನ ಹರಿಸಿಲ್ಲ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ, ದೃಢವಾಗಿದ್ದು, ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿತು. ಸಮಾಧಾನಕರವಾಗಿ, ಶಾಂತಿಯುತವಾಗಿ ಪರಿಹರಿಸಬೇಕು. ಇದು ಮಾನವ ಧರ್ಮದ ಗುಣವಾಗಿದೆ. ಮಾನವ ಧರ್ಮ ಅಥವಾ ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅಗತ್ಯವಿದೆ. ನೈತಿಕ ಶಿಕ್ಷಣದ ಕೊರತೆಯಿಂದಾಗಿ ಇಂದು ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಜನರಲ್ಲಿ ಕುಂದುತ್ತಿದೆ. 
  ಈ ಆಧುನಿಕ ಯುಗದಲ್ಲಿ ‘‘ಉದರ ನಿಮಿತ್ತಂ ಬಹುಕೃತ ವೇಷಂ’’ ಎಂಬಂತೆ ಉದ್ಯೋಗದ ನಿಮಿತ್ತವಾಗಿ ಎಲ್ಲೇ ಇದ್ದರೂ ತಾಯಿ ಮತ್ತು ತಾಯಿ ನೆಲದ ಬಗೆಗಿನ ಅಭಿಮಾನ, ಪ್ರೀತಿ, ಗೌರವವನ್ನು ಬಿಟ್ಟು ಬಿಡಬಾರದು. ಯಾಕೆಂದರೆ ನಮ್ಮ ಜನ್ಮಕ್ಕೆ ಕಾರಣರಾದ ತಾಯಿ ಮತ್ತು ಜನ್ಮ ಭೂಮಿಯು ಇಲ್ಲದಿದ್ದರೆ ನಾವು ಹುಟ್ಟುತ್ತಲೇ ಇರಲಿಲ್ಲ. ತಾಯಿಯ ಎದೆಯ ಹಾಲನ್ನು ಕುಡಿದು, ತಾಯ್ನೆಡಿನ ನೀರು, ಗಾಳಿ, ಬೆಳಕು, ಮಣ್ಣಿನ ಸತ್ವ ಹೀರಿ ಬೆಳೆದ ವ್ಯಕ್ತಿಗೆ ನೆಲದ ಋಣ ತೀರಿಸುವ ಗುರುತರವಾದ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ. ಆ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಸಭ್ಯರ ಲಕ್ಷಣವಲ್ಲ. ಇದರ ಬದಲು ಜನ್ಮ ಭೂಮಿಯಲ್ಲೇ ನೆಲೆಸಿ ಜನ ಸೇವಾ ಕಾರ್ಯದಲ್ಲಿ ನಿರತರಾದರೆ ಈ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದಂತಾಗುತ್ತದೆ.

ಮೀಸೆ ಪುರಾಣ!


ಗಡ್ಡ, ಮೀಸೆಗಳು ಪುರುಷತ್ವದ ಲಕ್ಷಣ. ಗಂಡಸರ ಮೂಗು ಮತ್ತು ಬಾಯಿಯ ಮಧ್ಯದಲ್ಲಿ ಬೆಳೆಯುವ ಕೂದಲುಗಳ ಸಮೂಹಕ್ಕೆ ‘ಮೀಸೆ’facebook ಎಂದು ಕರೆಯುಲಾಗುತ್ತದೆ. ಗಂಡು ಮಕ್ಕಳು ಯವ್ವನಕ್ಕೆ ಕಾಲಿಡುತ್ತಿದ್ದಂತೆ ಅವರ ಮುಖದಲ್ಲಿ ಗಡ್ಡ, ಮೀಸೆ ಬೆಳೆಯಲಾರಂಭಿಸುತ್ತದೆ. ಗಂಡು ಮಕ್ಕಳು ಯುವಕರಾಗುತ್ತಿರುವುದರ ಸಂಕೇತ ಮೀಸೆ ಚಿಗುರುವುದು. ಬೆಳೆಯುತ್ತಿರುವ ಮಕ್ಕಳಿಗೆ ತಮ್ಮ ಅಪ್ಪನೇ ‘ರೋಲ್ ಮೊಡೆಲ್’ ಆದ್ದರಿಂದ ತಂದೆಯಂತೆ ಮೀಸೆ ಬಿಡಲು ಅಥವಾ ತೆಗೆಯಲು ಪ್ರಾರಂಭಿಸುತ್ತಾರೆ.
ಹಿಂದಿನ ಕಾಲದಲ್ಲಿ ಮೀಸೆ ಎಂಬುದು ಯಜಮಾನಿಕೆ, ಶ್ರೀಮಂತಿಕೆ, ಅಧಿಕಾರದ ಸಂಕೇತವಾಗಿತ್ತು. ರಾಜರು, ಮಂತ್ರಿಗಳು, ಸೇನಾ ಅಧಿಕಾರಿಗಳು, ಸೈನಿಕರು, ಪಾಳೇಗಾರರು, ಜಮೀದ್ದಾರರು, ಸಾಮಾಜದಲ್ಲಿರುವ ಗಣ್ಯವ್ಯಕ್ತಿಗಳು ತಮ್ಮಲ್ಲಿರುವ ಹಣ-ಅಂತಸ್ತು, ಅಧಿಕಾರಕ್ಕೆ ತಕ್ಕಂತೆ ಮೀಸೆ ಬೆಳೆಸಿಕೊಳ್ಳುತ್ತಿದ್ದರು. ಅಂಥವರ ಮೀಸೆ ನೋಡಿಯೇ ಸಮಾಜದಲ್ಲಿ ಅವರ ಸ್ಥಾನ-ಮಾನ ಹೇಗಿತ್ತು ಎಂಬುದನ್ನು ತಿಳಿಯಬಹುದಾಗಿತ್ತು. ಜಗಜಟ್ಟಿಗಳು, ಕುಸ್ತಿಪಟುಗಳು ಕೂಡ ಮೀಸೆ ಬೆಳೆಸುತ್ತಿದ್ದರು. ಜನಸಾಮಾನ್ಯರು ಹಿಂದಿನ ಕಾಲದಲ್ಲಿ ಮೀಸೆ ಇಟ್ಟುಕೊಳ್ಳತ್ತಿರಲಿಲ್ಲ.
ಹಿಂದೆ ಮೀಸೆಗೆ ಬಹಳಷ್ಟು ಗೌರವವಿತ್ತು. ಕೆಲವೊಂದು ಸಂದರ್ಭಗಳಲ್ಲಿ ಮೀಸೆಯನ್ನು ಉದ್ದೇಶಿಸಿ ಸವಾಲೆಸೆಯುತ್ತಿದ್ದರು. (ಉದಾಹರಣೆಗೆ ಮೀಸೆ ಇದ್ದಗಂಡಸಾದರೆ ಬಾರೋ) ಮೀಸೆ ತಮ್ಮ ಗೌರವದ ಸಂಕೇತ ಆದ್ದರಿಂದ ಬೆಟ್ ಕಟ್ಟಲು ಕೈಯಲ್ಲಿ ಹಣವಿಲ್ಲದಿದ್ದರೆ ‘ಸೋತ್ರೆ ಮೀಸೆ ಬೋಳಿಸುತ್ತೇನೆ’ ಅನ್ನುವವರೂ ಇದ್ದರು. ಕೆಲವೊಂದು ಸಂದರ್ಭಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಕ್ಕಾಗಿ, ಅವಮಾನ ಮಾಡುವುದಕ್ಕಾಗಿ ಮೀಸೆಯನ್ನು ಬಲಿಕೊಡುತ್ತಿದ್ದರು. ಅದು ಹೇಗೆಂದರೆ ಅರ್ಧ ಮೀಸೆ ಬೋಳಿಸಿ ಊರಿನಲ್ಲಿ ಮೆರವಣಿಗೆ ಮಾಡೋದು ಇತ್ಯಾದಿ.
 ಇಂದು ಕಾಲ ಬದಲಾಗಿದೆ. ಜನಸಾಮಾನ್ಯರು ಕೂಡ ಮೀಸೆ ಬೆಳೆಸುತ್ತಾರೆ. ಮೀಸೆಯಿಂದ ಆತ ಸ್ಥಿತಿವಂತ, ಗಣ್ಯವ್ಯಕ್ತಿ ಎಂದು ಗುರುತಿಸಲು ಸಾಧ್ಯವಿಲ್ಲ. ಹಿಂದಿನವರಂತೆ ದೊಡ್ಡಗಾತ್ರದ ಮೀಸೆಗಳು ಇಂದು ಇಲ್ಲವಾಗಿದೆ. ಬದಲಾಗಿ ಟ್ರಿಮ್ ಆದ ಸಣ್ಣ ಗಾತ್ರದ ಮೀಸೆಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ವಿವಿಧ ಮಾಧ್ಯಮಗಳಲ್ಲಿ ಬರುವ ಹಲವಾರು ಪಾತ್ರಗಳು ನಾನಾ ರೀತಿಯ ಮೀಸೆಗಳನ್ನು ಬೆಳೆಸಿಕೊಂಡಿರುತ್ತವೆ. ಅವುಗಳನ್ನು ನೋಡಿದ ಜನ ಮುಖ್ಯವಾಗಿ ಯುವಕರು ತಮ್ಮ ನೆಚ್ಚಿನ ಹೀರೋಗಳು ಬೆಳೆಸಿದಂತೆ ಮೀಸೆ ಬೆಳೆಸಿಕೊಳ್ಳುವವರೂ ಇದ್ದಾರೆ.
ಶ್ರೀಮಂತರು, ಅವರ ಮಕ್ಕಳು, ಸಮಾಜದಲ್ಲಿನ ಗಣ್ಯವ್ಯಕ್ತಿಗಳು, ಚಿತ್ರನಟರು, ಕ್ರಿಡಾಪಟುಗಳು ಹೆಚ್ಚಾಗಿ ಕ್ಲೀನ್ ಶೇವ್ ಮಾಡುವವರೆ ಅಧಿಕ. ಯಾಕೆಂದರೆ ಮೀಸೆ ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಮೀಸೆ ದಿನೇ ದಿನೇ ಬೆಳೆಯುತ್ತಿರುತ್ತದೆ. ವಾರಕ್ಕೆ 2 ಭಾರಿಯಾದರೂ ಅದನ್ನು ಟ್ರಿಮ್ ಮಾಡ್ಕೊಂಡರೆ ಮಾತ್ರ ಚೆನ್ನಾಗಿ ಕಾಣಿಸುತ್ತದೆ. ಟ್ರಿಮ್ ಮಾಡುವಾಗ ಅತಿಯಾ ಜಾಗೃತೆ ಅಗತ್ಯ. ಇತ್ತ ದಪ್ಪ-ಅತ್ತ ತೆಳು, ಅತ್ತ ಉದ್ದ- ಇತ್ತ ಗಿಡ್ಡ ಆದರೆ ಮತ್ತೆ ಸರಿಪಡಿಸುವುದು ತುಂಬಾ ಕಷ್ಟ. ಇಂತಹ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಬದಲು ಕ್ಲೀನ್ ಶೇವ್ ಮಾಡುವುದೇ ಉತ್ತಮ ಎನ್ನುವವರೇ ಇಂದು ಹೆಚ್ಚು. ಅಲ್ಲದೆ ವಯಸ್ಸಾದಂತೆ ಮೀಸೆ ಅರ್ಧ ಕಪ್ಪು- ಅರ್ಧ ಬಿಳಿ ಆಗುವುದಕ್ಕೆ ಮೊದಲೇ ಕ್ಲೀನ್ ಶೇವ್ ಮಾಡುವುದು ಒಳ್ಳೆಯದು ಎನ್ನೋರು ಇದ್ದಾರೆ.
ಮೀಸೆ ಇರುವವರಿಗೆ ಕೊಲವೊಂದು ವಿಶೇಷ ಹವ್ಯಾಸಗಳಿರುತ್ತವೆ. ಅವುಗಳೆಂದರೆ ಆಗ್ಗಾಗೆ ಕನ್ನಡಿಯಲ್ಲಿ ತಮ್ಮ ಮೀಸೆಯ ಚಂದ ನೋಡುತ್ತಾ, ಬಾಚುವುದು, ಮೀಸೆ ಮೇಲೆ ಕೈಯಾಡಿಸುತ್ತಿರುವುದು, ಮೀಸೆಯ ಒಂದು ತುದಿಯನ್ನು ಹಿಡಿದು ತಿರುವುದು, ಮೀಸೆಯನ್ನು ಎಳೆದು ಕಚ್ಚುತ್ತಿರುವುದು ಇತ್ಯಾದಿ. ಮೀಸೆ ಕೇವಲ ಮನುಷ್ಯರಿಗೆ ಮಾತ್ರ ಬರುವಂತದಲ್ಲ ಇತರ ಪ್ರಾಣಿಗಳಿಗೂ ಬರುತ್ತವೆ. ಮನುಷ್ಯರಲ್ಲಿ ಪುರುಷರಿಗೆ ಮಾತ್ರ ಮೀಸೆ ಬರುತ್ತದೆ. ಅಲ್ಲದೆ ಕೆಲವೊಂದು ನಪುಂಸಕರಿಗೂ ಮೀಸೆ ಇರುತ್ತದೆ. ಪ್ರಾಣಿಗಳಲ್ಲಿ ಗುಂಡು-ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲದಕ್ಕೂ ಮೀಸೆ ಬರುತ್ತವೆ.
ಮೀಸೆಗೆ ಸಂಬಂಧಿಸಿದಂತೆ ಹಲವಾರು ಗಾದೆ, ಹಾಡು, ಅಡುಮಾತು, ನುಡಿಮುತ್ತು ಇತ್ಯಾದಿಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ‘ಜಟ್ಟಿ ಬದ್ರೂ ಮೀಸೆಗೆ ಮಣ್ಣಾಗಿಲ್ಲ’, ‘ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ’, ‘ದೋಸೆ ತಿನ್ನುವಾಗ ಮೀಸೆ ಮುರಿದ ಹಾಗೆ’, ‘ರಾಜನಿಗೆ ಮೀಸೆ ಕೈಹೋದರೆ ಸಭೆ ಕಾಣುವುದಿಲ್ಲ’, ‘ಮೀಸೆ ಬಂದವನಿಗೆ ದೇಶ ಕಾಣಲ್ಲ’, ‘ಭಾಷೇನೂ ಇಲ್ಲ ಮೀಸೇನೂ ಇಲ್ಲ’, ‘ಮೀಸೆ ಚಿಗುರಿದಾಗ ನೆಲ ಕಾಣಲ್ಲ’, ‘ಮೀಸೆ ತುದಿಯಲ್ಲಿ ನಗು ನೋಡು’, ‘ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು....’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ....’, ‘ಮೀಸೆ ತಿರುವಿ ಕುಣಿದವರೆಲ್ಲ ಮಣ್ಣಾದರು ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು....’ ಮುಂತಾದವುಗಳು. ಮಲಯಾಳದಲ್ಲಿ ‘ಮೀಸೆ ಮಾಧವನ್’ ಎನ್ನುವ ಸಿನೆಮಾ ಕೂಡ ಬಂದಿದೆ. ಡಾ ವಿಷ್ಣುವರ್ಧನ್ ಅವರ ಯಜಮಾನ, ಸಿಂಹಾದ್ರಿಯ ಸಿಂಹ, ಸೂರ್ಯವಂಶ, ಆಪ್ತರಕ್ಷಕ ಮುಂತಾದ ಸಿನೆಮಾಗಳಲ್ಲಿ ನಾಯಕನ ಮೀಸೆ ಆಕರ್ಷಣೆಯ ಕೇಂದ್ರವಾಗಿತ್ತು. ಇತ್ತೀಚೆಗೆ ಬಂದ ವೀರಪರಂಪರೆ ಸಿನೆಮಾದಲ್ಲಿ ಅಂಬರೀಶ್ ಮೀಸೆ ಜನರ ಗಮನ ಸೆಳೆದಿತ್ತು.
ಮೀಸೆಯಿಂದಲೇ ಹೆಸರು ಪಡೆದವರು
ತಮ್ಮ ಮೀಸೆಯಿಂದಲೇ ಪ್ರಸಿದ್ಧರಾದವರು, ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದವರು ಹಲವಾರು ಮಂದಿ ಇದ್ದಾರೆ. ಮುಖ್ಯವಾಗಿ ಕಾಡುಗಳ್ಳ ವೀರಪ್ಪನ್, ನಕ್ಕೀರ ಗೋಪಾಲನ್, ಹಿಟ್ಲರ್, ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್, ಮಾಜಿ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ವೆಂಗ್ಸರ್ಕಾರ್, ಡೇವಿಡ್ ಬೂನ್, ಕ್ಲೈವ್ ಲಾಯ್ಡಿ ಹಾಗೂ ಮೀಸೆ-ಗಡ್ಡ ಮೂಲಕ ಬ್ರಿಜೇಶ್ ಪಟೇಲ್ ಮೊದಲಾದವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಹೋಮ್ಗಾರ್ಡ್ ಅಶೋಕ ಎನ್ನುವವರು ಕೂಡ ತಮ್ಮ ದೊಡ್ಡದಾದ ಮೀಸೆಯಿದಂಲೇ ಗುರುತಿಸಲ್ಪಟ್ಟವರು. ಹಲವಾರು ಜನ ಸಾಧು-ಸಂತರು ಕೂಡ ಉದ್ದವಾದ, ದೊಡ್ಡದಾದ ಮೀಸೆ ಬೆಳೆಸಿ ಜನರ ಗಮನ ಸೆಳೆದಿದ್ದಾರೆ. ಅತೀ ಉದ್ದನೆಯ ಮೀಸೆಯ ಸರದಾರ ಭಾರತದ ಬಜನ್ಸಿನ್ಹ ಜುಲಾಸಿನ್ಹ ಗುರ್ಜಾರ್. ಆತನ ಮೀಸೆ 12 ಅಡಿ ಉದ್ದ, 6 ಇಂಚು ದಪ್ಪ ಇತ್ತು. ಆತನಿಗೆ ಈ ರೀತಿಯಾಗಿ ಮೀಸೆ ಬೆಳೆಸಲು 22 ವರ್ಷ ಬೇಕಾಗಿದೆಯಂತೆ. ಇದು 2004ರಲ್ಲಿ ವಿಶ್ವದಾಖಲೆ ಎನಿಸಿತ್ತು. ಹಲವಾರು ಜನ ಸಾಹಸಿಗಳು ತಮ್ಮ ಉದ್ದನೆಯ ಮೀಸೆಯಿಂದ ಭಾರ ಎತ್ತುವುದು, ವಾಹನ ಎಳೆಯುವುದು ಇತ್ಯಾದಿ ಸಾಹಸ ಪ್ರದರ್ಶಿಸುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ.
ಮೀಸೆಯ ವಿವಿಧ ನಾಮ
ಜನರು ಮೀಸೆಯನ್ನು ಅದರ ಆಕಾರ, ಗಾತ್ರಕ್ಕೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಪ್ರಮುಖವಾಗಿ ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಕಡ್ಡಿ ಮೀಸೆ, ಹುರಿ ಮೀಸೆ, ಬೆಕ್ಕಿನ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆ ಮೀಸೆ, ಫಿಲ್ಟರ್ ಮೀಸೆ, ಇತ್ಯಾದಿ. ಊರುಗಳು ಬದಲಾದಂತೆ ಮೀಸೆಯ ಹೆಸರುಗಳಲ್ಲಿ ಹಲವಾರು ಬದಲಾವಣೆಗಳನ್ನು ನೋಡಬಹುದು. ಈಗ ಮೀಸೆ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಯಾರೂ ಏನೂ ಅನ್ನೋಲ್ಲ. ಮೀಸೆ ಇವತ್ತು ಬೋಳಿಸಿದ್ರೆ ಇನ್ನು ಮೂರು ದಿನಗಳಲ್ಲಿ ಬೆಳೆಯುತ್ತೆ ಆದ್ದರಿಂದ ಅದರ ಬಗ್ಗೆ ಯಾರೂ ಚಿಂತೆ ಮಾಡೋಲ್ಲ.

