ಬುಧವಾರ, ಜೂನ್ 6, 2012

ಬದಲಾದ ಪತ್ರಿಕೋದ್ಯಮದ ದೃಷ್ಠಿಕೋನ


ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರಕ್ರಿ. . 1843ರಲ್ಲಿ ಪ್ರಾರಂಭಗೊಂಡಿತು. ಇದರ ನೆನಪಿಗಾಗಿ ಜುಲೈ ಒಂದರಂದು ಪತ್ರಿಕಾ ದಿನವನ್ನಾಗಿ ಕರ್ನಾಟಕದಲ್ಲಿ ಆಚರಿಸಲಾಗುತ್ತಿದೆ. ಕನ್ನಡದಲ್ಲಿ ಪತ್ರಿಕೆಗಳು ಪ್ರಕಟಗೊಳ್ಳಲಾರಂಭಿಸಿ ಸಮಾರು 168 ವರ್ಷಗಳೆ ಸಂದವು. ಅಂದಿನಿಂದ ಇಂದಿನ ವರೆಗೆ ಕನ್ನಡ ಪತ್ರಿಕಾರಂಗದಲ್ಲಿ ಹಲವಾರು ವಿಧದ ಪತ್ರಿಕೆಗಳು ಪ್ರಕಟವಾಗಿವೆ. ಪತ್ರಿಕೆಗಳ ಪ್ರಕಟನೆಯ ವಿಧಾನದಲ್ಲೂ ಸಲವಾರು ರೀತಿಯ ಬದಲಾವಯೆಗಳಾವೆ. ಇಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಕಟನೆಯಲ್ಲಿ ಬಳಸಲಾಗುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಪತ್ರಿಕೆಗಳು ಒಂದು. ಸಾಮಾನ್ಯವಾಗಿ ಪತ್ರಿಕೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗ ಎಂದು ಬಣ್ಣಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಎಲ್ಲಾ ಪತ್ರಿಕೆಗಳಿಗೂ ಸ್ವಾತಂತ್ರ್ಯ ಹೋರಾಟವೆ ಧ್ಯೇಯವಾಗಿದ್ದವು. ಸ್ವಾತಂತ್ರ್ಯ ಬಂದ ಅನಂತರ ಬೃಹತ್ ಕೈಗಾರಿಕೆಗಳು, ನೀರಾವರಿ ಯೋಜನೆಗಳು, ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿದಂತೆ ಪತ್ರಿಕಾರಂಗವೂ ಅಭಿವೃದ್ಧಿಯಾಯಿತು. ಇಲೆಕ್ಟ್ರಾನಿಕ್ ಮಾಧ್ಯಮಗಳು ಬೆಳವಣಿಗೆ ಹೊಂದಿದವು. ಪರಿಣಾಮ ಪತ್ರಿಕಾ ಕ್ಷೇತ್ರದಲ್ಲಿ ವಾಣಿಜ್ಯ ಹಿತಾಸಕ್ತಿಗಳು ಸೇರಿ, ಬೃಹತ್ ಬಂಡವಾಳ ಹರಿದು ಬಂದು ಪತ್ರಿಕಾ ರಂಗವು ಒಂದು ಉದ್ಯಮವಾಗಿ ಮಾರ್ಪಟ್ಟಿತು. ಇದಕ್ಕಾಗಿ ಅದನ್ನು ಪತ್ರಿಕೋದ್ಯಮಎಂದು ಕರೆಯಲಾಯಿತು.
