ಭಾನುವಾರ, ಜೂನ್ 10, 2012

ವೈವಿಧ್ಯಮಯ ನಾಣ್ಯ-ನೋಟುಗಳ ಸಂಗ್ರಹ


ಬಾಳಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಆರೋಗ್ಯಕರ ಸಂಗತಿ. ಇದರಿಂದ ನಮ್ಮ ಜ್ಞಾನ ಭಂಡಾರವು ವೃದ್ಧಿಸುವುದು ಹಾಗೂ ಸದಾ ಚಟುವಟಿಕೆಯಿಂದಿರಲು ಸಾಧ್ಯ. ಕತೆ, ಕಾದಂಬರಿ, ಲೇಖನ ಇತಾದಿ ಪುಸ್ತಕಗಳನ್ನು ಓದುವ, ಸಾಂಪ್ರದಾಯಿಕ, ಜನಪದ ಕಲೆ ಹಾಗೂ ಸಿನೆಮಾಗಳನ್ನು ವೀಕ್ಷಿಸುವ ಹವ್ಯಾಸ ಇರುವವರನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಅಂಚೆ ಚೀಟಿ, ಹಳೆ ಕಾಲದ ಹಾಗೂ ದೇಶ -ವಿದೇಶಗಳ ನಾಣ್ಯ, ಪತ್ರಿಕೆ, ಪುಸ್ತಕ, ಪಾತ್ರೆ ಸಾಮಾನು ಇತ್ಯಾದಿಗಳನ್ನು ಸಂಗ್ರಹಿಸುವ ಹವ್ಯಾಸದವರು ವಿರಳ. ಅಂಥವರಲ್ಲಿ ವಿವಿಧ ರೀತಿಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವ ಚೇತನಡ್ಕ ಶ್ರೀಕೃಷ್ಣ facebookಭಟ್ಟರು ಒಬ್ಬರು.
ಅವರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಚೇತನಡ್ಕ ನಿವಾಸಿ. ಸಮಾರು 5-6 ವರ್ಷಗಳಿಂದ ಈ ಹವ್ಯಾಸವನ್ನು ರೂಢಿಸಿಕೊಂಡಿರುವ ಭಟ್ಟರಿಗೆ ಸ್ನೇಹಿತ ತಲಶ್ಯೇರಿಯ ರಾಜನ್ ಅವರೇ ಪ್ರೇರಣೆಯಂತೆ. ರಾಜನ್ ಅವರಿಗೂ ನಾಣ್ಯ ಸಂಗ್ರಹಿಸುವ ಹವ್ಯಾಸವಿದ್ದು, ಅವರು ತಮ್ಮಲ್ಲಿರುವ ಕೆಲವೊಂದು ಅಪರೂಪದ ನಾಣ್ಯ, ನೋಟುಗಳನ್ನು ಭಟ್ಟರಿಗೆ ನೀಡುತ್ತಿದ್ದರಂತೆ. ಶ್ರೀಕೃಷ್ಣ ಭಟ್ಟರ ಕೈಯಲ್ಲಿ ಅಂಥಹ ನಾಣ್ಯಗಳನ್ನು ಕಂಡ ಅವರ ಪತ್ನಿ ರಾಜೇಶ್ವರಿ ಅವರು ಅವುಗಳನ್ನು ಸಂಗ್ರಹಿಸುವಂತೆ ಒತ್ತಾಯಿಸಿ, ಪ್ರೋತ್ಸಾಹಿಸಿದರ ಪರಿಣಾಮ ಭಟ್ಟರಲ್ಲಿ ಇಂಥಹಾ ಹವ್ಯಾಸವೊಂದು ಬೆಳೆಯಲು ಕಾರಣವಾಯಿತು.
  ಅವರು ಮೂಲತಃ ಕೃಷಿಕರಾಗಿದ್ದು, ಸಂಜೆಯ ಬಿಡುವಿನ ವೇಳೆ ಹೋದಲ್ಲಿ ಸಿಕ್ಕಿದ ವಿವಿಧ ರೀತಿಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಸಂಗ್ರಹದಲ್ಲಿ ಹಿಂದಿನ ಅರಸರ ಕಾಲದ ವಿವಿಧ ಹಾಗೂ ದೇಶ -ವಿದೇಶಗಳ ನಾಣ್ಯ ಮತ್ತು ನೋಟುಗಳನ್ನು ನೋಡಬಹುದು.