ಭಾನುವಾರ, ಜೂನ್ 10, 2012

 ಮೋಡಗಳ ಮರೆಯಿಂದ ರವಿತೇಜ ಹೊರಬಂದ....
facebook

ವೈವಿಧ್ಯಮಯ ನಾಣ್ಯ-ನೋಟುಗಳ ಸಂಗ್ರಹ


ಬಾಳಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಆರೋಗ್ಯಕರ ಸಂಗತಿ. ಇದರಿಂದ ನಮ್ಮ ಜ್ಞಾನ ಭಂಡಾರವು ವೃದ್ಧಿಸುವುದು ಹಾಗೂ ಸದಾ ಚಟುವಟಿಕೆಯಿಂದಿರಲು ಸಾಧ್ಯ. ಕತೆ, ಕಾದಂಬರಿ, ಲೇಖನ ಇತಾದಿ ಪುಸ್ತಕಗಳನ್ನು ಓದುವ, ಸಾಂಪ್ರದಾಯಿಕ, ಜನಪದ ಕಲೆ ಹಾಗೂ ಸಿನೆಮಾಗಳನ್ನು ವೀಕ್ಷಿಸುವ ಹವ್ಯಾಸ ಇರುವವರನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಅಂಚೆ ಚೀಟಿ, ಹಳೆ ಕಾಲದ ಹಾಗೂ ದೇಶ -ವಿದೇಶಗಳ ನಾಣ್ಯ, ಪತ್ರಿಕೆ, ಪುಸ್ತಕ, ಪಾತ್ರೆ ಸಾಮಾನು ಇತ್ಯಾದಿಗಳನ್ನು ಸಂಗ್ರಹಿಸುವ ಹವ್ಯಾಸದವರು ವಿರಳ. ಅಂಥವರಲ್ಲಿ ವಿವಿಧ ರೀತಿಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವ ಚೇತನಡ್ಕ ಶ್ರೀಕೃಷ್ಣ facebookಭಟ್ಟರು ಒಬ್ಬರು.
ಅವರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಚೇತನಡ್ಕ ನಿವಾಸಿ. ಸಮಾರು 5-6 ವರ್ಷಗಳಿಂದ ಈ ಹವ್ಯಾಸವನ್ನು ರೂಢಿಸಿಕೊಂಡಿರುವ ಭಟ್ಟರಿಗೆ ಸ್ನೇಹಿತ ತಲಶ್ಯೇರಿಯ ರಾಜನ್ ಅವರೇ ಪ್ರೇರಣೆಯಂತೆ. ರಾಜನ್ ಅವರಿಗೂ ನಾಣ್ಯ ಸಂಗ್ರಹಿಸುವ ಹವ್ಯಾಸವಿದ್ದು, ಅವರು ತಮ್ಮಲ್ಲಿರುವ ಕೆಲವೊಂದು ಅಪರೂಪದ ನಾಣ್ಯ, ನೋಟುಗಳನ್ನು ಭಟ್ಟರಿಗೆ ನೀಡುತ್ತಿದ್ದರಂತೆ. ಶ್ರೀಕೃಷ್ಣ ಭಟ್ಟರ ಕೈಯಲ್ಲಿ ಅಂಥಹ ನಾಣ್ಯಗಳನ್ನು ಕಂಡ ಅವರ ಪತ್ನಿ ರಾಜೇಶ್ವರಿ ಅವರು ಅವುಗಳನ್ನು ಸಂಗ್ರಹಿಸುವಂತೆ ಒತ್ತಾಯಿಸಿ, ಪ್ರೋತ್ಸಾಹಿಸಿದರ ಪರಿಣಾಮ ಭಟ್ಟರಲ್ಲಿ ಇಂಥಹಾ ಹವ್ಯಾಸವೊಂದು ಬೆಳೆಯಲು ಕಾರಣವಾಯಿತು.
  ಅವರು ಮೂಲತಃ ಕೃಷಿಕರಾಗಿದ್ದು, ಸಂಜೆಯ ಬಿಡುವಿನ ವೇಳೆ ಹೋದಲ್ಲಿ ಸಿಕ್ಕಿದ ವಿವಿಧ ರೀತಿಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಸಂಗ್ರಹದಲ್ಲಿ ಹಿಂದಿನ ಅರಸರ ಕಾಲದ ವಿವಿಧ ಹಾಗೂ ದೇಶ -ವಿದೇಶಗಳ ನಾಣ್ಯ ಮತ್ತು ನೋಟುಗಳನ್ನು ನೋಡಬಹುದು.
ವಿವಿಧ ರೀತಿಯ ಸಂಗ್ರಹ
ಸಮಾರು 200ಕ್ಕೂ ಅಧಿಕ ರಾಷ್ಟ್ರಗಳ ವೈವಿಧ್ಯಮಯ ನಾಣ್ಯ, ನೋಟುಗಳು ಭಟ್ಟರ ಸಂಗ್ರಹದಲ್ಲಿವೆ. ಅದರಲ್ಲಿ ಪ್ರಮುಖವಾಗಿ ವಿದೇಶಗಳಾದ ಇಂಗ್ಲೆಂಡ್, ಇಟೆಲಿ, ಆಸ್ಟ್ರೇಲಿಯಾ, ಸಿಂಗಾಪುರ, ಫಿಲಿಪ್ಪೇನ್ಸ್, ಕೆನೆಡಾ, ಡಿಗಿ ಚೌಟ, ಶ್ರೀಲಂಕಾ, ಚೀನಾ. ಅಮೆರಿಕಾ, ಟರ್ಕಿ, ಯುನೈಟೆಡ್ ಅರಬ್, ಯುನೈಟೆಡ್ ಎಮಿರೇಟ್ಸ್, ದುಬಾ, ಥೈಲ್ಯಾಂಡ್, ನೆದರ್ಲ್ಯಾಂಡ್, ಮಸ್ಕತ್, ಲೆಬನಾನ್, ಥೈವಾನ್, ಬೆಲ್ಜಿಯಂ, ಮಾಲ್ಡಿವ್ಸ್, ಹಾಂಕ್ಕಾೀಂಗ್, ಸ್ವೀಡನ್, ಚಿಲಿ, ಅರ್ಜೆಂಟಿನಾ, ಮಲೇಷಿಯಾ, ಮೊಜಾಂಬಿಕ್, ಡಚ್, ಪೋರ್ಚ್ಗಲ್, ನೇಪಾಳ, ಪಾಕಿಸ್ತಾನ, ಇರಾನ್ ಇತ್ಯಾದಿ. ಇವುಗಳಲ್ಲದೆ ಭಾರತದಲ್ಲಿ ಹಿಂದೆ ಅರಸರ ಕಾಲದಲ್ಲಿ ಬಳಕೆಯಲ್ಲಿದ್ದ ಹಲವಾರು ನಾಣ್ಯಗಳನ್ನು ಅವರ ಸಂಗ್ರಹದಲ್ಲಿ ಕಾಣಬಹುದು. ಮುಖ್ಯವಾಗಿ ಕ್ರಿ. ಶ. 1616ರಲ್ಲಿ ಈಸ್ಟ್ಇಂಡಿಯಾ ಕಂಪೆನಿಯು ಭಾರತದಲ್ಲಿ ಜಾರಿಗೆ ತಂದ ಲಕ್ಷ್ಮೀ ಮತ್ತು ಗಣಪತಿಯ ಚಿತ್ರದ ನಾಣ್ಯಗಳು, ಟಿಪ್ಪು ಸುಲ್ತಾನನ ಕಾಲದ ನಾಣ್ಯಗಳು, ಹನುಮಂತ, ಶ್ರೀರಾಮ, ಲಕ್ಷ್ಮಣ, ಸೀತೆಯರ ಚಿತ್ರವಿರುವ ನಾಣ್ಯ, ಒಟ್ಟೆ ಮುಕ್ಕಾಲು (ನಾಣ್ಯದ ಮಧ್ಯ ಭಾಗದಲ್ಲಿ ತೂತು ಇರುವ), 1 ಪೈಸೆ, ಬೆಳ್ಳಿ, ತಾಮ್ರದ ನಾಣ್ಯಗಳು, ಶ್ರೀಕೃಷ್ಣದೇವರಾಯನ ಕಾಲದ ಪಣ, ಗದ್ಯಾಣ, ತಿರವಾಂಕೂರು ಅರಸರ ಕಾಲದ ಒಂದು, ಎರಡು, ನಾಲ್ಕು, ಎಂಟು ಕಾಸು ಇತ್ಯಾದಿ ನಾಣ್ಯಗಳನ್ನು ನೋಡಬಹುದು.
  ಇವುಗಳಲ್ಲದೆ ಈಗ ಚಲಾವಣೆಯಲ್ಲಿ ಇಲ್ಲದ ದೇಶ -ವಿದೇಶಗಳ 1, 2, 5, 10, 20, 50, 100, 500, 1,000, 2,000ದ ಬೇರೆ ಬೇರೆ ನೋಟುಗಳ ಸಂಗ್ರಹವು ಇದೆ. ಜಗತ್ತಿನ ಪ್ರಮುಖ ನಾಯಕರ ಭಾವಚಿತ್ರವಿರುವ ಹಲವಾರು ನೋಟುಗಳು ಭಟ್ಟರ ಸಂಹಗ್ರಣೆಯಲ್ಲಿ ಕಾಣಬಹುದು. ಉದಾಹರಣೆಗೆ ಗಾಂೀಜಿ, ಬ್ರಿಟಿಷ್ ರಾಣಿ, ಸದ್ದಾಂ ಹುಸೇನ್.
ರಕ್ಷಣೆ 
ಪ್ಲಾಸ್ಟಿಕ್ ಕವರ್ಗಳನ್ನು ತಂದು ಅವುಗಳ ಮಧ್ಯದಲ್ಲಿ ನಾಣ್ಯ, ನೋಟುಗಳನ್ನು ಅಚ್ಚುಕಟ್ಟಾಗಿ, ಪ್ರತ್ಯೇಕ ಸಾಲುಗಳಲ್ಲಿ ಇರಿಸಿ ಅವುಗಳ ಸ್ಥಾನಪಲ್ಲಟವಾಗದಂತೆ ಬಂದಿಸಲಾಗುತ್ತದೆ. ಹೀಗೆ ಬಂದಿಸಿದ ನಾಣ್ಯ, ನೋಟುಗಳ ಪಕ್ಕದಲ್ಲಿ ಅದು ಯಾವ ದೇಶದ್ದು ಎಂದು ಭಟ್ಟರು ಗುರುತಿಸಿದ್ದಾರೆ. ಆಲ್ಬಂ ಮಾಡಿ ಸಂಗ್ರಹಿಸಿಟ್ಟಿರುವುದರಿಂದ ಅವು ಬಹು ಕಾಲ ಬಾಳಿಕೆ ಬರುವುದಲ್ಲದೆ ವೀಕ್ಷಕರಿಗೂ ಬಹುಬೇಗನೆ ನಾಣ್ಯಗಳನ್ನು ಗುರುತಿಸಬಹದಾಗಿದೆ.
ಪ್ರದರ್ಶನ
ವಿವಿಧೆಗಳಲ್ಲಿ ಪ್ರದರ್ಶನಕ್ಕೆ ಇಡುವುದು, ಅದರಿಂದ ಪ್ರಚಾರ ದೊರೆಯುವುದು ಇವುಗಳ ಬಗ್ಗೆ ಭಟ್ಟರಿಗೆ ಆಸಕ್ತಿ ಇಲ್ಲ. ಕೆಲವೊಂದು ಬಾರಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ಮತ್ತು ಪ್ರೈಮೆರಿ ಸ್ಕೂಲ್ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು ಅಷ್ಟೆ. ಅದು ಭಾವ, ಸಾಹಿತಿ ಬಾಲಮಧುರಕಾನನ ಅವರ ಒತ್ತಾಯಕ್ಕೆ. ಇಂಥಹ ಅಪರೂಪದ ನಾಣ್ಯ, ನೋಟುಗಳಿಗೆ ಅದರ ಮುಖ ಬೆಲೆಗಿಂತಲೂ ಅಕ ಮೌಲ್ಯ ನೀಡಬೇಕಿರುವುದರಿಂದ ಅವುಗಳ ಬಗ್ಗೆ ಹೆಚ್ಚು ನಿಗಾವಹಿಸ ಬೇಕಾಗುತ್ತದೆ. ಇದಕ್ಕಾಗಿಯೇ ಭಟ್ಟರು ಪ್ರದರ್ಶನಕ್ಕೆ ಇಡಲು ಹಿದೇಟು ಹಾಕುತ್ತಾರೆ.
ಉದ್ದೇಶ
ಹಿಂದಿನ ಕಾಲದ ನಾಣ್ಯ, ನೋಟುಗಳ ಬಗ್ಗೆ ಇಂದಿನ ಮಕ್ಕಳಿಗೆ ಹಾಗೂ ಮುಂದಿನವರಿಗೆ ಮಾಹಿತಿ ಒದಗಿಸುವುದು ಶ್ರೀಕೃಷ್ಣ ಭಟ್ಟರ ಸಂಗ್ರಹದ ಮುಖ್ಯ ಉದ್ದೇಶ. ವಿವಿಧ ದೇಶಗಳಲ್ಲಿ ಬಳಸುತ್ತಿದ್ದ ಮತ್ತು ಬಳಕೆಯಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆಯಲು ಇದು ಸಹಕಾರಿ. ಅಪರೂಪದ ವಸ್ತುಗಳ ಸಂಗ್ರಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಇಂಥಹಾ ಸಂಗ್ರಹಣಾ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು ಇದರ ಮುಖ್ಯ ಗುರಿಯಾಗಿದೆ.

ಮರೆಯಾಗುತ್ತಿರುವ ಬೆತ್ತದ ಬುಟ್ಟಿಗಳು


ಆಧುನಿಕರಣದಿಂದಾಗಿ ಪ್ರಮುಖ ಗುಡಿಕೈಗಾರಿಕೆಗಳಲ್ಲಿ ಒಂದಾದ ಬೆತ್ತದ ಬುಟ್ಟಿ ತಯಾರಿಕೆ ಇಂದು ನಶಿಸಿಹೋಗುತ್ತಿದೆ.facebook ಬುಟ್ಟಿ ತಯಾರಕರ ಸಂಖ್ಯೆಯು ಗಣನೀಯವಾಗಿ ಇಳಿದಿದ್ದು, ಮುಂದೆ ಇಂತಹ ಬುಟ್ಟಿಗಳನ್ನು ವಸ್ತು ಸಂಗ್ರಹಾಲಯಗಳಲ್ಲಿಯೇ ನೋಡಬೇಕಾದ ಸ್ಥಿತಿ ಉಂಟಾದರೂ ಆಶ್ಚರ್ಯವಿಲ್ಲ. ಬೆತ್ತದ ಬುಟ್ಟಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿದ ಜನರು ಕಾಡಿನಲ್ಲಿ ದೊರೆಯುವ ಬೆತ್ತ, ಬಿದಿರುಗಳನ್ನು ಬಿಳಸಿ ತಯಾರಿಸುತ್ತಾರೆ.
 ರೈತರು ಕೃಷಿ ಚಟುವಟಿಕೆಗಳಲ್ಲಿ ಇಂತಹ ಬುಟ್ಟಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆಧುನಿಕರಣದಿಂದಾಗಿ ಇಂದು ಬೆತ್ತದ ಬುಟ್ಟಿಗಳ ಸ್ಥಾನವನ್ನು ಪ್ಲಾಸ್ಟಿಕ್, ರಬ್ಬರ್ ಬುಟ್ಟಿಗಳು ಆಕ್ರಮಿಸಿಕೊಂಡಿದೆ. ಇದರಿಂದ ಬೆತ್ತದ ಬುಟ್ಟಿಗಳ ಬೇಡಿಕೆ ಕುಗ್ಗಿದ್ದು, ಅವುಗಳನ್ನು ತಯಾರಿಸುವ ವರ್ಗದ ಜನರು ಪರ್ಯಾಯ ಉದ್ಯೋಗ ನೋಡಿಕೊಳ್ಳುವಂತಾಗಿದೆ. ಕಾಡುಗಳ ನಾಶ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಬೆತ್ತದ ಬುಟ್ಟಿ ತಯಾರಿಕೆಗೆ ಅಗತ್ಯವಾದ ಕಚ್ಛಾ ಸಾಮಾಗ್ರಿಗಳು ದೊರೆಯುತ್ತಿಲ್ಲ. ಇದು ಬೆತ್ತದ ಬುಟ್ಟಿಗಳ ಬೆಲೆ ದುಬಾರಿಯಾಗಲು ಕಾರಣ. ಇವುಗಳ ಬೆಲೆ ದುಬಾರಿಯಾದುದರಿಂದ ಜನ ಕಡಿಮೆ ಬೆಲೆಗೆ ದೊರೆಯುವ ಪ್ಲಾಸ್ಟಿಕ್, ರಬ್ಬರ್ ಬುಟ್ಟಿಗಳತ್ತ ಗಮನಹರಿಸಿದ್ದಾರೆ. ಮುಖ್ಯವಾಗಿ ಇಂದಿನ ವಿದ್ಯಾವಂತ ಜನಾಂಗ ಬುಟ್ಟಿ ಹೆಣೆಯುವಂತಹ ಕಷ್ಟದ ಕೆಲಸಗಳಿಗೆ ಮುಂದಾಗದಿರುವುದರಿಂದ ಇಂತಹ ಗುಡಿಕೈಗಾರಿಕೆಗಳು ಮೂಲೆ ಗುಂಪಾಗುತ್ತಿವೆ.
ಕೃಷಿ ಚಟುವಟಿಕೆಗಳಲ್ಲಿ ವಿವಿಧ ಕೆಲಸಗಾಳಿಗೆ ಬೇರೆಬೇರೆ ರೀತಿಯ ಬೆತ್ತದ ಬುಟ್ಟಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಗೊಬ್ಬರ ತೆಗೆಯಲು, ಮಣ್ಣು ತೆಗೆಯಲು, ಅಡಿಕೆ ಹಾಕಲು, ಭತ್ತ ಹಾಕಲು, ಕೋಳಿ ಮರಿಗಳ ರಕ್ಷಣೆಗಾಗಿ ವಿವಿಧ ಆಕಾರದ ಬುಟ್ಟಿಗಳನ್ನು ತಯಾರಿಸಿ ಬಳಸಲಾಗುತ್ತದೆ. ಈ ಬುಟ್ಟಿಗಳು ಅವುಗಳ ಗಾತ್ರಕ್ಕೆ ತಕ್ಕಂತೆ ಬೇರೆ ಬೇರೆ ಬೆಲೆಗಳನ್ನು ಹೊಂದಿವೆ. ಸಾಮಾನ್ಯ ಗಾತ್ರದ ಬುಟ್ಟಿಗಳು ಸುಮಾರು 30ರೂ.ಗಳಿಂದ 50ರೂ. ಬೆಲೆ ಹೊಂದಿವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನಕ್ಕೆ 2ರಿಂದ 3 ಬುಟ್ಟಿಗಳನ್ನು ತಯಾರಿಸಬಲ್ಲರು. ಕಾಡು - ಮೇಡುಗಳನ್ನು ಅಲೆದು ಬುಟ್ಟಿ ತಯಾರಿಗೆ ಬೇಕಾದ ಬಿದಿರು, ಇತರ ಕಾಡು ಬಳ್ಳಿಗಳನ್ನು ಸಂಗ್ರಹಿಸಿ ಬುಟ್ಟಿ ತಯಾರಿಸಿದ ವ್ಯಕ್ತಿಗೆ ದಿನಕ್ಕೆ 90 ರೂ.ಗಳಿಂದ 150ರೂ. ಲಭಿಸುತ್ತದೆ. ಈ ಹಣದಿಂದ ಕುಟುಂಬವೊಂದನ್ನು ಮುನ್ನಡೆಸಲು ಅಸಾಧ್ಯವಾಗಿರುವುದರಿಂದ ಬುಟ್ಟಿ ತಯಾರಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬುಟ್ಟಿಗಳ ಮಾರಾಟಕ್ಕೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ಮಧ್ಯ ವರ್ತಿಗಳಾದ ವ್ಯಾಪಾರಿಗಳು ಲಾಭ ಪಡೆಯುತ್ತಾರೆ. ಬುಟ್ಟಿ ತಯಾರಿಸುವ ವರ್ಗದ ಜನರು ಅನಕ್ಷರಸ್ಥರಾಗಿರುವುದೇ ಇದಕ್ಕೆ ಕಾರಣ.
 ನಶಿಸಿ ಹೋಗುತ್ತಿರುವ ಇಂತಹ ಗುಡಿಕೈಗಾರಿಕೆಗಳ ಬಗ್ಗೆ ಸರಕಾರ ಗವನಹರಿಸಿ ಅಗತ್ಯ ಪ್ರೋತ್ಸಾಹ ನೀಡಬೇಕಾಗಿದೆ. ಇದರಿಂದ ಒಂದು ವರ್ಗದ ಜನರ ಕುಲಕಸುಬು ಉಳಿಯುತ್ತದೆ. ಅಲ್ಲದೆ ಜೌದ್ಯೋಗಿಕ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗುತ್ತದೆ. ಬುಟ್ಟಿ ಹೆಣೆಯುವ, ಚಾಪೆ ತಯಾರಿ ಇತ್ಯಾದಿ ಗುಡಿಕೈಗಾರಿಕೆಗಳ ಬಗ್ಗೆ ಹಳ್ಳಿ - ಹಳ್ಳಿಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು. ಇದರಿಂದ ಒಂದು ವರ್ಗದ ಜನರು ಮಾತ್ರವಲ್ಲದೆ ಆಸಕ್ತರೆಲ್ಲರು ಇಂತಹ ವೃತ್ತಿಯನ್ನು ಕೈಗೊಳ್ಳು ಸಾಧ್ಯ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವರ್ತವಾಗಬೇಕಿದೆ.

