ಇಂದಿನ ಅಂರ್ತಜಾಲ ಯುಗದಲ್ಲಿ ಯಂತ್ರಗಳಿಲ್ಲದೆ ಮಾನವ ಬದುಕು ಸಾಗಿಸುವುದು ಅಸಾಧ್ಯ ಎಂಬಂತಾಗಿದೆ. ನಮ್ಮ ದೈನಂದಿನ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ನಾವು ಒಂದಲ್ಲೊಂದು ಯಂತ್ರಗಳನ್ನ ಅವಲಂಬಿಸಿರುತ್ತೇವೆ. ಇಂದು ಯಾವುದೇ ಕೆಲಸದಲ್ಲೂ ಮಾನವನ ದೈಹಿಕ ಶ್ರಮಕ್ಕೆ ಬೆಲೆ ಇಲ್ಲವಾಗಿದೆ ಎಂದರೆ ತಪ್ಪಾಗದು. ಇದರಿಂದ ದೈಹಿಕ ಶ್ರಮ ವಹಿಸುವ ಜನರ ಸಂಖ್ಯೆ ಕಡಿಮೆಯಾಗಿದೆ ಮತ್ತು ವಿಪರೀತವಾಗಿ ಕಡಿಮೆಯಾಗುತ್ತಲೇ ಇದೆ. ಅಲ್ಲದೆ ಜನ ದೈಹಿಕ ಶ್ರಮವಹಿಸಿ ಕೆಲಸಗಳನ್ನು ನಿರ್ವಹಿಸುವ ವಿಧಾನಗಳನ್ನೇ ಮರೆತಂತಿದೆ.
ಇದಕ್ಕೆ ಒಂದು ಚಿಕ್ಕ ಉದಾಹರಣೆ: ನಾನು ಇತ್ತೀಚೆಗೆ ಕಾರ್ಕಳ ಸಮೀಪ ವಾರ್ಷಿಕ ಜಾತ್ರೆಯೊಂದಕ್ಕೆ ಹೋಗದ್ದೆ. ಅಲ್ಲಿ ಸಂತೆಯಲ್ಲಿ ಒಂದೆಡೆ ಮೆಕ್ಕೆ ಜೋಳವನ್ನು ಬೆಂಕಿಯಲ್ಲಿ ಸುಟ್ಟು ಮಾರಾಟ ಮಾಡುತ್ತಿದ್ದರು. ಎಲ್ಲಕಡೆ ಸುಡುವಂತೆ ಕಬ್ಬಿಣದ ತಟ್ಟೆಯಲ್ಲಿ ಇದ್ದಲಿಗೆ ಬೆಂಕಿ ಹಾಕಿ ಜೋಳವನ್ನು ಸುಡಲಾಗುತ್ತಿತ್ತು. ಇದ್ದಲು ಉರಿಯಲು ಸಾಮಾನ್ಯವಾಗಿ ಬೀಸಣಿಗೆ ಅಥವಾ ಅಂತಹ ಇತರ ಯಾವುದೇ ವಸ್ತುವಿನ ಸಹಾಯದಿಂದ ಕೈಯಿಂದಲೇ ಗಾಳಿ ಹಾಕುತ್ತಾರೆ. ಆದರೆ ಇಲ್ಲಿ ಗಾಳಿ ಬೀಸಲು ವಿದ್ಯುತ್ ಚಾಲಿತ ್ಯಾನ್ನನ್ನೇ ಬಳಸಿದ್ದು ವಿಶೇಷ. ವಿದ್ಯುತ್(ಇಂಧನ)ನ ಅಭಾವ ಇರುವುದರಿಂದ ಅತೀ ಅಗತ್ಯಗಳಿಗೆ ಮಾತ್ರ ವಿದ್ಯುತ್ ಬಳಸಿದರೆ ಒಳ್ಳೆಯದಲ್ಲವೇ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