ವಿವಿಧ ರೀತಿಯ ಸಂಗ್ರಹ
ಸಮಾರು 200ಕ್ಕೂ ಅಧಿಕ ರಾಷ್ಟ್ರಗಳ ವೈವಿಧ್ಯಮಯ ನಾಣ್ಯ, ನೋಟುಗಳು ಭಟ್ಟರ ಸಂಗ್ರಹದಲ್ಲಿವೆ. ಅದರಲ್ಲಿ ಪ್ರಮುಖವಾಗಿ ವಿದೇಶಗಳಾದ ಇಂಗ್ಲೆಂಡ್, ಇಟೆಲಿ, ಆಸ್ಟ್ರೇಲಿಯಾ, ಸಿಂಗಾಪುರ, ಫಿಲಿಪ್ಪೇನ್ಸ್, ಕೆನೆಡಾ, ಡಿಗಿ ಚೌಟ, ಶ್ರೀಲಂಕಾ, ಚೀನಾ. ಅಮೆರಿಕಾ, ಟರ್ಕಿ, ಯುನೈಟೆಡ್ ಅರಬ್, ಯುನೈಟೆಡ್ ಎಮಿರೇಟ್ಸ್, ದುಬಾ, ಥೈಲ್ಯಾಂಡ್, ನೆದರ್ಲ್ಯಾಂಡ್, ಮಸ್ಕತ್, ಲೆಬನಾನ್, ಥೈವಾನ್, ಬೆಲ್ಜಿಯಂ, ಮಾಲ್ಡಿವ್ಸ್, ಹಾಂಕ್ಕಾೀಂಗ್, ಸ್ವೀಡನ್, ಚಿಲಿ, ಅರ್ಜೆಂಟಿನಾ, ಮಲೇಷಿಯಾ, ಮೊಜಾಂಬಿಕ್, ಡಚ್, ಪೋರ್ಚ್ಗಲ್, ನೇಪಾಳ, ಪಾಕಿಸ್ತಾನ, ಇರಾನ್ ಇತ್ಯಾದಿ. ಇವುಗಳಲ್ಲದೆ ಭಾರತದಲ್ಲಿ ಹಿಂದೆ ಅರಸರ ಕಾಲದಲ್ಲಿ ಬಳಕೆಯಲ್ಲಿದ್ದ ಹಲವಾರು ನಾಣ್ಯಗಳನ್ನು ಅವರ ಸಂಗ್ರಹದಲ್ಲಿ ಕಾಣಬಹುದು. ಮುಖ್ಯವಾಗಿ ಕ್ರಿ. ಶ. 1616ರಲ್ಲಿ ಈಸ್ಟ್ಇಂಡಿಯಾ ಕಂಪೆನಿಯು ಭಾರತದಲ್ಲಿ ಜಾರಿಗೆ ತಂದ ಲಕ್ಷ್ಮೀ ಮತ್ತು ಗಣಪತಿಯ ಚಿತ್ರದ ನಾಣ್ಯಗಳು, ಟಿಪ್ಪು ಸುಲ್ತಾನನ ಕಾಲದ ನಾಣ್ಯಗಳು, ಹನುಮಂತ, ಶ್ರೀರಾಮ, ಲಕ್ಷ್ಮಣ, ಸೀತೆಯರ ಚಿತ್ರವಿರುವ ನಾಣ್ಯ, ಒಟ್ಟೆ ಮುಕ್ಕಾಲು (ನಾಣ್ಯದ ಮಧ್ಯ ಭಾಗದಲ್ಲಿ ತೂತು ಇರುವ), 1 ಪೈಸೆ, ಬೆಳ್ಳಿ, ತಾಮ್ರದ ನಾಣ್ಯಗಳು, ಶ್ರೀಕೃಷ್ಣದೇವರಾಯನ ಕಾಲದ ಪಣ, ಗದ್ಯಾಣ, ತಿರವಾಂಕೂರು ಅರಸರ ಕಾಲದ ಒಂದು, ಎರಡು, ನಾಲ್ಕು, ಎಂಟು ಕಾಸು ಇತ್ಯಾದಿ ನಾಣ್ಯಗಳನ್ನು ನೋಡಬಹುದು.
  ಇವುಗಳಲ್ಲದೆ ಈಗ ಚಲಾವಣೆಯಲ್ಲಿ ಇಲ್ಲದ ದೇಶ -ವಿದೇಶಗಳ 1, 2, 5, 10, 20, 50, 100, 500, 1,000, 2,000ದ ಬೇರೆ ಬೇರೆ ನೋಟುಗಳ ಸಂಗ್ರಹವು ಇದೆ. ಜಗತ್ತಿನ ಪ್ರಮುಖ ನಾಯಕರ ಭಾವಚಿತ್ರವಿರುವ ಹಲವಾರು ನೋಟುಗಳು ಭಟ್ಟರ ಸಂಹಗ್ರಣೆಯಲ್ಲಿ ಕಾಣಬಹುದು. ಉದಾಹರಣೆಗೆ ಗಾಂೀಜಿ, ಬ್ರಿಟಿಷ್ ರಾಣಿ, ಸದ್ದಾಂ ಹುಸೇನ್.