ಶ್ರೀ ರಾಮಾನುಜಾಚಾರ್ಯ ಜೀವನ ಮತ್ತು ತತ್ವಗಳು


ರಾಮಾನುಜರು (ಕ್ರಿ.ಶ. 1017-1137)ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ಕೇಶವ ಸೋಮಯಾಜಿ( ಕೇಶವದೀಕ್ಷಿತರು) ಮತ್ತು ಕಾಂತಿಮತಿ ಅವರ ತಂದೆ - ತಾಯಿ. ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಮತ್ತು ಉಪನಿಷತ್ಗಳ ಬಗ್ಗೆ ಅಧ್ಯಯನ ನಡುಸಲು ಕಾಂಚಿಗೆ ತೆರಳಿದರು. ಅಲ್ಲಿ ಪ್ರಸಿದ್ಧ ಅದೈತ ಗುರುಗಳಾದ ಯಾದವ ಪ್ರಕಾಶರ ಶಿಷ್ಯರಾದರು. ರಾಮಾನುಜರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಅವರು ಹಲವಾರು ಸಂದರ್ಭದಲ್ಲಿ ಧರ್ಮ ಮತ್ತು ತತ್ವಗಳ ವಿಚಾರಗಳಲ್ಲಿ ಗುರುಗಳ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ಪರಿಣಾಮವಾಗಿ ಗುರು ಶಿಷ್ಯರ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಿತು. ರಾಮಾನುಜರು ಗುರುವನ್ನ ತ್ಯಜಿಸಿ ಮನೆಗೆ ಹಿಂತಿರುಗಿದರು. ತಮ್ಮ 16ನೇ ವಯಸ್ಸಿನಲ್ಲಿ ತಂಗಮ್ಮನನ್ನು ವಿವಾಹವಾದರು.
   ಗುರುವನ್ನು ತ್ಯಜಿಸಿದ ಅನಂತರ ರಾಮಾನುಜರು ಸ್ವಅಧ್ಯಯನವನ್ನು ಮುಂದುವರಿಸಿದರು. ಬಹುಬೇಗನೆ ಅವರ ಕೀರ್ತಿ ರಾಷ್ಟ್ರದ ಉದ್ದಗಲಕ್ಕೂ ಪಸರಿಸಿತು.ಅವರು ಒಬ್ಬ ಮಹಾನ್ ವಿದ್ವಾಂಸರಾಗಿ ರೂಪುಗೊಂಡರು. ತಮಿಳುನಾಡಿನಶ್ರೀರಂಗ ಮಠದ ಯುಮುನಾಚಾರ್ಯರು ತನ್ನ ಉತ್ತರಾಕಾರಿಯಾಗಲು ಆಹ್ವಾನನಿಸಿದರು. ಈ ಸಂದರ್ಭದಲ್ಲಿ ರಾಮಾನುಜರಿಗೆ ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆ ಉಂಟಾಗತ್ತು. ಆಧ್ಯಾತ್ಮಿಕ ವಿಚಾರದ ಕಡೆಗೆ ಆಕರ್ಷ್ತಿರಾಗಿದ್ದರು. ತನ್ನ ಕುಟುಂಬವನ್ನು ತ್ಯಜಿಸಿ ಸನ್ಯಾಸಿಯಾದರು. ಅವರು ಶ್ರೀರಂಗ ತಲುಪುವ ಮೊದಲೇ ಯಮನಾಚಾರ್ಯರು ಸ್ವರ್ಗಸ್ತರಾಗಿದ್ದರು. ರಾಮಾನುಜರು ಶ್ರೀರಂಗ ಮಠದ ಆಚಾರ್ಯ ಪೀಠವನ್ನೇರಿ ಅಲ್ಲಿ ವೈಷ್ಣವ ಪಂಥವನ್ನು ಪ್ರಚಾರಗೊಳಿಸಿದರು. ಸುೀರ್ಘವಾದ, ಲಪ್ರದವಾದ 120 ವರ್ಷಗಳ ಕಾಲ ಜೀವನದ ಅನಂತರ ಇಹಲೋಕವನ್ನು ತ್ಯಜಿಸಿದರು.
ಕೃತಿಗಳು
 ರಾಮಾನುಜರು ಹಲವಾರು ಕೃತಿಗಳನ್ನು ತನ್ನ ವೈಷ್ಣವ ತತ್ವಗಳನ್ನು ಪ್ರತಿಪಾಸಲು ರಚಿಸಿದ್ದಾರೆ. ಅವರು ಮೂರು ತತ್ವ ಶಾಸದ ಕೃತಿಗಳು ವೇದಾಂತ ಸಂಗ್ರಹ, ವೇದಾಂತಸಾರ, ವೇದಸೂತ್ರ ಇವುಗಳಲ್ಲಿ ಮೋಕ್ಷಗಳಿಸಲು ಭಕ್ತಿ ಮಾರ್ಗದ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಅವರ ಇತರ ಕೃತಿಗಳೆಂದರೆ ಗೀತಾಭಾಷ್ಯ, ಶ್ರೀಭಾಷ್ಯ, ಶ್ರೀರಂಗಗದ್ಯ,ಶರಣಾಗತಿ ಗದ್ಯ, ನಿತ್ಯಗ್ರಂಥ, ವೈಕುಂಠ ಗದ್ಯ ಇತ್ಯಾದಿ.
ವಿಶಿಷ್ಟಾದೈತ ತತ್ವ
ರಾಮಾನುಜರು ಪ್ರತಿಪಾಸಿದ ತತ್ವವನ್ನು ವಿಶಿಷ್ಟಾ ದೈತ ಎಂದು ಕರೆಯಲಾಗಿದೆ. ದೇವರು ಜಗತ್ತು ಮತ್ತು ಆತ್ಮಗಳ ಮಧ್ಯೆ ಇರುವ ಸಂಬಂಧಗಳನ್ನು ವಿವರಿಸುವ ರೀತಿಯೇ ಅವರ ತತ್ವದ ಕೇಂದ್ರ ಬಿಂದುವಾಗಿದೆ. ಅವರ ಅಭಿಪ್ರಾಯದಲ್ಲಿ ಮೂರು ಶಾಶ್ವತ ತತ್ವಗಳಿವೆ. ದೇವರು (ಬ್ರಹ್ಮನ್), ಆತ್ಮ (ಚಿತ್) ಮತ್ತು ಜಡಜಗತ್ತು (ಅಚಿತ್). ಇವು ಮೂರು ಬೇರೆ ಬೇರೆಯಾಗಿವೆ ಹಾಗೂ ಸಮಾನವಾಗಿವೆ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಂದಕ್ಕೊಂದು ಹತ್ತಿರದ ಸಂಬಂಧವಿದೆ. ಇವು ಒಂದೇ ದೇಹದಂತಿದೆ. ಇದಕ್ಕಾಗಿ ರಾಮಾನುಜರ ತತ್ವವನ್ನು ವಿಶಿಷ್ಟಾ ದೈತ ಎನ್ನಲಾಗಿದೆ. ಆದರೆ ಶಂಕರಾಚಾರ್ಯರ ಅದೈತ ತತ್ವದಲ್ಲಿ ಕೇವಲ ಒಂದೇ ಒಂದು ಶಾಶ್ವತ ಸತ್ಯವಿದೆ ಅದುವೇ ಬಹ್ಮನ್.
  ರಾಮಾನುಜರ ಅಭಿಪ್ರಾಯದಲ್ಲಿ ಕರ್ಮ ಅಥವಾ ಕ್ರಿಯೆ ವ್ಯಕ್ತಿಯನ್ನು ಶಾಶ್ವವಾದ ದಾಸ್ಯಕ್ಕೆ ಕೆರೆದೊಯ್ಯುತ್ತದೆ ಹಾಗೂ ಮೋಕ್ಷಗಳಿಸಲು ಇದು ಸಹಕಾರಿಯಲ್ಲ. ಜ್ಞಾನದ ಮೂಲಕ ವ್ಯಕ್ತಿ ಮಾಯೆಯಿಂದ ಬಿಡುಗಡೆ ಸೊಂದಿ ಸರ್ವಜ್ಞ ಪದವಿ ಗಳಿಸುತ್ತಾನೆ ಆದರೆ ಭಕ್ತಿಯ ಮೂಲಕ ವ್ಯಕ್ತಿಯ ವೈಕುಂಠ ಪ್ರವೇಶಿಸಿ ಶಾಶ್ವತ ಆನಂದವನ್ನು ಗಳಿಸ ಬಹುದು. ಆದುದರಿಂದ ಮೋಕ್ಷಗಳಿಸಲು ಹಾಗೂ ವೈಕುಂಠ ಪ್ರವೇಶಿಸಲು ಅತ್ಯಂತ ಶ್ರೇಷ್ಠ ಮಾರ್ಗವೆಂದರೆ ಭಕ್ತಿಯಾಗಿದೆ ಎಂದು ಅವರು ಜಗತ್ತಿಗೆ ಸಾರಿದ್ದರು.facebook

ಮರೆಯಾಗುತಿದೆ ಮರದ ಆಟಿಕೆಗಳು


ಕೆಲವೊಂದು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳು ಮರದಿಂದಲೇ ತಯಾರಿಸಿದ ಆಟದ ವಸ್ತುಗಳನ್ನು ಬಳಸುತ್ತಿದ್ದುದನ್ನು ಕಾಣಬಹುದಿತ್ತು. ಆದರೆ ಇಂದು ಕಾಲ ಬದಲಾಗಿದೆ ಹಳ್ಳಿಗಳಿಗೂ ಪ್ಲಾಸ್ಟಿಕ್, ಇಲೆಕ್ಟ್ರಾನಿಕ್ ಆಟದ ವಸ್ತುಗಳು ಧಾವಿಸಿವೆ. ಮರದ ತಂಡುಗಳಿಂದ ಸಿದ್ಧಪಡಿಸಿದ ವಿವಿಧ ರೀತಿಯ ಬೊಂಬೆ, ಗಾಡಿ ಇತ್ಯಾದಿ ಆಟಿಕೆಗಳನ್ನು ವಸ್ತು ಸಂಗ್ರಹಾಲಯಗಳಲ್ಲಿಯೇ ನೋಡುವ ಸ್ಥಿತಿ ಇಂದಿನವರದ್ದು.
ಬಾಳಿಕೆ ಹೆಚ್ಚು
 ಮರದಿಂದ ತಯಾರಿಸಿದ ಆಟಿಕೆಗಳು ಗಟಿಯಾಗಿದ್ದು, ಹೆಚ್ಚು ಸಮಯ ಬಾಳಿಕೆ ಕೂಡಾ ಬರುತ್ತಿದ್ದವು. ಮಕ್ಕಳು ನೆಲಕ್ಕೆ ಹೊಡೆದು, ಬಡಿದು ಏನೇ ಮಾಡಲಿ ಅವುಗಳು ಬೇಗನೆ ಹಾಳಾಗುತ್ತಿರಲಿಲ್ಲ. ಆದರೆ ಇಂದು ಬಳಸುವ ಪ್ಲಾಸ್ಟಿಕ್, ಇಲೆಕ್ಟ್ರಾನಿಕ್ ಆಟದ ವಸ್ತುಗಳು ದೀರ್ಘ ಬಾಳಿಕೆಯನ್ನು ಹೊಂದಿಲ್ಲ. ಅವು ಬಹುಬೇಗನೆ ಹಾಳಾಗತ್ತವೆ.
ಮರದ ಆಟಿಕೆಗಳ ವಿಧ
ಪೂರ್ತಿಯಾಗಿ ಮರದಿಂದಲೇ ತಯಾರಿಸಲಾಗುತ್ತಿದ್ದ ಗಾಡಿಗಳಲ್ಲಿ ಒಂದು, ಎರಡು, ಮೂರು ಚಕ್ರಗಳ ವೈವಿಧ್ಯ ಆಕೃತಿಗಳನ್ನು ನೋಡಬಹುದಾಗಿತ್ತು. ಮರದ ಕೋಲಿನ ಒಂದು ತುದಿಗೆ ಉಜಾಲದ ಬಾಟಲಿಗಳಯನ್ನು ಜೋಡಿಸಿ ಅದಕ್ಕೆ ಚಪ್ಪಲಿಗಳನ್ನು ವೃತ್ತಾಕಾರದಲ್ಲಿ ಕತ್ತರಿಸಿ ಚಕ್ರಗಳನ್ನಾಗಿ ಮಾಡಿ ಗಾಡಿಗಳನ್ನು ತಯಾರಿಸಲಾಗುತ್ತಿತ್ತು. ಇಂಗ್ಲಿಷ್ ಅಂಕೆ ಏಳರಂತೆ (7) ಇರುವ ಒಂದು ಮೀಟರ್ ಉದ್ದದ ಬಿದಿರಿನ ಕೋಲಿನಲ್ಲಿ ಮರ, ಕಬ್ಬಿಣ, ಅಲ್ಯೂಮಿನಿಯಂ ಇತ್ಯಾದಿಗಳಿಂದ ತಯಾರಿಸಿದ ಚಿಕ್ಕದಾದ ‘ರಿಂಗ್’ ಅಥವಾ ಚಕ್ರಗಳನ್ನು ಉರುಳಿಸುತ್ತಿದ್ದರು. ಮರದಿಂದ ಸಿದ್ದಪಡಿಸಿದ ಬಿಲ್ಲು, ಬಾಣ, ಬಂದೂಕುಗಳನ್ನು ಆಟಿಕೆಗಳಾಗಿ ಉಪಯೋಗಿಸಲಾಗುತ್ತಿತು. ಅಲ್ಲದೆ ವಿವಿಧ ಮರಗಳ ಕಾಯಿ ಮತ್ತು ಮರದ ತುಂಡುಗಳನ್ನು ಕೆತ್ತಿ ‘ಬುಗರಿ’ ಗಳನ್ನಾಗಿ ಮಾಡಿ ಆಟವಾಡಲು ಬಳಸುತ್ತಿದ್ದರು. ಹೀಗೆ ಬೇರೆ ಬೇರೆ ವಿಧದ ಮರದಿಂದ ಮಾಡಿದ ಆಟಿಕೆಗಳನ್ನು ಮಕ್ಕಳು ಬಳಸುತ್ತಿದ್ದರು. ಮನುಷ್ಯನ ಹಾಗೂ ವಿವಿಧ ಪ್ರಾಣಿಗಳ ಬೊಂಬೆಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳು ಆಟಿಕೆಗಳಾಗಿ ಉಪಯೋಗಿಸುತ್ತಿದ್ದರು.
ಸಂಗ್ರಹ ಅನಿವಾರ್ಯ
 ಐತಿಹಾಸಿಕ ದಾಖಲೆಗಳಾಗಿರುವ ಇಂತಹ ವಸ್ತುಗಳು ಸಂಗ್ರಹಣೆಗೆ ಯೋಗ್ಯವಾಗಿವೆ. ಇವುಗಳ ಅಧ್ಯಯನದಿಂದ ಹಿಂದಿನ ಕಾಲದ ಜನ ಜೀವನದ ಬಗೆಗೂ ತಿಳಿದುಕೊಳ್ಳ ಬಹುದಾಗಿದೆ. ಹಿಂದಿನ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಮರದ ಆಟಿಕೆಗಳಂತಹ ಹಲವಾರು ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಅನಿವಾರ್ಯವಿದೆ. ಯಾಕೆಂದರೆ ಮುಂದಿನ ಜನಾಗಂಗದವರು ಅಂತಹ ಅಪರೂಪದ ವಸ್ತುಗಳುನ್ನು ನೋಡುವ ಅವಕಾಶದಿಂದ ವಂಚಿತರಾಗುತ್ತಾರೆ. ಗ್ರಾಮೀಣ ಪ್ರದೇಶಗಳ ಹಲವಾರು ಮನೆಗಳಲ್ಲಿ ಇಂತಹ ಪುರಾತನ ಕಾಲದ, ಅಪರೂಪದ ವಸ್ತುಗಳನ್ನು ಇಂದಿಗೂ ನೋಡಬಹುದು. ಆದರೆ ಅಲ್ಲಿನ ಜನರಿಗೆ ಅವುಗಳ ಮೌಲ್ಯದ ಬಗ್ಗೆ ಅರಿವಿಲ್ಲದೆ ರಕ್ಷಣೆಗೆ ಮುಂದಾಗುತ್ತಿಲ್ಲ. ಸರಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ಜನರಲ್ಲಿ ಇಂತಸ ಅಪರೂಪದ ವಸ್ತುಗಳ ರಕ್ಷಣೆ ಮಾಡುವ ಕುರಿತು ಜಾಗೃತಿ ಮೂಡಿಸಬೇಕಾಗಿದೆ.
ಮರೆಯಾಗಲು ಕಾರಣ
 ಇತ್ತೀಚೆಗೆ ಮರದ ಆಟಿಕೆಗಳ ಬಳಕೆ ಗ್ರಾಮೀಣ ಪ್ರದೇಶಗಳಲ್ಲೂ ಕಡಿಮೆಯಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ.
1. ಆಟಿಕೆಗಳ ತಯಾರಿಗೆ ಅಗತ್ಯವಾದ ಮರಗಳ ಅಭಾವ.
2. ತಯಾರಕರ ಕೊರತೆ.
3. ಬಳಕೆಗೆ ಮತ್ತು ಸಂಗ್ರಹಕ್ಕೆ ಅಗತ್ಯ ಜಾಗದ ಅಭಾವ.
4. ಆಧುನಿಕತೆಯಿಂದ ಬಳಕೆ ಕಡಿಮೆ.
5. ಇಲೆಕ್ಟ್ರಾನಿಕ್, ಪ್ಲಾಸ್ಟಿಕ್ ಆಟಿಕೆಗಳ ಆಕರ್ಷಣೆ.
 6. ಮರದ ಆಟಿಕೆಗಳು ಗಾತ್ರದಲ್ಲಿ ದೊಡ್ಡದಿರುವುದು ಮತ್ತು ಭಾರ ಹೆಚ್ಚಿರುವುದು.
7. ಸಾಗಾಟ ಕಷ್ಟ.

8.ಇಲೆಕ್ಟ್ರಾನಿಕ್ ಹಾಗೂ ಪ್ಲಾಸ್ಟಿಕ್ಗಳಿಂದ ಸಿದ್ಧಪಡಿಸಿದ ಆಟಿಕೆಗಳು ಸುಲಭವಾಗಿ ದೊರೆಯುತ್ತಿರುವುದು.