ಪತ್ರಿಕೆಗಳ ಕಾರ್ಯ
ಜನ ಸಾಮಾನ್ಯರಿಗೆ ಮಾಹಿತಿ ನೀಡಲು, ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿ ಉಳಿಯಲು ಪತ್ರಿಕೆಗಳು ಅತ್ಯಗತ್ಯ. ಪ್ರಜೆಗಳು ತಮ್ಮ ಸುತ್ತ-ಮುತ್ತ ದಿನನಿತ್ಯ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಯುವುದು ಅನಿವಾರ್ಯವಾಗಿ. ಆದರೆ ವ್ಯಕ್ತಿಗತವಾಗಿ ಪ್ರತಿಯೊಂದು ಘಟನೆಗಳ, ಆಗು-ಹೋಗುಗಲ ಮೇಲೆ ಕಣ್ಣಿಡಲಾಗದ ಜನರಿಗೆ ಪತ್ರಿಕೆಗಳು ಅಂತಹ ಮಾಹಿತಿ ಕಲೆ ಹಾಕಿ, ವಿಶ್ಲೇಷಿಸಿ, ಓದುವ ಆಸಕ್ತಿ ಹುಟ್ಟಿಸುವ ಕೆಲಸ ಮಾಡುತ್ತವೆ. ಪತ್ರಿಕೋದ್ಯಮದ ಮಸೋನ್ನತ ಕಾರ್ಯವೆಂದರೆ ಜನಾಭಿಪ್ರಾಯ ರೂಪಿಸುವುದು. ರಾಜ್ಯದಲ್ಲಿನ ವಾಸ್ತವ ಸಂಗತಿಗಳನ್ನು ಮರೆತು ಆಡಳಿತ ಪಕ್ಷದವರು ಅನೇಕ ತೀರ್ಮಾನಗಳನ್ನು ಪ್ರಜೆಗಳ ಮೇಲೆ ಹೇರುತ್ತಾರೆ. ಅಂತಹ ವಿಷಯಗಳ ಬಗ್ಗೆ ಜನರು ಪ್ರತಿಭಟನೆ ವ್ಯಕ್ತಪಡಿಸಲು, ಹೋರಾಟ ಮಾಡಲು ಪತ್ರಿಕೆಗಳು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ. ರಾಜ್ಯಾಡಳಿತವೊಂದರ ರಚನಾತ್ಮಕ ಟೀಕೆ ಮತ್ತು ವಸ್ತುನಿಷ್ಠ ವಿಮರ್ಶೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಎನ್ನಬಹುದು. ಅವಕಾಶ ಸಿಕ್ಕಿದರೆ ಹೆಚ್ಚಿನ ಸಂದರ್ಭಗಳಲ್ಲಿ ಅಕಾರ ಎಂತಹ ವ್ಯಕ್ತಿಯನ್ನೂ ಭ್ರಷ್ಟನನ್ನಾಗಿಸುತ್ತದೆ. ಪತ್ರಿಕೆಗಳು ಜನಾಭಿಪ್ರಾಯ ಮೂಡಿಸುವ ಮುಖಾಂತರ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತದೆ. ಈ ಮೂಲಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಿರಂತರ ಕಣ್ಗಾವಲಾಗಿರುತ್ತದೆ. ಇದಕ್ಕಾಗಿಯೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಅಡಿಗಲ್ಲು’, ‘ಕಾವಲುಭಟಎಂದೆಲ್ಲಾ ಕರೆಯಲಾಗುತ್ತದೆ.
ವಾಣಿಜ್ಯ ಉದ್ದೇಶಕ್ಕೆ ಮಹತ್ವ
ಉದ್ಯಮ ಎಂದಾಗ ಇಲ್ಲಿ ಲಾಭ-ನಷ್ಟಗಳದೇ ಲೆಕ್ಕಾಚಾರ. ರಾಷ್ಟ್ರದ, ಜನರ ಹಿತಾಸಕ್ತಿ ಕಾಪಾಡುವ ಪ್ರಶ್ನೆಯೇ ಇಲ್ಲ. ಲಾಭಗಳಿಸುವುದೇ ಉದ್ದೇಶ. ಸ್ವಾತಂತ್ರ್ಯಾನಂತರ ರಾಷ್ಟ್ರವು ಅಭಿವೃದ್ಧಿ ಹೊಂದುತ್ತಿದ್ದಂತೆ ವಾಣಿಜ್ಯ ಹಿತಾಸಕ್ತಿಗಳು ಮಹತ್ವ ಪಡೆಯಲಾರಂಭಿಸಿದವು. ವಾಣಿಜ್ಯೋದ್ದೇಶಗಳಿಗೆ ಪ್ರಾಮುಖ್ಯ ನೀಡುವ ಮೂಲಕ ಪತ್ರಿಕೆಗಳನ್ನು ಇತರ ಲಾಭದಾಯಕ ಉದ್ಯಮಗಳಂತೆ ಕಾಣಲಾಯಿತು.
ಜಿ.ಎನ್. ರಂಗನಾಥ್ ರಾವ್ ಅವರು ಪತ್ರಿಕೋದ್ಯಮ ಎಂಬ ಪುಸ್ತಕದಲ್ಲಿ ತಿಳಿಸಿದ ಪ್ರಕಾರ ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕಾ ಸಂಪಾದನೆ ಮತ್ತು ಪ್ರಕಟನೆಯನ್ನು ಒಂದು ವ್ಯವಸಾಯಎಂದು ಭಾವಿಸಲಾಗಿತ್ತು. ವ್ಯವಸಾಯ ಎಂದರೆ ರೈತರು ಹೊಲ ಉತ್ತು - ಬಿತ್ತಿ, ಬೆಳೆಯುವುದನ್ನು ಒಂದು ನಿಸ್ವಾರ್ಥ ಕಾಯಕ ಎಂದು ಭಾವಿಸಿ ಹೇಗೆ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೊ ಅದರಂತೆ ಪ್ರಾಜ್ಞರು ಪತ್ರಿಕೆ ಪ್ರಕಟಿಸಿ ಜ್ಞಾನ ಪ್ರಸಾರ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದ್ದರು. ಇದರಲ್ಲಿ ಪತ್ರಿಲಾಪೇಕ್ಷೆ ಇರಲಿಲ್ಲ. ಲಾಭ-ನಷ್ಟದ ಲೆಕ್ಕವೂ ಇರಲಿಲ್ಲ. ಆದರೆ ಕಾಲಕ್ರಮೇಣ ಪತ್ರಿಕಾ ಪ್ರಕಟನೆ ಜನರನ್ನು ಆಕರ್ಷಿಸುವ ಒಂದು ವೃತ್ತಿ ಎನಿಸಿಕೊಂಡಿದೆ.