ರಕ್ಷಣೆ 
ಪ್ಲಾಸ್ಟಿಕ್ ಕವರ್ಗಳನ್ನು ತಂದು ಅವುಗಳ ಮಧ್ಯದಲ್ಲಿ ನಾಣ್ಯ, ನೋಟುಗಳನ್ನು ಅಚ್ಚುಕಟ್ಟಾಗಿ, ಪ್ರತ್ಯೇಕ ಸಾಲುಗಳಲ್ಲಿ ಇರಿಸಿ ಅವುಗಳ ಸ್ಥಾನಪಲ್ಲಟವಾಗದಂತೆ ಬಂದಿಸಲಾಗುತ್ತದೆ. ಹೀಗೆ ಬಂದಿಸಿದ ನಾಣ್ಯ, ನೋಟುಗಳ ಪಕ್ಕದಲ್ಲಿ ಅದು ಯಾವ ದೇಶದ್ದು ಎಂದು ಭಟ್ಟರು ಗುರುತಿಸಿದ್ದಾರೆ. ಆಲ್ಬಂ ಮಾಡಿ ಸಂಗ್ರಹಿಸಿಟ್ಟಿರುವುದರಿಂದ ಅವು ಬಹು ಕಾಲ ಬಾಳಿಕೆ ಬರುವುದಲ್ಲದೆ ವೀಕ್ಷಕರಿಗೂ ಬಹುಬೇಗನೆ ನಾಣ್ಯಗಳನ್ನು ಗುರುತಿಸಬಹದಾಗಿದೆ.
ಪ್ರದರ್ಶನ
ವಿವಿಧೆಗಳಲ್ಲಿ ಪ್ರದರ್ಶನಕ್ಕೆ ಇಡುವುದು, ಅದರಿಂದ ಪ್ರಚಾರ ದೊರೆಯುವುದು ಇವುಗಳ ಬಗ್ಗೆ ಭಟ್ಟರಿಗೆ ಆಸಕ್ತಿ ಇಲ್ಲ. ಕೆಲವೊಂದು ಬಾರಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ಮತ್ತು ಪ್ರೈಮೆರಿ ಸ್ಕೂಲ್ನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು ಅಷ್ಟೆ. ಅದು ಭಾವ, ಸಾಹಿತಿ ಬಾಲಮಧುರಕಾನನ ಅವರ ಒತ್ತಾಯಕ್ಕೆ. ಇಂಥಹ ಅಪರೂಪದ ನಾಣ್ಯ, ನೋಟುಗಳಿಗೆ ಅದರ ಮುಖ ಬೆಲೆಗಿಂತಲೂ ಅಕ ಮೌಲ್ಯ ನೀಡಬೇಕಿರುವುದರಿಂದ ಅವುಗಳ ಬಗ್ಗೆ ಹೆಚ್ಚು ನಿಗಾವಹಿಸ ಬೇಕಾಗುತ್ತದೆ. ಇದಕ್ಕಾಗಿಯೇ ಭಟ್ಟರು ಪ್ರದರ್ಶನಕ್ಕೆ ಇಡಲು ಹಿದೇಟು ಹಾಕುತ್ತಾರೆ.
ಉದ್ದೇಶ
ಹಿಂದಿನ ಕಾಲದ ನಾಣ್ಯ, ನೋಟುಗಳ ಬಗ್ಗೆ ಇಂದಿನ ಮಕ್ಕಳಿಗೆ ಹಾಗೂ ಮುಂದಿನವರಿಗೆ ಮಾಹಿತಿ ಒದಗಿಸುವುದು ಶ್ರೀಕೃಷ್ಣ ಭಟ್ಟರ ಸಂಗ್ರಹದ ಮುಖ್ಯ ಉದ್ದೇಶ. ವಿವಿಧ ದೇಶಗಳಲ್ಲಿ ಬಳಸುತ್ತಿದ್ದ ಮತ್ತು ಬಳಕೆಯಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆಯಲು ಇದು ಸಹಕಾರಿ. ಅಪರೂಪದ ವಸ್ತುಗಳ ಸಂಗ್ರಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಇಂಥಹಾ ಸಂಗ್ರಹಣಾ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು ಇದರ ಮುಖ್ಯ ಗುರಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