ಬದಲಾವಣೆಗೆ ಯಕ್ಷಗಾನವೂ ಹೊರತಾಗಿಲ್ಲ


ಇದು ಬದಲಾವಣೆಯ ಕಾಲ. ಎಲ್ಲಾ ಕ್ಷೇತ್ರದಲ್ಲೂ ವಿವಿಧ ರೀತಿಯ ಬದಲಾವಣೆಗಳು ಸಾಕಷ್ಟು ನಡೆದಿವೆ. ಇದಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯೂ ಹೊರತಾಗಿಲ್ಲ. ದೇಶದ ರಾಜಕೀಯದಲ್ಲಿ ರಾಜರ ಆಡಳಿತದ ಬದಲು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ಥಿತ್ವಕ್ಕೆ ಬಂತು. ಅದರಲ್ಲೂ ಸಮ್ಮಿಶ್ರ ಸರಕಾರಗಳು ಅಕಾರ ನಡೆಸುವಂತಹ ವ್ಯವಸ್ಥೆ ಇಂದು ಬಂದಿರುವಂತೆ, ಜಾಗತಿಕ ಕ್ರಿಕೆಟ್ನಲ್ಲಿ ಟೆಸ್ಟ್ ಪಂದ್ಯಗಳ ಅನಂತರ 50-50 ಓವರ್ಗಳ ಪಂದ್ಯ ಇದೀಗ 20-20 ಓವರ್ಗಳ ಪಂದ್ಯಗಳೂ ಜನರನ್ನು ಆಕರ್ಷಿಸಿವೆ. ಇಂತಹ ಬದಲಾವಣೆಗಳು ಯಕ್ಷಗಾನ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ.
ಯಕ್ಷಗಾನ ಅಂದು -ಇಂದುfacebook.com
ಅದೊಂದು ಕಾಲವಿತ್ತು ‘ದೊಂದಿ’ಯನ್ನು ರಂಗಸ್ಥಳಗಳ ಮೂಲೆಗೆಳಿಗೆ ಕಟ್ಟಿ ರಾತ್ರಿಯಿಡೀ ಯಕ್ಷಗಾನ ಬಯಲಾಟವಾಡುತ್ತಿದ್ದದ್ದು, ಅಂದು ಹಳ್ಳಿಗರು ಯಕ್ಷಗಾನ ನೋಡಲು ಕಿಕ್ಕಿರಿದು ಸೇರಿ ಆನಂದಿಸುತ್ತಿದ್ದರು. ಹೆಂಗಸರು, ಮಕ್ಕಳೆನ್ನದೆ ಯುವಕರು, ಮುದುಕರು ಹೀಗೆ ಎಲ್ಲ ವಯಸ್ಸಿನವರು ಭಾಗವಹಿಸುತ್ತಿದ್ದರು. ಪಂಜಿನ ಬೆಳಕಿಗೆ ರಾಜ ವೇಷ, ರಕ್ಕಸ ವೇಷಗಳು ರಂಗಸ್ಥಳದಲ್ಲಿ ವಿಜೃಂಭಿಸುತ್ತಿದ್ದವು. ಧ್ವನಿ ವರ್ಧಕವಿಲ್ಲದೆ ಸೇರಿದ ಸಾವಿರಾರು ಜನರಿಗೂ ಕೇಳುವಂತೆ ಕಲಾವಿದರು ಸಂಭಾಷಣೆ ನಡೆಸುತ್ತಿದ್ದರು. ಹಿಂದೆ ಪೌರಾಣಿಕ ಕಥೆಗಳನ್ನು ಆಧರಿಸಿದ ಯಕ್ಷಗಾನ ಪ್ರಸಂಗಗಳನ್ನು ಮಾತ್ರವಷ್ಟೇ ಆಡುತ್ತಿದ್ದರು. ಇತ್ತೀಚೆಗೆ ಅದು ಬದಲಾಗಿದೆ. ಈಗ ಯಕ್ಷಗಾನದಲ್ಲೂ ಹಲವಾರು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಯಕ್ಷಗಾನ ಪ್ರಸಂಗಗಳನ್ನು ಇಂದು ಸಾಮಾಜಿಕ, ಸಿನೆಮಾ ಕಥೆಗಳನ್ನು ಆಧರಿಸಿ ರಚಿಸಿ ಪ್ರದರ್ಶಿಸಲಾಗತ್ತಿದೆ. ಮೊದಲು ಕನ್ನಡ ಭಾಷೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಯಕ್ಷಗಾನ ಪ್ರದರ್ಶಿಸಲಾಗುತ್ತಿತ್ತು. ಕಾಲಸರಿದಂತೆ ತುಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ, ಭಾರತದ ವಿವಿಧ ರಾಜ್ಯಗಲ್ಲಿ ಹಾಗೂ ವಿದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳು ನಡೆಯತೊಡಗಿದವು.
ಯಕ್ಷಗಾನದಲ್ಲಿನ ಬದಲಾವಣೆಯೆಂದರೆ ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಪ್ರದರ್ಶನಗಳು ಕಡಿಮೆ ಯಾಗಿ ಇಂದು ಅನುಕೂಲಕ್ಕೆ ತಕ್ಕಂತೆ ಕಥಾ ಪ್ರಸಂಗ ಗಳನ್ನು ರಚಿಸಿಕೊಂಡು 1, 2 ಅಥವಾ 3ಗಂಟೆಯ ಯಕ್ಷಗಾನ ಪ್ರದರ್ಶನಗಳಾಗಲಾರಂಭಿಸಿದವು. ಹಿಂದೆ ಮಳೆಗಾಲ ಮುಗಿದಂತೆ ಎಲ್ಲಾ ಮೇಳಗಳು ತಿರುಗಾಟ ಪ್ರಾರಂಭಿಸಿ, ಊರು ಊರುಗಳಲ್ಲಿ ಯಕ್ಷಗಾನ ಪ್ರದರ್ಶಿಸುವುದು ಸಂಪ್ರದಾಯವಾಗಿತ್ತು. ಆದರೆ ಇಂದು ವರ್ಷವಿಡೀ ಯಕ್ಷಗಾನ ಪ್ರದರ್ಶನಗಳು ವಿವಿಧೆಡೆಗಲ್ಲಿ ನಡೆಯುತ್ತಿವೆ. ಮಳೆಗಾಲದಲ್ಲೂ ವಿಶೇಷವಾಗಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಹಲವು ವರ್ಷಗಳ ಮೊದಲು ಕೇವಲ ಬಯಲು ರಂಗ ಮಂದಿರ ಳಲ್ಲಿ ಮಾತ್ರ ಯಕ್ಷಗಾನ ಪ್ರದರ್ಶಿನಗಳು ನಡೆಯುತ್ತಿದ್ದವು. ಆಧುನಿಕತೆ ಆವರಿಸಿದಂತೆ ಸಭಾ ಭವನ, ಕಲ್ಯಾಣ ಮಂಟಪಗಳಲ್ಲೂ ಯಕ್ಷಗಾನ ಪ್ರದರ್ಶನಗಳು ನಡೆಯತೊಡಗಿದವು. ಪಂಜಿನ ಬೆಳಕಿನ ಬದಲು ವಿದ್ಯುತ್ ದೀಪಾಲಂಕೃತವಾದ ವೇದಿಕೆಯಲ್ಲಿ ಧ್ವನಿ ವರ್ಧಕಗಳ ಸಹಕಾರದಲ್ಲಿ ಇಂದು ಯಕ್ಷಗಾನ ಪ್ರದರ್ಶಿಸಲ್ಪಡುತ್ತಿದೆ.
ಸರಕಾರದ ಪ್ರೋತ್ಸಾಹ ಅಗತ್ಯ
   ಯಕ್ಷಗಾನದಂತಹ ಪುರಾತನ ಕಲೆಯ ಉಳಿವಿಗೆ ಸರಕಾರದ ಪ್ರೋತ್ಸಾಹ ಅತ್ಯಗತ್ಯ. ಇಂದಿನ ಯುವ ಜನಾಂಗ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಶಾಲಾ-ಕಾಲೇಜು ಮಟ್ಟದಲ್ಲಿಯೇ ಯಕ್ಷಗಾನವನ್ನು ಒಂದು ಪಠ್ಯ ವಿಷಯವಾಗಿ ಮಕ್ಕಳು ಅಭ್ಯಸಿಸಲು ಅವಕಾಶ ಕಲ್ಪಿಸಬೇಕು. ಈ ಕಾರ್ಯ ಕಾಸರಗೋಡು ಜಿಲ್ಲೆಯಲ್ಲೂ ಜಾರಿಗೆ ಬರುವಂತೆ ಕೇರಳ ಸರಕಾರವನ್ನು ಒತ್ತಾಯಿಸಬೇಕು. ಉಡುಪಿಯ ಶಾಸಕ ರಘುಪತಿ ಭಟ್ ಅವರು ಈಗಾಗಲೇ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಯಕ್ಷಗಾನ ತರಬೇತಿಗಳನ್ನು ನಡೆಸಲು ಸೂಚಿಸಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಕಾರ್ಯ ಅವಿಭಜಿತ ದ.ಕ.ಜಿಲ್ಲೆಯ ಎಲ್ಲೆಡೆಯಲ್ಲಿ ನಡೆಯಬೇಕಿದೆ.
 ಏನೇ ಆಗಲಿ ಪ್ರಸಿದ್ಧ ಕಲೆಗಳಲ್ಲಿ ಯಕ್ಷಗಾನ ಒಂದು. ಇನ್ನಾದರೂ ಯಕ್ಷಗಾನ ಕಲೆ ನಾಡಿನಾದ್ಯಂತ ಪಸರಿಸಲಿ. ಯಕ್ಷಗಾನ ನಿಂತ ನೀರಾಗುವುದು ಬೇಡ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಯಕ್ಷಗಾನದಲ್ಲೂ ಒಪ್ಪಿಕೊಳ್ಳೋಣ. ಆದರೆ ಬದ ಲಾವಣೆಯಿಂದ ಯಕ್ಷಗಾನದ ಸಂಪ್ರದಾಯ ನಶಿಸಬಾರದು. ಬದಲಾವಣೆ ಕಲೆಯ ಅಭಿವೃದ್ಧಿಗೆ ಸಹಾಯಕವಾಗಲಿ.
ಅಭಿರುಚಿ ಕುಂದಲು ಕಾರಣ
ಜನರ ಕೆಲಸದೊತ್ತಡ, ಹಿಂದಿನ ಬಯಲಾಟದಷ್ಟು ಮನಮೋಹಕವಾಗಿ ಇಂದು ಯಕ್ಷಗಾನ ಪ್ರದರ್ಶಿಸಲ್ಪಡದಿರುವುದು ಯಕ್ಷಗಾನದಲ್ಲಿನ ಜನರ ಅಭಿರುಚಿ ಕುಂದಲು ಕಾರಣವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಚಲನಚಿತ್ರಗಳು ಜನರನ್ನು ಮೋಡಿಮಾಡಿರುವುದರಿಂದ ಯಕ್ಷಗಾನದ ಮೇಲಿನ ಜನರ ಆಸಕ್ತಿ ಕುಂಠಿತವಾಗಿದೆ. ಕ್ರಿಕೆಟ್ನಂತಹ ಕ್ರೀಡೆಗಳು ಜನರನ್ನು ಆಕರ್ಷಿಸುತ್ತಿರುವುದು ಕೂಡ ಯಕ್ಷಗಾನದ ವೀಕ್ಷಕರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಮಾನವನ ಯಾಂತ್ರಿಕ ಬದುಕು


ಇಂದಿನ ಅಂರ್ತಜಾಲ ಯುಗದಲ್ಲಿ ಯಂತ್ರಗಳಿಲ್ಲದೆ ಮಾನವ ಬದುಕು ಸಾಗಿಸುವುದು ಅಸಾಧ್ಯ ಎಂಬಂತಾಗಿದೆ. ನಮ್ಮ ದೈನಂದಿನ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ನಾವು ಒಂದಲ್ಲೊಂದು ಯಂತ್ರಗಳನ್ನ ಅವಲಂಬಿಸಿರುತ್ತೇವೆ. ಇಂದು ಯಾವುದೇ ಕೆಲಸದಲ್ಲೂ ಮಾನವನ ದೈಹಿಕ ಶ್ರಮಕ್ಕೆ ಬೆಲೆ ಇಲ್ಲವಾಗಿದೆ ಎಂದರೆ ತಪ್ಪಾಗದು. ಇದರಿಂದ ದೈಹಿಕ ಶ್ರಮ ವಹಿಸುವ ಜನರ ಸಂಖ್ಯೆ ಕಡಿಮೆಯಾಗಿದೆ ಮತ್ತು ವಿಪರೀತವಾಗಿ ಕಡಿಮೆಯಾಗುತ್ತಲೇ ಇದೆ. ಅಲ್ಲದೆ ಜನ ದೈಹಿಕ ಶ್ರಮವಹಿಸಿ ಕೆಲಸಗಳನ್ನು ನಿರ್ವಹಿಸುವ ವಿಧಾನಗಳನ್ನೇ ಮರೆತಂತಿದೆ.
ಇದಕ್ಕೆ ಒಂದು ಚಿಕ್ಕ ಉದಾಹರಣೆ: ನಾನು ಇತ್ತೀಚೆಗೆ ಕಾರ್ಕಳ ಸಮೀಪ ವಾರ್ಷಿಕ ಜಾತ್ರೆಯೊಂದಕ್ಕೆ ಹೋಗದ್ದೆ. ಅಲ್ಲಿ ಸಂತೆಯಲ್ಲಿ ಒಂದೆಡೆ ಮೆಕ್ಕೆ ಜೋಳವನ್ನು ಬೆಂಕಿಯಲ್ಲಿ ಸುಟ್ಟು ಮಾರಾಟ ಮಾಡುತ್ತಿದ್ದರು. ಎಲ್ಲಕಡೆ ಸುಡುವಂತೆ ಕಬ್ಬಿಣದ ತಟ್ಟೆಯಲ್ಲಿ ಇದ್ದಲಿಗೆ ಬೆಂಕಿ ಹಾಕಿ ಜೋಳವನ್ನು ಸುಡಲಾಗುತ್ತಿತ್ತು. ಇದ್ದಲು ಉರಿಯಲು ಸಾಮಾನ್ಯವಾಗಿ ಬೀಸಣಿಗೆ ಅಥವಾ ಅಂತಹ ಇತರ ಯಾವುದೇ ವಸ್ತುವಿನ ಸಹಾಯದಿಂದ ಕೈಯಿಂದಲೇ ಗಾಳಿ ಹಾಕುತ್ತಾರೆ. ಆದರೆ ಇಲ್ಲಿ ಗಾಳಿ ಬೀಸಲು ವಿದ್ಯುತ್ ಚಾಲಿತ ್ಯಾನ್ನನ್ನೇ ಬಳಸಿದ್ದು ವಿಶೇಷ. ವಿದ್ಯುತ್(ಇಂಧನ)ನ ಅಭಾವ ಇರುವುದರಿಂದ ಅತೀ ಅಗತ್ಯಗಳಿಗೆ ಮಾತ್ರ ವಿದ್ಯುತ್ ಬಳಸಿದರೆ ಒಳ್ಳೆಯದಲ್ಲವೇ?

ಮಹಿಳಾ ಸಬಲೀಕರಣಕ್ಕೆ ಮಾಧ್ಯಮದ ಕೊಡುಗೆ


ಮಹಿಳಾ ಸಬಲೀಕರಣಕ್ಕೆ ಮಾಧ್ಯಮ ಬಹಳಷ್ಟು ಕೊಡುಗೆ ನೀಡುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರುತ್ತಿದ್ದ ಮಹಿಳೆಯರು ಇಂದು ಪುರುಷಷರಿಗೆ ಪ್ರತಿ ರ್ಸ್ಪಯಾಗಿ ನಿಲ್ಲಲು ಮಾಧ್ಯಮಗಳೆ ಪ್ರಮುಖ ಕಾರಣ. ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರಗಳಲ್ಲೂ ಮುನ್ನಡೆ ಸಾಸುತ್ತಿದ್ದಾರೆ. ಇದು ಅವರು ಸಬಲರಾಗುತ್ತಿರುವುದರ ಸಂಕೇತ.
 ಮಹಿಳಾ ಸಬಲೀಕರಣಕ್ಕೆ ಅಗತ್ಯವಾದ ಸರಕಾರದ ಯೋಜನೆಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಧ್ಯಮಗಳು ಶ್ರಮಿಸುತ್ತಿವೆ. ಮಹಿಳೆಯರು ಅನ್ಯಾಯದ ವಿರುದ್ದ ಹೋರಾಡುಲು ಅವರಲ್ಲಿ ಹೋರಾಟದ ಮನೋಭಾವ ಬೆಳೆಯುವಂತೆ ಮಾಧ್ಯಮಗಳು ಮಾಡುತ್ತದೆ. ಮಹಿಳೆಯರನ್ನು ಸಬಲರನ್ನಾಗಿಸುವ ಜವಾಬ್ದರಿಯನ್ನು ಮಾಧ್ಯಮಗಳು ಹೊತ್ತುಕೊಂಡಂತಿದೆ. ವಿವಿಧ ಮಾಧ್ಯಮಗಳು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಮಹಿಳೆಯರಿಗಾಗಿ ಇರುವಂತಹ ವೆಬ್ಸೈಟ್ಗಳು, ಟಿ.ವಿ. ಚಾನಲ್ಗಳಲ್ಲಿ ಮಹಿಳೆಯರ ಪರವಾಗಿ ಪ್ರಸಾರವಾಗುವಂತಹ ಧಾರವಾಹಿಗಳು, ಪ್ರಾಯೋಜಿತ ಕಾರ್ಯಕ್ರಮಗಳು, ರೇಡಿಯೋಗಳಲ್ಲಿ ಪ್ರಸಾರವಾಗುವ ವನಿತೆಯರ ಕಾರ್ಯಕ್ರಮಗಳು, ಮಹಿಳೆಯರ ಕುರಿತಾದ ಚಲನಚಿತ್ರಗಳು ಅವರು ಸ್ವಾಸಾಮರ್ಥ್ಯದಿಂದ ಬದುಕಲು ಮತ್ತು ಸಬಲರಾಗುವಂತೆ ಪ್ರೇರೇಪಿಸುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಮಹಿಳಾ ಪುರವಣಿಗಳಲ್ಲಿ ಮಹಿಳೆಯರ ಸಮಸ್ಯೆ, ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯ, ಅವರ ಜೀವನ ಕ್ರಮ ಇತ್ಯಾದಿಗಳ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತವೆ. ಇವುಗಳು ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ. ಅವರಿಗೆ ವಿವಿಧ ರೀತಿಯ ಮಾಹಿತಿ, ವೈದ್ಯಕೀಯ ಸವಲತ್ತು, ಕಾನೂನು ಸಲಹೆ, ಸ್ವಭಾವ ತಿದ್ದಿಕೊಳ್ಳಲು ಕಿವಿ ಮಾತು, ಸರಳ ಜೀವನ ನಡೆಸುವ ಬಗ್ಗೆ ಮಾಹಿತಿ ನೀಡುತ್ತವೆ. ಅಲ್ಲದೆ ಮಾಧ್ಯಮ ಒಂದು ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುತ್ತದೆ.
  ಮಹಿಳೆ ಕೇವಲ ಗೃಹಿಣಿಯಾಗಿ ಮನೆಯ ಒಪ್ಪ ಒರಣಕ್ಕೇ ತನ್ನ ಜೀವನ ಮೀಸಲಾಗಿಸುವುದನ್ನು ತಪ್ಪಿಸಿ, ಇತರ ವೃತ್ತಿಗಳನ್ನು ಕೈಗೆತ್ತಿಕೊಳ್ಳಲು ಮಾಧ್ಯಮಗಳು ಪ್ರೋತ್ಸಾಹ ನೀಡುತ್ತವೆ. ಉದ್ಯೋಗಾವಕಾಶಗಳನ್ನು ಗುರುತಿಸಲು ಶಿಕ್ಷಣ ಕುಶಲತೆಗಳೆಡೆಗೆ ಮಹಿಳೆಯರನ್ನು ಪ್ರೆರೇಪಿಸುತ್ತಿವೆ. ಯಾವುದೇ ವೃತ್ತಿ ಕ್ಷೇತ್ರಗಳಲ್ಲಿ ಮಹಿಳೆ ಎದುರಿಸಬಹುದಾದ ಎಡರು -ತೊಡರುಗಳನ್ನು ಗುರತಿಸಿ, ಅವುಗಳನ್ನು ನಿವಾರಿಸಿಕೊಳ್ಳುವ ಪರಿಹಾರೋಪಾಯಗಳನ್ನು ಸೂಚಿಸುತ್ತವೆ. ಮಾಧ್ಯಮಗಳು ಮಹಿಳೆಯರ ಸಾಮಜಿಕ ಸಮಸ್ಯೆಯ ಬಗ್ಗೆ ಮುಕ್ತ ಚರ್ಚೆಗೆ ಅವಕಾಶವನ್ನು ಒದಗಿಸುತ್ತದೆ. ಮಹಿಳಾ ಶೋಷಣೆ, ಲಿಂಗಬೇಧ ಹಾಗೂ ವೃತ್ತಿ ತಾರತಮ್ಯಗಳಂತಹ ವಿಷಯಗಳಿಗೆ ಸಂಬಂಧಪಟ್ಟ ವಿವಾದಗಳನ್ನು ಬಗೆಹರಿಸಲು ಪ್ರತ್ಯೇಕ ನ್ಯಾಯಾಲಯ, ಸಾಮಾಜಿಕ ಸಮಾನತೆ, ಸಬಲೀಕರಣದಂತಹ ನೇರ ವಿಷಯಗಳು ಮಾಧ್ಯಮಗಳಲ್ಲಿ ಬಿಂಬಿಸಲ್ಪಡುತ್ತವೆ. ಇದರಿಂದ ಮಹಿಳೆಯರು ಇಂದು ಕಾನೂನು ಅರಿವು, ತಮ್ಮ ಹಕ್ಕುಗಳನ್ನು ರಕ್ಷಿಸುವ, ಚಲಾಯಿಸುವತ್ತ ದಾಪುಗಾಲಿಡಲು ಸಾಧ್ಯವಾಗಿದೆ.
ಯಾವುಳೇ ಒಬ್ಬಳು ಮಹಿಳೆ ತನ್ನ ಸಮಾಜದಿಂದ ಅಥವಾ ಪುರುಷರಿಂದ ಅಥವಾ ಸಿಯರಿಂದ ಶೋಷಣೆಗೆ ಒಳಗಾದಾಗ ಶೋಷಿತರ ಪರವಾಗಿ ಧ್ವನಿ ಎತ್ತುತ್ತವೆ ಮತ್ತು ಅವರ ಸಹಾಯಕ್ಕೆ ನಿಲ್ಲತ್ತವೆ.
 ಮಾಧ್ಯಮಗಳು ಗುಡಿಕೈಗಾರಿಕೆ, ಸ್ವಉದ್ಯೋಗಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗುವಂತೆ ಪ್ರೋತ್ಸಾಹಿಸುತ್ತಿದೆ. ವಿದ್ಯಾಭ್ಯಾಸವನ್ನು ಪಡೆಯದೆ ಇರುವಂತಹ ಸೀಯರು ಶಿಕ್ಷಣದತ್ತ ಒಲವು ಹೊಂದುವಂತೆ ಮಾಡುವುದು ಹಾಗೂ ಸಾರ್ವಜನಿಕ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸುವ ಕೆಲಸ ಮಾಧ್ಯಮಗಳು ಮಾಡುತ್ತವೆ. ಅವು ಹೆಣ್ಣು ಮಕ್ಕಳಿಗೆ ಇರುವ ಶೈಕ್ಷಣಿಕ ಸಾಲಭ್ಯಗಳ ಬಗ್ಗೆ ತಿಳಿಸುತ್ತವೆ. ಹೀಗೆ ಮಾಧ್ಯಮಗಳು ಮಹಿಳಾ ಸಬಲೀಕರಣಕ್ಕೆ ತನ್ನ ಕೊಡುಗೆ ಸಲ್ಲಿಸುತ್ತಿವೆ.