ಸ್ವಾತಂತ್ರ್ಯಾನಂತರ ಪತ್ರಿಕೆಗಳಲ್ಲಿ ದೇಶ ಪ್ರೇಮ, ಸಾಮಾಜಿಕ ಸಮಸ್ಯೆ, ರಾಜಕೀಯ ವೈಲ್ಯಗಳ ಬಗ್ಗೆ ಬರೆಯುವುದು ಕಡಿಮೆಯಾಯಿತು. ಬದಲಾಗಿ ಜಾಹೀರಾತು ವರ್ಗದವರಿಗೆ ಸಂಬಂಸಿದ ಸುದ್ದಿಗಳು ಮಹತ್ವ ಪಡೆದವು. ಪತ್ರಿಕೆಗಳ ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಪತ್ರಿಕೆಗಳಲ್ಲಿನ ಪುಟಗಳ ನಿರ್ದಿಷ್ಟತೆ ಇಲ್ಲವಾಯಿತು. ಟೆಲಿವಿಷನ್ನ ಅತಿಯಾದ ಪ್ರಭಾದಿಂದ ಪತ್ರಿಕೆಗಳಿಗೆ ಅಸ್ತಿತ್ವ ಉಳಿಸಿಕೊಳ್ಳುವುದೆ ಮುಖ್ಯವಾಯಿತು. ಇದರಿಂದ ಪತ್ರಿಕೆಗಳು ಸಿದ್ದಾಂತಗಳ ಮೇಲಿನ ಬದ್ಧತೆಯನ್ನು ಕ್ರಮೇಣ ಕಳೆದಕೊಂಡು ಓದುಗರಿಗೆ, ರಾಜಕೀಯ ನಾಯಕರಿಗೆ ಮತ್ತು ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆನಿಸಿಕೊಂಡವರಿಗೆ ನೋವುಂಟು ಮಾಡುವ ಸುದ್ದಿಗಳನ್ನು ಪ್ರಕಟಿಸಲು ಹಿಂದೇಟು ಹಾಕಿದವು. ಪರಿಣಾಮವಾಗಿ ಪತ್ರಿಕೆಗಳಲ್ಲಿ ವಿವಾದರಹಿತ, ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡದ ಸುದ್ದಿಗಳು, ಅಕೃತ ಕರಪತ್ರಗಳು, ್ಯಾಷನ್, ಚಲನಚಿತ್ರ ಮಾಹಿತಿ, ಕ್ರೀಡಾ ಸುದ್ದಿಗಳನ್ನು ಮಾತ್ರ ಪ್ರಕಟಿಸಲಾರಂಭಿಸಲಾಯಿತು. 1991ರ ಉದಾರೀಕರಣ ಧೋರಣೆಯಿಂದ ದೇಶದಲ್ಲಿ ಉಂಟಾದ ವ್ಯಾಪಕ ಆರ್ಥಿಕ ಬದಲಾವಣೆಗಳಿಂದ ಆರ್ಥಿಕ ಪತ್ರಿಕೋದ್ಯಮ ಚುರುಕಾಗಿ ಪತ್ರಿಕೋದ್ಯಮದ ದೃಷ್ಠಿಕೋನವೆ ಬದಲಾಯಿತು.
