ರಾಮಾನುಜರು (ಕ್ರಿ.ಶ. 1017-1137)ಮದ್ರಾಸಿನ ಸಮೀಪದ ಶ್ರೀಪೆರಂಬದೂರು ಎಂಬಲ್ಲಿ ಜನಿಸಿದರು. ಕೇಶವ ಸೋಮಯಾಜಿ( ಕೇಶವದೀಕ್ಷಿತರು) ಮತ್ತು ಕಾಂತಿಮತಿ ಅವರ ತಂದೆ - ತಾಯಿ. ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಮತ್ತು ಉಪನಿಷತ್ಗಳ ಬಗ್ಗೆ ಅಧ್ಯಯನ ನಡುಸಲು ಕಾಂಚಿಗೆ ತೆರಳಿದರು. ಅಲ್ಲಿ ಪ್ರಸಿದ್ಧ ಅದೈತ ಗುರುಗಳಾದ ಯಾದವ ಪ್ರಕಾಶರ ಶಿಷ್ಯರಾದರು. ರಾಮಾನುಜರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಅವರು ಹಲವಾರು ಸಂದರ್ಭದಲ್ಲಿ ಧರ್ಮ ಮತ್ತು ತತ್ವಗಳ ವಿಚಾರಗಳಲ್ಲಿ ಗುರುಗಳ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ಪರಿಣಾಮವಾಗಿ ಗುರು ಶಿಷ್ಯರ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಿತು. ರಾಮಾನುಜರು ಗುರುವನ್ನ ತ್ಯಜಿಸಿ ಮನೆಗೆ ಹಿಂತಿರುಗಿದರು. ತಮ್ಮ 16ನೇ ವಯಸ್ಸಿನಲ್ಲಿ ತಂಗಮ್ಮನನ್ನು ವಿವಾಹವಾದರು.
ಗುರುವನ್ನು ತ್ಯಜಿಸಿದ ಅನಂತರ ರಾಮಾನುಜರು ಸ್ವಅಧ್ಯಯನವನ್ನು ಮುಂದುವರಿಸಿದರು. ಬಹುಬೇಗನೆ ಅವರ ಕೀರ್ತಿ ರಾಷ್ಟ್ರದ ಉದ್ದಗಲಕ್ಕೂ ಪಸರಿಸಿತು.ಅವರು ಒಬ್ಬ ಮಹಾನ್ ವಿದ್ವಾಂಸರಾಗಿ ರೂಪುಗೊಂಡರು. ತಮಿಳುನಾಡಿನಶ್ರೀರಂಗ ಮಠದ ಯುಮುನಾಚಾರ್ಯರು ತನ್ನ ಉತ್ತರಾಕಾರಿಯಾಗಲು ಆಹ್ವಾನನಿಸಿದರು. ಈ ಸಂದರ್ಭದಲ್ಲಿ ರಾಮಾನುಜರಿಗೆ ಸಾಂಸಾರಿಕ ಜೀವನದಲ್ಲಿ ಜಿಗುಪ್ಸೆ ಉಂಟಾಗತ್ತು. ಆಧ್ಯಾತ್ಮಿಕ ವಿಚಾರದ ಕಡೆಗೆ ಆಕರ್ಷ್ತಿರಾಗಿದ್ದರು. ತನ್ನ ಕುಟುಂಬವನ್ನು ತ್ಯಜಿಸಿ ಸನ್ಯಾಸಿಯಾದರು. ಅವರು ಶ್ರೀರಂಗ ತಲುಪುವ ಮೊದಲೇ ಯಮನಾಚಾರ್ಯರು ಸ್ವರ್ಗಸ್ತರಾಗಿದ್ದರು. ರಾಮಾನುಜರು ಶ್ರೀರಂಗ ಮಠದ ಆಚಾರ್ಯ ಪೀಠವನ್ನೇರಿ ಅಲ್ಲಿ ವೈಷ್ಣವ ಪಂಥವನ್ನು ಪ್ರಚಾರಗೊಳಿಸಿದರು. ಸುೀರ್ಘವಾದ, ಲಪ್ರದವಾದ 120 ವರ್ಷಗಳ ಕಾಲ ಜೀವನದ ಅನಂತರ ಇಹಲೋಕವನ್ನು ತ್ಯಜಿಸಿದರು.