ಶಿಕ್ಷಣದಿಂದ ಮಾನವನ ಉನ್ನತಿ


‘‘ವಿದ್ಯಾ ವಿಹೇನ ಪಶು’’ ಎಂಬ ಆರ್ಯೋಕ್ತಿಯಿದೆ. ಅಂದರೆ ವಿದ್ಯೆ ಇಲ್ಲದವನು ಪಶುವಿಗೆ ಸಮಾನ ಎಂದರ್ಥ. ಮನುಷ್ಯನಲ್ಲಿ ಮಾನವೀಯವನ್ನು ತುಂಬುವ ಕ್ರಿಯೆ ಶಿಕ್ಷಣದಿಂದ ನಡೆಯುತ್ತದೆ. ‘ಮಾನವನನ್ನು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಸಾವಿನಿಂದ ಅಮೃತತ್ವದೆಡೆಗೆ ಸಾಗಿಸುವುದೆ ಶಿಕ್ಷಣ ಎಂದು ಉಪನಿಷತ್ನಲ್ಲಿ ಹೇಳಲಾಗಿದೆ. ಶಿಕ್ಷಣವೆಂದರೆ ತರಬೇತಿ ಎಂಬ ಪರಿಕಲ್ಪನೆ ಜನರಲ್ಲಿದೆ. ಆದರೆ ತರಬೇತಿಯೇ ಶಿಕ್ಷಣವಲ್ಲ. ತರಬೇತಿಯು ನಾವು ಪಡೆಯುವ ಶಿಕ್ಷಣದಲ್ಲಿ ಒಂದು ಸಣ್ಣ ಅಂಶವಷ್ಟೆ . ಮನುಷ್ಯರಲ್ಲಿ ಮಾತ್ರ ಶಿಕ್ಷಣವೆಂಬ ವ್ಯವಸ್ಥೆ ಕಂಡುಬರುತ್ತದೆ.facebook
ಇದು ಮಾನವ ಇತರ ಪ್ರಾಣಿಗಳಿಗಿಂತ ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ನಮಗೆ ಸಿಗುವ ಶಿಕ್ಷಣ ವಿಶಾಲವಾದ ಅರ್ಥವನ್ನು ಹೊಂದಿದೆ. ಸೊಕ್ರೆಟಿಸ್ ದೋಷವನ್ನು ನಿವಾರಿಸಿ ಸತ್ಯದ ಅನ್ವೇಷಣೆ ಮಾಡುವುದೆ ಶಿಕ್ಷಣ’’ ಎಂದಿದ್ದಾರೆ. ಶಿಕ್ಷಣದ ವಸ್ತು, ಮಾರ್ಗ ಮತ್ತು ಮಾಧ್ಯಮಗಳು ಕಾಲ, ದೇಶ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿವೆ. ಆದ್ದರಿಂದ ಶಿಕ್ಷಣದ ವ್ಯಾಪ್ತಿಯನ್ನು ಕೆಲವೇ ಮಾತುಗಳಲ್ಲಿ ಹೇಳುವುದು ಕಷ್ಟ ಸಾಧ್ಯ. ಮಾನವನ ಇತಿಹಾಸದಲ್ಲೂ ಶಿಕ್ಷಣ ವಹಿಸಿದ ಪಾತ್ರ ಅತ್ಯಮೂಲ್ಯವಾದದ್ದು, ಒಂದರ್ಥದಲ್ಲಿ ಮಾನವನ ಚರಿತ್ರೆ ಎಂದರೆ ಅವನು ಅನಾದಿ ಕಾಲದಿಂದ ಇಂದಿನ ವರೆಗೆ ಪಡೆದ ಶಿಕ್ಷಣದ ಇತಿಹಾಸವೇ ಆಗಿದೆ. ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಶಿಕ್ಷಣವು ಒಂದು. ಶಿಕ್ಷಣವು ಜನರಲ್ಲಿನ ಪಶುತ್ವವನ್ನು ಹೋಗಲಾಡಿಸಿ ಮಾನವೀಯತೆಯನ್ನು ಬೆಳೆಸುತ್ತದೆ. ರಾಜ್ಯಶಾಸದ ಪಿತಾಮಹ ಅರಿಸ್ಟಾಟಲ್ ‘‘ಶಿಕ್ಷಣ ಆರೋಗ್ಯಕರ ಶರೀರದಲ್ಲಿ ಆರೋಗ್ಯಕರ ಮನಸ್ಸನ್ನು ಸೃಷ್ಟಿಸುತ್ತದೆ’’ ಎಂದಿದ್ದಾರೆ. ವಿದ್ಯೆ ಅಭ್ಯಸಿಸುವವನು ಅಥವಾ ವಿದ್ಯಾರ್ಜನೆ ಉದ್ದೇಶ ಹೊಂದಿರುವವನು ವಿದ್ಯಾರ್ಥಿ ಎಂದೆನಿಸುತ್ತಾನೆ. ಶಿಕ್ಷಣ ಅಥವಾ ವಿದ್ಯಾರ್ಜನೆಯು ಜೀವನ ಪರ್ಯಂತ ನಡೆಯುವ ಪ್ರಕ್ರಿಯೆ. ಆದುದರಿಂದ ವಿದ್ಯಾರ್ಥಿಗೆ ವಯೋಮಾನದ ಮಿತಿಯಿಲ್ಲ ಕಲಿಯುವ ಮನಸ್ಸಿರುವ ಎಲ್ಲರೂ ಅಂದರೆ ಹಣ್ಣು ಗಡ್ಡದ ಮೈದಕನೇ ಇರಲಿ,ಕಾಲೇಜಿನ ಹಿರಿಯ ಪ್ರಾಧ್ಯಾಪಕನೇ ಇರಲಿ ಅವರೆಲ್ಲರೂ ನಿಜವಾಗಿ ವಿದ್ಯಾರ್ಥಿಗಳೆ. ವಿದ್ಯಾರ್ಜನೆಯು ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ವಿದ್ಯೆ ಎಂಬುದು ಕೇವಲ ಹೊಟ್ಟೆಪಾಡಿಗೆ ದಾರಿ ಮಾಡುವ ವಿದ್ಯೆಯಾಗಿರದೆ, ಅದು ಮಾನವನನ್ನು ಮಾಧವನನ್ನಾಗಿಸುವ ವಿದ್ಯೆಯಾಗಿರಸಬೇಕು. ಅಂದರೆ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿ ಕಾರಣವಾಗಿ ಯೋಗ್ಯ ವ್ಯಕ್ತಿಗಳಾಗಲು ಪೂರಕವಾಗಿರಬೇಕು.
 ವ್ಯಕ್ತಿಯ ಪ್ರತಿಭೆ ಅರಳಲು, ಕೌಶಲ್ಯ ವೃದ್ಧಿಸಲು, ಆತ್ಮವಿಶ್ವಾಸ ಕುದುರಲು ಶಿಕ್ಷಣದಿಂದ ಸಾಧ್ಯವಾಗುತ್ತದೆ. ಶಿಕ್ಷಣದಿಂದ ಜನರಲ್ಲಿ ಮಹತ್ತರವಾದುದನ್ನು ಸಾಸಬೇಕೆಂಬ ಕೆಚ್ಚು ಉಕ್ಕುತ್ತದೆ. ತನ್ನ ಕಾಲ ಮೇಲೆ ತಾನು ನಿಂತು (ಸ್ವಾವಲಂಬಿಯಾಗಿ) ಬಾಳಬೇಕೆಂಬ ತುಡಿತ ಮಿಡಿಯುತ್ತದೆ. ಹೀಗೆ ವ್ಯಕ್ತಿಯು ಸರ್ವಾಂಗೀಣ ಪ್ರಗತಿ ಸಾಸಿ, ನೈತಿಕ ವಿಕಾಸಕ್ಕೆಡೆಮಾಡಿ ಆತ ನಲಿವು, ಗೆಲುವುಗಳಿಂದ ಚೆನ್ನಾಗಿ ಬದುಕಲು ಶಿಕ್ಷಣ ಪೂರಕವಾಗಿದೆ. ಶಿಲ್ಪಿಯೊಬ್ಬ ಶಿಲ್ಪ ತಯಾರಿಸಲು ಕಲ್ಲಿನ ಬೇಡವಾದ ಭಾಗವನ್ನು ಕೆತ್ತಿ ತೆಗೆಯುವಂತೆ ಜನರ ಮನಸ್ಸಿಗೆ ಕವಿದಿರುವ ಅಜ್ಞಾನ, ಅಹಂಕಾರ, ದುಶ್ಚಟ, ಕೆಟ್ಟ ಹವ್ಯಾಸಗಳ ಕವಚವನ್ನು ಶಿಕ್ಷಣ ಕಿತ್ತೊಗೆದು ಪ್ರತಿಭಾವಂತರನ್ನಾಗಿಸುತ್ತದೆ. ಸಾಮಾಜಿಕವಾಗಿ ಗೌರವ ಪಡೆಯಲು ಮತ್ತು ಜೀವನದ ಉತ್ಕೃಷ್ಟ ಮಟ್ಟವನ್ನು ಏರಲು ಶಿಕ್ಷಣ ಸಹಕಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಪರಿಪೂರ್ಣವಾಗಿ ರೂಪಿಸುವುದೇ ಶಿಕ್ಷಣ. ಶಿಕ್ಷಣದಿಂದ ಉಂಟಾಗುವ ಜ್ಞಾನಾರ್ಜನೆಯು ಪ್ರತಿಯೊಬ್ಬ ಮಾನವನ ಆಸ್ತಿ. ಈ ಆಸ್ತಿಯನ್ನು ಜೀವನದುದ್ದಕ್ಕೂ ಹೊತ್ತೊಯ್ಯಬಹುದು. ಈ ಅಮೂಲ್ಯ ಸಂಪತ್ತಿಗೆ ಕಳ್ಳಕಾಕರ ಭಯವಿಲ್ಲ, ಹಂಚಿದರೂ ಮುಗಿಯುವುದಿಲ್ಲ, ಬದಲಾಗಿ ಹೆಚ್ಚಾಗತ್ತದೆ. ಇದಕ್ಕೆ ತೆರಿಗೆ ಕಟ್ಟಬೇಕಾಗಿಯೂ ಇಲ್ಲ. ಇಂತಹ ವಿದ್ಯೆಯೆಂಬ ಧನ ಸಂಪಾದನೆ ಮಾನವನ ಬದುಕಿಗೆ ತೀರಾ ಅಗತ್ಯ. ಅಂತಹ ವಿದ್ಯಾವಂತನು ಇದ್ದಲ್ಲಿಯೂ ಸಲ್ಲುವನು,ಹೋಗಿದ್ದಲ್ಲಿಯೂ ಸಲ್ಲುವನು, ಗಿರಿಯ ಮೇಲಿದ್ದರೂ ಸಲ್ಲುವನು ಎಂದು ಸರ್ವಜ್ಞ ಕವಿ ಸಾರಿದ್ದಾನೆ. ಶಿಕ್ಷಣ ಪೂರ್ಣವಾಗಬೇಕಾದರೆ, ನೈಜವಾಗಬೇಕಾದರೆ, ಶಿಕ್ಷಕರ, ಪೊಷಕರ, ಮಕ್ಕಳ ಸಹಕಾರ ಅಗತ್ಯ. ಈ ಮೂವರು ಒಂದು ತ್ರಿಭುಜ ತ್ರಿಕೋನದಂತೆ ಸೇರಬೇಕು. ಇದು ವ್ಯಕ್ತಿಯ ಸ್ವಭಾವ, ನಡತೆ, ಜ್ಞಾನ - ಅನುಭವಗಳ ಒಂದು ಮಿಶ್ರಣ. ಈ ಎಲ್ಲ ಗುಣಗಳು ಶಿಕ್ಷಣದಿಂದ ವೃದ್ಧಿಯಾಗುತ್ತದೆ. ಶಿಕ್ಷಣಕ್ಕೆ ಕೊನೆಯಿಲ್ಲ. ಶಿಕ್ಷಣವನ್ನು ಕೇವಲ ಶಾಲೆ - ಕಾಲೇಜುಗಳಿಂದ ಮಾತ್ರ ಪಡೆಯುವುದಿಲ್ಲ. ಸುತ್ತಮುತ್ತಲಿನ ಪರಿಸರ, ಬಂಧುಗಳು, ಇತರರು, ಪ್ರಾಣಿ -ಪಕ್ಷಿಗಳಿಂದಲೂ ನಾವು ಶಿಕ್ಷಣವನ್ನು ಪಡೆಯುತ್ತೇವೆ. ಶಿಕ್ಷಣ ಪ್ರಾರಂಭವಾಗುವುದು ಮನೆಯಿಂದ. ತಂದೆ -ತಾಯಿ ಮಕ್ಕಳ ನಡವಳಿಕೆಗಳನ್ನು ತಿದ್ದುತ್ತ, ಬುದ್ಧಿ ಮಾತುಗಳನ್ನು ಹೇಳುತ್ತಾ ಅವರಿಗೆ ಅರಿವಾಗದಂತೆ ಬೋಸುತ್ತಾರೆ. ಇದಕ್ಕಾಗಿಯೇ ‘ಮನೆಯನ್ನು ಮೊದಲ ಪಾಠ ಶಾಲೆ’ ಎನ್ನಲಾಗಿದೆ.
 ವಿದ್ಯೆಯ ಮಹತ್ವದ ಬಗ್ಗೆ ಸರ್ವಜ್ಞ ಕವಿ ಈ ರೀತಿಯಾಗಿ ಹೇಳಿದ್ದಾನೆ ‘‘ವಿದ್ಯೆ ಯುಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ’’. ಇದರ ಅರ್ಥ: ಮನುಷ್ಯನಿಗೆ ವಿದ್ಯೆಯೇ ನಿಜವಾದ ಭೂಷಣ. ವಿದ್ಯಾವಂತನ ಮುಖವು ತೇಜಸ್ಸಿನಿಂದ ಕೂಡಿರುತ್ತದೆ. ವಿದ್ಯೆಯನ್ನೇ ಕಲಿಯದವನ ಮುಖವು ಹಾಳು ಬಿದ್ದ ಊರಿನ ಮುದಿ ಹದ್ದಿನಂತೆ. ಇದರಿಂದಲೇ ಉಪವಾಸವಿದ್ದಾದರೂ ಸರಿ, ವಿದ್ಯೆ ಕಲಿಯಬೇಕು. ಮಾನವನ ವ್ಯಕ್ತಿತ್ವದ ವಿಕಸನಕ್ಕೆ ವಿದ್ಯೆಯೇ ಮೂಲಸಾಧನ.
  ‘‘ಒಂದು ರಾಷ್ಟ್ರವನ್ನು ನಾಶಪಡಿಸಬೇಕಾದರೆ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆ ಸಾಕು’’ ಎಂಬ ಮಾತಿದೆ. ಅಂದರೆ ದೇಶದ ಪ್ರಗತಿಗೆ ಕಾರಣ ಅಲ್ಲಿನ ಶಿಕ್ಷಣ ವ್ಯವಸ್ಥೆ. ಈ ವ್ಯವಸ್ಥೆಯೇ ಹಾಳಾದರೆ ದೇಶ ನಾಶಹೊಂದುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಶಿಕ್ಷಣ ವ್ಯವಸ್ಥೆ ಹಾಳಾಗದಂತೆ ಕಾಯ್ದಿಕೊಳ್ಳುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಮಾನವ ಇತರ ಪ್ರಾಣಿಗಳಿಗಿಂತ ಭಿನ್ನವಾಗಿರಲು ಕಾರಣವಾದ ಮನುಷ್ಯ ಧರ್ಮ, ವಿವೇಕವನ್ನು ವಿದ್ಯೆ ಅವನಲ್ಲಿ ತುಂಬುತ್ತದೆ. ವಿದ್ಯೆ ಮನುಷ್ಯನಿಗೆ ಜ್ಞಾನದ ಬೆಳಕು ನೀಡುತ್ತದೆ. ಸಂಸ್ಕಾರ ಕಲಿಸುತ್ತದೆ. ಇದರಿಂದ ಅಸಾಧಾರಣ ವ್ಯಕ್ತಿಯೊಬ್ಬನ ನಿರ್ಮಾಣವಾಗುತ್ತದೆ. ಅಂತಹ ವ್ಯಕ್ತಿ ಭವ್ಯ ರಾಷ್ಟ್ರದ ನಿರ್ಮಾಣಕ್ಕೆ ಅಡಿಗಲ್ಲಾಗುತ್ತಾನೆ. ಕೇವಲ ಪದವಿಗಳನ್ನು ಪಡೆದ ಮಾತ್ರಕ್ಕೆ ವಿದ್ಯಾವಂತನಾಗುವುದಿಲ್ಲ. ಕಲಿತ ಮಾನವಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪಡೆದ ವಿದ್ಯೆ ಸಾರ್ಥಕವಾಗುತ್ತದೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಭೌದ್ಧಿಕ ಮತ್ತು ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೇ ಹೊರತು, ನೈತಿಕ ವಿಕಾಸದಕಡೆಗೆ ಗಮನ ಹರಿಸಿಲ್ಲ. ತತ್ಪರಿಣಾಮವಾಗಿ ಇಂದು ‘‘ಬುದ್ಧಿವಂತ ರಕ್ಕಸ ಜನಾಂಗ’’ ಸೃಷ್ಟಿಯಾಗುತ್ತಿದೆ. ನೀತಿ, ನಿಯಮ, ಶಿಸ್ತು, ಮೌಲ್ಯಗಳಿಗೆಲ್ಲ ತಿಲಾಂಜಲಿಯಿತ್ತು ಸ್ವಾರ್ಥಕ್ಕಾಗಿ ಯಾವುದೇ ಕಾರ್ಯಕ್ಕೂ ಹೇಸದ ಜನಾಂಗ ನಿರ್ಮಾಣವಾಗುತ್ತಿದೆ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕ ಶಿಕ್ಷಣದ ಕೊರತೆಯೇ ಕಾರಣ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ ಧೃಡವಾಗಿದ್ದು ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತು ಸಮಾದಾನಕರವಾಗಿ, ಶಾಂತಿಯುತವಾಗಿ ಅದನ್ನು ಪರಿಹರಿಸಬೇಕು. ಇದು ಮಾನವಧರ್ಮದ ಗುಣವಾಗಿದೆ. ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅಗತ್ಯವಿದೆ. ಈಗಿನ ಶಿಕ್ಷಣದಲ್ಲಿ ಬಾಹ್ಯ ಪರಿಸರ ಮಾಲಿನ್ಯ ನಿವಾರಣೆ ಬಗ್ಗೆ ಸಾಕಷ್ಟು ಹೇಳಲಾಗುತ್ತದೆ. ಅದರ ಜೊತೆಗೆ ಜನರ ಆಂತರಿಕ ಮಾಲಿನ್ಯವನ್ನು ದೂರ ಮಾಡಬಲ್ಲಂತಹ ಶಿಕ್ಷಣ ನಮಗಿಂದು ಅವಶ್ಯವಾಗಿದೆ.