ಶೈಲಿಯಲ್ಲಿ ಬದಲಾವಣೆ
ವಾಣಿಜ್ಯ ಹಿತಾಸಕ್ತಿಗಳು ಗಂಭೀರ ಪತ್ರಿಕೋದ್ಯಮಕ್ಕೆ ಹಾನಿಯುಂಟು ಮಾಡಿದೆ ಎನ್ನಬಹುದು. ಪತ್ರಿಕೆ ಪ್ರಜಾಪ್ರಭುತ್ವದ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕು. ಅಂದರೆ ಪತ್ರಿಕೆ ದೇಶದಲ್ಲಿನ ಆಗು -ಹೋಗುಗಳ ಬಗ್ಗೆ ಸದಾ ಜಾಗೃತವಾಗಿರಬೇಕು. ಭ್ರಷ್ಟಾಚಾರ ಬಯಲಿಗೆಳೆಯಲು ಹಿಂಜರಿಯ ಬಾರದು. ಆದರೆ ಇಂದು ಪತ್ರಿಕೆಗಳು ಈ ಅನಿಸಿಕೆಗಳಿಗೆ ವಿರುದ್ಧವಾಗಿ ತಮ್ಮ ವರದಿಗಾರಿಕೆಯ ಶೈಲಿಯನ್ನು ಬದಲಿಸಿಕೊಂಡಂತಿದೆ. ಭಾರತದಲ್ಲಿ ತನಿಖಾ ವರದಿ ಮತ್ತು ಭ್ರಷ್ಟಾಚಾರ ಬಯಲಿಗೆಳೆಯುವಂತಹ ವರದಿಗಳ ಕುರಿತು ಸ್ವಲ್ಪ ಅಥವಾ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ವಿವಿಧ ಸಂಘ - ಸಂಸ್ಥೆಗಳಿಂದ ಬಂದ ಪತ್ರಿಕಾ ಪ್ರಕಟನೆಗಳು ರಾಜಕೀಯ ಸುದ್ದಿಗಳು, ಮನರಂಜನಾ ಸುದ್ದಿಗಳನ್ನು ವರದಿ ಮಾಡುವುದೇ ಮರದಿಗಾರಿಕೆ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸುದ್ದಿಯ ಆಳಕ್ಕೆ ಹೋಗದಿರುವುದರಿಂದಲೂ ಪತ್ರಿಕೆಗಳ ವಿಶ್ವಾಸಾರ್ಹತೆ ಕುಗ್ಗುತ್ತಿದೆ
. ಪತ್ರಕರ್ತರು ಹೆಚ್ಚು ತನಿಖಾ ವರದಿಗಳಿಗೆ ಮನಸ್ಸು ಮಾಡದಿರುವ ಕಾರಣಗಳೆಂದರೆೆ ಅಧೈರ್ಯ ಮತ್ತು ಕೆಲವೊಮ್ಮೆ ಅಗತ್ಯವಾದುದನ್ನು ಮಾತ್ರ ಬರೆಯಲು ನೀಡಲಾಗುವ ಲಂಚ. ಬಹುತೇಕ ವರದಿಗಾರರು ಪತ್ರಿಕಾಗೋಷ್ಠಿಗಳಲ್ಲಿ ಬಹಿರಂಗವಾಗಿ ನೀಡಲಾಗುವ ಉಡುಗೊರೆಗಳಿಗೆ ಮರುಳಾಗುತ್ತಿದ್ದಾರೆ. ತನ್ನ ಜೀವನವನ್ನು ಅಪಾಯಕ್ಕೊಡಿ, ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಡುವ, ವಿಶೇಷ ವರದಿ ಮಾಡುವ ಧೈರ್ಯವಂತ ಪತ್ರಕರ್ತರ ಕೊರತೆಯನ್ನು ಪತ್ರಿಕಾರಂಗ ಎದುರಿಸುತ್ತಿದೆ.ಇತ್ತೀಚೆಗೆ ಪತ್ರಿಕೆಗಳು ಅಪರಾ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತದೆ. ಇವು ಭವೋದ್ರೇಕ ಸೃಷ್ಟಿಸುವ ಸುದ್ದಿಗಳಾಗಿದ್ದು, ಜನರನ್ನು ಬಹುಬೇಗನೆ ತನ್ನತ್ತಸೆಳೆಯುತ್ತದೆ. ಇದರಿಂದ ಹೆಚ್ಚಿನ ಪತ್ರಿಕೆಗಳಲ್ಲಿ ಇಂದು ಅಪರಾಧ ಸುದ್ದಿಗಳ ಪುಟವೊಂದನ್ನು ಕಾಣಬಹುದು.ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ. ಸಮಾಜದಲ್ಲಿನ ಅವ್ಯವಸ್ಥೆ, ಅನ್ಯಾಯ, ಸರಕಾರದ ದುರಾಡಳಿತ ಇತ್ಯಾದಿಗಳ ವಿರುದ್ಧ ಹೋರಾಡುವ, ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಪತ್ರಿಕೆಗಳು ಒಂದು ಉತ್ತಮ ಮಾದ್ಯಮ. ಪತ್ರಿಕೆಗಳ ವ್ಯಾಪಾರಿ ಮಾಲಿಕತ್ವದಿಂದಾಗಿ ಇಂದು ಅವುಗಳ ಧ್ಯೇಯ ಬದಲಾಗಿದೆ. ಇಂದು ಪತ್ರಿಕಾರಂಗದಲ್ಲಿ ಕೆಲಸ ನಿರ್ವಹಿಸುವವರ ಬಗ್ಗೆ ಇರುವ ಗೌರವ ಕಡಿಮೆಯಾಗಿದೆ. ಅವರನ್ನು ಮದುವೆ ಅಗಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