ಕೃತಿಗಳು
ರಾಮಾನುಜರು ಹಲವಾರು ಕೃತಿಗಳನ್ನು ತನ್ನ ವೈಷ್ಣವ ತತ್ವಗಳನ್ನು ಪ್ರತಿಪಾಸಲು ರಚಿಸಿದ್ದಾರೆ. ಅವರು ಮೂರು ತತ್ವ ಶಾಸದ ಕೃತಿಗಳು ವೇದಾಂತ ಸಂಗ್ರಹ, ವೇದಾಂತಸಾರ, ವೇದಸೂತ್ರ ಇವುಗಳಲ್ಲಿ ಮೋಕ್ಷಗಳಿಸಲು ಭಕ್ತಿ ಮಾರ್ಗದ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಅವರ ಇತರ ಕೃತಿಗಳೆಂದರೆ ಗೀತಾಭಾಷ್ಯ, ಶ್ರೀಭಾಷ್ಯ, ಶ್ರೀರಂಗಗದ್ಯ,ಶರಣಾಗತಿ ಗದ್ಯ, ನಿತ್ಯಗ್ರಂಥ, ವೈಕುಂಠ ಗದ್ಯ ಇತ್ಯಾದಿ.
ವಿಶಿಷ್ಟಾದೈತ ತತ್ವ
ರಾಮಾನುಜರು ಪ್ರತಿಪಾಸಿದ ತತ್ವವನ್ನು ವಿಶಿಷ್ಟಾ ದೈತ ಎಂದು ಕರೆಯಲಾಗಿದೆ. ದೇವರು ಜಗತ್ತು ಮತ್ತು ಆತ್ಮಗಳ ಮಧ್ಯೆ ಇರುವ ಸಂಬಂಧಗಳನ್ನು ವಿವರಿಸುವ ರೀತಿಯೇ ಅವರ ತತ್ವದ ಕೇಂದ್ರ ಬಿಂದುವಾಗಿದೆ. ಅವರ ಅಭಿಪ್ರಾಯದಲ್ಲಿ ಮೂರು ಶಾಶ್ವತ ತತ್ವಗಳಿವೆ. ದೇವರು (ಬ್ರಹ್ಮನ್), ಆತ್ಮ (ಚಿತ್) ಮತ್ತು ಜಡಜಗತ್ತು (ಅಚಿತ್). ಇವು ಮೂರು ಬೇರೆ ಬೇರೆಯಾಗಿವೆ ಹಾಗೂ ಸಮಾನವಾಗಿವೆ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಂದಕ್ಕೊಂದು ಹತ್ತಿರದ ಸಂಬಂಧವಿದೆ. ಇವು ಒಂದೇ ದೇಹದಂತಿದೆ. ಇದಕ್ಕಾಗಿ ರಾಮಾನುಜರ ತತ್ವವನ್ನು ವಿಶಿಷ್ಟಾ ದೈತ ಎನ್ನಲಾಗಿದೆ. ಆದರೆ ಶಂಕರಾಚಾರ್ಯರ ಅದೈತ ತತ್ವದಲ್ಲಿ ಕೇವಲ ಒಂದೇ ಒಂದು ಶಾಶ್ವತ ಸತ್ಯವಿದೆ ಅದುವೇ ಬಹ್ಮನ್.
ರಾಮಾನುಜರ ಅಭಿಪ್ರಾಯದಲ್ಲಿ ಕರ್ಮ ಅಥವಾ ಕ್ರಿಯೆ ವ್ಯಕ್ತಿಯನ್ನು ಶಾಶ್ವವಾದ ದಾಸ್ಯಕ್ಕೆ ಕೆರೆದೊಯ್ಯುತ್ತದೆ ಹಾಗೂ ಮೋಕ್ಷಗಳಿಸಲು ಇದು ಸಹಕಾರಿಯಲ್ಲ. ಜ್ಞಾನದ ಮೂಲಕ ವ್ಯಕ್ತಿ ಮಾಯೆಯಿಂದ ಬಿಡುಗಡೆ ಸೊಂದಿ ಸರ್ವಜ್ಞ ಪದವಿ ಗಳಿಸುತ್ತಾನೆ ಆದರೆ ಭಕ್ತಿಯ ಮೂಲಕ ವ್ಯಕ್ತಿಯ ವೈಕುಂಠ ಪ್ರವೇಶಿಸಿ ಶಾಶ್ವತ ಆನಂದವನ್ನು ಗಳಿಸ ಬಹುದು. ಆದುದರಿಂದ ಮೋಕ್ಷಗಳಿಸಲು ಹಾಗೂ ವೈಕುಂಠ ಪ್ರವೇಶಿಸಲು ಅತ್ಯಂತ ಶ್ರೇಷ್ಠ ಮಾರ್ಗವೆಂದರೆ ಭಕ್ತಿಯಾಗಿದೆ ಎಂದು ಅವರು ಜಗತ್ತಿಗೆ ಸಾರಿದ್ದರು.facebook
Hi
ಪ್ರತ್ಯುತ್ತರಅಳಿಸಿ