ಬುಧವಾರ, ಜೂನ್ 6, 2012

ಗತ್ತಿಗಾಗಿ ಗಾಜು


ಗಾಜಿನ ಉತ್ಪನ್ನಗಲಿಗೆ ಇಂದು ಬಹುಬೇಡಿಕೆ. ಪ್ರತಿಷ್ಠೆಯ ಗೀಳು ಹಚ್ಚಿಸಿಕೊಂಡಿರುವ ಜನರಿಗೆ ಗಾಜಿನ ವಸ್ತುಗಲ ಬಳಕೆ ಒಂದು ಗತ್ತಿನ ವಿಚಾರ. ಗಾಜಿನ ವಸ್ತುಗಳು ಆಫೀಸ್, ಮನೆ, ರೆಸ್ಟೋರೆಂಟ್, ರೆಸೋರ್ಟ್, ಮಹಲ್, ಮ್ಯೂಸಿಯಂಗಳೇ ಆಗಿರಲಿ, ವಿಶೇಷ ಮೆರಗು ನೀಡುತ್ತದೆ. ಸದಾ ಪಳಪಳನೆ ಹೊಳೆಯುತ್ತಿರುವ ಗಾಜಿನಿಂದ ತಯಾರಿಸಿದ ಪರಿಕರಗಲು ನೋಡುಗರನ್ನು ಬಹಳ ಬೇಗನೆ ತನ್ನತ್ತ ಆಕರ್ಷಿಸುತ್ತದೆ. ಮನೆ, ಕಚೇರಿ ಎಲ್ಲದರಲ್ಲಿಯೂ ಒಳಗಿನ ವಿನ್ಯಾಸಗಳಿಗೆ ಗಾಜಿನ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಆಧುನಿಕ ಶೈಲಿಯ, ಟೈಲ್ಸ್ ಹಾಸಿದ ಹೊಳೆಯುವ ಕಟ್ಟಡಗಳ ಅಂತರಂಗದ ಸೌಂದರ್ಯವನ್ನು ಇಮ್ಮಡಿಗೊಳಿಸಲು ಗಾಜಿನ ಅಲಂಕಾರಿಕ ವಸ್ತುಗಳನ್ನು ಬಳಸಿ ಶೃಂಗರಿಸುವುದು ಸಾಮಾನ್ಯ. ಗಾಜಿನ ಬಳಕೆ ಕೇವಲ ಶೃಂಗಾರ ವಸ್ತುಗಳಿಗೆ ಸೀಮಿತವಾಗಿಲ್ಲ ಬದಲಾಗಿ ಪಿಠೋಪಕರಣ, ಚಾ, ಮಧ್ಯಪಾನಕ್ಕೆ ಬಳಸುವ ಗ್ಲಾಸುಗಳು, ಅಡುಗೆ ಮನೆಯಲ್ಲಿ ಉಪಯೋಗಿಸುವ ಪರಿಕರಗಳು ಇತ್ಯಾದಿಗಳ ಸ್ಥಾನವನ್ನು ಅದು ಆಕ್ರಮಿಸಿಕೊಂಡಿದೆ. ದೊಡ್ಡ ದೊಡ್ಡ ರೆಷ್ಟೊರೆಂಟ್ಗಳಲ್ಲಿ ಫಾಸ್ಟ್ಫುಡ್, ಎಣ್ಣೆಯಲ್ಲಿ ಕರಿದ ತಿನಸು, ಸೂಪ್, ಸಾಸ್ಗಳನ್ನು ಗ್ರಾಹಕರಿಗೆ ವಿತರಿಸಲು ಬಣ್ಣ ಬಣ್ಣದ ಅತ್ಯಾಕರ್ಷಕ ಗಾಜಿನ ಬೌಲ್ಗಳನ್ನು ಬಳಸುತ್ತಾರೆ. ಕೋಲ್ಡ್ ಹೌಸ್ಗಳಲ್ಲಿ ವಿವಿಧ ರೀತಿಯ ಐಸ್ಕ್ರಿಮ್, ಹಣ್ಣುಗಳ ರಸ, ಇತರ ತಂಪು ಪಾನೀಯಗಳನ್ನು ಸೇವಿಸಲು ಗಾಜಿನ ಗ್ಲಾಸ್, ಬೌಲ್, ತಟ್ಟೆ ಇತ್ಯಾದಿಗಳನ್ನು ಉಪಯೋಗಿಸುತ್ತಾರೆ. ಕಬ್ಬಿನ ರಸವನ್ನು ಗಾಜಿನ ಗ್ಲಾಸಿನಲ್ಲಿ ಕುಡಿದರೆ ಅದರ ನಿಜವಾದ ರುಚಿ, ಮಜ ದೊರೆಯುವುದು. ಕೋಲ್ಡ್ ಹೌಸ್ಗಳಲ್ಲಿ ಗಾಜಿನ ಬದಲಿಗೆ ಪ್ಲಾಸ್ಟಿಕ್ ಗ್ಲಾಸ್ಗಲು ಬಂದರೂ ಗಾಜಿನ ಆಕರ್ಷಣೆ, ಮೋಡಿಯಿಂದ ಜನ ವಿಚಲಿತರಾಗಿಲ್ಲ.
 ಪ್ರಯೋಜನ 
ಪ್ಲಾಸ್ಟಿಕ್, ಮೆಟಲ್ನ ಉತ್ಪನ್ನಗಳಿಗೆ ಹೋಲಿಸಿದರೆ ಗಾಜಿನ ಪ್ರಾತೆ, ಗ್ಲಾಸ್, ಇತ್ಯಾದಿ ಪರಿಕರಗಳು ಆರೋಗ್ಯದ ದೃಷ್ಟಿಯಿಂದ ಉತ್ತಮ. ಬಿಸಿ ಇರುವ ಚಾ, ಕಾಫಿ ಇತ್ಯಾದಿ ಸೇವನೆಗೆ ಗಾಜಿನ ಲೋಟೆ ಬಲು ಸಹಕಾರಿ. ಯಾಕೆಂದರೆ ಗಾಜಿನ ಲೋಟಕ್ಕೆ ಬಿಸಿಯಾದ ಚಾ ಸುರಿದಾಗ ಅದರ ಹೊರಮೈ ಹೆಚ್ಚು ಬಿಸಿಯಾಗಿರುವುದಿಲ್ಲ. ಇದರಿಂದ ಗ್ಲಾಸನ್ನು ಆರಾಮವಾಗಿ ಕೈಯಲ್ಲಿ ಹಿಡಿಯ ಬಹುದು. ಗಾಜಿನ ವಸ್ತುಗಳು ಬಹಳ ನಯ ನಾಜೂಕಾಗಿರುವುದರಿಂದ ಅವುಗಳ ಸ್ಪರ್ಷ ನಮ್ಮನ್ನು ಭಾವಪ್ರಚೋದನೆಗೊಳಪಡಿಸುತ್ತದೆ. ಗಾಜಿನ ಪಾತ್ರೆಗಳನ್ನು ತೋಳೆದು ಶುಚ್ಚಿಗೊಳಿಸುವುದು ಸುಲಭ. ಯಾಕೆಂದರೆ ಯಾವುದೇ ರೀತಿಯ ಎಣ್ಣೆ ಪದಾರ್ಥ, ದೂಳಿನ ಕಣಗಳು ಅದರಲ್ಲಿ ಹೆಚ್ಚಾಗಿ ಅಂಟಿಕೊಳ್ಳುವುದಿಲ್ಲ. ಅಂಟಿದರೂ ನೀರು ತಾಗಿದೊಡನೆ ಕೊಳೆ ನೀರಿನೊಂದಿಗೆ ವಿಲೀನವಾಗಿ ಬೇಗನೆ ಶುಭ್ರವಾಗುವುದು. ಮನೆ, ಕಚೇರಿ ಯಾವುದೇ ಇರಲಿ ಅವುಗಳ ಒಳಾಂಗಿಣ ವಿನ್ಯಾಸಕ್ಕೆ ಗಾಜಿನ ವಸ್ತುಗಳು ಬಹಳ ಪ್ರಸಿದ್ಧ. ಶೋಕೇಸ್ಗಳಲ್ಲಿ ಗಾಜಿನ ವಸ್ತುಗಳು ರಾರಾಜಿಸುತ್ತಿದ್ದರೆ ಅದರ ವೈಶಿಷ್ಟ ಮತ್ತು ಗತ್ತೇ ಬೇರೆ. ವಿವಿಧ ಬಣ್ಣಗಳ ಬೌಲ್, ಹೂದಾನಿ, ಕ್ಯಾಂಡಲ್ ಸ್ಟಾಂಡ್, ಕಲಾಕೃತಿಗಳನ್ನು ವಿಶಿಷ್ಟವಾಗಿ ಜೋಡಿಸಿಟ್ಟರೆ ಅದು ಅಂತಹ ಸ್ಥಳಕ್ಕೆ ಹೊಸ ಲುಕ್ ಕೊಡುವುದರಲ್ಲಿ ಯಾವುದೇ ಸಂದೇಹ ಬೇಡ. ಕತ್ತಲ ಕೋಣೆಯಲ್ಲೊಂದು ಗಾಜಿನ ಕ್ಯಾಂಡಲ್ ಸ್ಟಾಂಡಿನಲ್ಲಿ ಕ್ಯಾಂಡಲ್ ಉರಿಸಿ ಇಟ್ಟಾಗ ಅಲ್ಲಿನ ವಾತಾವರಣ ಕಣ್ಣಿಗೆ ಮುದ ನೀಡುತ್ತದೆ. ಗಾಜಿನ ವಸ್ತುಗಳು ಕಾಣಲು ನುಣುಪಾಗಿರುತ್ತದಲ್ಲದೆ, ಬೆಳಕು ಅದರ ಮೇಲೆ ಬಿದ್ದಾಗ ಪ್ರತಿಫಲಿಸುತ್ತದೆ. ಇದರಿಂದ ರಾತ್ರಿಯ ವೇಳೆ ರೂಮ್ನ ಸೌಂದರ್ಯ ಇಮ್ಮಡಿಗೊಲ್ಳುವುದು.
ತೊಂದರೆ
 ಯಾವುದೇ ವಸ್ತುನಿಂದ ಎಷ್ಟೇ ಪ್ರಯೋಜನದ್ದರೂ ಕೆಲವೊಂದು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಹಾಗೇ ಗಾಜಿನ ವಸ್ತುಗಳ ಬಳಕೆಯಲ್ಲೂ. ಇವುಗಳನ್ನು ಉಪಯೋಗಿಸುವಾಗ ಅತಿಯಾದ ಎಚ್ಚರಿಕೆ ಅಗತ್ಯ. ಗಟ್ಟಿಯಾದ ಯಾವುದೇ ವಸ್ತುಗಳಿಗೆ ಸ್ವಲ್ಪ ತಾಗಿದರೆ ಸಾಕು ಗಾಜು ಚೂರಾಗುವುದರಲ್ಲಿ ಸಂಶಯವಿಲ್ಲ. ಚಮಚ, ಸೌಟುಗಳನ್ನು ಬಳಸುವಾಗಲೂ ಜಾಗೃತರಾಗಿರಬೇಕು. ಚಮಚ ತಾಗಿ ಗಾಜಿನ ಚಿಕ್ಕ ತುಣುಕುಗಳು ಆಹಾರದೊಂದಿಗೆ ಸೇರಿಕೊಂಡರೆ ಅಪಾಯಾ ತಪ್ಪಿದ್ದಲ್ಲ. ಇತರ ಯಾವುದೇ ವಸ್ತುಗಳಿಂದ ತಯಾರಿಸಿದ ಉತ್ಪನಗಳಿಗಿಂತ ಒಂದಷ್ಟು ಹೆಚ್ಚು ಜಾಗೃತಿ ಗಾಜಿನ ಉಪಕರಣಗಳನ್ನು ಬಳಸುವಾಗಿರಬೇಕು. ಗಾಜಿನ ಪರಿಕರಗಳನ್ನು ತೊಳೆಯುವ ಸಂದರ್ಭ ಕೈ ಜಾರದಂತೆ ಬಹಳಷ್ಟು ಕಾಳಜಿವಹಿಸುವುದು ಅನಿವಾರ್ಯ. ಗಾಜಿನ ಪಾತ್ರೆಗಳನ್ನು ಬೆಂಕಿಯಿಂದ ಕಡ್ಡಾಯವಾಗಿ ದೂರ ಇಡಲೇಬೇಕು. ಇಲ್ಲವಾದರೆ ಗಾಜು ಒಡೆದು ಸೌಂದರ್ಯ ಮಂಗ ಮಾಯವಾಗುವುದು ಖಂಡಿತ.facebook

ಕೃಷಿಯನ್ನು ಕಾಡುತ್ತಿರುವ ಮಾರುಕಟ್ಟೆ ಅಸ್ಥಿರತೆ


ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಇದಕ್ಕೆ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ಇಂದು ಅಸ್ಥಿರತೆ ತಾಂಡವಾಡುತ್ತಿದೆ.facebook ಉತ್ಪನ್ನಗಳ ಬೆಲೆಯಲ್ಲಿ ವಿಪರೀತ ಏರುಪೇರುಗಳುಂಟಾಗುತ್ತಿವೆ. ಇದು ಕೃಷಿಕರ ಬದುಕನ್ನು ಕಾಡುತ್ತಿದೆ. ಸ್ವಾತಂತ್ರ್ಯದ ಅನಂತರ ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಿ ಕೃಷಿ ಅಭಿವೃದ್ಧಿಗೆ ಮಹತ್ತರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಹಸಿರು ಕ್ರಾಂತಿಯ ಮೂಲಕ ಕೃಷಿ ಚಟುವಟಿಕೆಗಳಿಗೆ ಬಹಳಷ್ಟು ಉತ್ತೇಜನ ನೀಡಲಾಯಿತು. ಆದರೂ ಕೃಷಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಇಂದಿನ ವರೆಗೂ ಸಾಧ್ಯವಾಗಿಲ್ಲ. ಇದು ಕೃಷಿಕರ ದುರಾದೃಷ್ಟವೇ ಸರಿ.
ಅಸ್ಥಿರತೆಯ ನಿದರ್ಶನ 
ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ನಡೆಯುತ್ತಿರುವ ಕೃಷಿ ಚಟುವಟಿಕೆಯಲ್ಲಿನ ಬದಲಾವಣೆಗಳನ್ನು ಗಮನಿಸಿದೆ ಸಾಕು ಕೃಷಿಯನ್ನು ಮಾರುಕಟ್ಟೆ ಎಂಬ ಭೂತ ಕಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಕೆಲವು ವರ್ಷಗಳ ಹಿಂದೆ ಅಡಿಕೆಯ ಮಾರುಕಟ್ಟೆ ಬೆಲೆ ವಿಪರೀತ ಏರಿ ಕಿಲೋ ಒಂದಕ್ಕೆ ರೂ. 160ರಿಂದ 180ರ ವರೆಗೂ ತಲುಪಿತ್ತು. ಇದರಿಂದ ಉತ್ತೇಜಿತರಾದ ಕೃಷಿಕರು ಭಾರೀ ಪ್ರಮಾಣದಲ್ಲಿ ಬಂಡವಾಳವನ್ನು ಅಡಿಕೆ ಕೃಷಿಯಲ್ಲಿ ಹೂಡಿ ಇದ್ದ ಗುಡ್ಡಗಳನ್ನು ಅಡಿಕೆ ತೋಟವಾಗಿ ಪರಿವರ್ತಿಸಿದರು. ಇದು ಅಡಿಕೆ ತೋಟದ ಬೆಲೆ ಭಾರೀ ಹೆಚ್ಚಳಕ್ಕೆ ಕಾರಣವಾಯಿತು.
 ಒಂದೆರಡು ವರ್ಷದಲ್ಲಿ ಅಡಿಕೆಯ ಮಾರುಕಟ್ಟೆ ಬೆಲೆ ದಿಢೀರ್ ಕುಸಿತ ಕಂಡು ಕಿಲೋ ಒಂದಕ್ಕೆ ರೂ. 40 ವರೆಗೆ ಇಳಿಯಿತು. ಇದರಿಂದ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ ಕೃಷಿಕರು ಕಂಗಾಲಾದರು. ತದನಂತರ ಕೆಲವು ವರ್ಷಗಳೇ ಕಳೆದರೂ ಅಡಿಕೆ ಮಾರುಕಟ್ಟೆ ಬೆಲೆಯಲ್ಲಿ ಸ್ಥಿರತೆ ಸಾಸಲು ಸಾಧ್ಯವಾಗಿಲ್ಲ. ಬೆಳಗ್ಗೆ ಒಂದು ಬೆಲೆಯಿದ್ದರೆ. ಸಂಜೆಯ ವೇಳೆ ಬೆಲೆಯಲ್ಲಿ ಬಳಷ್ಟು ಬದಲಾವಣೆಗಳು ನಡೆಯತೊಡಗಿದವು. ಇದು ಕೇವಲ ಅಡಿಕೆಯೊಂದರ ಸ್ಥಿತಿಯಲ್ಲ. ಕರಿಮೆಣಸು, ತೆಂಗಿನಕಾಯಿ, ಬಾಳೆಕಾಯಿ ಇತ್ಯಾದಿಗಳ ಪರಿಸ್ಥಿತಿಯೂ ಹೀಗೆ. ಅಡಿಕೆಯ ಬೆಲೆಯಲ್ಲಿ ಅಸ್ಥಿರತೆ ಇರುವಾಗಲೇ ಇನ್ನೊಂದೆಡೆ ವೆನಿಲ್ಲಾದ ಬೆಲೆ ಕೆಲವು ಸಾವಿರಗಳಷ್ಟು ಏರಿಕೆ ಕಂಡಿತು. ಕೃಷಿಕರು ಅಡಿಕೆಗಿಂತ ವೆನಿಲ್ಲಾ ಉತ್ತಮ ಲಾಭದಾಯಕ ಕೃಷಿ ಎಂದು ಅದನ್ನು ಬೆಳೆಯತೊಡಗಿದರು. ಸ್ವಲ್ಪವೇ ಸಮಯದಿಲ್ಲಿ ಕೃಷಿಕರಿಗೆ ವೆನಿಲ್ಲಾವು ಕೈಕೊಟ್ಟಿತು. ಇದು ಕೃಷಿಕರ ಆರ್ಥಿಕ ಬದುಕಿಗೆ ಇನ್ನೊಂದು ಹೊಡೆತ ನೀಡಿತು. ಹೀಗೆ ಕೃಷಿ ಮಾರುಕಟ್ಟೆಯ ದುಸ್ಥಿತಿಯಿಂದ ತೊಳಲಾಡುತ್ತಿದ್ದ ಕೃಷಿಕರಿಗೆ ಇತ್ತೀಚೆಗಿನ ಒಂದೆರಡು ವರ್ಷಗಳಲ್ಲಿ ರಬ್ಬರ್ ಬೆಳೆಯು ಆಶಾಕಿರಣವಾಗಿ ಮೂಡಿಬಂತು. ರಬ್ಬರ್ಗೆ ಕಿಲೋ ಒಂದಕ್ಕೆ ಸುಮಾರು ರೂ. 150ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗ ತೊಡಗಿತು. ಇದು ಕೃಷಿಕರು ರಬ್ಬರ್ ಬೆಳೆಯನ್ನು ಹೆಚ್ಚಾಗಿ ಬೆಳೆಸುವಂತೆ ಮಾಡಿತು. ಆದರೆ ಂದು ದಿನದಿಂದ ದಿನಕ್ಕೆ ರಬ್ಬರ್ನ ಮಾರುಕಟ್ಟೆ ಬೆಲೆಯು ಕುಸಿಯುತ್ತಿರುವುದು ಕೃಷಿಕರಲ್ಲಿ ಭೀತಿ ಹುಟ್ಟಿಸಿದೆ.
   ಯಾವುದೇ ಒಂದು ಕೃಷಿ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಇದೆ ಎಂದಾಗ ಆ ಉತ್ಪನ್ನಗಳನ್ನು ಬೆಳೆಯಲು ಕೃಷಿಕರು ಬಹಳಷ್ಟು ಬಂಡವಾಳ ಹೂಡುತ್ತಾರೆ. ಕೃಷಿಕರು ಆ ಉತ್ಪನ್ನವನ್ನು ಬೆಳೆದು ಮಾರಾಟಕ್ಕೆ ಕೊಂಡು ಹೋಗುವಾಗ ಉತ್ಪನ್ನದ ಬೆಲೆ ಗಣನೀಯ ಕುಸಿತ ಕಂಡಿರುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುವುದು ಸಹಜ. ಎಲ್ಲ ಕೃಷಿ ಉತ್ಪನ್ನಗಳು ಈ ರೀತಿಯಾಗಿ ಮಾರುಕಟ್ಟೆಯ ಅಸ್ಥಿರತೆ ಎದುರಿಸುತ್ತಿರುವುದು ಶೋಚನೀಯ ವಿಚಾರ.
ಅಸ್ಥಿರತೆಯ ಪರಿಣಾಮ 
ಕೃಷಿ ಉತ್ಪನ್ನಗಳ ಮಾರುಕಟ್ಟೆ ಅಸ್ಥಿರತೆಯಿಂದಾಗಿ ಇಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಜನರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಕೃಷಿಯು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ. ಅನೇಕ ಕಡೆ ಕೃಷಿ ಭೂಮಿ ಪಾಳು ಬಿದ್ದಿವೆ. ಹಲವಾರು ಕಡೆ ಕೃಷಿ ಭೂಮಿಯಲ್ಲಿ ಕಟ್ಟಡಗಳನ್ನು ಕಟ್ಟಿ ಇತರ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ರೀತಿಯಾಗಿ ಕೃಷಿ ವ್ಯವಸ್ಥೆ ಸೊರಗುತ್ತಿರುವುದು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲದು. ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆಯಲ್ಲಿ ಸ್ಥಿರತೆ ಸಾಸುವಲ್ಲಿ ಶ್ರಮಪಡಬೇಕಾದುದು ಅನಿವಾರ್ಯವಾಗಿದೆ. ಒಂದು ದೇಶದ ಆರ್ಥಿಕ ಪರಿಸ್ಥಿತಿ ವ್ಯವಸ್ಥಿತವಾಗಿರಲು ಅಲ್ಲಿನ ಕೈಗಾರಿಕೆ, ಕೃಷಿ, ನೀರಾವರಿ, ವಾಣಿಜ್ಯ ಕ್ಷೇತ್ರಗಳು ಸ್ಥಿರವಾಗಿ ಕಾರ್ಯ ನಿರ್ವಹಿಸಬೇಕು. ಅವುಗಳಲ್ಲಿ ಯಾವುದೇ ಒಂದು ಕ್ಷೇತ್ರ ಸೊರಗಿದರೂ ದೇಶದ ಆರ್ಥಿಕ ಸ್ಥಿತಿ ಅವ್ಯವಸ್ಥಿತವಾಗಬಲ್ಲುದು.

