ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಪ್ರಸಿದ್ಧವಾಗಿರುವ ಕೃಷಿಯು ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆಯಿಂದ ತೊಳಲಾಡುತ್ತಿದೆ. ಕೃಷಿ ಕಾರ್ಯಗಳಲ್ಲಿ ಅನುಭವವಿರುವ, ದಕ್ಷ ಕಾರ್ಮಿಕರ ಕೊರತೆಯಿಂದಾಗಿ ಹಲವಾರು ಎಕರೆ ಕೃಷಿ ಭೂಮಿ ಪಾಳುಬಿದ್ದಿವೆ.
ಕಾರ್ಮಿಕರ ಕೊರತೆಯಿಂದ ಇಂದು ಕೃಷಿಗೆ ಯೋಗ್ಯವಾದ ಭೂಮಿ, ಅಗತ್ಯ ನೀರಾವರಿ ಹಾಗೂ ಇತರ ಎಲ್ಲ ಸೌಲಭ್ಯಗಳಿದ್ದರೂ ಕೃಷಿ ಕಾರ್ಯ ನಡೆಸಲು ಹಳ್ಳಿಗರು ಮುಂದಾಗುತ್ತಿಲ್ಲ. ಯಾಕೆಂದರೆ ಕೃಷಿಯಲ್ಲಿ ಕಾಲಕಾಲಕ್ಕೆ ಗೊಬ್ಬರ, ನೀರು ಹಾಕಲು, ಔಷ ಸಿಂಪಡನು, ಕಳೆಕೀಳಲುವುದು ಇತ್ಯಾದಿ ಕೆಲಸಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿರುವುದೇ ಇದಕ್ಕೆ ಕಾರಣ.
ಕಾರ್ಮಿಕರ ಕೊರತೆಗೆ ಕಾರಣ
ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆಯುಂಟಾಗಲು ಹಲವಾರು ಕಾರಣಗಳಿವೆ.
1 ಕೃಷಿ ಚಟುವಟಿಕೆಗಳಲ್ಲಿ ದೈಹಿಕ ಶ್ರಮ ಪ್ರಮುಖವಾದುದು. ದೈಹಿಕ ಶ್ರಮ ವಹಿಸಲು ಜನಹಿಂದೇಟು ಹಾಕುತ್ತಿದ್ದಾರೆ.
2 ಕೃಷಿ ಕಾರ್ಮಿಕರ ಕೂಲಿ ಬೌದ್ಧಿಕ ಶ್ರಮ ವಹಿಸುವವರ ಸಂಬಳಕ್ಕಿಂತ ಕಡಿಮೆ. 3 ಕೃಷಿ ಕಾರ್ಮಿಕರಿಗೆ ಯಾವುದೇ ಆಂತರಿಕ ಭದ್ರತೆ, ಲಾಭಾಂಶ ಭತ್ಯೆಗಳು ದೊರೆಯುವುದಿಲ್ಲ. 4 ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ಇರುವುದಿಲ್ಲ. 5 ಕೃಷಿ ಕಾರ್ಮಿಕರ ವೃತ್ತಿ ಇತರ ಕೆಲಸ ಮಾಡಲು ಸಾಧ್ಯವಾಗದವರು ಮಾಡುವ ವೃತ್ತಿ ಎಂಬ ಕೀಳರಿಮೆ. 6 ಆಹಾರೋತ್ಪನ್ನಗಳ ಬೆಲೆ ವಿಪರೀತ ಏರಿದೆ. ಇದರಿಂದ ಕೃಷಿ ಕಾರ್ಮಿಕರಿಗೆ (ತಮ್ಮ ಕಡಿಮೆ ಸಂಬಳದಲ್ಲಿ )ಅಗತ್ಯ ಆಹಾರ ವಸ್ತುಗಳ ಖರೀದಿ ಕಷ್ಟಕರವಾಗಿದೆ.
7 ಸರಕಾರ ಜಾರಿಗೊಳಿಸಿದ ಸಂಪೂರ್ಣ ಸಾಕ್ಷರತಾ ಯೋಜನೆಯಂತಹ ಯೋಜನೆಗಳಿಂದ ವಿದ್ಯಾವಂತರಾದ ಜನರು ಇಂದು ಹೆಚ್ಚಾಗಿ ಪಟ್ಟಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಿದ್ಯಾವಂತ ಯುವ ಜನರು ಹಳ್ಳಿಗಳಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕಾರ್ಮಿಕರ ಕೊರತೆ ಹೇಗೆ ನೀಗಿಸುವುದು
1 ಸರಕಾರ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಿಸುವುದು. ಆ ಮೂಲಕ ಕೃಷಿ ಕಾರ್ಮಿಕರಿಗೆ ಉತ್ತಮ ಕೂಲಿ ನೀಡುವಂತೆ ಮಾಡುವುದು.
2 ಸರಕಾರ ಕೃಷಿ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ದೊರೆಯುವಂತೆ ಮಾಡುವುದು.
3 ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಸಮಾನವೆಂದು ತಿಳಿದು ಗೌರವಿಸುವುದು.
4 ವಿದ್ಯಾವಂತ ಜನರು ಹಳ್ಳಿಗಳಲ್ಲಿ ಉಳಿದು ಕೃಷಿ ಕಾರ್ಯಗಳಲ್ಲಿ ತೊಡುಗುವಂತೆ ಪ್ರೋತ್ಸಾಹಿಸುವುದು. 5 ಕೃಷಿ ಕಾರ್ಮಿಕರಿಗೆ ಉದ್ಯೋಗ ಭತ್ಯೆ, ಕೆಲಸಕ್ಕೆ ಭದ್ರತೆ, ಸಾಲ ಸೌಲಭ್ಯಗಳನ್ನು ಒದಗಿಸುವುದು. ಸರಕಾರ ಕೃಷಿ ಕಾರ್ಮಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿ, ಅವರು ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು. ಇಲ್ಲವಾದರೆ ಹೆಚ್ಚುತ್ತಿರುವ ಜನ ಸಂಖ್ಯೆಗೆ ಅಗತ್ಯವಾದ ಆಹಾರ ಪದಾರ್ಥಸಿಗದೆ ಆಹಾರೋತ್ಪನ್ನಗಳ ಕ್ಷಾಮ ಉಂಟಾದಿತು. ಪ್ರಮುಖ ರಾಷ್ಟ್ರವಾಗಿದ್ದ ಭಾರತದಲ್ಲಿ ಇಂದು ಕೃಷಿ ಹೀಗೆ ಅಧೋಗತಿಗೆ ಸಾಗುತ್ತಿರುವುದು ಬಹಳ ಬೇಸರದ ಸಂಗತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