ಕೃಷಿಕರನ್ನು ಕಾಡುತ್ತಿರುವ ಕಾರ್ಮಿಕರ ಕೊರತೆ


ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಪ್ರಸಿದ್ಧವಾಗಿರುವ ಕೃಷಿಯು ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆಯಿಂದ ತೊಳಲಾಡುತ್ತಿದೆ. ಕೃಷಿ ಕಾರ್ಯಗಳಲ್ಲಿ ಅನುಭವವಿರುವ, ದಕ್ಷ ಕಾರ್ಮಿಕರ ಕೊರತೆಯಿಂದಾಗಿ ಹಲವಾರು ಎಕರೆ ಕೃಷಿ ಭೂಮಿ ಪಾಳುಬಿದ್ದಿವೆ.
 ಕಾರ್ಮಿಕರ ಕೊರತೆಯಿಂದ ಇಂದು ಕೃಷಿಗೆ ಯೋಗ್ಯವಾದ ಭೂಮಿ, ಅಗತ್ಯ ನೀರಾವರಿ ಹಾಗೂ ಇತರ ಎಲ್ಲ ಸೌಲಭ್ಯಗಳಿದ್ದರೂ ಕೃಷಿ ಕಾರ್ಯ ನಡೆಸಲು ಹಳ್ಳಿಗರು ಮುಂದಾಗುತ್ತಿಲ್ಲ. ಯಾಕೆಂದರೆ ಕೃಷಿಯಲ್ಲಿ ಕಾಲಕಾಲಕ್ಕೆ ಗೊಬ್ಬರ, ನೀರು ಹಾಕಲು, ಔಷ ಸಿಂಪಡನು, ಕಳೆಕೀಳಲುವುದು ಇತ್ಯಾದಿ ಕೆಲಸಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿರುವುದೇ ಇದಕ್ಕೆ ಕಾರಣ.
ಕಾರ್ಮಿಕರ ಕೊರತೆಗೆ ಕಾರಣ
ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆಯುಂಟಾಗಲು ಹಲವಾರು ಕಾರಣಗಳಿವೆ.
1 ಕೃಷಿ ಚಟುವಟಿಕೆಗಳಲ್ಲಿ ದೈಹಿಕ ಶ್ರಮ ಪ್ರಮುಖವಾದುದು. ದೈಹಿಕ ಶ್ರಮ ವಹಿಸಲು ಜನಹಿಂದೇಟು ಹಾಕುತ್ತಿದ್ದಾರೆ.
 2 ಕೃಷಿ ಕಾರ್ಮಿಕರ ಕೂಲಿ ಬೌದ್ಧಿಕ ಶ್ರಮ ವಹಿಸುವವರ ಸಂಬಳಕ್ಕಿಂತ ಕಡಿಮೆ. 3 ಕೃಷಿ ಕಾರ್ಮಿಕರಿಗೆ ಯಾವುದೇ ಆಂತರಿಕ ಭದ್ರತೆ, ಲಾಭಾಂಶ ಭತ್ಯೆಗಳು ದೊರೆಯುವುದಿಲ್ಲ. 4 ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ಇರುವುದಿಲ್ಲ. 5 ಕೃಷಿ ಕಾರ್ಮಿಕರ ವೃತ್ತಿ ಇತರ ಕೆಲಸ ಮಾಡಲು ಸಾಧ್ಯವಾಗದವರು ಮಾಡುವ ವೃತ್ತಿ ಎಂಬ ಕೀಳರಿಮೆ. 6 ಆಹಾರೋತ್ಪನ್ನಗಳ ಬೆಲೆ ವಿಪರೀತ ಏರಿದೆ. ಇದರಿಂದ ಕೃಷಿ ಕಾರ್ಮಿಕರಿಗೆ (ತಮ್ಮ ಕಡಿಮೆ ಸಂಬಳದಲ್ಲಿ )ಅಗತ್ಯ ಆಹಾರ ವಸ್ತುಗಳ ಖರೀದಿ ಕಷ್ಟಕರವಾಗಿದೆ.
 7 ಸರಕಾರ ಜಾರಿಗೊಳಿಸಿದ ಸಂಪೂರ್ಣ ಸಾಕ್ಷರತಾ ಯೋಜನೆಯಂತಹ ಯೋಜನೆಗಳಿಂದ ವಿದ್ಯಾವಂತರಾದ ಜನರು ಇಂದು ಹೆಚ್ಚಾಗಿ ಪಟ್ಟಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಿದ್ಯಾವಂತ ಯುವ ಜನರು ಹಳ್ಳಿಗಳಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕಾರ್ಮಿಕರ ಕೊರತೆ ಹೇಗೆ ನೀಗಿಸುವುದು
 1 ಸರಕಾರ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಿಸುವುದು. ಆ ಮೂಲಕ ಕೃಷಿ ಕಾರ್ಮಿಕರಿಗೆ ಉತ್ತಮ ಕೂಲಿ ನೀಡುವಂತೆ ಮಾಡುವುದು.
2 ಸರಕಾರ ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ದೊರೆಯುವಂತೆ ಮಾಡುವುದು.
3 ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಸಮಾನವೆಂದು ತಿಳಿದು ಗೌರವಿಸುವುದು.
4 ವಿದ್ಯಾವಂತ ಜನರು ಹಳ್ಳಿಗಳಲ್ಲಿ ಉಳಿದು ಕೃಷಿ ಕಾರ್ಯಗಳಲ್ಲಿ ತೊಡುಗುವಂತೆ ಪ್ರೋತ್ಸಾಹಿಸುವುದು. 5 ಕೃಷಿ ಕಾರ್ಮಿಕರಿಗೆ ಉದ್ಯೋಗ ಭತ್ಯೆ, ಕೆಲಸಕ್ಕೆ ಭದ್ರತೆ, ಸಾಲ ಸೌಲಭ್ಯಗಳನ್ನು ಒದಗಿಸುವುದು. ಸರಕಾರ ಕೃಷಿ ಕಾರ್ಮಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿ, ಅವರು ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು. ಇಲ್ಲವಾದರೆ ಹೆಚ್ಚುತ್ತಿರುವ ಜನ ಸಂಖ್ಯೆಗೆ ಅಗತ್ಯವಾದ ಆಹಾರ ಪದಾರ್ಥಸಿಗದೆ ಆಹಾರೋತ್ಪನ್ನಗಳ ಕ್ಷಾಮ ಉಂಟಾದಿತು. ಪ್ರಮುಖ ರಾಷ್ಟ್ರವಾಗಿದ್ದ ಭಾರತದಲ್ಲಿ ಇಂದು ಕೃಷಿ ಹೀಗೆ ಅಧೋಗತಿಗೆ ಸಾಗುತ್ತಿರುವುದು ಬಹಳ ಬೇಸರದ ಸಂಗತಿ.

ಕೆಂದಾಳೆ ತೆಂಗು ಕೃಷಿ ಸಾಧಕನಿಗೆ ರಾಷ್ಟ್ರೀಯ ಪ್ರಶಸ್ತಿ




ಕೈ ತುಂಬಾ ಸಂಬಳ ಬರುವ ಸಾಫ್ಟ್ವೇರ್ ಎಂಜಿನಿಯರಿಂಗ್ ಉದ್ಯೋಗ ಪಡೆದ ವ್ಯಕ್ತಿ, ಅದನ್ನು ತೊರೆದು ಕೃಷಿ ಕಾರ್ಯದಲ್ಲಿ ತೊಡಗಿ, ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವುದು ಮಹತ್ತರ ಸಾಧನೆ.
 

ಕೊಂಡಾಣ ಎನ್ನುವುದು ಕರ್ನಾಟಕದ ಮಂಗಳೂರು ಸಮೀಪದ ಒಂದು ಪುಟ್ಟ ಊರು. ಕೆಲವು ದಿನಗಳ ಹಿಂದೆ ಇಂಥ ಊರಿದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಇಂದಿದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಇಲ್ಲಿನ ಪ್ರಗತಿಪರ ಕೃಷಿಕ ಚಂದ್ರಶೇಖರ ಗಟ್ಟಿ ಅವರು. 


ಯುವಜನತೆ ಕೃಷಿ ಚಟುವಟಿಕೆಗಳಿಂದ ದೂರಸರಿದು, ಆಧುನಿಕ ಕಾಲದ ನಗರ ಸಂಸ್ಕೃತಿಗೆ ಮನಸೋಲುತ್ತಿರುವರು. ಇಂಥ ಸನ್ನಿವೇಶದಲ್ಲಿ ಕೊಂಡಾಣದ ಚಂದ್ರಶೇಖರ ಗಟ್ಟಿ ಅವರು, ದೊರೆತ ಸಾಫ್ಟ್ವೇರ್ ಉದ್ಯೋಗವನ್ನು ತ್ಯಜಿಸಿ ಕೆಂದಾಳೆ ತೆಂಗು ಕೃಷಿಯಲ್ಲಿ ಮಾಡಿದ ಸಾಧನೆ ಅನನ್ಯ. ಅದಕ್ಕಾಗಿ ಭಾರತ ಸರಕಾರ ಅವರಿಗೆ ಕೃಷಿ ಸಚಿವಾಲಯದ ತೆಂಗು ಅಭವೃದ್ಧಿ ಮಂಡಳಿ ಕೊಡಮಾಡುವ 2010ನೆಯ ಸಾಲಿನ ‘ಅತ್ಯುತ್ತಮ ತೆಂಗು ಬೆಳೆಗಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸಿದೆ. 
ಕೃಷಿಕರಾಗಿರುವ ನಾರಾಯಣ ಗಟ್ಟಿ ಮತ್ತು ಚಂದ್ರಾವತಿ ದಂಪತಿಯ ಮಗನಾದ ಚಂದ್ರಶೇಖರ ಗಟ್ಟಿ ಸಾಫ್ಟ್ವೇರ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪದವೀಧರರು. ವಿದ್ಯಾಭ್ಯಾಸ ಮುಗಿಸಿದ ತತ್ಕ್ಷಣ ಕೇರಳ ಮೂಲದ ಕಂಪೆನಿಯೊಂದರ ಮಂಗಳೂರು ವಿಭಾಗದಲ್ಲಿ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದರು. ಕೃಷಿಯ ಬಗೆಗಿನ ಒಲವಿನಿಂದಾಗಿ ವಂಶಪಾರಂಪರ್ಯವಾಗಿ ಬಂದ ಕೃಷಿ ಚಟುವಟಿಕೆಗಳನ್ನು ಪ್ರವೃತ್ತಿಯಾಗಿ ಮುಂದುವರಿಸಿದರು. 
ಕೃಷಿಯೇ ಪ್ರಮುಖ ವೃತ್ತಿಯಾಯಿತು 
ಕಳೆದ 14 ವರ್ಷಗಳ ಹಿಂದೆ ಗಟ್ಟಿ ಅವರು ಕೊಂಡಾಣದಲ್ಲಿನ ತಮ್ಮ ಮೂರು ಎಕ್ರೆ ಗುಡ್ಡೆಯಲ್ಲಿ ತೆಂಗು ಬೆಳೆಯುವ ಬಗ್ಗೆ ಚಿಂತನೆ ನಡೆಸಿದರು. ಅನಂತರ ಈ ಕುರಿತು ಜಿಲ್ಲೆಯಲ್ಲಿ ಸೇರಿದಂತೆ ಹತ್ತಿರದ ಕಾಸರಗೋಡಿನಲ್ಲಿಯೂ, ತೆಂಗು ಬೆಳೆವಲ್ಲಿಗೆ ತೆರಳಿ ಅಧ್ಯಯನ. ಇದೇ ವೇಳೆ ಔಷಧೀಯ ಗುಣಗಳಿರುವ ಕೆಂದಾಳೆ ತೆಂಗಿನ ಕೃಷಿಯ ಮಹತ್ವವನ್ನು ಅರಿತರು. ಮೊದಲಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಕೆಂದಾಳೆ ತೆಂಗಿನ ಕೃಷಿಯನ್ನು ಆರಂಭಿಸಲಾಯಿತು. ತದನಂತರ ಅದರಲ್ಲಿ ಹಂತ ಹಂತವಾಗಿ ಹೊಸ ಪ್ರಯೋಗಗಳನ್ನು ಮಾಡುತ್ತಾ, ಕೃಷಿಯನ್ನು ಆಧುನೀಕರಣಗೊಳಿಸಿದರು. ತೆಂಗಿನ ಕೃಷಿಗೆ ಸಂಬಂಧಿಸಿದ ಕಮ್ಮಟ, ಕಾರ್ಯಾಗಾರಗಳಲ್ಲಿ ಪಾಲ್ಗೊಂಡರಲ್ಲದೆ, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಅಭ್ಯಸಿಸಿದರು. ಅವುಗಳನ್ನು ತಮ್ಮ ಕೃಷಿ ಕಾರ್ಯದಲ್ಲಿ ಪ್ರಯೋಗಿಸಿ ಯಶಸ್ಸಿಯಾಗುತ್ತಿದ್ದಂತೆ, ಕೃಷಿಯನ್ನೇ ಪ್ರಮುಖ ವೃತ್ತಿಯನ್ನಾಗಿಸಿದರು. 
ಸಾಧನೆ 
ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಅವರು ಕೆಲವೇ ವರ್ಷಗಳಲ್ಲಿ ಹಲವಾರು ಸಾಧನೆ ಮೆರೆದರು. ಕೆಂದಾಳೆ ತೆಂಗಿನ ಕೃಷಿಗೆ ಪ್ರಾಮುಖ್ಯ ನೀಡಿದ ಅವರಿಗೆ ಸಾವಯವ ಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ ದೊರೆಯಿತು. ಇದರಿಂದ ಪ್ರೇರಿತರಾಗಿ ಕೆಂದಾಳೆಯಲ್ಲಿ ‘ಡಿ  x ಟಿ ಹೈಬ್ರಿಡ್’, ‘ಚೌಗಟ್ ಆರೆಂಜ್ ಡಾರ್ಫ್’, ‘ಮಲೇಷ್ಯನ್ ಎಲ್ಲೋ ಡಾರ್ಫ್’, ‘ವೆಸ್ಟ್ ಕಾಸ್ಟ್ ಟೌತ್’ ಮುಂತಾದ ತಳಿಗಳನ್ನು ಪರಿಚಯಿಸುವಲ್ಲಿ ಯಶಸ್ಸಿ. ಹಲವಾರು ಕೃಷಿ ವಿಜ್ಞಾನಿಗಳ ಕೂಡ ಇವರು ತಯಾರಿಸಿದ ತಳಿಗಳ ಮಾದರಿ ಪರೀಕ್ಷಿಸಿ, ಪ್ರಶಂಸೆ ವ್ಯಕ್ತಪಡಿಸಿದರು. 
ಗೌರವ 
ಕೃಷಿಯಲ್ಲಿನ ಸಾಧನೆ ಗುರುತಿಸಿ ಹಲವಾರು ಸಂಘ - ಸಂಸ್ಥೆಗಳು ಅವರನ್ನು ಸಮ್ಮಾನಿಸಿ, ಗೌರವಿಸಿವೆ. ಅಲ್ಲದೆ ಹಲವಾರು ಕಡೆ ರಾಷ್ಟ್ರಮಟ್ಟದ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳಿಗೂ ಅವಕಾಶ ದೊರೆತಿದೆ. ಉಜಿರೆಯಲ್ಲಿರುವ ಸ್ವೋದ್ಯೋಗ ತರಬೇತಿ ಸಂಸ್ಥೆ ರುಡ್ಸೆಟ್ನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ. ವಿವಿಧ ಕೃಷಿ ವಿವಿಗಳ ವಿದ್ಯಾರ್ಥಿಗಳು ಈಗ ಕೊಂಡಾಣಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುವರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಜರಗಿದ ರಾಷ್ಟ್ರೀಯ ಯುವ ಕೃಷಿ ಸಮ್ಮೇಳನದಲ್ಲಿ ಗಟ್ಟಿ ಅವರ ಕೃಷಿ ಚಟುವಟಿಕೆಗಳ ಬಗ್ಗೆ ವಿವಿಯ ಡಾ. ನಾಗೇಶ್ ಪ್ರಬಂಧ ಮಂಡಿಸಿ, ಅವರ ಸಾಧನೆಗಳ ಕುರಿತಾಗಿ ಬೆಳಕು ಚೆಲ್ಲಿದ್ದರು. 
ರಾಷ್ಟ್ರೀಯ ಮನ್ನಣೆ 
ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ಅವರ ಹೆಬ್ಬಯಕೆ. ಅದುವೇ ಇಂದು ಅವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿದೆ. ಚಂದ್ರಶೇಖರ ಗಟ್ಟಿ ಅವರು ತೆಂಗು ಕೃಷಿಯಲ್ಲಿ ‘ಕುಬ್ಜ ಮತ್ತು ಹೈಬ್ರಿಡ್’ ತಳಿಯನ್ನು ಅಭಿವೃದ್ಧಿ ಪಡಿಸಿದ ಸಾಧನೆಯನ್ನು ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿಯು ಗಮನಿಸಿದೆ. 2010ನೆಯ ಸಾಲಿನ ರಾಷ್ಟ್ರಮಟ್ಟದಲ್ಲಿ ಗುರುತಿಸಿದ ಐವರು ಉದಯೋನ್ಮುಖ ತೆಂಗು ಕೃಷಿಕರಲ್ಲಿ ಗಟ್ಟಿ ಅವರು ಒಬ್ಬರು. ಸೆಪ್ಟಂಬರ್ 2ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಲ್ಲಿನ ಮುಖ್ಯಮಂತ್ರಿ ತರುಣ್ ಗೊಶೋಯ್ ಪ್ರಶಸ್ತಿ ಪ್ರದಾನಿಸಿದರು. ಉಪಬೆಳೆಗಳಿಗೂ ಮಹತ್ವ ಕೆಂದಾಳೆ ಬೆಳೆಯುವಲ್ಲಿಗೆ ತಮ್ಮ ಕೃಷಿಯನ್ನು ಸೀಮಿತಗೊಳಿಸದೆ, ಹಲವಾರು ಉಪಬೆಳೆಗಳಿಗೂ ವಿಸ್ತರಿಸಿದ್ದಾರೆ. ಮುಖ್ಯವಾಗಿ ಜಾಯಿಕಾಯಿ, ಅಡಿಕೆ, ಬಾಳೆ, ಔಷಧೀಯ ಸಸ್ಯ, ಜೇನು ವ್ಯವಸಾಯವನ್ನು ಹೊಸ ರೀತಿಯಲ್ಲಿ ಅಳವಡಿಸಿಕೊಂಡು ಯಶಸ್ಸಿಯಾದರು. 
ಎರೆಹುಳ ಗೊಬ್ಬರ ತಯಾರಿ 
 ತಾನು ಬೆಳಯುವ ಎಲ್ಲ ಗಿಡ ಮರಗಳಿಗೂ, ತೋಟದಲ್ಲಿ ಸಿಗುವ ಕಸ, ನಿರುಪಯುಕ್ತ ವಸ್ತುಗಳನ್ನು ಬಳಸಿ ತಯಾರಿಸಿದ ಎರೆಹುಳ ಗೊಬ್ಬರವನ್ನೇ ಬಳಸುತ್ತಾರೆ. ಎರೆಹುಳಗೊಬ್ಬರ ತಯಾರಿಗೆ 10 ಪ್ರತ್ಯೇಕ ಘಟಕಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಅದರಲ್ಲೂ ಕೆಲವೊಂದು ಪ್ರಯೋಗಗಳನ್ನು ಕೈಗೊಳ್ಳುವರು. ಜೈವಿಕ ಗೊಬ್ಬರವನ್ನು ಎರೆಹುಳು ಗೊಬ್ಬರಕ್ಕೆ ಸೇರಿಸಿ ಗೊಬ್ಬರದ ಪೌಷ್ಟಿಕಾಂಶವನ್ನು ಹೆಚ್ಚಿಸಿ ಬಳಸುವುದು ಇವರು ಕಂಡುಕೊಂಡ ಉಪಾಯ. ತಮ್ಮಲ್ಲಿಗೆ ಬಂದ ಆಸಕ್ತ ಕೃಷಿಕರಿಗೆ ಮಾಹಿತಿ ನೀಡುವವರಲ್ಲದೆ, ತೆಂಗಿನ ಸಸಿಗಳ ನರ್ಸರಿ ಕಾರ್ಯ ಕೂಡ ನಡೆಸುತ್ತಾರೆ. ಕೃಷಿಯಲ್ಲಿ ಅವರು ಸಾಧಿಸಿದ ಯಶಸ್ಸಿನಿಂದ ಇದೀಗ ಕೃಷಿಯಾಧಾರಿತ ಉದ್ದಿಮೆಗಳನ್ನು ರೂಪಿಸುವ ಯೋಜನೆಯತ್ತ ಮನನ ಮಾಡುತ್ತಿದ್ದಾರೆ.ಕೂಲಿ ಕಾರ್ಮಿಕರ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಇತ್ಯಾದಿ ಸಮಸ್ಯೆಗಳಿಂದ ಕಂಗೆಟ್ಟಿರುವ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಉದ್ದೇಶ ಗಟ್ಟಿ ಅವರದ್ದು. ಹೀಗೆ ಮುಂದೆಯೂ ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಕಟ ಬಯಕೆ ಅವರಿಗೆ.

ಬದಲಾದ ಪತ್ರಿಕೋದ್ಯಮದ ದೃಷ್ಠಿಕೋನ


ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರಕ್ರಿ. . 1843ರಲ್ಲಿ ಪ್ರಾರಂಭಗೊಂಡಿತು. ಇದರ ನೆನಪಿಗಾಗಿ ಜುಲೈ ಒಂದರಂದು ಪತ್ರಿಕಾ ದಿನವನ್ನಾಗಿ ಕರ್ನಾಟಕದಲ್ಲಿ ಆಚರಿಸಲಾಗುತ್ತಿದೆ. ಕನ್ನಡದಲ್ಲಿ ಪತ್ರಿಕೆಗಳು ಪ್ರಕಟಗೊಳ್ಳಲಾರಂಭಿಸಿ ಸಮಾರು 168 ವರ್ಷಗಳೆ ಸಂದವು. ಅಂದಿನಿಂದ ಇಂದಿನ ವರೆಗೆ ಕನ್ನಡ ಪತ್ರಿಕಾರಂಗದಲ್ಲಿ ಹಲವಾರು ವಿಧದ ಪತ್ರಿಕೆಗಳು ಪ್ರಕಟವಾಗಿವೆ. ಪತ್ರಿಕೆಗಳ ಪ್ರಕಟನೆಯ ವಿಧಾನದಲ್ಲೂ ಸಲವಾರು ರೀತಿಯ ಬದಲಾವಯೆಗಳಾವೆ. ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಕಟನೆಯಲ್ಲಿ ಬಳಸಲಾಗುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಪತ್ರಿಕೆಗಳು ಒಂದು. ಸಾಮಾನ್ಯವಾಗಿ ಪತ್ರಿಕೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗ ಎಂದು ಬಣ್ಣಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಎಲ್ಲಾ ಪತ್ರಿಕೆಗಳಿಗೂ ಸ್ವಾತಂತ್ರ್ಯ ಹೋರಾಟವೆ ಧ್ಯೇಯವಾಗಿದ್ದವು. ಸ್ವಾತಂತ್ರ್ಯ ಬಂದ ಅನಂತರ ಬೃಹತ್ ಕೈಗಾರಿಕೆಗಳು, ನೀರಾವರಿ ಯೋಜನೆಗಳು, ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿದಂತೆ ಪತ್ರಿಕಾರಂಗವೂ ಅಭಿವೃದ್ಧಿಯಾಯಿತು. ಇಲೆಕ್ಟ್ರಾನಿಕ್ ಮಾಧ್ಯಮಗಳು ಬೆಳವಣಿಗೆ ಹೊಂದಿದವು. ಪರಿಣಾಮ ಪತ್ರಿಕಾ ಕ್ಷೇತ್ರದಲ್ಲಿ ವಾಣಿಜ್ಯ ಹಿತಾಸಕ್ತಿಗಳು ಸೇರಿ, ಬೃಹತ್ ಬಂಡವಾಳ ಹರಿದು ಬಂದು ಪತ್ರಿಕಾ ರಂಗವು ಒಂದು ಉದ್ಯಮವಾಗಿ ಮಾರ್ಪಟ್ಟಿತು. ಇದಕ್ಕಾಗಿ ಅದನ್ನು ಪತ್ರಿಕೋದ್ಯಮಎಂದು ಕರೆಯಲಾಯಿತು.
ಪತ್ರಿಕೆಗಳ ಕಾರ್ಯ
ಜನ ಸಾಮಾನ್ಯರಿಗೆ ಮಾಹಿತಿ ನೀಡಲು, ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿ ಉಳಿಯಲು ಪತ್ರಿಕೆಗಳು ಅತ್ಯಗತ್ಯ. ಪ್ರಜೆಗಳು ತಮ್ಮ ಸುತ್ತ-ಮುತ್ತ ದಿನನಿತ್ಯ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಯುವುದು ಅನಿವಾರ್ಯವಾಗಿ. ಆದರೆ ವ್ಯಕ್ತಿಗತವಾಗಿ ಪ್ರತಿಯೊಂದು ಘಟನೆಗಳ, ಆಗು-ಹೋಗುಗಲ ಮೇಲೆ ಕಣ್ಣಿಡಲಾಗದ ಜನರಿಗೆ ಪತ್ರಿಕೆಗಳು ಅಂತಹ ಮಾಹಿತಿ ಕಲೆ ಹಾಕಿ, ವಿಶ್ಲೇಷಿಸಿ, ಓದುವ ಆಸಕ್ತಿ ಹುಟ್ಟಿಸುವ ಕೆಲಸ ಮಾಡುತ್ತವೆ. ಪತ್ರಿಕೋದ್ಯಮದ ಮಸೋನ್ನತ ಕಾರ್ಯವೆಂದರೆ ಜನಾಭಿಪ್ರಾಯ ರೂಪಿಸುವುದು. ರಾಜ್ಯದಲ್ಲಿನ ವಾಸ್ತವ ಸಂಗತಿಗಳನ್ನು ಮರೆತು ಆಡಳಿತ ಪಕ್ಷದವರು ಅನೇಕ ತೀರ್ಮಾನಗಳನ್ನು ಪ್ರಜೆಗಳ ಮೇಲೆ ಹೇರುತ್ತಾರೆ. ಅಂತಹ ವಿಷಯಗಳ ಬಗ್ಗೆ ಜನರು ಪ್ರತಿಭಟನೆ ವ್ಯಕ್ತಪಡಿಸಲು, ಹೋರಾಟ ಮಾಡಲು ಪತ್ರಿಕೆಗಳು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ. ರಾಜ್ಯಾಡಳಿತವೊಂದರ ರಚನಾತ್ಮಕ ಟೀಕೆ ಮತ್ತು ವಸ್ತುನಿಷ್ಠ ವಿಮರ್ಶೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಎನ್ನಬಹುದು. ಅವಕಾಶ ಸಿಕ್ಕಿದರೆ ಹೆಚ್ಚಿನ ಸಂದರ್ಭಗಳಲ್ಲಿ ಅಕಾರ ಎಂತಹ ವ್ಯಕ್ತಿಯನ್ನೂ ಭ್ರಷ್ಟನನ್ನಾಗಿಸುತ್ತದೆ. ಪತ್ರಿಕೆಗಳು ಜನಾಭಿಪ್ರಾಯ ಮೂಡಿಸುವ ಮುಖಾಂತರ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತದೆ. ಈ ಮೂಲಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಿರಂತರ ಕಣ್ಗಾವಲಾಗಿರುತ್ತದೆ. ಇದಕ್ಕಾಗಿಯೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಅಡಿಗಲ್ಲು’, ‘ಕಾವಲುಭಟಎಂದೆಲ್ಲಾ ಕರೆಯಲಾಗುತ್ತದೆ.
ವಾಣಿಜ್ಯ ಉದ್ದೇಶಕ್ಕೆ ಮಹತ್ವ
ಉದ್ಯಮ ಎಂದಾಗ ಇಲ್ಲಿ ಲಾಭ-ನಷ್ಟಗಳದೇ ಲೆಕ್ಕಾಚಾರ. ರಾಷ್ಟ್ರದ, ಜನರ ಹಿತಾಸಕ್ತಿ ಕಾಪಾಡುವ ಪ್ರಶ್ನೆಯೇ ಇಲ್ಲ. ಲಾಭಗಳಿಸುವುದೇ ಉದ್ದೇಶ. ಸ್ವಾತಂತ್ರ್ಯಾನಂತರ ರಾಷ್ಟ್ರವು ಅಭಿವೃದ್ಧಿ ಹೊಂದುತ್ತಿದ್ದಂತೆ ವಾಣಿಜ್ಯ ಹಿತಾಸಕ್ತಿಗಳು ಮಹತ್ವ ಪಡೆಯಲಾರಂಭಿಸಿದವು. ವಾಣಿಜ್ಯೋದ್ದೇಶಗಳಿಗೆ ಪ್ರಾಮುಖ್ಯ ನೀಡುವ ಮೂಲಕ ಪತ್ರಿಕೆಗಳನ್ನು ಇತರ ಲಾಭದಾಯಕ ಉದ್ಯಮಗಳಂತೆ ಕಾಣಲಾಯಿತು.
ಜಿ.ಎನ್. ರಂಗನಾಥ್ ರಾವ್ ಅವರು ಪತ್ರಿಕೋದ್ಯಮ ಎಂಬ ಪುಸ್ತಕದಲ್ಲಿ ತಿಳಿಸಿದ ಪ್ರಕಾರ ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕಾ ಸಂಪಾದನೆ ಮತ್ತು ಪ್ರಕಟನೆಯನ್ನು ಒಂದು ವ್ಯವಸಾಯಎಂದು ಭಾವಿಸಲಾಗಿತ್ತು. ವ್ಯವಸಾಯ ಎಂದರೆ ರೈತರು ಹೊಲ ಉತ್ತು - ಬಿತ್ತಿ, ಬೆಳೆಯುವುದನ್ನು ಒಂದು ನಿಸ್ವಾರ್ಥ ಕಾಯಕ ಎಂದು ಭಾವಿಸಿ ಹೇಗೆ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೊ ಅದರಂತೆ ಪ್ರಾಜ್ಞರು ಪತ್ರಿಕೆ ಪ್ರಕಟಿಸಿ ಜ್ಞಾನ ಪ್ರಸಾರ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದ್ದರು. ಇದರಲ್ಲಿ ಪತ್ರಿಲಾಪೇಕ್ಷೆ ಇರಲಿಲ್ಲ. ಲಾಭ-ನಷ್ಟದ ಲೆಕ್ಕವೂ ಇರಲಿಲ್ಲ. ಆದರೆ ಕಾಲಕ್ರಮೇಣ ಪತ್ರಿಕಾ ಪ್ರಕಟನೆ ಜನರನ್ನು ಆಕರ್ಷಿಸುವ ಒಂದು ವೃತ್ತಿ ಎನಿಸಿಕೊಂಡಿದೆ.
ಸ್ವಾತಂತ್ರ್ಯಾನಂತರ ಪತ್ರಿಕೆಗಳಲ್ಲಿ ದೇಶ ಪ್ರೇಮ, ಸಾಮಾಜಿಕ ಸಮಸ್ಯೆ, ರಾಜಕೀಯ ವೈಲ್ಯಗಳ ಬಗ್ಗೆ ಬರೆಯುವುದು ಕಡಿಮೆಯಾಯಿತು. ಬದಲಾಗಿ ಜಾಹೀರಾತು ವರ್ಗದವರಿಗೆ ಸಂಬಂಸಿದ ಸುದ್ದಿಗಳು ಮಹತ್ವ ಪಡೆದವು. ಪತ್ರಿಕೆಗಳ ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಪತ್ರಿಕೆಗಳಲ್ಲಿನ ಪುಟಗಳ ನಿರ್ದಿಷ್ಟತೆ ಇಲ್ಲವಾಯಿತು. ಟೆಲಿವಿಷನ್ನ ಅತಿಯಾದ ಪ್ರಭಾದಿಂದ ಪತ್ರಿಕೆಗಳಿಗೆ ಅಸ್ತಿತ್ವ ಉಳಿಸಿಕೊಳ್ಳುವುದೆ ಮುಖ್ಯವಾಯಿತು. ಇದರಿಂದ ಪತ್ರಿಕೆಗಳು ಸಿದ್ದಾಂತಗಳ ಮೇಲಿನ ಬದ್ಧತೆಯನ್ನು ಕ್ರಮೇಣ ಕಳೆದಕೊಂಡು ಓದುಗರಿಗೆ, ರಾಜಕೀಯ ನಾಯಕರಿಗೆ ಮತ್ತು ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆನಿಸಿಕೊಂಡವರಿಗೆ ನೋವುಂಟು ಮಾಡುವ ಸುದ್ದಿಗಳನ್ನು ಪ್ರಕಟಿಸಲು ಹಿಂದೇಟು ಹಾಕಿದವು. ಪರಿಣಾಮವಾಗಿ ಪತ್ರಿಕೆಗಳಲ್ಲಿ ವಿವಾದರಹಿತ, ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡದ ಸುದ್ದಿಗಳು, ಅಕೃತ ಕರಪತ್ರಗಳು, ್ಯಾಷನ್, ಚಲನಚಿತ್ರ ಮಾಹಿತಿ, ಕ್ರೀಡಾ ಸುದ್ದಿಗಳನ್ನು ಮಾತ್ರ ಪ್ರಕಟಿಸಲಾರಂಭಿಸಲಾಯಿತು. 1991ರ ಉದಾರೀಕರಣ ಧೋರಣೆಯಿಂದ ದೇಶದಲ್ಲಿ ಉಂಟಾದ ವ್ಯಾಪಕ ಆರ್ಥಿಕ ಬದಲಾವಣೆಗಳಿಂದ ಆರ್ಥಿಕ ಪತ್ರಿಕೋದ್ಯಮ ಚುರುಕಾಗಿ ಪತ್ರಿಕೋದ್ಯಮದ ದೃಷ್ಠಿಕೋನವೆ ಬದಲಾಯಿತು.
ಶೈಲಿಯಲ್ಲಿ ಬದಲಾವಣೆ
ವಾಣಿಜ್ಯ ಹಿತಾಸಕ್ತಿಗಳು ಗಂಭೀರ ಪತ್ರಿಕೋದ್ಯಮಕ್ಕೆ ಹಾನಿಯುಂಟು ಮಾಡಿದೆ ಎನ್ನಬಹುದು. ಪತ್ರಿಕೆ ಪ್ರಜಾಪ್ರಭುತ್ವದ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕು. ಅಂದರೆ ಪತ್ರಿಕೆ ದೇಶದಲ್ಲಿನ ಆಗು -ಹೋಗುಗಳ ಬಗ್ಗೆ ಸದಾ ಜಾಗೃತವಾಗಿರಬೇಕು. ಭ್ರಷ್ಟಾಚಾರ ಬಯಲಿಗೆಳೆಯಲು ಹಿಂಜರಿಯ ಬಾರದು. ಆದರೆ ಇಂದು ಪತ್ರಿಕೆಗಳು ಈ ಅನಿಸಿಕೆಗಳಿಗೆ ವಿರುದ್ಧವಾಗಿ ತಮ್ಮ ವರದಿಗಾರಿಕೆಯ ಶೈಲಿಯನ್ನು ಬದಲಿಸಿಕೊಂಡಂತಿದೆ. ಭಾರತದಲ್ಲಿ ತನಿಖಾ ವರದಿ ಮತ್ತು ಭ್ರಷ್ಟಾಚಾರ ಬಯಲಿಗೆಳೆಯುವಂತಹ ವರದಿಗಳ ಕುರಿತು ಸ್ವಲ್ಪ ಅಥವಾ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ವಿವಿಧ ಸಂಘ - ಸಂಸ್ಥೆಗಳಿಂದ ಬಂದ ಪತ್ರಿಕಾ ಪ್ರಕಟನೆಗಳು ರಾಜಕೀಯ ಸುದ್ದಿಗಳು, ಮನರಂಜನಾ ಸುದ್ದಿಗಳನ್ನು ವರದಿ ಮಾಡುವುದೇ ಮರದಿಗಾರಿಕೆ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸುದ್ದಿಯ ಆಳಕ್ಕೆ ಹೋಗದಿರುವುದರಿಂದಲೂ ಪತ್ರಿಕೆಗಳ ವಿಶ್ವಾಸಾರ್ಹತೆ ಕುಗ್ಗುತ್ತಿದೆ
. ಪತ್ರಕರ್ತರು ಹೆಚ್ಚು ತನಿಖಾ ವರದಿಗಳಿಗೆ ಮನಸ್ಸು ಮಾಡದಿರುವ ಕಾರಣಗಳೆಂದರೆೆ ಅಧೈರ್ಯ ಮತ್ತು ಕೆಲವೊಮ್ಮೆ ಅಗತ್ಯವಾದುದನ್ನು ಮಾತ್ರ ಬರೆಯಲು ನೀಡಲಾಗುವ ಲಂಚ. ಬಹುತೇಕ ವರದಿಗಾರರು ಪತ್ರಿಕಾಗೋಷ್ಠಿಗಳಲ್ಲಿ ಬಹಿರಂಗವಾಗಿ ನೀಡಲಾಗುವ ಉಡುಗೊರೆಗಳಿಗೆ ಮರುಳಾಗುತ್ತಿದ್ದಾರೆ. ತನ್ನ ಜೀವನವನ್ನು ಅಪಾಯಕ್ಕೊಡಿ, ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಡುವ, ವಿಶೇಷ ವರದಿ ಮಾಡುವ ಧೈರ್ಯವಂತ ಪತ್ರಕರ್ತರ ಕೊರತೆಯನ್ನು ಪತ್ರಿಕಾರಂಗ ಎದುರಿಸುತ್ತಿದೆ.ಇತ್ತೀಚೆಗೆ ಪತ್ರಿಕೆಗಳು ಅಪರಾ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತದೆ. ಇವು ಭವೋದ್ರೇಕ ಸೃಷ್ಟಿಸುವ ಸುದ್ದಿಗಳಾಗಿದ್ದು, ಜನರನ್ನು ಬಹುಬೇಗನೆ ತನ್ನತ್ತಸೆಳೆಯುತ್ತದೆ. ಇದರಿಂದ ಹೆಚ್ಚಿನ ಪತ್ರಿಕೆಗಳಲ್ಲಿ ಇಂದು ಅಪರಾಧ ಸುದ್ದಿಗಳ ಪುಟವೊಂದನ್ನು ಕಾಣಬಹುದು.ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ. ಸಮಾಜದಲ್ಲಿನ ಅವ್ಯವಸ್ಥೆ, ಅನ್ಯಾಯ, ಸರಕಾರದ ದುರಾಡಳಿತ ಇತ್ಯಾದಿಗಳ ವಿರುದ್ಧ ಹೋರಾಡುವ, ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಪತ್ರಿಕೆಗಳು ಒಂದು ಉತ್ತಮ ಮಾದ್ಯಮ. ಪತ್ರಿಕೆಗಳ ವ್ಯಾಪಾರಿ ಮಾಲಿಕತ್ವದಿಂದಾಗಿ ಇಂದು ಅವುಗಳ ಧ್ಯೇಯ ಬದಲಾಗಿದೆ. ಇಂದು ಪತ್ರಿಕಾರಂಗದಲ್ಲಿ ಕೆಲಸ ನಿರ್ವಹಿಸುವವರ ಬಗ್ಗೆ ಇರುವ ಗೌರವ ಕಡಿಮೆಯಾಗಿದೆ. ಅವರನ್ನು ಮದುವೆ ಅಗಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.